AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣಿ ದೋಚಿದ ಮಾಲೀಕರು, ಅಧಿಕಾರಿಗಳ ನಿರ್ಲಕ್ಷ್ಯ: ಬಳ್ಳಾರಿಯ ಬಡವರ ಗೋಳು ಹೇಳತೀರದು

ಬಳ್ಳಾರಿ: ಖಾಸಗಿ ಕಂಪನಿಗಳದ್ದು ಏನಿದ್ರೂ ಲಾಭದ ಲೆಕ್ಕಾಚಾರ. ಏನಾದ್ರೂ ಲಾಭವಿದ್ರೆ ಮಾತ್ರ ಮುಂದುವರಿತಾರೇ. ಇನ್ನು ಸರ್ಕಾರಿ ಅಧಿಕಾರಿಗಳದ್ದೋ ನಿದ್ರಾಚಾರ. ಪರಿಣಾಮ ಅವಕಾಶವಾದಿ ಖಾಸಗಿ ಕಂಪನಿಗಳು ಮತ್ತು ನಿರ್ಲಕ್ಷ್ಯದ ಸರ್ಕಾರಿ ಅಧಿಕಾರಿಗಳ ನಡುವೆ ಸಿಲುಕಿದ ಬಳ್ಳಾರಿಯ ಬಡವರ ಗೋಳು ಮಾತ್ರ ಹೇಳತೀರದ್ದು. ಹೌದು, 2009ರಲ್ಲಿ ರಾಜ್ಯದಲ್ಲಿ ಕಂಡು ಕೇಳದಂಥ ಪ್ರವಾಹಕ್ಕೆ ಇಡೀ ಉತ್ತರ ಕರ್ನಾಟಕವೇ ತತ್ತರಿಸಿ ಹೋಗಿತ್ತು. ಗ್ರಾಮಕ್ಕೆ ಗ್ರಾಮಗಳೇ ಕೊಚ್ಚಿ ಹೋಗಿದ್ದವು. ಗಣಿನಾಡು ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಗ್ರಾಮಗಳಲ್ಲಂತೂ ಪ್ರವಾಹದಿಂದ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಪರಿಣಾಮ ಆಗಿನ […]

ಗಣಿ ದೋಚಿದ ಮಾಲೀಕರು, ಅಧಿಕಾರಿಗಳ ನಿರ್ಲಕ್ಷ್ಯ: ಬಳ್ಳಾರಿಯ ಬಡವರ ಗೋಳು ಹೇಳತೀರದು
Guru
| Updated By: ಸಾಧು ಶ್ರೀನಾಥ್​|

Updated on:Jun 24, 2020 | 12:29 PM

Share

ಬಳ್ಳಾರಿ: ಖಾಸಗಿ ಕಂಪನಿಗಳದ್ದು ಏನಿದ್ರೂ ಲಾಭದ ಲೆಕ್ಕಾಚಾರ. ಏನಾದ್ರೂ ಲಾಭವಿದ್ರೆ ಮಾತ್ರ ಮುಂದುವರಿತಾರೇ. ಇನ್ನು ಸರ್ಕಾರಿ ಅಧಿಕಾರಿಗಳದ್ದೋ ನಿದ್ರಾಚಾರ. ಪರಿಣಾಮ ಅವಕಾಶವಾದಿ ಖಾಸಗಿ ಕಂಪನಿಗಳು ಮತ್ತು ನಿರ್ಲಕ್ಷ್ಯದ ಸರ್ಕಾರಿ ಅಧಿಕಾರಿಗಳ ನಡುವೆ ಸಿಲುಕಿದ ಬಳ್ಳಾರಿಯ ಬಡವರ ಗೋಳು ಮಾತ್ರ ಹೇಳತೀರದ್ದು.

ಹೌದು, 2009ರಲ್ಲಿ ರಾಜ್ಯದಲ್ಲಿ ಕಂಡು ಕೇಳದಂಥ ಪ್ರವಾಹಕ್ಕೆ ಇಡೀ ಉತ್ತರ ಕರ್ನಾಟಕವೇ ತತ್ತರಿಸಿ ಹೋಗಿತ್ತು. ಗ್ರಾಮಕ್ಕೆ ಗ್ರಾಮಗಳೇ ಕೊಚ್ಚಿ ಹೋಗಿದ್ದವು. ಗಣಿನಾಡು ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಗ್ರಾಮಗಳಲ್ಲಂತೂ ಪ್ರವಾಹದಿಂದ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಪರಿಣಾಮ ಆಗಿನ ಸರ್ಕಾರ ಪ್ರವಾಹ ಪೀಡಿತ ಗ್ರಾಮಗಳ ಸ್ಥಳಾಂತರಕ್ಕೆ ಮುಂದಾಯ್ತು. ಈ ವೇಳೆ ಹೊಸದಾಗಿ ಮನೆಗಳ ನಿರ್ಮಾಣ ಮಾಡಿಕೊಡಲು ಗಣಿ ಮಾಲೀಕರು ಮುಂದಾದ್ರು. ಆದ್ರೆ ಗಣಿಗಾರಿಕೆ ಸ್ಥಗಿತವಾಗಿದ್ದೇ ತಡ, ಗಣಿಮಾಲೀಕರು ಮನೆ ನಿರ್ಮಾಣ ಕಾರ್ಯವನ್ನ ಅರ್ಧಕ್ಕೆ ಕೈ ಬಿಟ್ರು. ಇತ್ತ ಸರ್ಕಾರ ಕೂಡ ಸಂತ್ರಸ್ತರನ್ನ ಸಂಪೂರ್ಣ ಮರೆತುಬಿಟ್ಟಿತು.

2009ರಲ್ಲಿ ಹಚ್ಚೊಳ್ಳಿ ಗ್ರಾಮ ಮುಳುಗಡೆ 2009 ರಲ್ಲಿ ಪ್ರವಾಹದಿಂದ ಹಚ್ಚೊಳ್ಳಿ ಗ್ರಾಮ ಮುಳುಗಡೆಯಾಗಿತ್ತು. ಆಗಿನ ಸರ್ಕಾರ ಈ ಗ್ರಾಮವನ್ನ ಸ್ಥಳಾಂತರ ಮಾಡ್ಬೇಕು ಅನ್ನೋ ದೃಷ್ಟಿಯಿಂದ ಸ್ವಲ್ಪ ದೂರದಲ್ಲಿ ಹೊಸ ಗ್ರಾಮ ನಿರ್ಮಾಣ ಮಾಡಲು ಮುಂದಾಯ್ತು. ಈ ವೇಳೆ ನೆರೆ ಸಂತ್ರಸ್ತರ ನೆರವಿಗೆ ಗಣಿ ಮಾಲೀಕರು ಮುಂದಾದ್ರು. ಹಚ್ಚೊಳ್ಳಿ ಗ್ರಾಮದಲ್ಲಿ ಹೊಸ ಮನೆಗಳ ನಿರ್ಮಾಣದ ಜವಾಬ್ದಾರಿಯನ್ನ ಗಣಿ ಮಾಲೀಕರು ವಹಿಸಿಕೊಂಡ್ರು. ಮನೆಗಳ ನಿರ್ಮಾಣ ಕಾರ್ಯ ಕೂಡ ಆರಂಭವಾಯ್ತು. ಆದ್ರೆ 2011 ರಲ್ಲಿ ಗಣಿಗಾರಿಕೆ ಸ್ಥಗಿತವಾಗಿದ್ದ ಕಡ, ಗಣಿ ಮಾಲೀಕರು ಮನೆಗಳನ್ನ ನಿರ್ಮಾಣ ಮಾಡುವ ಕಾರ್ಯವನ್ನೂ ಅಷ್ಟಕ್ಕೆ ಕೈಬಿಟ್ಟರು.

ಸರ್ಕಾರ ಮನೆ ಕಟ್ಟಿಸಿದ್ರೂ, ಹಂಚಿಕೆ ಮಾಡದ ಅಧಿಕಾರಿಗಳು ಆಗ ಜಿಲ್ಲಾಡಳಿತ ಸ್ಲಂ ಬೋರ್ಡ್ ಸಹಯೋಗದೊಂದಿಗೆ 598 ಮನೆಗಳನ್ನ ನಿರ್ಮಾಣ ಮಾಡಿತು. ಆದ್ರೆ ಈ ಗ್ರಾಮದ ಒಬ್ಬರೇ ಒಬ್ಬರು ಫಲಾನುಭವಿಗೆ ಈ ಮನೆಗಳನ್ನ ಹಂಚಿಕೆ ಮಾಡಿಲ್ಲ. ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸಿಕೊಟ್ಟಿಲ್ಲ. ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಇದುವರೆಗೆ ಮನೆಗಳು ಹಂಚಿಕೆ ಮಾಡಿಲ್ಲ. ಇದರಿಂದಾಗಿ ಇವತ್ತಿಗೂ ಗ್ರಾಮದ ಫಲಾನುಭವಿಗಳು ಸೂರಿಗಾಗಿ ಜಾತಕ ಪಕ್ಷದಂತೆ ಕಾಯುತ್ತಿದ್ದಾರೆ.

ವಾಸಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿ ಮನೆಗಳು ಕಳೆದ ಹತ್ತು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಈ ಮನೆಗಳು ಸಂಪೂರ್ಣವಾಗಿ ಶಿಥಿಲಗೊಂಡಿವೆ. ಯಾವುದೇ ರೀತಿ ವಾಸಕ್ಕೆ ಯೋಗ್ಯವಾಗಿಲ್ಲ. ಗೋಡೆಗಳು ಬಿರುಕು ಬಿಟ್ಟಿವೆ. ಮೇಲ್ಚಾವಣಿ ಕುಸಿಯುವ ಮಟ್ಟಕ್ಕೆ ತಲುಪಿದೆ. ಮನೆಯ ಕಿಡಕಿಗಳು ಬಾಗಿಲುಗಳನ್ನ ಕಿತ್ತುಕೊಂಡು ಹೋಗಲಾಗಿದೆ. ಮನೆಗೆ ಹಾಕಿದ ಬಂಡೆಗಳನ್ನ ಕೂಡ ತೆಗೆದುಕೊಂಡು ಹೋಗಲಾಗಿದೆ. ಈಡೀ ಹೊಸ ಗ್ರಾಮದ ತುಂಬೆಲ್ಲಾ ಜಾಲಿ ಗಿಡಗಳು ಬೆಳೆದು ನಿಂತಿವೆ. ಜೊತೆಗೆ ಇದು ಈಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿ ರಸ್ತೆಗಳಿಲ್ಲ, ಚರಂಡಿಗಳಿಲ್ಲ. ಹೀಗಾಗಿ ಈ ಗ್ರಾಮದ ಕೆಲ ಜನರು ಕಳೆದ ಹತ್ತು ವರ್ಷಗಳಿಂದಲೂ ಶೆಡ್ ಗಳಲ್ಲಿಯೇ ವಾಸ ಮಾಡುತ್ತಿದ್ದಾರೆ.

ಕೋಟಿ ಖರ್ಚು ಮಾಡಿಯೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳು ಕೋಟಿ ಖರ್ಚು ಮಾಡಿ ಅರ್ಧಕ್ಕೆ ಬಿಟ್ಟ ಮನೆಗಳನ್ನ ನಂತರ ಸರ್ಕಾರ ಮತ್ತಷ್ಟು ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಿದೆ. ಆದ್ರೆ ಸಮರ್ಪಕವಾಗಿ ಮನೆಗಳನ್ನ ನಿರ್ಮಿಸಿ, ಮೂಲಭೂತ ಸೌಕರ್ಯ ಕಲ್ಪಿಸಿ ಈ ವೇಳೆಗಾಗಲೇ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕಿತ್ತು. ಆದ್ರೆ ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ದಶಕ ಕಳೆದ್ರೂ ಮನೆಗಳು ಹಂಚಿಕೆಯಾಗದೇ ಪಾಳು ಬಿದ್ದಿವೆ. ಇದಕ್ಕೆ ಬಡವರ ದುರಂತ ಅಗಬೇಕಾ ಅಥವಾ ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಪರಿ ಅನ್ನಬೇಕಾ ಅನ್ನೋದು ಸಂತ್ರಸ್ತರ ನೋವು.-ಬಸವರಾಜ ಹರನಹಳ್ಳಿ

Published On - 11:44 am, Wed, 24 June 20

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ