ಪದ್ಮಾವತಿ ಯಾದವ್ ಕೊಲೆ‌ ಪ್ರಕರಣ: ಸಿಬಿಐ ತನಿಖೆಗೆ ಆಗ್ರಹಿಸಿವಂತೆ ಸಹೋದರನಿಂದ ಹೋರಾಟ

12 ವರ್ಷಗಳ ಹಿಂದೆ ಬಳ್ಳಾರಿ ನಗರಸಭೆ ಸದಸ್ಯೆಯಾಗಿದ್ದ ಪದ್ಮಾವತಿ ಯಾದವ್​ರನ್ನು ಅವರ ಮನೆಯಲ್ಲೇ ಕೊಚ್ಚಿ ಕೊಲೆ‌ ಮಾಡಿದ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸಂಚಲನ‌ ಸೃಷ್ಟಿ ಮಾಡಿತ್ತು. ಆೆದರ ತನಿಖೆಗೆ ಇಳಿದ ಪೊಲೀಸರಿಗೆ ಆರೋಪಿಗಳು ಇದೂವರೆಗೂ ಪತ್ತೆಯಾಗಿಲ್ಲ.

ಪದ್ಮಾವತಿ ಯಾದವ್ ಕೊಲೆ‌ ಪ್ರಕರಣ: ಸಿಬಿಐ ತನಿಖೆಗೆ ಆಗ್ರಹಿಸಿವಂತೆ ಸಹೋದರನಿಂದ ಹೋರಾಟ
ಪದ್ಮಾವತಿ ಯಾದವ್
Follow us
| Updated By: preethi shettigar

Updated on:Feb 05, 2022 | 7:30 AM

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ ಪದ್ಮಾವತಿ ಯಾದವ್ ಕೊಲೆ(Murder) ಕೇಸ್ ಮತ್ತೆ ಮುನ್ನಲೆಗೆ ಬಂದಿದೆ. ನಗರಸಭೆಯ ಬಿಜೆಪಿ ಮಹಿಳಾ ಸದಸ್ಯೆಯಾಗಿದ್ದ ಪದ್ಮಾವತಿ ಯಾದವ್ ಕೊಲೆ ಪ್ರಕರಣ ನಡೆದು 12 ವರ್ಷಗಳು ಗತಿಸಿದ್ದರು ಆರೋಪಿಗಳ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ(CBI) ಒಪ್ಪಿಸಿ ತನಿಖೆ ನಡೆಸುವಂತೆ ಕೊಲೆಯಾದ ಪದ್ಮಾವತಿ ಯಾದವ್ ಸಹೋದರ ಹೋರಾಟಕ್ಕೆ ಇಳಿದಿದ್ದಾರೆ. 12 ವರ್ಷಗಳ ಹಿಂದೆ ಬಳ್ಳಾರಿ ನಗರಸಭೆ ಸದಸ್ಯೆಯಾಗಿದ್ದ ಪದ್ಮಾವತಿ ಯಾದವ್​ರನ್ನು ಅವರ ಮನೆಯಲ್ಲೇ ಕೊಚ್ಚಿ ಕೊಲೆ‌ ಮಾಡಿದ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸಂಚಲನ‌ ಸೃಷ್ಟಿ ಮಾಡಿತ್ತು. ಆೆದರ ತನಿಖೆಗೆ ಇಳಿದ ಪೊಲೀಸರಿಗೆ(Police) ಆರೋಪಿಗಳು ಇದೂವರೆಗೂ ಪತ್ತೆಯಾಗಿಲ್ಲ. ಹೀಗಾಗಿ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದು, ಸಿಬಿಐ ತನಿಖೆಗೆ ನೀಡುವಂತೆ ಸಲ್ಲಿಸಿದ ಅರ್ಜಿ ವಿಚಾರಣೆ ಹೈಕೋರ್ಟ್​ನಲ್ಲಿದೆ.

ದೂರುದಾರರು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಇದೀಗ ಕೇಂದ್ರ ಸರ್ಕಾರದ ಗೃಹ ಸಚಿವರು, ಪ್ರಧಾನಿ ನರೇಂದ್ರ ಮೋದಿಗೂ ಮನವಿ ಸಲ್ಲಿಸಲು ಮುಂದಾಗಿರುವುದು ಮತ್ತೆ 12 ವರ್ಷದ ಹಿಂದಿನ ಪ್ರಕರಣ ಮುನ್ನೆಲೆಗೆ ಬಂದಿದೆ.

ಪ್ರಕರಣದ ಹಿನ್ನಲೆ

ಬಳ್ಳಾರಿ ನಗರದಲ್ಲಿ 2010 ರ ಫೆ 4 ರಂದು ಅಂದಿನ ನಗರಸಭೆ ಸದಸ್ಯೆಯಾಗಿದ್ದ ಪದ್ಮಾವತಿ ಯಾದವ್​ರನ್ನು ಕೊಲೆ ಮಾಡಲಾಗಿತ್ತು. ಕೊಲೆಯಾದ ಮರುದಿನದ ಬಳಿಯಕ ಅಂದರೆ ಫೆ.6 ರಂದು ಈ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿತ್ತು. ಆದರೆ ಐದು ವರ್ಷಗಳ ಕಾಲ ಪ್ರಕರಣದ ತನಿಖೆಗೆ ನಡೆಸಿದ ಸಿಐಡಿ ಸಹ ತನಿಖೆಯನ್ನು ಪೂರ್ಣಗೊಳಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಶ್ರೀಘ್ರದಲ್ಲಿ ಪೂರ್ಣಗೊಳಿಸುವಂತೆ ಹೈಕೋರ್ಟ್ 2015ರ ಡಿಸೆಂಬರ್ 8 ರಂದು ಸಿಐಡಿಗೆ ಸೂಚನೆ ನೀಡಿತ್ತು.‌ ಆದರೆ ತನಿಖೆಯ ನಂತರ ಆರೋಪಿಗಳು ಪತ್ತೆಯಾಗದ ಕಾರಣ ಸಿಐಡಿ ಅಧಿಕಾರಿಗಳು 2016ರ ಸೆಪ್ಟೆಂಬರ್ 20ರಂದು ಸಿ ರಿರ್ಪೋಟ್ ಅನ್ನು ಬಳ್ಳಾರಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದರು.

ಈ ಸಿ ರಿರ್ಪೋಟ್ ಅನ್ನು ಪ್ರಶ್ನಿಸಿ ಮೃತ ಪದ್ಮಾವತಿ ಯಾದವ್ ಅವರ ಸಹೋದರ ಸುಬ್ಬರಾಯಡು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಬಳ್ಳಾರಿ ನ್ಯಾಯಾಲಯಕ್ಕೆ ಪ್ರೋಟೆಸ್ಟ್ ಮೆಮೋ ಸಲ್ಲಿಸಿದ್ದರು. ಅಲ್ಲದೇ ಹೈಕೋರ್ಟ್​ನಲ್ಲಿ 2018 ಜೂನ್ 25 ರಂದು ಅರ್ಜಿ ಸಲ್ಲಿಸಿದ್ದು, ಸದ್ಯ ಈ ಅರ್ಜಿಯ ವಿಚಾರಣೆ ನಡೆಯುತ್ತಿದೆ.

ಸಹೋದರಿ ಪದ್ಮಾವತಿ ಯಾದವ್ ಕೊಲೆಯಾಗಿ 12 ವರ್ಷಗಳು ಗತಿಸಿವೆ. ಆದರೂ ಆರೋಪಿಗಳು ಪತ್ತೆಯಾಗಿಲ್ಲ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಈಗಾಗಲೇ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯಿತ್ತಿದೆ. ‌ಜೊತೆಗೆ ರಾಜ್ಯದ ಮುಖ್ಯಮಂತ್ರಿ. ಗೃಹ ಸಚಿವರಿಗೂ ಮನವಿ ಸಲ್ಲಿಕೆ ಮಾಡಲಾಗಿದೆ. ಶ್ರೀಘ್ರದಲ್ಲೆ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೇಂದ್ರ ಸರ್ಕಾರಕ್ಕೂ ಮನವಿ ಮಾಡುವೆ. ನಾನೇ ಖುದ್ದಾಗಿ ಕೇಂದ್ರ ಗೃಹ ಸಚಿವರು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೆ ದಿನಾಂಕ ಕೋರಿ ಪತ್ರ ಬರೆಯುವೆ. ಅವರಿಗೂ ಮನವಿ ಸಲ್ಲಿಸಿ ನ್ಯಾಯ ಕೋರುವೆ ಎಂದು ಕೊಲೆಯಾದ ಪದ್ಮಾವತಿ ಸಹೋದರ ಸುಬ್ಬರಾಯಡು ತಿಳಿಸಿದ್ದಾರೆ.

ವರದಿ: ವೀರಪ್ಪ ದಾನಿ

ಇದನ್ನೂ ಓದಿ: Bengaluru Crime: ಬೆಂಗಳೂರಿನಲ್ಲಿ ಹೆಂಡತಿ ಮೇಲೆ ಕುದಿಯುವ ಎಣ್ಣೆ ಸುರಿದು ಗಂಡನಿಂದ ಕೊಲೆ ಯತ್ನ; ಅಡ್ಡ ಬಂದ ಮಗಳ ಮೇಲೂ ಹಲ್ಲೆ

ಆಸ್ತಿ ಕೈ ತಪ್ಪುತ್ತೆಂದು ಸ್ನೇಹಿತರ ಜೊತೆ ಸೇರಿ ಭಾವಮೈದುನ ನನ್ನೇ ಕೊಲೆ ಮಾಡಿದ ಭಾವ; ಸ್ನೇಹಿತರು ಅರೆಸ್ಟ್, ಮುಖ್ಯ ಆರೋಪಿ ಎಸ್ಕೇಪ್

Published On - 7:29 am, Sat, 5 February 22