AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು to ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ರೈಲು ಸಂಚಾರದ ವೇಳಾಪಟ್ಟಿ ಇಲ್ಲಿದೆ ನೋಡಿ

ಬೆಂಗಳೂರು ನಗರ ಭಾಗದಿಂದ ಕೆಂಪೇಗೌಡ ಇಂಟರ್ನ್ಯಾಷನಲ್ ಏರ್ಪೋರ್ಟ್ ಹಾಲ್ಟ್ ಸ್ಟೇಷನ್‌ ರೈಲು ಸೇವೆಗಳ ವಿವರದ ಬಗ್ಗೆ ಇಲ್ಲಿದೆ ಮಾಹಿತಿ.

ಬೆಂಗಳೂರು to ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ರೈಲು ಸಂಚಾರದ ವೇಳಾಪಟ್ಟಿ ಇಲ್ಲಿದೆ ನೋಡಿ
ರಾಜೇಶ್ ದುಗ್ಗುಮನೆ
| Edited By: |

Updated on:Jan 04, 2021 | 1:20 PM

Share

ಬೆಂಗಳೂರು: ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ವ್ಯವಸ್ಥೆ ನಾಳೆಯಿಂದ ಕಾರ್ಯಾರಂಭ ಆಗಲಿದೆ. ಪ್ರತಿ ರೈಲು 325 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರಲಿದೆ.

ಈ ರೈಲು ಸೇವೆಯಿಂದ ಕೇವಲ ಪ್ರಯಾಣಿಕರಲ್ಲದೆ ವಿಮಾನ ನಿಲ್ದಾಣದ ಸಿಬ್ಬಂದಿಗೂ ನೆರವಾಗಲಿದೆ. ಏಕೆಂದರೆ, ನಗರ ಭಾಗದಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ಸಿಬ್ಬಂದಿ ನಿತ್ಯ 2ರಿಂದ 4 ಗಂಟೆ ವ್ಯಯ ಮಾಡುತ್ತಿದ್ದರು. ಅಲ್ಲದೆ, ಬಹಳಷ್ಟು ಹಣವನ್ನು ಕೂಡ ಖರ್ಚು ಮಾಡುತ್ತಿದ್ದರು. ಹೀಗಾಗಿ, ಅವರ ದಿನನಿತ್ಯದ ಸಮಸ್ಯೆಗೆ ಈಗ ಪರಿಹಾರ ಸಿಕ್ಕಂತಾಗಿದೆ. ಕೆಂಪೇಗೌಡ ಇಂಟರ್​ನ್ಯಾಷನಲ್ ಏರ್​ಪೋರ್ಟ್ ಹಾಲ್ಟ್ ಸ್ಟೇಷನ್​ಗೆ ಹೋಗುವ  ರೈಲುಗಳ ವೇಳಾಪಟ್ಟಿಯ ಮಾಹಿತಿ ಇಲ್ಲಿದೆ ನೋಡಿ. ರೈಲು ಸಂಖ್ಯೆ 06283: ಕೆ.ಎಸ್.ಆರ್ ಬೆಂಗಳೂರು – ದೇವನಹಳ್ಳಿ ಡೆಮು ರೈಲು ಕೆಎಸ್ಆರ್ ಬೆಂಗಳೂರಿನಿಂದ 21:00 ಗಂಟೆಗೆ ಹೊರಟು 22:20 ಗಂಟೆಗೆ ದೇವನಹಳ್ಳಿಯನ್ನು ತಲುಪುತ್ತದೆ

 ರೈಲು ಸಂಖ್ಯೆ 06284: ದೇವನಹಳ್ಳಿ – ಬೆಂಗಳೂರು ಕಂಟೋನ್ಮೆಂಟ್ ಡೆಮು ರೈಲು ದೇವನಹಳ್ಳಿಯಿಂದ 07:45 ಗಂಟೆಗೆ ನಿರ್ಗಮಿಸುತ್ತದೆ ಮತ್ತು 08:50 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪುತ್ತದೆ

ರೈಲು ಸಂಖ್ಯೆ 06285: ಕೆ.ಎಸ್.ಆರ್ ಬೆಂಗಳೂರು – ದೇವನಹಳ್ಳಿ ಡೆಮು ರೈಲು ಕೆಎಸ್ಆರ್ ಬೆಂಗಳೂರಿನಿಂದ 04:45ಕ್ಕೆ ಹೊರಟು 06:05ಕ್ಕೆ ದೇವನಹಳ್ಳಿ ತಲುಪುತ್ತದೆ.

ರೈಲು ಸಂಖ್ಯೆ 06286: ದೇವನಹಳ್ಳಿ-ಕೆ.ಎಸ್.ಆರ್ ಬೆಂಗಳೂರು ಡೆಮು ರೈಲು ದೇವನಹಳ್ಳಿಯಿಂದ 22:30 ಗಂಟೆಗೆ ನಿರ್ಗಮಿಸುತ್ತದೆ ಮತ್ತು 23:55 ಗಂಟೆಗೆ ಕೆ.ಎಸ್.ಆರ್ ಬೆಂಗಳೂರಿಗೆ ತಲುಪುತ್ತದೆ.

ರೈಲು ಸಂಖ್ಯೆ 06287: ಯಲಹಂಕ – ದೇವನಹಳ್ಳಿ ಡೆಮು ರೈಲು ಯಲಹಂಕದಿಂದ 07:00 ಗಂಟೆಗೆ ಹೊರಟು 07:35 ಗಂಟೆಗೆ ದೇವನಹಳ್ಳಿಯನ್ನು ತಲುಪುತ್ತದೆ.

ರೈಲು ಸಂಖ್ಯೆ 06288: ದೇವನಹಳ್ಳಿ – ಯಲಹಂಕ ಡೆಮು ರೈಲು ದೇವನಹಳ್ಳಿಯಿಂದ 06:15 ಗಂಟೆಗೆ ನಿರ್ಗಮಿಸುತ್ತದೆ ಮತ್ತು 06:50 ಗಂಟೆಗೆ ಯಲಹಂಕವನ್ನು ತಲುಪುತ್ತದೆ.

ಮೇಲಿನ ಡೆಮು ರೈಲುಗಳು 6 ಟ್ರೇಲಿಂಗ್ ಕಾರುಗಳು ಮತ್ತು 2 ಮೋಟಾರ್ ಕಾರುಗಳ ಸಂಯೋಜನೆಯನ್ನು ಹೊಂದಿವೆ. ರೈಲುಗಳು ವಾರದಲ್ಲಿ 6 ದಿನ ಓಡುತ್ತವೆ. ಆದರೆ, ಭಾನುವಾರದಂದು ಯಾವುದೇ ಸೇವೆ ಇರುವುದಿಲ್ಲ.

ರೈಲು ಸಂಖ್ಯೆ 06280: ಬಂಗಾರ್‌ಪೇಟೆ – ಬೆಂಗಳೂರು ಕಂಟೋನ್ಮೆಂಟ್ ಡೆಮು ರೈಲು ಸೇವೆಗಳನ್ನು ಕೆ.ಎಸ್‌.ಆರ್ ಬೆಂಗಳೂರಿನವರೆಗೆ ವಿಸ್ತರಿಸಲಾಗುವುದು. ಮೇಲಿನ ಡೆಮು ರೈಲುಗಳನ್ನು ಪರಿಚಯಿಸುವುದರಿಂದ ರೈಲು 23:00 ಗಂಟೆಗೆ ಕೆ.ಎಸ್.ಆರ್ ಬೆಂಗಳೂರಿಗೆ ತಲುಪಲಿದೆ.

ರೈಲು ಸಂಖ್ಯೆ 06269: 17:55 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಡುವ ರೈಲು 18:50 ಗಂಟೆಗೆ ಕೆ.ಐ.ಎ.ಡಿ. ಹಾಲ್ಟ್ ಆಗಮಿಸಿ 18.51 ಗಂಟೆಗೆ ಬಂಗಾರ್‌ಪೇಟ್‌ಗೆ ಹೊರಡುತ್ತದೆ.

ರೈಲು ಸಂಖ್ಯೆ 06270: ಬಂಗಾರ್‌ಪೇಟೆ – ಯಶವಂತಪುರ ಡೆಮು ರೈಲು 08.25 ಗಂಟೆಗೆ ಕೆ.ಐ.ಎ.ಡಿ. ಹಾಲ್ಟ್ ಆಗಮಿಸಿ 08:26 ಗಂಟೆಗೆ ಯಶವಂತಪುರಕ್ಕೆ ಹೊರಡುತ್ತದೆ.

ರೈಲು ಸಂಖ್ಯೆ 06279: ಯಶವಂತಪುರ – ಬಂಗಾರ್‌ಪೆಟ್ ಡೆಮು ರೈಲು ಯಶವಂತಪುರ ದಿಂದ 08.30 ಗಂಟೆಗೆ ಹೊರಟು 09.16 ಗಂಟೆಗೆ ಕೆ.ಐ.ಎ.ಡಿ. ಹಾಲ್ಟ್ ಆಗಮಿಸಿ 09:17 ಗಂಟೆಗೆ ಬಂಗಾರ್‌ಪೇಟ್‌ಗೆ ಹೊರಡುತ್ತದೆ.

ರೈಲು ಸಂಖ್ಯೆ 06280: ಬಂಗಾರ್‌ಪೇಟೆ ಕೆ.ಎಸ್‌.ಆರ್ ಬೆಂಗಳೂರು ಡೆಮು ರೈಲು 18:42 ಗಂಟೆಗೆ ಕೆ.ಐ.ಎ.ಡಿ. ಹಾಲ್ಟ್ ಆಗಮಿಸಿ 18:43 ಗಂಟೆಗೆ ಕೆ.ಎಸ್‌.ಆರ್ ಬೆಂಗಳೂರು ಕಡೆಗೆ ಹೊರಡುತ್ತದೆ.

ಇನ್ಮುಂದೆ ಕೇವಲ 10 ರೂಪಾಯಿಗೆ.. ಮೆಜೆಸ್ಟಿಕ್​ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿ!

Published On - 9:32 pm, Sun, 3 January 21

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!