AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇತರೆ ಧರ್ಮದ ದೇವರುಗಳು ಕೋಪಿಷ್ಟರು.. ಆದರೆ ಹಿಂದೂ ಧರ್ಮದಲ್ಲಿ ಈ ರೀತಿ ಇಲ್ಲ -S.L.ಭೈರಪ್ಪ

ಇತರೆ ಧರ್ಮದ ದೇವರುಗಳು ಕೋಪಿಷ್ಟರು. ದೇವರ ಬಗ್ಗೆ ಸಣ್ಣ ಟೀಕೆ ಮಾಡಿದರೂ ಭಕ್ತರು ಹೊಡೆಯುತ್ತಾರೆ. ಆದರೆ ಹಿಂದೂ ಧರ್ಮದಲ್ಲಿ ಈ ರೀತಿ ಇಲ್ಲ. ಹಿಂದೂ ಧರ್ಮದಲ್ಲಿರುವ ವೈಶಾಲ್ಯತೆ ಬೇರೆ ಧರ್ಮಗಳಲ್ಲಿ ಇಲ್ಲ ಎಂದು ಭೈರಪ್ಪ ಹೇಳಿದರು.

ಇತರೆ ಧರ್ಮದ ದೇವರುಗಳು ಕೋಪಿಷ್ಟರು.. ಆದರೆ ಹಿಂದೂ ಧರ್ಮದಲ್ಲಿ ಈ ರೀತಿ ಇಲ್ಲ -S.L.ಭೈರಪ್ಪ
ಹಿರಿಯ ಸಾಹಿತಿ S.L.ಭೈರಪ್ಪ
Follow us
KUSHAL V
|

Updated on:Jan 03, 2021 | 8:08 PM

ಮೈಸೂರು: ಇತರೆ ಧರ್ಮದ ದೇವರುಗಳು ಕೋಪಿಷ್ಟರು. ದೇವರ ಬಗ್ಗೆ ಸಣ್ಣ ಟೀಕೆ ಮಾಡಿದರೂ ಭಕ್ತರು ಹೊಡೆಯುತ್ತಾರೆ. ಆದರೆ ಹಿಂದೂ ಧರ್ಮದಲ್ಲಿ ಈ ರೀತಿ ಇಲ್ಲ. ಹಿಂದೂ ಧರ್ಮದಲ್ಲಿರುವ ವೈಶಾಲ್ಯತೆ ಬೇರೆ ಧರ್ಮಗಳಲ್ಲಿ ಇಲ್ಲ. ನಾವು ದೇವರನ್ನು ಬೈಯುತ್ತೇವೆ, ಟೀಕೆ ಮಾಡುತ್ತೇವೆ. ಅದನ್ನ ನಾವು ಒಪ್ಪಿಕೊಳ್ಳುತ್ತೇವೆ‌. ಆದರೆ, ಬೇರೆ ಧರ್ಮದವರಿಗೆ ಈ ವೈಶಾಲ್ಯತೆಯನ್ನು ಹೇಳಿಕೊಡಬೇಕಿದೆ. ಇಲ್ಲದಿದ್ದರೆ ಹಿಂದೂ ಧರ್ಮದ ವೈಶಾಲ್ಯತೆಗೆ ಧಕ್ಕೆಯಾಗುತ್ತೆ ಎಂದು ಭೈರಪ್ಪ ಹೇಳಿದರು.

‘ಜಿನ್ನಾ, ಗಾಂಧಿ ಉಪವಾಸ ಮಾಡಿ ಸಾಯಲಿ ಎಂದು ಬಯಸುತ್ತಿದ್ದ’ ರಾಮ ಅಹಿಂಸಾ ಮಾರ್ಗವನ್ನು ಹಿಡಿದಿದ್ದ. ಗಾಂಧಿ ಕೂಡ ಅದೇ ಮಾರ್ಗವನ್ನ ಅನುಸರಿಸಿ ಉಪವಾಸ ಸತ್ಯಗ್ರಹ ಮಾಡುತ್ತಿದ್ದರು. ಉಪವಾಸ ಮಾಡಿದಾಗ ಹಿಂದೂಗಳು ಅವರ ಮಾತುಗಳನ್ನು ಕೇಳುತ್ತಿದ್ದರು. ಆದರೆ ಜಿನ್ನಾ, ಗಾಂಧಿ ಉಪವಾಸ ಮಾಡಿ ಸಾಯಲಿ ಎಂದು ಬಯಸುತ್ತಿದ್ದ ಎಂದು ಕಾರ್ಯಕ್ರಮದಲ್ಲಿ ಸಾಹಿತಿ S.L.ಭೈರಪ್ಪ ಹೇಳಿದರು.

‘ಗೋವಿಗೂ ನಮಗೂ ಇರೋದು ತಾಯಿ ಮಕ್ಕಳ‌ ಸಂಬಂಧ’ ರಾಜ್ಯದಲ್ಲಿ ಗೋ ಹತ್ಯೆ ಕಾಯ್ದೆ ಜಾರಿ ಸಮರ್ಥಿಸಿದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ‌  ಗೋವಿಗೂ ನಮಗೂ ಇರೋದು ತಾಯಿ ಮಕ್ಕಳ‌ ಸಂಬಂಧ. ಗೋವು ಅಹಿಂಸೆಯ ಪ್ರತೀಕ. ಚಿಕ್ಕಂದಿನಿಂದ ಗೋವಿನ ಹಾಲು ಕುಡಿದೇ ಎಲ್ಲರೂ ಬೆಳೆದಿದ್ದೇವೆ. ವಯಸ್ಸಾದ ಮೇಲೆ ತಾಯಿಯನ್ನು ನಿರುಪಯುಕ್ತ ಅಂತಾ ಹೇಳಲಾಗುವುದೇ? ಗೋವು ಹಾಲು ಕೊಡುವುದನ್ನು ನಿಲ್ಲಿಸಿದ‌ ಮೇಲೂ ಗೊಬ್ಬರ ಕೊಡುತ್ತದೆ. ನಾವೀಗ ಕೆಮಿಕಲ್ ಯುಕ್ತ ಆಹಾರವನ್ನು ತಿನ್ನುತ್ತಿರುವ ಕಾರಣದಿಂದಲೇ ಕ್ಯಾನ್ಸರ್ ಬರ್ತಿದೆ ಎಂದು S.L.ಭೈರಪ್ಪ ಹೇಳಿದರು.

ಗೋವುಗಳನ್ನು ರೈತರು ಗೊಬ್ಬರದ ಸಲುವಾಗಿಯಾದ್ರೂ ಸಲಹಬೇಕು. ಗೋವನ್ನು ಟೀಕಿಸುವವರು ಮೂಲಭೂತ ಜ್ಞಾನ ಇಲ್ಲದವರು ಎಂದು ಹಿರಿಯ ಸಾಹಿತಿ ಹೇಳಿದರು.

ಹನುಮಂತ ಗುಲಾಮಗಿರಿಯ ಸಂಕೇತ, ಹನುಮ‌ ಜಯಂತಿಯನ್ನೇ‌ ಪ್ರಶ್ನೆ ಮಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯರ ಹೇಳಿಕೆಗೆ ಇದು ನಾನು ಉತ್ತರ ಕೊಡಲು ಲಾಯಕ್ಕೇ ಇಲ್ಲದ‌ ವಿಚಾರ. ಹಾಗಾಗಿ ಅಂತಹವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಭೈರಪ್ಪ ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.

ರಾಮ ಆದರ್ಶ ವ್ಯಕ್ತಿ; ಆದರೆ, ಪ್ರಧಾನಿ ಮೋದಿ ರಾಮನಲ್ಲ.. ಕೃಷ್ಣ -S.L.ಭೈರಪ್ಪ

Published On - 7:53 pm, Sun, 3 January 21

ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ
ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ
ಬಿಜೆಪಿ ಪ್ರಚಾರಕ್ಕಾಗಿ ಎಮರ್ಜೆನ್ಸಿ ವಿಚಾರ ಬಳಸಿಕೊಳ್ಳುತ್ತಿದೆ: ಶಿವಕುಮಾರ್
ಬಿಜೆಪಿ ಪ್ರಚಾರಕ್ಕಾಗಿ ಎಮರ್ಜೆನ್ಸಿ ವಿಚಾರ ಬಳಸಿಕೊಳ್ಳುತ್ತಿದೆ: ಶಿವಕುಮಾರ್
ಕೇವಲ ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ಮಳೆಯಾಗುತ್ತಿದೆ: ಜಾರಕಿಹೊಳಿ
ಕೇವಲ ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ಮಳೆಯಾಗುತ್ತಿದೆ: ಜಾರಕಿಹೊಳಿ
ದೈವ ನುಡಿದಂತೆ ಮನೆಗೆ ಬಂದ ಅಣ್ಣ: ತಮ್ಮ ಹೇಳಿದ್ದಿಷ್ಟು
ದೈವ ನುಡಿದಂತೆ ಮನೆಗೆ ಬಂದ ಅಣ್ಣ: ತಮ್ಮ ಹೇಳಿದ್ದಿಷ್ಟು
ಚಿಕ್ಕಮಗಳೂರು: ಹಾಲಿನ ಟ್ಯಾಂಕರ್ ಪಲ್ಟಿ, ಹರಿಯಿತು ಹಾಲಿನ ಹೊಳೆ
ಚಿಕ್ಕಮಗಳೂರು: ಹಾಲಿನ ಟ್ಯಾಂಕರ್ ಪಲ್ಟಿ, ಹರಿಯಿತು ಹಾಲಿನ ಹೊಳೆ
ಕಬಿನಿ ಜಲಾಶಯಕ್ಕೆ ಶಿವಣ್ಣ-ಗೀತಕ್ಕ ಭೇಟಿ, ಮಕ್ಕಳೊಂದಿಗೆ ಬೆರೆತ ದಂಪತಿ
ಕಬಿನಿ ಜಲಾಶಯಕ್ಕೆ ಶಿವಣ್ಣ-ಗೀತಕ್ಕ ಭೇಟಿ, ಮಕ್ಕಳೊಂದಿಗೆ ಬೆರೆತ ದಂಪತಿ
ಮಗನಿಗಾಗಿ ಶಬರಿಯಂತೆ ಕಾಯ್ದ ತಾಯಿ, ದೈವದ ಮೊರೆ ಹೊಕ್ಕಿದ್ದ ಕುಟುಂಬ
ಮಗನಿಗಾಗಿ ಶಬರಿಯಂತೆ ಕಾಯ್ದ ತಾಯಿ, ದೈವದ ಮೊರೆ ಹೊಕ್ಕಿದ್ದ ಕುಟುಂಬ
ರಮೋಲಾಗೆ ಆಗಸದಲ್ಲಿ ಪ್ರಪೋಸ್ ಮಾಡಿ ಹಣೆಗೆ ಮುತ್ತಿಟ್ಟ ರಕ್ಷಕ್ ಬುಲೆಟ್
ರಮೋಲಾಗೆ ಆಗಸದಲ್ಲಿ ಪ್ರಪೋಸ್ ಮಾಡಿ ಹಣೆಗೆ ಮುತ್ತಿಟ್ಟ ರಕ್ಷಕ್ ಬುಲೆಟ್