AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಸೈನಿಕನಿಗೆ ಕೊರೊನಾ ಕಾಲದಲ್ಲಿ ತನ್ನನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿಲ್ಲ.. ಕಮಾಂಡೋ ಹಾಸ್ಪಿಟಲ್ ಸಹ ನೆರವಿಗೆ ಬರಲಿಲ್ಲ

Bangalore Commando Hospital: ಒಬ್ಬ ಮಾಜಿ ಸೈನಿಕನನ್ನು (ಗಾಯಾಳು ರಮೇಶ್​ ಬಾಬು) ಇಷ್ಟೆಲ್ಲ ಹಾಸ್ಪಿಟಲ್​ಗಳಿಗೆ ಸುತ್ತಾಡಿಸಿದ್ದಾರೆ. ಇಷ್ಟೆಲ್ಲ ಮಾಡಿದರೂ ಮಾಜಿ ಸೈನಿಕನನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಸ್ನೇಹಿತ ಗಂಗಾಧರಯ್ಯ ವ್ಯಥೆಪಟ್ಟಿದ್ದಾರೆ. ದೇಶ ಕಾಯುವ ಸೈನಿಕನಿಗೇ ಹೀಗಾದರೆ ಸಾಮಾನ್ಯ ಜನರ ಪರಿಸ್ಥಿತಿ ಏನು? ಎಂದು ಸ್ನೇಹಿತ ಸಾವನಪ್ಪಿದ ಬಳಿಕ ಸ್ನೇಹಿತ ಹಾಗೂ ಮಾಜಿ ಸೈನಿಕ ಗಂಗಾಧರಯ್ಯ ವಿಡಿಯೋ ಮಾಡಿ, ಆಕ್ರೋಶ ಹೊರಹಾಕಿದ್ದಾರೆ.

ಮಾಜಿ ಸೈನಿಕನಿಗೆ ಕೊರೊನಾ ಕಾಲದಲ್ಲಿ ತನ್ನನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿಲ್ಲ.. ಕಮಾಂಡೋ ಹಾಸ್ಪಿಟಲ್  ಸಹ ನೆರವಿಗೆ ಬರಲಿಲ್ಲ
ಮಾಜಿ ಸೈನಿಕನಿಗೆ ಕೊರೊನಾ ಕಾಲದಲ್ಲಿ ತನ್ನನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿಲ್ಲ.. ಕಮಾಂಡೋ ಹಾಸ್ಪಿಟಲ್ ಸಹ ನೆರವಿಗೆ ಬರಲಿಲ್ಲ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: May 27, 2021 | 11:05 AM

Share

ಬೆಂಗಳೂರು: ಯುದ್ಧ ಕಾಲದಲ್ಲಿ ದೇಶವನ್ನು ಕಾಪಾಡಿಕೊಂಡು ಬಂದಿರುವ ಮಾಜಿ ಸೈನಿಕನಿಗೆ ಕೊರೊನಾ ಕಾಲದಲ್ಲಿ ತನ್ನನ್ನು ತಾನು ಕಾಪಾಡಿಕೊಳ್ಳುವಲ್ಲಿ ಸಾಧ್ಯವಾಗಿಲ್ಲ. ಮೊನ್ನೆ ಎಲೆಕ್ಟ್ರಾನಿಕ್ ಸಿಟಿ ಬಡಾವಣೆಯೊಂದರ ರಸ್ತೆಯಲ್ಲಿ ರಮೇಶ್​ ಬಾಬು ಕೆ ಎಂಬ ಮಾಜಿ ಸೈನಿಕನಿಗೆ ಅಪಘಾತವಾಗಿದೆ. ಅಪಘಾತ ಆದ ಬಳಿಕ ಸ್ಥಳೀಯ ಸ್ಪರ್ಶ ಹಾಸ್ಪಿಟಲ್ ಗೆ ಅಡ್ಮಿಟ್ ಮಾಡಲಾಗಿದೆ. ಅಪಘಾತಕ್ಕೀಡಾದ ಆ ಮಾಜಿ ಸೈನಿಕನಿಗೆ ಆತನ ಸ್ನೇಹಿತ ಹಾಗೂ ಮಾಜಿ ಸೈನಿಕ ಗಂಗಾಧರಯ್ಯ ಅವರು ಸ್ಪರ್ಶ ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಮಾಡಿಸಿದ್ದಾರೆ. ಅಲ್ಲಿಂದ ಮುಂದೆ ನಡೆದಿದ್ದೆಲ್ಲ ಅಮಾನವೀಯ, ಅಕ್ಷಮ್ಯ.

ಅಡ್ಮಿಟ್ ಆಗಿ ಒಂದು ದಿನ ಆಗಿರಲ್ಲ. ಮಾಜಿ ಸೈನಿಕರಿಗೆ ಮೂರು ಲಕ್ಷಕ್ಕಿಂತ ಹೆಚ್ಚು ಮೊತ್ತದ ಬಿಲ್ ನೀಡಿದೆ ಇದೇ ಸ್ಪರ್ಶ ಹಾಸ್ಪಿಟಲ್. ಹಾಗಾಗಿ ಅಲ್ಲಿ ಬಿಲ್ ಜಾಸ್ತಿ ಆಗ್ತಿದೆ ಎಂದು ತಿಳಿದು ರಮೇಶ್​ ಬಾಬು ಸ್ನೇಹಿತ, ಮತ್ತೋರ್ವ ಮಾಜಿ ಸೈನಿಕ ಗಂಗಾಧರಯ್ಯ ಅವರು ಫೋನ್​ ಮಾಡಿ, ಕಮಾಂಡೋ ಹಾಸ್ಪಿಟಲ್ ಮೊರೆಹೋಗಿದ್ದಾರೆ. ಮೊದಲಿಗೆ ಕಮಾಂಡೋ ಹಾಸ್ಪಿಟಲ್ ನವರು ಬನ್ನಿ ಎಂದು ಹೇಳಿದ್ದಾರೆ. ಹೀಗಾಗಿ ಕಮಾಂಡೋ ಹಾಸ್ಪಿಟಲ್ ಗೆ ಮಾಜಿ ಸೈನಿಕನನ್ನು (ಗಾಯಾಳು ರಮೇಶ್​ ಬಾಬು) ಸ್ನೇಹಿತ ಗಂಗಾಧರಯ್ಯ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿಗೆ ಹೋದ ಮೇಲೆ.. ಇಲ್ಲ ಮೊದಲಿಗೆ ಸರ್ವೀಸ್ ನಲ್ಲಿ ಇರುವವರಿಗೆ ಮಾತ್ರ ಇಲ್ಲಿ ಅಡ್ಮಿಟ್ ಮಾಡಿಕೊಳ್ಳಲು ಅವಕಾಶ ಇರೋದು. ಅದಿಲ್ಲದಿದ್ದರೆ ಕೋವಿಡ್ ಇದ್ದವರಿಗೆ ಅಡ್ಮಿಟ್ ಮಾಡಿಕೊಳ್ಳುತ್ತೇವೆ. ನಿಮ್ಮದು ನಾನ್-ಕೋವಿಡ್ ಕೇಸ್​. ಹೀಗಾಗಿ ECHS ಇರುವ ಹಾಸ್ಪಿಟಲ್ ಗೆ ಹೋಗಿ ಎಂದು ಖುದ್ದು ಸೇನಾ ಆಸ್ಪತ್ರೆಯಲ್ಲಿ ಹೇಳಿದ್ದಾರೆ.

ಅನ್ಯ ಮಾರ್ಗವಿಲ್ಲದೆ ಮಾಜಿ ಸೈನಿಕನನ್ನು (ಗಾಯಾಳು ರಮೇಶ್​ ಬಾಬು) ಕರೆದುಕೊಂಡು ಬೇರೆ ಬೇರೆ ಖಾಸಗಿ ಹಾಸ್ಪಿಟಲ್ ಗಳಿಗೆ ಸುತ್ತಾಡಿದ್ದಾರೆ ಸ್ನೇಹಿತ ಗಂಗಾಧರಯ್ಯ. ಎಂ ಎಸ್​ ರಾಮಯ್ಯ ಆಸ್ಪತ್ರೆ, ಅದಾದಮೇಲೆ ಮಣಿಪಾಲ್ ಆಸ್ಪತ್ರೆ ಮತ್ತು ವಿಕ್ರಮ್ ಖಾಸಗಿ ಹಾಸ್ಪಿಟಲ್ ಗೆಲ್ಲಾ ಸುತ್ತಾಡಿದ್ದಾರೆ. ಆದರೆ ಎಲ್ಲೂ ಬೆಡ್ ಇಲ್ಲವೆಂದು ಪೆಶೆಂಟ್ ಗೆ ಅಡ್ಮಿಟ್ ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾರೆ.

ಕೊನೆಗೆ ಮತ್ತೆ ಮಾಜಿ ಸೈನಿಕನನ್ನು (ಗಾಯಾಳು ರಮೇಶ್​ ಬಾಬು) ಕಮಾಂಡೋ ಹಾಸ್ಪಿಟಲ್ ಗೆ ಸ್ನೇಹಿತ ಗಂಗಾಧರಯ್ಯ ಕರೆದುಕೊಂಡು ಬಂದಿದ್ದಾರೆ. ಕೊನೆಗೂ ಅಲ್ಲಿ ಕೆಲ ಸಮಯ ಚಿಕಿತ್ಸೆ ನೆಪದಲ್ಲಿ ಮಾಜಿ ಸೈನಿಕನನ್ನು (ಗಾಯಾಳು) ಪರಿಶೀಲನೆ ಮಾಡಲಾಗಿ, ಆತ ಸಾವನಪ್ಪಿದ್ದಾರೆ, ವಾಪಸ್ ಹೋಗಿ ಎಂದು ಸೇನಾ ಆಸ್ಪತ್ರೆಯವರು ಹೇಳಿದ್ದಾರೆ.

ಒಬ್ಬ ಮಾಜಿ ಸೈನಿಕನನ್ನು (ಗಾಯಾಳು ರಮೇಶ್​ ಬಾಬು) ಇಷ್ಟೆಲ್ಲ ಹಾಸ್ಪಿಟಲ್​ಗಳಿಗೆ ಸುತ್ತಾಡಿಸಿದ್ದಾರೆ. ಇಷ್ಟೆಲ್ಲ ಮಾಡಿದರೂ ಮಾಜಿ ಸೈನಿಕನನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಸ್ನೇಹಿತ ಗಂಗಾಧರಯ್ಯ ವ್ಯಥೆಪಟ್ಟಿದ್ದಾರೆ. ದೇಶ ಕಾಯುವ ಸೈನಿಕನಿಗೇ ಹೀಗಾದರೆ ಸಾಮಾನ್ಯ ಜನರ ಪರಿಸ್ಥಿತಿ ಏನು? ಎಂದು ಸ್ನೇಹಿತ ಸಾವನಪ್ಪಿದ ಬಳಿಕ ಸ್ನೇಹಿತ ಹಾಗೂ ಮಾಜಿ ಸೈನಿಕ ಗಂಗಾಧರಯ್ಯ ವಿಡಿಯೋ ಮಾಡಿ, ಆಕ್ರೋಶ ಹೊರಹಾಕಿದ್ದಾರೆ.

(Bangalore Commando Hospital also fails to treat ex serviceman ramesh babu k latter he succumbs to injuries)

ಸರ್​.. ನಾನು ಯೋಧ.. ಕಾರ್ಗಿಲ್​ನಲ್ಲಿ ಯುದ್ಧ ಮಾಡಿದ್ರೂ ಇಷ್ಟು ನೋವು ಆಗಿರಲಿಲ್ಲ | ಮೃತರ ಸಂಬಂಧಿಕರ ಗೋಳು

Follow Us
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ