AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರ: ಒಬ್ಬರಿಗೊಬ್ಬರು ಧೈರ್ಯ ತುಂಬುತ್ತ ಕೊರೊನಾ ಗೆದ್ದು ಬೀಗಿದ ಒಂದೇ ಕುಟುಂಬದ ಸದಸ್ಯರು

ಕೊರೊನಾ ಸೋಂಕು ಇಡೀ ಕುಟುಂಬದ ಮೇಲೆ ಆವರಿಸಿ ಕಾಟ ಕೊಟ್ಟರು ಎಲ್ಲೂ ಕುಗ್ಗದೆ ಧೈರ್ಯದಿಂದ ಎದುರಿಸಿ ಸರ್ವರೂ ಗುಣಮುಖರಾಗಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. 48 ವರ್ಷದ ರಾಜಕುಮಾರ್ ಕುಮಾನಿ ಕುಟುಂಬಕ್ಕೆ ಕೆಲ ದಿನಗಳ ಹಿಂದೆ ಕೊರೊನಾ ಬಿಟ್ಟು ಬಿಡದೇ ಕಾಡಿದೆ.

ವಿಜಯಪುರ: ಒಬ್ಬರಿಗೊಬ್ಬರು ಧೈರ್ಯ ತುಂಬುತ್ತ ಕೊರೊನಾ ಗೆದ್ದು ಬೀಗಿದ ಒಂದೇ ಕುಟುಂಬದ ಸದಸ್ಯರು
ಸಾಂದರ್ಭಿಕ ಚಿತ್ರ
sandhya thejappa
|

Updated on: May 27, 2021 | 10:27 AM

Share

ವಿಜಯಪುರ: ಮಹಾಮಾರಿ ಕೊರೊನಾ ಅದೆಷ್ಟೋ ಜೀವಗಳನ್ನು ಬಲಿ ಪಡೆದಿದೆ. ಈಗಾಗಗಲೇ ಪೋಷಕರು, ಮಕ್ಕಳನ್ನು ಕಳೆದುಕೊಂಡು ಸಂಬಂಧಿಕರು ದುಃಖಿಸುತ್ತಿದ್ದಾರೆ. ಕೊರೊನಾಗೆ ಹೆದರಿ ಆತ್ಮಹತ್ಯೆಗೆ ಶರಣಾದ ಪ್ರಕರಣಗಳು ಕಂಡುಬಂದಿವೆ. ಸೋಂಕು ತಗುಲಿದೆ ಎಂದು ದೃಢವಾದಾಗ ಮಾನಸಿಕ ಸ್ಥಿತಿ ಹದಗೆಟ್ಟು ಬೇರೆ ದಾರಿ ಇಲ್ಲದೆ ನೇಣಿಗೆ ಶರಣಾಗುತ್ತಿದ್ದಾರೆ. ಈ ಎಲ್ಲಾ ಬೇಸರದ ಸುದ್ದಿಯೊಂದಿಗೆ ಖುಷಿ ಸಂಗತಿಯೊಂದಿದೆ. ಇಡೀ ಕುಟುಂಬದ ಮೇಲೆ ಮಾಹಾಮಾರಿ ಕೊರೊನಾ ಛಾಯೆ ಆವರಿಸಿದರೂ ಅದನ್ನು ಧೈರ್ಯದಿಂದ ಎದುರಿಸಿ ಸರ್ವರೂ ಗೆದ್ದು ಬಂದಿದ್ದಾರೆ.

ಕೊರೊನಾ ಸೋಂಕು ಇಡೀ ಕುಟುಂಬದ ಮೇಲೆ ಆವರಿಸಿ ಕಾಟ ಕೊಟ್ಟರು ಎಲ್ಲೂ ಕುಗ್ಗದೆ ಧೈರ್ಯದಿಂದ ಎದುರಿಸಿ ಸರ್ವರೂ ಗುಣಮುಖರಾಗಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. 48 ವರ್ಷದ ರಾಜಕುಮಾರ್ ಕುಮಾನಿ ಕುಟುಂಬಕ್ಕೆ ಕೆಲ ದಿನಗಳ ಹಿಂದೆ ಕೊರೊನಾ ಬಿಟ್ಟು ಬಿಡದೇ ಕಾಡಿದೆ. ಸರಕಾರಿ ಹುದ್ದೆಯಲ್ಲಿರುವ 40 ವರ್ಷದ ಶ್ರಿಶೈಲ್ ಕುಮಾನಿಯವರಿಗೆ ಮೊದಲು ಕೊರೊನಾ ಲಕ್ಷಣಗಳು ಉಲ್ಬಣಗೊಂಡವು. ನಂತರ ಇಡೀ ಕುಟುಂಬಕ್ಕೆ ಕೊವಿಡ್ ಪಸರಿಸಿ 39 ವರ್ಷದ ಸುಜಾತ, 41 ವರ್ಷದ ವಿದ್ಯಾ, 41 ವರ್ಷದ ದುಂಡಪ್ಪ ಕುಮಾನಿರವರು ಕೊರೊನಾ ವಿರುದ್ಧ ಹೋರಾಡಿ ಇದೀಗ ಗೆದ್ದಿದ್ದಾರೆ.

ಒಂದೇ ಸಮಯದಲ್ಲಿ ಕುಟುಂಬಕ್ಕೆ ಕೊರೊನಾ ಪಾಸಿಟಿವ್ ಬಂದರೂ ಎಲ್ಲು ಧೃತಿಗೆಡದೆ ರಾಜಕುಮಾರ್ ಕುಮಾನಿ ಹಾಗೂ ಅವರ ಸಹೋದರ ಶ್ರೀಶೈಲ್ ಕುಮಾನಿ ತಾವೂ ಜ್ವರದಿಂದ ಬಳಲುತ್ತಿದ್ದರೂ ಕುಟುಂಬದ ಇತರ ಸದಸ್ಯರಿಗೆ ಧೈರ್ಯ ತುಂಬಿದ್ದಾರೆ. ಮನೆಯಲ್ಲಿ ಇವರೇ ಯಜಮಾನರಾಗಿದ್ದರಿಂದ ಇಡೀ ಕುಟುಂಬ ಸದಸ್ಯರ ಊಟೋಪಚಾರ, ಅನಿವಾರ್ಯತೆಗಳನ್ನು ನಿಭಾಯಿಸಿ ಕೊರೊನಾ ಗೆದ್ದಿರುವುದು ಬಹಳಷ್ಟು ಸೋಂಕಿತ ಕುಟುಂಬಗಳಿಗೆ ಧೈರ್ಯ ತಂದಿದೆ.

ಶ್ರೀಶೈಲ್ ಕುಮಾನಿಯವರ ಪತ್ನಿ ಸುಜಾತ ಕುಮಾನಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಕೊರೊನಾ ಕಾಲದಲ್ಲಿ ಫ್ರಂಟ್ ಲೈನ್ ವರ್ಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದೃಷ್ಟವಶಾತ್ ಸುಜಾತರವರಿಗೆ ಕೊವಿಡ್ ತೀರಾ ಕ್ರಿಟಿಕಲ್ ಸ್ಟೇಜ್​ಗೆ ಕರೆದುಕೊಂಡು ಹೋಗಿದ್ದರೂ ಕುಟುಂಬದ ಪ್ರೀತಿ, ಸಹಕಾರ, ಮಾನಸಿಕ ಹೋರಾಟದ ಪ್ರತಿಫಲವಾಗಿ ಅವರೂ ಕೂಡ ಗಂಭೀರ ಸ್ಥಿತಿಯಿಂದ ಹೊರ ಬಂದು ನೆಗಟಿವ್ ಆಗಿದ್ದಾರೆ. ವೈದ್ಯರ ಸಲಹೆ ಜೊತೆಗೆ ಮಾನಸಿಕ ಧೈರ್ಯವೇ ಕೊರೊನಾಗೆ ಮದ್ದು ಎನ್ನುವುದು ಕುಮಾನಿ ಕುಟುಂಬದ ಅಭಿಪ್ರಾಯವಾಗಿದೆ.

ಇದನ್ನೂ ಓದಿ

ಹರಿಹರದಲ್ಲಿ ಪೊಲೀಸರಿಂದಲೇ ಅಕ್ರಮ ಮರಳು ದಂಧೆ.. ಸೂಚಿಸಿದ್ರೂ ಕ್ರಮ ಕೈಗೊಂಡಿಲ್ಲ ಎಂದು ಶಾಸನ ಎಸ್.ರಾಮಪ್ಪ ಕಿಡಿ

ಹಾವೇರಿ: ಮಳೆರಾಯನ ಅವಾಂತರಕ್ಕೆ ಕೆರೆಯಂತಾದ ಮೆಣಸಿನಕಾಯಿ ಬೆಳೆದ ಜಮೀನು

(Coronavirus infection for all members of single family but All are free from corona infection in Vijayapura)

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ