ಬೆಳಗಾವಿಯಲ್ಲಿ 400 ಕೋಟಿ ರೂ ದರೋಡೆ ಕೇಸ್​​ಗೆ ಟ್ವಿಸ್ಟ್​​​​​: SIT ವಿರುದ್ಧವೇ ಸ್ಫೋಟಕ ಆರೋಪ

ಕರ್ನಾಟಕ-ಗೋವಾ ಗಡಿಯಲ್ಲಿ ನಡೆದಿರುವ 400 ಕೋಟಿ ರೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡದ ವಿರುದ್ಧವೇ ದೂರುದಾರ ಸಂದೀಪ್ ಪಾಟೀಲ್ ಹೈಕೋರ್ಟ್​​ಗೆ ದೂರು ನೀಡಿದ್ದಾರೆ. ಆ ಮೂಲಕ ತನಿಖೆ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬೆನ್ನಲ್ಲೇ ಬೆಳಗಾವಿ ಎಸ್​​ಪಿಗೂ ಪತ್ರ ಬರೆದಿರುವ ಸಂದೀಪ್​, ಎಫ್​ಐಆರ್​ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

ಬೆಳಗಾವಿಯಲ್ಲಿ 400 ಕೋಟಿ ರೂ ದರೋಡೆ ಕೇಸ್​​ಗೆ ಟ್ವಿಸ್ಟ್​​​​​: SIT ವಿರುದ್ಧವೇ ಸ್ಫೋಟಕ ಆರೋಪ
400 ಕೋಟಿ ದರೋಡೆ ಪ್ರಕರಣ
Image Credit source: tv9 kannada
Edited By:

Updated on: Feb 15, 2026 | 3:59 PM

ಬೆಳಗಾವಿ, ಫೆಬ್ರವರಿ 15: ಕರ್ನಾಟಕ, ಗೋವಾ, ಮಹಾರಾಷ್ಟ್ರದಲ್ಲಿ ನಡೆದಿದ್ದ 400 ಕೋಟಿ ರೂಪಾಯಿ ದರೋಡೆ ಪ್ರಕರಣ (400 crore robbery case) ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ದೇಶವನ್ನೇ ದಂಗಾಗಿಸಿದ ಈ ದರೋಡೆ ನಡೆದು ದಿನಗಳು ಉರುಳಿದರು ಈವರೆಗೆ ಕಂಟೇನರ್​ಗಳು ಹೋಗಿದ್ದೆಲ್ಲಿಗೆ? ಕಂಟೇನರ್​ನಲ್ಲಿದ್ದ ಹಣ ಎಲ್ಲಿದೆ ಅನ್ನೋದು ರಿವೀಲ್ ಆಗಿಲ್ಲ. ಹೀಗಿರುವಾಗ ದೂರುದಾರ ಸಂದೀಪ್ ಪಾಟೀಲ್​​ ಬೆಳಗಾವಿ ಎಸ್​ಪಿ ಕೆ.ರಾಮರಾಜನ್​ಗೆ ಪತ್ರ ಬರೆಯುವ ಮೂಲಕ ಎಫ್ಐಆರ್ (FIR) ದಾಖಲಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಬೆಳಗಾವಿ ಎಸ್​ಪಿ ಕೆ.ರಾಮರಾಜನ್​ಗೆ ಪತ್ರ ಬರೆದಿರುವ 400 ಕೋಟಿ ದರೋಡೆ ಪ್ರಕರಣದ ದೂರುದಾರ ಸಂದೀಪ್ ಪಾಟೀಲ್​​, ಮಹಾರಾಷ್ಟ್ರ ಎಸ್ಐಟಿ ಪೊಲೀಸರಿಂದ ಪಾರದರ್ಶಕ ತನಿಖೆ ಆಗುತ್ತಿಲ್ಲ. ಘಟನೆ ಸಂಬಂಧ ಆಡಿಯೋ ದಾಖಲೆಗಳು ನನ್ನ ಬಳಿ ಇವೆ. ಅವುಗಳ ಆಧಾರದ ಮೇಲೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಎಸ್ಐಟಿ ತಂಡದ ವಿರುದ್ಧವೇ ದೂರು ನೀಡಿರುವ ಸಂದೀಪ್ ಪಾಟೀಲ್

ಇನ್ನು ಪ್ರಕರಣ ಸಂಬಂಧ 8 ಆರೋಪಿಗಳನ್ನು ಮಹಾರಾಷ್ಟ್ರ ಎಸ್​​ಐಟಿ ಬಂಧಿಸಿದೆ. ಆದರೆ ಮಹಾರಾಷ್ಟ್ರ ಪೊಲೀಸರ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಸಂದೀಪ್, ಈಗಾಗಲೇ ಎಸ್ಐಟಿ ಮತ್ತು ಪೊಲೀಸ್​​ ಮಹಾನಿರ್ದೇಶಕರ ವಿರುದ್ಧ ಮಹಾರಾಷ್ಟ್ರ ಪೊಲೀಸ್​​ ಮಹಾನಿರ್ದೇಶಕರ ವಿರುದ್ಧ ಹೈಕೋರ್ಟ್​​ಗೆ ದೂರು ನೀಡಿದ್ದಾರೆ. ಆ ಮೂಲಕ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿರುವ ಬಗ್ಗೆ ಸಂದೀಪ್ ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 400 ಕೋಟಿ ರೂ. ದರೋಡೆ ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ಸಾಳ್ವೆ ಬಂಧನ

ಮೂರು ರಾಜ್ಯಗಳ ಗಡಿಯಿರುವ ಚೋರ್ಲಾ ಘಾಟ್​ನಲ್ಲಿ 400 ಕೋಟಿ ರೂ ದರೋಡೆ ಇತ್ತೀಚೆಗೆ ನಡೆದಿತ್ತು. 2 ಸಾವಿರ ಮುಖಬೆಲೆಯ ನೋಟುಗಳು ರದ್ದಾದ ಹಿನ್ನೆಲೆಯಲ್ಲಿ ಎಕ್ಸ್‌ಚೇಂಜ್ ಮಾಡಲು ತೆಗೆದುಕೊಂಡು ಹೋಗಲಾಗ್ತಿತ್ತು ಎನ್ನಲಾಗಿತ್ತು. ದೂರುದಾರ ಸಂದೀಪ್ ಪಾಟೀಲ್​ನಿಂದ ಈ ರಾಬರಿ ಕೇಸ್​ನ ಪ್ರಮುಖ ಆರೋಪಿ ಕಿಶೋರ್ ಸಾಳ್ವೆ ಅನ್ನೋದು ಗೊತ್ತಾಗಿತ್ತು.

ಇದನ್ನೂ ಓದಿ: 400 ಕೋಟಿ ದರೋಡೆ ಪ್ರಕರಣಕ್ಕೆ ಸಿಗುತ್ತಾ ಮತ್ತೊಂದು ಟ್ವಿಸ್ಟ್? ಕರ್ನಾಟಕದಲ್ಲಿ ದೂರು ದಾಖಲಿಸಲು ಮುಂದಾದ ಸಂದೀಪ್ ಪಾಟೀಲ್

ಈ ಸಂದೀಪ್ ಪಾಟೀಲ್, ಇದೇ ಕಿಶೋರ್​ನ ಆಪ್ತ. 400 ಕೋಟಿ ರೂ ದರೋಡೆಯಾಗಿದ್ದು ತಿಳೀತಿದ್ದಂತೆಯೇ ಸಂದೀಪ್​ನನ್ನು ಅಪಹರಿಸಿ, 400 ಕೋಟಿ ರೂ ಹಣ ಎಲ್ಲಿಟ್ಟಿದ್ದೀಯಾ? ಕಂಟೇನರ್​ಗಳು ಎಲ್ಲಿವೆ? ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿ ಸಂದೀಪ್​ಗೆ ಕಿಶೋರ್ ಗ್ಯಾಂಗ್ ಚಿತ್ರಹಿಂಸೆ ನೀಡಿತ್ತು. ಹೀಗೆ ಹಿಂಸೆಗೊಳಗಾಗಿದ್ದ ಸಂದೀಪ್, ಕಿಡ್ನ್ಯಾಪರ್ಸ್​ನಿಂದ ತಪ್ಪಿಸಿಕೊಂಡು ಬಂದು ನಾಸೀಕ್ ಠಾಣೆಗೆ ದೂರು ನೀಡಿದ್ದ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.