ಮಹಾರಾಷ್ಟ್ರ ಪಶ್ಚಿಮ‌ ಘಟ್ಟಗಳಲ್ಲಿ ಸುರಿಯುತ್ತಿರುವ ಮಳೆಗೆ ಬೆಳಗಾವಿಯಲ್ಲಿ ಮಹಾ ಪ್ರವಾಹದ ಆತಂಕ

ಮಹಾರಾಷ್ಟ್ರ ಪಶ್ಚಿಮ ಘಟ್ಟಗಳಲ್ಲಿ ನಿರಂತರ ಮಳೆಯಿಂದ ಬೆಳಗಾವಿ ಜಿಲ್ಲೆಯ ಸಪ್ತ ನದಿಗಳು ತುಂಬಿ ಹರಿಯುತ್ತಿವೆ. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಕೆಳ ಹಂತದ ಸೇತುವೆಗಳು ಮುಳುಗಡೆಯಾಗಿದ್ರೆ, ಮುಲ್ಕಾನಿ ಬಾಬಾ ದರ್ಗಾಗೆ ದೂದಗಂಗೆ ಸುತ್ತುವರಿದಿದ್ದಾಳೆ.‌ ದತ್ತಾತ್ರೇಯನಿಗೂ ಮುಳುಗವ ಭೀತಿ ಶುರುವಾಗಿದೆ. ಇತ್ತ ರಾಕಸಕೊಪ್ಪ ಜಲಾಶಯ ಭರ್ತಿ ಆಗೋಕೆ ಇನ್ನು ಐದೇ ಅಡಿ ಬಾಕಿ ಇದೆ.

ಮಹಾರಾಷ್ಟ್ರ ಪಶ್ಚಿಮ‌ ಘಟ್ಟಗಳಲ್ಲಿ ಸುರಿಯುತ್ತಿರುವ ಮಳೆಗೆ ಬೆಳಗಾವಿಯಲ್ಲಿ ಮಹಾ ಪ್ರವಾಹದ ಆತಂಕ
ಬೆಳಗಾವಿಯಲ್ಲಿ ಮಹಾ ಪ್ರವಾಹದ ಆತಂಕ; ನದಿಗಳಿಗೆ ಜೀವ ಕಳೆ, ಸೇತುವೆ ಮುಳುಗಡೆ
Follow us
| Updated By: ಆಯೇಷಾ ಬಾನು

Updated on: Jul 17, 2024 | 11:23 AM

ಬೆಳಗಾವಿ, ಜುಲೈ.17: ಬೆಳಗಾವಿ (Belagavi)ಜಿಲ್ಲೆಯಲ್ಲಿ ಹೆಚ್ಚು ಮಳೆ ಇರದಿದ್ದರೂ ಸಹ ಮಹಾರಾಷ್ಟ್ರ ಪಶ್ಚಿಮ‌ ಘಟ್ಟಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳಿಗೆ ಜೀವ ಕಳೆ‌ಬಂದಿದೆ. ಕೃಷ್ಣಾ, ವೇದಗಂಗಾ, ದೂದಗಂಗಾ, ಮಲಪ್ರಭಾ, ಘಟಪ್ರಬಾ ನದಿಗಳು ತುಂಬಿ ಹರಿಯುತ್ತಿವೆ. ಕೆಳ ಹಂತದ ಸೇತುವೆಗಳು ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡು ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಬೆಳಗಾವಿಗೆ ನೀರು ಪೂರೈಕೆ ಮಾಡುವ ರಾಕಸಕೊಪ್ಪ ಜಲಾಶಯ (Rakaskop Dam) ಭರ್ತಿಯಾಗೋಕೆ ಕೇವಲ ಐದು ಅಡಿ ನೀರು ಮಾತ್ರ ಬಾಕಿ ಇದೆ.‌ ಐದು ಅಡಿ ನೀರು ಭರ್ತಿಯಾದರೆ ಅಧಿಕೃತವಾಗಿ ‌ಅಧಿಕಾರಿಗಳು ಜಲಾಶಯದಿಂದ ನೀರು ಬಿಡುಗಡೆ ಮಾಡಲಿದ್ದಾರೆ. ಮಾರ್ಕಂಡೇಯ ನದಿಗೆ ನೀರು ಬಿಟ್ರೇ ನದಿ ಪಾತ್ರದ ಜನರಿಗೆ ಆತಂಕ ಶುರುವಾಗಲಿದೆ.

ನಿರಂತರ ಮಳೆಯಿಂದಾಗಿ ದೂದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನಾಲ್ಕು ಸೇತುವೆ ‌ಹಾಗೂ ಕೃಷ್ಣಾ ನದಿಗೆ ಅಡ್ಡಲಾಗಿ‌ ನಿರ್ಮಿಸಿರುವ ಒಂದು ಸೇತುವೆ ಸೇರಿ ಒಟ್ಟು ಐದು ಸೇತುವೆಗಳು ಮುಳುಗಡೆಯಾಗಿವೆ. ನಿಪ್ಪಾಣಿ ತಾಲೂಕಿನ ಕುನ್ನೂರು-ಬಾರವಾಡ, ಕಾರದಾಗಾ-ಬೋಜ್, ಕುನ್ನೂರು-ಭೋಜವಾಡಿ, ದತ್ತವಾಡ-ಮಲಿಕವಾಡ, ಬಾವನಸೌಂದತ್ತಿ- ಮಾಂಜರಿ ಸಂಪರ್ಕಿಸುವ ಕೆಳ‌ ಹಂತದ ಸೇತುವೆಗಳು ಮುಳುಗಡೆಯಾಗಿವೆ.‌ ಇನ್ನೂ ಯಕ್ಸಂಬಾ ಬಳಿ ದೂದಗಂಗಾ ನದಿ ಪಕ್ಕದಲ್ಲಿರುವ ಮುಲ್ಕಾನಿ ದರ್ಗಾ ಎರಡನೇ ಬಾರಿಗೆ ದೂದಗಂಗಾ ನದಿ ನೀರು ಆವರಿಸಿದೆ.

ಇದನ್ನೂ ಓದಿ: ಬಿಎಂಟಿಸಿಯಿಂದ ಚಿಕ್ಕಬಳ್ಳಾಪುರ ರೌಂಡ್ಸ್: ಈಶಾ ಫೌಂಡೇಶನ್​ ಸೇರಿದಂತೆ 5 ಪ್ರವಾಸಿ ತಾಣಗಳ ಸುತ್ತಾಟ

ಇತ್ತ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ದತ್ತ ಮಂದಿರಕ್ಕೆ ಕೃಷ್ಣೆ ಸುತ್ತುವರೆದಿದೆ. ಸದ್ಯ 75ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಯಲ್ಲಿ ಹರಿದು ಬರುತ್ತಿದ್ದು ಇದರಿಂದ ನದಿ ಪಾತ್ರದ ಜನರಿಗೆ ಪ್ರವಾಹದ ಆತಂಕ ಶುರುವಾಗಿದೆ. ನೆರೆಯ ರಾಜ್ಯ ಕೊಲ್ಲಾಪುರದ ಪ್ರಸಿದ್ಧ ನರಸಿಂಹವಾಡಿ ದತ್ತ ಮಂದಿರಕ್ಕೆ ಕೃಷ್ಣಾ ನದಿ ನೀರು‌ ನುಗ್ಗಿದ್ದು ನಡು ಮಟ್ಟದ ನೀರಲ್ಲೇ‌ ಭಕ್ತರು ದತ್ತ ದೇವನ ದರ್ಶನ ಪಡೆಯುತ್ತಿದ್ದಾರೆ.

ಒಟ್ಟಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸದ್ಯ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಸಹ ನೆರೆ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನದಿಗಳು ಮೈ ದುಂಬಿ ಹರಿಯುತ್ತಿವೆ. ಇದರಿಂದ ಸೇತುವೆ ಹಾಗು ದೇವಸ್ಥಾನ‌ ದರ್ಗಾಗಳು ಮುಳುಗಡೆಯಾಗಿವೆ. ಇದೇ ರೀತಿ ಜಿಲ್ಲೆಯಲ್ಲೂ ಮಳೆ ಮುಂದುವರೆದಿದ್ದೆ ಆದರೆ ಅವಾಂತರಗಳು ಕಟ್ಟಿಟ್ಟ ಬುತ್ತಿ. ಜನ ಮತ್ತೊಮ್ಮೆ ಪ್ರವಾಹ ಎದುರಿಸುವ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ
ಕೆಡಿಪಿ ಮತ್ತು ದಿಶಾ ಸಭೆಗಳಲ್ಲಿ ಅಧಿಕಾರಿಗಳ ಉಡಾಫೆ ಧೋರಣೆ ಅಕ್ಷಮ್ಯ!
ಕೆಡಿಪಿ ಮತ್ತು ದಿಶಾ ಸಭೆಗಳಲ್ಲಿ ಅಧಿಕಾರಿಗಳ ಉಡಾಫೆ ಧೋರಣೆ ಅಕ್ಷಮ್ಯ!
ಸದನದಲ್ಲಿ ಮುಡಾ ಹಗರಣವನ್ನು ಬಿಚ್ಚಿದಾಗ ಸಿಎಂ ನಿರುತ್ತರರಾದರು: ಸಿಟಿ ರವಿ
ಸದನದಲ್ಲಿ ಮುಡಾ ಹಗರಣವನ್ನು ಬಿಚ್ಚಿದಾಗ ಸಿಎಂ ನಿರುತ್ತರರಾದರು: ಸಿಟಿ ರವಿ
ಜೈಲು ಎಂಥಹಾ ನರಕ, ಅಲ್ಲಿ ಏನೇನಿರುತ್ತೆ: ವಿವರಿಸಿದ ನಟಿ ಸಂಜನಾ ಗಲ್ರಾನಿ
ಜೈಲು ಎಂಥಹಾ ನರಕ, ಅಲ್ಲಿ ಏನೇನಿರುತ್ತೆ: ವಿವರಿಸಿದ ನಟಿ ಸಂಜನಾ ಗಲ್ರಾನಿ
ಚಿತ್ರನಟ ದರ್ಶನ್​ರನ್ನು ಬೇರೆ ಜೈಲಿಗೆ ಕಳಿಸುವುದು ಇನ್ನೂ ದೃಢಪಟ್ಟಿಲ್ಲ!
ಚಿತ್ರನಟ ದರ್ಶನ್​ರನ್ನು ಬೇರೆ ಜೈಲಿಗೆ ಕಳಿಸುವುದು ಇನ್ನೂ ದೃಢಪಟ್ಟಿಲ್ಲ!
ಆಗಸ್ಟ್ 31ರಂದು ಕಾಂಗ್ರೆಸ್ ಮುಖಂಡರಿಂದ ರಾಜಭವನದವರೆಗೆ ಜಾಥಾ: ಶಿವಕುಮಾರ್
ಆಗಸ್ಟ್ 31ರಂದು ಕಾಂಗ್ರೆಸ್ ಮುಖಂಡರಿಂದ ರಾಜಭವನದವರೆಗೆ ಜಾಥಾ: ಶಿವಕುಮಾರ್
ದರ್ಶನ್​ ರೀತಿ ನಾನು ಕೂಡ ಸಹವಾಸ ದೋಷದಿಂದ ಜೈಲಿಗೆ ಹೋದೆ: ಸಂಜನಾ ಗಲ್ರಾನಿ
ದರ್ಶನ್​ ರೀತಿ ನಾನು ಕೂಡ ಸಹವಾಸ ದೋಷದಿಂದ ಜೈಲಿಗೆ ಹೋದೆ: ಸಂಜನಾ ಗಲ್ರಾನಿ
ಆಂಜನೇಯನಿಗೆ ಕೈ ಮುಗಿದು, ಅಲಂಕರಿಸಿದ್ದ ಚಿನ್ನಾಭರಣ ದೋಚಿ ಪರಾರಿಯಾದ ಕಳ್ಳ
ಆಂಜನೇಯನಿಗೆ ಕೈ ಮುಗಿದು, ಅಲಂಕರಿಸಿದ್ದ ಚಿನ್ನಾಭರಣ ದೋಚಿ ಪರಾರಿಯಾದ ಕಳ್ಳ
ಜೈಲಲ್ಲಿ ಕೈದಿಗಳ ನಡುವೆ ತಾರತಮ್ಯ ನಡೆದರೆ ಅದಕ್ಕೆ ಗೃಹಸಚಿವ ಹೊಣೆ: ಯದುವೀರ್
ಜೈಲಲ್ಲಿ ಕೈದಿಗಳ ನಡುವೆ ತಾರತಮ್ಯ ನಡೆದರೆ ಅದಕ್ಕೆ ಗೃಹಸಚಿವ ಹೊಣೆ: ಯದುವೀರ್
ರಾಮ ರಾಮ ಎಂದು ನುಡಿದೀತಲೇ, ನಕಲೋಕದ ಜನಕೆ ಆನೆ ಕಣ್ಣೀರು ಉಗ್ಗಿತಲೇ: ಕಾರ್ಣೀಕ
ರಾಮ ರಾಮ ಎಂದು ನುಡಿದೀತಲೇ, ನಕಲೋಕದ ಜನಕೆ ಆನೆ ಕಣ್ಣೀರು ಉಗ್ಗಿತಲೇ: ಕಾರ್ಣೀಕ
ಅರ್ಹತೆ ಮೇಲೆ ಖರ್ಗೆ ಟ್ರಸ್ಟ್​​ಗೆ ಜಮೀನು ಮಂಜೂರು ಮಾಡಲಾಗಿದೆ: ಸಿದ್ದರಾಮಯ್ಯ
ಅರ್ಹತೆ ಮೇಲೆ ಖರ್ಗೆ ಟ್ರಸ್ಟ್​​ಗೆ ಜಮೀನು ಮಂಜೂರು ಮಾಡಲಾಗಿದೆ: ಸಿದ್ದರಾಮಯ್ಯ