AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಲ್ಲಿ ಬೆಳಂ ಬೆಳಗ್ಗೆ ರೌಡಿಗಳಿಗೆ ಶಾಕ್​ ನೀಡಿದ ಖಾಕಿ: 26 ರೌಡಿಗಳ ಮನೆಗಳ ಮೇಲೆ ದಾಳಿ

ದೆಹಲಿ ಪೊಲೀಸರಿಂದ ಮೊಹಮ್ಮದ್ ಜುಬೇರ್ ಬಂಧನ ಕೇಸ್ ಸಂಬಂಧ ಜುಬೇರ್​ನನ್ನ ಇಂದು ಬೆಂಗಳೂರಿಗೆ ಕರೆತರುವ ಸಾಧ್ಯತೆಯಿದೆ. ಮೊಬೈಲ್, ಲ್ಯಾಪ್​ಟಾಪ್ ವಶಕ್ಕೆ ಪಡೆಯುವ ಸಲುವಾಗಿ ಇಂದು ಬೆಂಗಳೂರಿಗೆ ದೆಹಲಿ ಪೊಲೀಸರು ಕರೆತರಲಿದ್ದಾರೆ.

ಬೆಳಗಾವಿಯಲ್ಲಿ ಬೆಳಂ ಬೆಳಗ್ಗೆ ರೌಡಿಗಳಿಗೆ ಶಾಕ್​ ನೀಡಿದ ಖಾಕಿ: 26 ರೌಡಿಗಳ ಮನೆಗಳ ಮೇಲೆ ದಾಳಿ
26 ರೌಡಿಗಳ ಮನೆಗಳ ಮೇಲೆ ದಾಳಿ
TV9 Web
| Edited By: |

Updated on: Jun 29, 2022 | 2:07 PM

Share

ಬೆಳಗಾವಿ: ನಗರದಲ್ಲಿ ಬೆಳಂ ಬೆಳಗ್ಗೆ ರೌಡಿಗಳಿಗೆ ಖಾಕಿ ಶಾಕ್ ನೀಡಿದ್ದು, ನಗರದ 26 ರೌಡಿ (Rowdy’s) ಗಳ ಮನೆಗಳ ಮೇಲೆ ದಿಢೀರ್ ದಾಳಿ ಮಾಡಿದರು. ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಪೊಲೀಸರಿಂದ ರೇಡ್ ಮಾಡಿದ್ದು, ನಗರದಲ್ಲಿ ಜನರನ್ನ ಹೆದರಿಸುತ್ತಾ ರೌಡಿಸಂ ಮಾಡುತ್ತಿದ್ದರವರಿಗೆ ಖಾಕಿ ಶಾಕ್ ಕೊಟ್ಟಿದೆ. ದಾಳಿ ವೇಳೆ ತಲ್ವಾರ್, ಜಂಬೆ, ಚಾಕು ಸೇರಿದಂತೆ ಮಾರಕಾಸ್ತ್ರಗಳು ಪತ್ತೆಯಾಗಿವೆ. ಮಾರಕಾಸ್ತ್ರಗಳನ್ನ ಜಪ್ತಿ ಮಾಡಿ ಮೂವರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರುಕ್ಮೀಣಿ ನಗರದ ಶ್ರೀಧರ್ ತಳವಾರ(29), ಮಹಾಧ್ವಾಚಾರ್ಯ ರೋಡ್ ವಿನಯ್ ಪ್ರಧಾನ್(45), ಖಂಜರ ಗಲ್ಲಿಯ ಅಲ್ತಾಫ್ ಸುಬೇದಾರ(36) ಬಂಧನವಾಗಿದೆ. ಇಂದು ಬೆಳಗ್ಗೆ 5ಗಂಟೆಗೆ ದಾಳಿ ನಡೆಸಿ ಮೂವರನ್ನ ಬಂಧಿಸಿ ಉಳಿದ ರೌಡಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಇದನ್ನೂ ಓದಿ; Gokak Falls: ಮನುಷ್ಯ ಧರ್ಮವನ್ನು ಅರಿತವನು ಹೀಗೆ ಕ್ರೂರಿಯಾಗಲಾರ

ಜುಬೇರ್​ನನ್ನ ಇಂದು ಬೆಂಗಳೂರಿಗೆ ಕರೆತರುವ ಸಾಧ್ಯತೆ

ಬೆಂಗಳೂರು: ದೆಹಲಿ ಪೊಲೀಸರಿಂದ ಮೊಹಮ್ಮದ್ ಜುಬೇರ್ ಬಂಧನ ಕೇಸ್ ಸಂಬಂಧ ಜುಬೇರ್​ನನ್ನ ಇಂದು ಬೆಂಗಳೂರಿಗೆ ಕರೆತರುವ ಸಾಧ್ಯತೆಯಿದೆ. ಮೊಬೈಲ್, ಲ್ಯಾಪ್​ಟಾಪ್ ವಶಕ್ಕೆ ಪಡೆಯುವ ಸಲುವಾಗಿ ಇಂದು ಬೆಂಗಳೂರಿಗೆ ದೆಹಲಿ ಪೊಲೀಸರು ಕರೆತರಲಿದ್ದಾರೆ. ಬೆಂಗಳೂರಿನ ಫ್ರೇಜರ್​ಟೌನ್​ನಲ್ಲಿ ಮನೆ ಹೊಂದಿದ್ದ ಜುಬೇರ್, ಮನೆಗೆ ಕರೆತಂದು ಮಹಜರು ಜೊತೆಗೆ ಮೊಬೈಲ್ ಹಾಗೂ ಲ್ಯಾಪ್​ಟಾಪ್​ಗಾಗಿ ದೆಹಲಿ ಪೊಲೀಸರು ಶೋಧ ನಡೆಸಲಿದ್ದಾರೆ. ಜುಲೈ 2ರವೆರಗೂ ದೆಹಲಿ ಪೊಲೀಸರು ಆತನನ್ನು ಕಸ್ಟಡಿಗೆ ಪಡೆದಿದ್ದು, 2018ರಲ್ಲಿ ಮಾಡಿದ್ದ ಅಕ್ಷೇಪಾರ್ಹ ಟ್ವೀಟ್ ಸಂಬಂಧ ಸೆರೆ ಹಿಡಿಯಲಾಗಿದೆ.

ಡೇಟೈಂ ಆಫೀಸ್ ಡ್ಯೂಟಿ, ನೈಟ್ ಟೈಂನಲ್ಲಿ ಬೈಕ್ ಕಳ್ಳತನ

ಬೆಂಗಳೂರು: ಜಾಲಿರೇಡ್​ಗಾಗಿ ಸೂಪರ್ ಬೈಕ್​ಗಳ ಕದಿಯುತಿದ್ದ ಕಳ್ಳನನ್ನ ರಾಜಾಜಿನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಾಗರ್ ಬಂಧಿತ ಆರೋಪಿ. ಪ್ರತಿಷ್ಠಿತ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದು, ಆದರೆ ಸೂಪರ್ ಬೈಕ್​ಗಳ ಹುಚ್ಚು ಕಳ್ಳತನಕ್ಕೆ ದಾರಿ ಮಾಡಿದೆ. ಡೇಟೈಂ ಆಫೀಸ್ ಡ್ಯೂಟಿ, ನೈಟ್ ಟೈಂನಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ. ಈ ಹಿಂದೆ ಜೈಲು ಸೇರಿ ಬಿಡುಗಡೆಯಾದ್ರು ಕೃತ್ಯ ಬಿಟ್ಟಿರಲಿಲ್ಲ. ಆರೋಪಿ ಬಂಧನದಿಂದ 11.6 ಲಕ್ಷ ಮೌಲ್ಯದ 8 ಬೈಕ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: Vikram Movie: ಜುಲೈ 8ಕ್ಕೆ ಒಟಿಟಿಗೆ ಬರಲಿದೆ ‘ವಿಕ್ರಮ್​’ ಸಿನಿಮಾ; ಕನ್ನಡದಲ್ಲೂ ಲಭ್ಯವಾಗಲಿದೆ ಕಮಲ್​ ಹಾಸನ್​ ಚಿತ್ರ

Follow Us
ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್