AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಂದಾನಗರಿ ಬೆಳಗಾವಿಯಲ್ಲಿ ಕಾಡಾನೆ ಪ್ರತ್ಯೇಕ್ಷ; ಹರಸಾಹಸಪಟ್ಟು ಕಾಡಿಗಟ್ಟಿದ ಅರಣ್ಯ ಇಲಾಖೆ

ಕುಂದಾನಗರಿ ಬೆಳಗಾವಿಯಲ್ಲಿ ಬೆಳ್ಳಂ ಬೆಳಗ್ಗೆ ಕಾಡಾನೆ ಪ್ರತ್ಯೇಕವಾಗಿತ್ತು. ಒಂಟಿ ಸಲಗ ಕಂಡು ಜನರು ಗಾಭರಿಗೊಂಡಿದ್ದರು. ಬಳಿಕ ಅರಣ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ಹರಸಾಹಸ ಪಟ್ಟು ಮತ್ತೆ ಕಾಡಿಗೆ ಅಟ್ಟಿದ್ದಾರೆ. ಸತತ ಆರು ಗಂಟೆ ಕಾರ್ಯಾಚರಣೆ ಬಳಿಕ ಒಂಟಿ ಸಲಗ ಸುರಕ್ಷಿತ ನಾಡಿನಿಂದ ಕಾಡಿಗೆ ತೆರಳಿದ್ದಾನೆ.

Sahadev Mane
| Edited By: |

Updated on: Mar 01, 2024 | 8:10 PM

Share

ಬೆಳಗಾವಿ, ಮಾ.01: ಕುಂದಾನಗರಿ ಬೆಳಗಾವಿ(Belagavi)ಯಲ್ಲಿ ಇಂದು(ಮಾ.01) ಮಹಾರಾಷ್ಟ್ರ ಕಾಡಿನಿಂದ ಬಂದಿದ್ದ ಗಜರಾಜ ಬೆಳ್ಳಂ ಬೆಳಗ್ಗೆ ಪ್ರತ್ಯಕ್ಷನಾಗಿದ್ದ. ಬೆಳಗಾವಿಯ ವೈಭವ ನಗರದಲ್ಲಿ ಮೊದಲಿಗೆ ಕಾಡಾನೆಯನ್ನ(Wild Elephant) ಜನರು ನೋಡಿದ್ದಾರೆ. ತಕ್ಷಣವೇ ಬೆಳಗಾವಿ ಎಪಿಎಂಸಿ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಇತ್ತ ಪೊಲೀಸರು ತಕ್ಷಣ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಬರುವುದರಲ್ಲಿ ಒಂಟಿ ಸಲಗ ಶಾಹು ನಗರದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಅಲ್ಲಿಂದ ಆನೆ ನಡೆದಿದ್ದೇ ದಾರಿ ಎಂಬಂತೆ ಹೋಲಗದ್ದೆ, ನಗರ ಪ್ರದೇಶದಲ್ಲಿ ಹೆಜ್ಜೆ ಹಾಕುತ್ತಾ ಸಾಗಿದ್ದಾನೆ. ಯಾವಾಗ ಕಾಡಾನೆ ಮತ್ತೆ ಸಾರ್ವಜನಿಕ ಪ್ರದೇಶದತ್ತ ಮುಖ ಮಾಡಿತೋ, ಅವಾಗ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಸರಿದಾರಿಗೆ ತಂದಿದ್ದಾರೆ.

ದಾರಿ ಮಧ್ಯೆ ಬಂದ ಬೈಕ್, ವಾಟರ್ ಟ್ಯಾಂಕ್, ಹೋದಲ್ಲಿನ ಬೆಳೆಗಳನ್ನ ನಾಶ ಮಾಡುತ್ತಾ ಸಾಗಿದ್ದಾನೆ. ಕಂಗ್ರಾಳಿ ಅಲತಗಾ ಮಧ್ಯೆ ಬರುತ್ತಿದ್ದಂತೆ ಕೆರಳಿದ ಗಜರಾಜ್, ಅರಣ್ಯ ಇಲಾಖೆ ಸಿಬ್ಬಂದಿಯನ್ನ ಬೆನ್ನಟ್ಟಿ ಹಿಮ್ಮೆಟ್ಟಿಸಿದ್ದಾನೆ. ಇತ್ತ ಆನೆ ಬಂದ ಸುದ್ದಿ ಹರಡುತ್ತಿದ್ದಂತೆ ನಗರದ ಜನ ಸೇರಿ ಗ್ರಾಮೀಣ ಭಾಗದ ಜನರು ಆನೆ ನೋಡಲು ಅದನ್ನ ಹಿಂಬಾಲಿಸಿಕೊಂಡು ಹೊರಟರು. ತಕ್ಷಣ ಅಲರ್ಟ್ ಆದ ಪೊಲೀಸರು ಜನರು ಆನೆ ಬಳಿ ಹೋಗದಂತೆ ನೋಡಿಕೊಂಡಿದ್ದಾರೆ.

ಇದನ್ನೂ ಓದಿ:ಒಂಟಿ ಕಾಡಾನೆ ದಾಂಧಲೆ: ಆಶಾ ಕಾರ್ಯಕರ್ತೆ ಸೇರಿದಂತೆ ಇಬ್ಬರು ಮಹಿಳೆಯರು, ಮೂರು ಹಸು ದಾರುಣ ಸಾವು

ಇನ್ನು ಕಾಡಿನಿಂದ ನಾಡಿಗೆ ಬಂದ ಕಾಡಾನೆ ನೀರಿಗಾಗಿ ಆರಂಭದಲ್ಲಿ ಪರದಾಡಿತು. ಜಮೀನೊಂದರಲ್ಲಿದ್ದ ನೀರಿನ ಸಿಂಟೆಕ್ಸ್ ಉರುಳಿಸಿ ನೀರು ಕುಡಿಯಲು ಯತ್ನಿಸಿತು. ನೀರು ಸಿಗದಿದ್ದಾಗ ಅಲ್ಲಿಂದ ಮತ್ತೆ ಜಮೀನಿನತ್ತ ಮುಖ ಮಾಡಿತು. ಒಂಟಿ ಸಲಗ ಹೋಗುವುದನ್ನ ಕಂಡ ಕೆಲವರು ಭಯಭೀತಿಯಿಂದ ಮನೆಯಿಂದ ಹೊರಗೆ ಬರಲಿಲ್ಲ. ಈ ಮಧ್ಯೆ ಕಂಗ್ರಾಳಿ ಬಳಿ ಗಜರಾಜ ಸ್ನಾನ ಮಾಡೋ ದೃಶ್ಯಗಳು ಅಂತೂ ಮನಹೋಕವಾಗಿತ್ತು. ಪೊಲೀಸ್ ಮತ್ತು ಅರಣ್ಯ ಇಲಾಖೆ 60 ಜನ ಸಿಬ್ಬಂದಿ ತಂಡವು ಸತತ ಆರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಬೆಳಗಾವಿ ಶಾಹು ನಗರದಿಂದ ಮಹಾರಾಷ್ಟ್ರ ಕೋಣವಾಡ ಗ್ರಾಮದ ಅರಣ್ಯದವರೆಗೂ ಬೆನ್ನಟ್ಟಿ ಕಾಡಾನೆಯನ್ನ ಮರಳಿ ಗೂಡಿಗೆ ಸೇರಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ