AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಮಶಾನ ಹೀಗೂ ಇರುತ್ತಾ! ಜನರು ಬೆಳಿಗ್ಗೆ, ಸಂಜೆ ರುದ್ರ ಭೂಮಿಯಲ್ಲಿ ಕಾಲ ಕಳೆಯಲು ಬೆಳಗಾವಿ ಯುವಕರೇ ಕಾರಣ

ಹೊರದೇಶಗಳಲ್ಲಿ ಸ್ಮಶಾನ ಭೂಮಿ ಎಂದರೆ ಉದ್ಯಾನವನದ ರೀತಿ ಇರುತ್ತವೆ ಅಂತ ಕೇಳಿದ್ದೆವು. ಆದರೆ ನಮ್ಮ ಗ್ರಾಮದ ಯುವಕರು ಸ್ಮಶಾನ ಭೂಮಿಯಲ್ಲಿ ಉದ್ಯಾನವನ ನಿರ್ಮಾಣ ಮಾಡಿ ಇತರರಿಗೆ ಮಾದರಿಯಾಗಿದ್ದಾರೆಂದು ಗ್ರಾಮದ ಹಿರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸ್ಮಶಾನ ಹೀಗೂ ಇರುತ್ತಾ! ಜನರು ಬೆಳಿಗ್ಗೆ, ಸಂಜೆ ರುದ್ರ ಭೂಮಿಯಲ್ಲಿ ಕಾಲ ಕಳೆಯಲು ಬೆಳಗಾವಿ ಯುವಕರೇ ಕಾರಣ
ಯುವಕರು ರುದ್ರ ಭೂಮಿಯನ್ನು ಪಾರ್ಕ್​ ರೀತಿ ನಿರ್ಮಾಣ ಮಾಡಿದ್ದಾರೆ
TV9 Web
| Edited By: |

Updated on: Jun 20, 2022 | 8:30 AM

Share

ಬೆಳಗಾವಿ: ಸ್ಮಶಾನ (Cemetery) ಎಂದರೆ ಅಲ್ಲಿಗೆ ಹೋಗೋದು ಇರಲಿ, ಹೆಸರು ಹೇಳುತ್ತಿದ್ದಂತೆ ಭಯ ಶುರುವಾಗುತ್ತದೆ. ಆದರೆ ಜಿಲ್ಲೆಯ ರಾಯಬಾಗ ತಾಲೂಕಿನ ಹಾರುಗೇರಿ ಪಟ್ಟಣದ ಲಿಂಗಾಯತ ರುದ್ರ ಭೂಮಿಯನ್ನು ಯುವಕರು ನಂದನ ವನದಂತೆ ನಿರ್ಮಾಣ ಮಾಡಿದ್ದಾರೆ. ಲಾಕ್​ಡೌನ್​​ (Lackdown) ಸಂದರ್ಭದಲ್ಲಿ ಸಮಯವನ್ನ ಸದುಪಯೋಗ ಪಡೆದುಕೊಂಡ ಗ್ರಾಮದ ಯುವಕರು, ರುದ್ರ ಭೂಮಿಯನ್ನ ಚಿಕ್ಕವರಿಂದ ಹಿಡಿದು ದೊಡ್ಡವರೆಗೂ ಇಷ್ಟಪಡುವ ತಾಣವಾಗಿ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಸ್ಮಶಾನ ಎಂದರೆ ಭಯ  ಆಗುವುದು ಸಹಜ. ದೆವ್ವ, ಭೂತಗಳ ಬಗ್ಗೆ ಮೂಢನಂಬಿಕೆ ಹೆಚ್ಚಾಗಿದ್ದರೂ ಭಯ ಮಾತ್ರ ಇದ್ದೇ ಇರುತ್ತದೆ. ಸ್ಮಶಾನದ ದಾರಿಯಲ್ಲಿ ಹೋಗುವ ಅನಿವಾರ್ಯ ಬಂದರಂತೂ ಕೆಲವರಿಗೆ ಕೈ, ಕಾಲುಗಳು ನಡುಗುತ್ತವೆ. ಈ ನಡುವೆ ಜಿಲ್ಲೆಯ ರಾಯಬಾಗ ತಾಲೂಕಿನ ಹಾರುಗೇರಿ ಪಟ್ಟಣದ ಲಿಂಗಾಯತ ರುದ್ರಭೂಮಿ ಕೈ ಬೀಸಿ ಕರೆಯುವಂತೆ ನಿರ್ಮಾಣವಾಗಿದೆ. ಲಾಕ್​ಡೌನ್​ ಸಂದರ್ಭದಲ್ಲಿ 40 ಯುವಕರು ಸೇರಿ ಲಿಂಗಾಯತ ಕಾಯಕ ಸೇವಾ ಸಮಿತಿ ಹೆಸರಿನ ಸಂಸ್ಥೆ ಕಟ್ಟಿದ್ದಾರೆ. ಸ್ಮಶಾನದ ಬಗ್ಗೆ ಜನರಿಗಿರುವ ಭಯ, ಮೂಢನಂಬಿಕೆಯನ್ನ ಕಿತ್ತೆಸೆಯುವ ಸಲುವಾಗಿ ಸಮಾಜದ ಹಿರಿಯರು ಹಾಗೂ ಗ್ರಾಮಸ್ಥರ ಸಹಕಾರದಿಂದ ಪ್ರತಿ ಭಾನುವಾರ ಯುವಕರೆಲ್ಲರೂ ಸೇರಿ ಶ್ರಮದಾನ ಮಾಡುವ ಮೂಲಕ ಸ್ಮಶಾನ ಭೂಮಿಯನ್ನು ರುದ್ರ ಭೂಮಿಯನ್ನಾಗಿ, ರುದ್ರ ಭೂಮಿಯನ್ನು ನಂದನ ವನದಂತೆ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ಯೋಜನೆ ಆರ್​ಎಸ್​ಎಸ್ ‘ಅಗ್ನಿಪಥ್’; 4 ವರ್ಷದ ಬಳಿಕ ಶೇ.75ರಷ್ಟು ಜನರನ್ನ ಹೊರ ಕಳುಹಿಸ್ತೀರಿ ಅವರಿಂದ ಏನು ಕೆಲಸ ಮಾಡಿಸುತ್ತೀರಿ -ಹೆಚ್ಡಿಕೆ ಗರಂ

ಇದನ್ನೂ ಓದಿ
Image
ಬಾಗಲಕೋಟೆ ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ
Image
ಬೆಂಗಳೂರಿನಲ್ಲಿ ಖಾಸಗಿ ವಾಹಿನಿ ಕ್ಯಾಮರಮ್ಯಾನ್ ‌ಮೇಲೆ ಹಲ್ಲೆ
Image
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಘೋಷಿಸಲು ಜೂನ್ 27ರ ಗಡುವು: ಬಸವಜಯ ಮೃತ್ಯುಂಜಯ ಸ್ವಾಮೀಜಿ
Image
ಮನೆಗೆ ಬಂದ ಹಾವನ್ನೆ ತನ್ನ ಮೃತ ಗಂಡ ಎಂದು ತಿಳಿದು ಹಾವಿನ ಜೊತೆ ನಾಲ್ಕು ದಿನ ವಾಸ ಮಾಡಿದ ಅಜ್ಜಿ

ರುದ್ರ ಭೂಮಿಯಲ್ಲಿ ಆಟದ ಮೈದಾನ, ಕುಡಿಯುವ ನೀರಿನ ವ್ಯವಸ್ಥೆ ಅನುಭವ ಮಂಟಪ, ಶರಣರ ವಚನಗಳು, 12ನೇ ಶತಮಾನದ ಶರಣರ ಕಾಯಕದ ಚಿತ್ರಗಳು, ಹಕ್ಕಿಗಳಿಗೆ ಕಾಳು- ನೀರಿನ ವ್ಯವಸ್ಥೆ, ಅಂತ್ಯಕ್ರಿಯೆಗೆ ಬಂದಿರುವ ಜನರಿಗೆ ತಂಗಲು ಕಟ್ಟಡ, ಭವ್ಯವಾದ ಸುಂದರವಾದ ಶಿವನ ಮೂರ್ತಿ, ಮೂರ್ತಿಯ ಸುತ್ತಮುತ್ತ ಹುಲ್ಲು ಹಾಕಿದ್ದಾರೆ. ಈ ಸುಂದರ ಪರಿಸರದಲ್ಲಿ ಕಾಲ ಕಳೆಯಲು ಜನರಿಗೆ ಕೂರಲು ವ್ಯವಸ್ಥೆ ಮಾಡಿದ್ದಾರೆ. ಗ್ರಾಮದಲ್ಲಿ ಎಲ್ಲೂ ಕೂಡ ಉದ್ಯಾನವಿಲ್ಲ. ರುದ್ರ ಭೂಮಿಯಲ್ಲಿ ಉದ್ಯಾನವನ ನಿರ್ಮಾಣ ಮಾಡಿರುವುದಕ್ಕೆ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಪ್ರತಿನಿತ್ಯ ಬೆಳಿಗ್ಗೆ, ಸಾಯಂಕಾಲ ಬಂದು ಕುಳಿತುಕೊಂಡು ವಿಶ್ರಾಂತಿ ಪಡೆದು ಹೋಗುತ್ತಾರೆ.

ಹೊರದೇಶಗಳಲ್ಲಿ ಸ್ಮಶಾನ ಭೂಮಿ ಎಂದರೆ ಉದ್ಯಾನವನದ ರೀತಿ ಇರುತ್ತವೆ ಅಂತ ಕೇಳಿದ್ದೆವು. ಆದರೆ ನಮ್ಮ ಗ್ರಾಮದ ಯುವಕರು ಸ್ಮಶಾನ ಭೂಮಿಯಲ್ಲಿ ಉದ್ಯಾನವನ ನಿರ್ಮಾಣ ಮಾಡಿ ಇತರರಿಗೆ ಮಾದರಿಯಾಗಿದ್ದಾರೆಂದು ಗ್ರಾಮದ ಹಿರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವರದಿ: ವಿನಾಯಕ್ ಗುರವ್

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್