AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊನ್ನೆ ಟೊಮ್ಯಾಟೊ ಲಾರಿ ಹೈಜಾಕ್​ ಆಗಿತ್ತು, ಇಂದು 12 ಲಕ್ಷ ಮೌಲ್ಯದ ವಸ್ತುಗಳಿದ್ದ ಲಾರಿ ಹೈಜಾಕ್​ ಮಾಡಿದ ಚಾಲಕ! ಎಲ್ಲಿ?

lorry hijack: ಸ್ಮಾರ್ಟ್ ಎಕ್ಸ್‌ಪ್ರೆಸ್‌ ಗೆ ಸೇರಿದ 18 ಲಕ್ಷ ಬೆಲೆಬಾಳುವ ಸಾಮಾಗ್ರಿಗಳು ಲಾರಿಯಲ್ಲಿದ್ದವು. ಕೇರಳದ ಕೊಚ್ಚಿಗೆ ಡೆಲಿವರಿ ಕೊಡಬೆಕಿತ್ತು. ಸೇಲಂ ರಸ್ತೆ ಬಳಿ ಕಂಟೇನರ್ ನಿಲ್ಲಿಸಿ, ಕಳ್ಳತನ ಮಾಡಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಮೊನ್ನೆ ಟೊಮ್ಯಾಟೊ ಲಾರಿ ಹೈಜಾಕ್​ ಆಗಿತ್ತು, ಇಂದು 12 ಲಕ್ಷ ಮೌಲ್ಯದ ವಸ್ತುಗಳಿದ್ದ ಲಾರಿ ಹೈಜಾಕ್​ ಮಾಡಿದ ಚಾಲಕ! ಎಲ್ಲಿ?
12 ಲಕ್ಷ ಮೌಲ್ಯದ ವಸ್ತುಗಳಿದ್ದ ಲಾರಿ ಹೈಜಾಕ್​ ಮಾಡಿದ ಚಾಲಕ!
Follow us
ಬಿ ಮೂರ್ತಿ, ನೆಲಮಂಗಲ
| Updated By: ಸಾಧು ಶ್ರೀನಾಥ್​

Updated on: Aug 10, 2023 | 1:07 PM

ನೆಲಮಂಗಲ, ಆಗಸ್ಟ್​ 10: ಚಾಲಕನೊಬ್ಬ ತಾನು ಚಲಾಯಿಸುತ್ತಿದ್ದ ಲಾರಿಯನ್ನೇ ಹೈಜಾಕ್ ಮಾಡಿಕೊಂಡು ಹೋಗಿದ್ದಾನೆ. ಯಾಕಪ್ಪಾ ಹೀಗೆ? ಎಂದು ನೋಡಿದಾಗ ಲಾರಿಯಲ್ಲಿ 12 ಲಕ್ಷ ರೂಪಾಯಿ ಬೆಲೆಬಾಳುವ ವಸ್ತುಗಳು ಇದ್ದವು. ಅದರೊಂದಿಗೆ ಚಾಲಕ ಲಾರಿ (lorry driver) ಕದ್ದು ಪರಾರಿಯಾಗಿದ್ದಾನೆ (escape). ಬೆಂಗಳೂರು ಉತ್ತರ ತಾಲೂಕಿನ (Nelamangala) ಅಡಕಮಾರನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಚಾಲಕ ಪ್ರಭು ಸೇರಿದಂತೆ ಮೊವರಿಗೆ ಪೊಲೀಸರು ಈಗ ತಲಾಷ್ ನಡೆಸುತ್ತಿದ್ದಾರೆ.

ಸ್ಮಾರ್ಟ್ ಎಕ್ಸ್‌ಪ್ರೆಸ್‌ ಗೆ ಸೇರಿದ 18 ಲಕ್ಷ ಬೆಲೆಬಾಳುವ ಸಾಮಾಗ್ರಿಗಳು ಲಾರಿಯಲ್ಲಿದ್ದವು. ಕೇರಳದ ಕೊಚ್ಚಿಗೆ ಡೆಲಿವರಿ ಕೊಡಬೆಕಿತ್ತು. ಸೇಲಂ ರಸ್ತೆ ಬಳಿ ಕಂಟೇನರ್ ನಿಲ್ಲಿಸಿ, ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಲಾರಿ ಚಾಲಕ 18 ಲಕ್ಷ ವಸ್ತುಗಳಲ್ಲಿ 12 ಲಕ್ಷ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾನೆ ಎಂದು ಆರೋಪಿಸಲಾಗಿದೆ.

ನಿಗದಿತ ಸಮಯಕ್ಕೆ ಸಾಮಾಗ್ರಿಗಳು ತಲುಪದ ಕಾರಣ ಲಾರಿ ಮಾಲೀಕ ಚೌಡರೆಡ್ಡಿ ಚಾಲಕನಿಗೆ ಮೊಬೈಲ್​ನಲ್ಲಿ ಕರೆ ಮಾಡಿದ್ದಾನೆ. ಚಾಲಕ ಪ್ರಭು ಎಂಬಾತ ಅಡ್ರೆಸ್ ಮಿಸ್ ಆಗಿದೆಯೆಂದು ಕಥೆ ಕಟ್ಟಿದ್ದ. ಡೌಟ್ ಬಂದು ಜಿಪಿಎಸ್ ಪರಿಶೀಲನೆ ನಡೆಸಿದಾಗ ಕುಕೃತ್ಯ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕೆಆರ್ ಆಸ್ ಜಲಾಶಯದಿಂದ ವಿಸಿ ಮತ್ತು ಆಣೆಕಟ್ಟು ನಾಲೆಗಳಿಗೆ ಷರತ್ತಿನ ಮೇಲೆ ನೀರು ಹರಿಸುವ ಆದೇಶ ಹೊರಡಿಸಿದ ಕೃಷಿ ಇಲಾಖೆ

ಮಾರ್ಗ ಮಧ್ಯೆಯ ಕೆಲ ಸಿಸಿಟಿವಿ ವಿಡಿಯೋ ಪಡೆದು ತಲೆಮರೆಸಿಕೊಂಡಿರುವ ಅರೋಪಿಗಳಿಗಾಗಿ ಶೋಧ ಕಾರ್ಯ ನಡೆದಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಲಾರದ ಟೊಮ್ಯಾಟೊ ಲಾರಿಯೂ ಹೀಗೆಯೇ ನಾಪತ್ತೆಯಾಗಿತ್ತು!

ಜುಲೈ 27ರಂದು ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ತೆರಳಿದ್ದ 21 ಲಕ್ಷ ಮೌಲ್ಯದ ಟೊಮ್ಯಾಟೊ ತುಂಬಿದ್ದ ಲಾರಿ ನಾಪತ್ತೆಯಾಗಿತ್ತು. ರಾಜಸ್ಥಾನದ ಜೈಪುರಕ್ಕೆ ತೆರಳಿದ್ದ 21 ಲಕ್ಷ ಮೌಲ್ಯದ ಟೊಮ್ಯಾಟೊ ತುಂಬಿದ್ದ ಲಾರಿ ನಾಪತ್ತೆಯಾಗಿತ್ತು. ಕೋಲಾರದ ಮೆಹತ್ ಟ್ರಾನ್ಸ್​​ಪೋರ್ಟ್​ಗೆ ಸೇರಿದ ಲಾರಿ ಇದಾಗಿದ್ದು ಇದರಲ್ಲಿ ಎ.ಜಿ. ಟ್ರೇಡರ್ಸ್ ಸಕ್ಲೇನ್, ಹಾಗೂ ಎಸ್.ವಿ.ಟಿ ಟ್ರೇಡರ್ಸ್ ಮುನಿರಡ್ಡಿ ಎಂಬುವರಿಗೆ ಸೇರಿದ 21 ಲಕ್ಷ ಮೌಲ್ಯದ ಟೊಮೆಟೊಗಳಿದ್ದವು. ಲಾರಿ ಚಾಲಕ ಮೊಬೈಕ್​ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಮಂಡಿ ಮಾಲೀಕರು ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ನೆಲಮಂಗಲ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಜನಪ್ರಿಯ ಗೆಟ್ಟೋ ಕಿಡ್ಸ್​ಗೆ ಪ್ರೀತಿಯ ವಿದಾಯ ಹೇಳಿದ ಅರ್ಜುನ್ ಜನ್ಯ
ಜನಪ್ರಿಯ ಗೆಟ್ಟೋ ಕಿಡ್ಸ್​ಗೆ ಪ್ರೀತಿಯ ವಿದಾಯ ಹೇಳಿದ ಅರ್ಜುನ್ ಜನ್ಯ
ಕಚೇರಿಗೆ ಗೈರುಹಾಜರಾದರೂ ಸಿಬ್ಬಂದಿಯಿಂದ ಸಿಎಲ್ ಅರ್ಜಿ ಇಲ್ಲ!
ಕಚೇರಿಗೆ ಗೈರುಹಾಜರಾದರೂ ಸಿಬ್ಬಂದಿಯಿಂದ ಸಿಎಲ್ ಅರ್ಜಿ ಇಲ್ಲ!