Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಹೀರಾತು ನಂಬಿ ಮೋಸಹೋದ ಮಹಿಳೆ; DGF​ ಗೋಲ್ಡ್​ ಆ್ಯಂಡ್ ಡೈಮಂಡ್ಸ್​​ ಕಂಪನಿ ವಿರುದ್ದ ದೂರು

ಎಲ್ಲಿಯವರೆಗೂ ಮೋಸ ಹೋಗುವವರು ಇರುತ್ತಾರೋ, ಅಲ್ಲಿಯವರೆಗೂ ಮೋಸ ಮಾಡುವವರು ಇರುತ್ತಾರೆ. ಈ ಮಾತಿನಂತೆ ನೆಲಮಂಗಲ (Nelamangala)ದ ಮಹಿಳೆಯೊಬ್ಬರು ‘ನೀವು ಗಿರವಿ ಇಟ್ಟು ಬಿಡಿಸಲಾಗದ ಚಿನ್ನವನ್ನು, ನಾವೇ ಹಣ ಕೊಟ್ಟು ಬಿಡಿಸಿ ಉಳಿದ ಹಣವನ್ನು ತಕ್ಷಣವೇ ಕೊಡುತ್ತೇವೆ ಎನ್ನುವ ಜಾಹೀರಾತು ನಂಬಿ ಮೋಸ ಹೋಗಿದ್ದಾರೆ.

ಜಾಹೀರಾತು ನಂಬಿ ಮೋಸಹೋದ ಮಹಿಳೆ; DGF​ ಗೋಲ್ಡ್​ ಆ್ಯಂಡ್ ಡೈಮಂಡ್ಸ್​​ ಕಂಪನಿ ವಿರುದ್ದ ದೂರು
ಮೋಸಹೋದ ಮಹಿಳೆ
Follow us
ಬಿ ಮೂರ್ತಿ, ನೆಲಮಂಗಲ
| Updated By: ಕಿರಣ್ ಹನುಮಂತ್​ ಮಾದಾರ್

Updated on:May 08, 2024 | 8:26 PM

ಬೆಂಗಳೂರು ಗ್ರಾಮಾಂತರ, ಮೇ.08: ಮೈಸೂರು ಮೂಲದ ಡಿಜಿಎಫ್​ ಗೋಲ್ಡ್​ ಆ್ಯಂಡ್ ಡೈಮಂಡ್ಸ್(DGF GOLD & DIAMONDS)​​ ಕಂಪನಿಯಿಂದ ವಂಚನೆ ಆರೋಪ ಕೇಳಿಬಂದಿದೆ. ‘ನೀವು ಗಿರವಿ ಇಟ್ಟು ಬಿಡಿಸಲಾಗದ ಚಿನ್ನವನ್ನು, ನಾವೇ ಹಣ ಕೊಟ್ಟು ಬಿಡಿಸಿ ಉಳಿದ ಹಣವನ್ನು ತಕ್ಷಣವೇ ಕೊಡುತ್ತೇವೆ ಎನ್ನುವ ಜಾಹೀರಾತು ನಂಬಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ(Nelamangala)ದಲ್ಲಿ ಪ್ರೇಮಲತಾ ಎಂಬ ಮಹಿಳೆಯೊಬ್ಬರು ಮೋಸಹೋಗಿದ್ದಾಗಿ ದೂರು ಪೊಲೀಸ್​ ಠಾಣೆಗೆ ನೀಡಿದ್ದಾರೆ.

ಹಾಲ್ ಮಾರ್ಕ 91.6ಕ್ಕೆ ಒಂದು ಗ್ರಾಂ ಚಿನ್ನಕ್ಕೆ 7,900 ರೂಪಾಯಿ ನೀಡುವುದಾಗಿ ನಂಬಿಸಿ, 528ಗ್ರಾಂ ಚಿನ್ನ ಪಡೆದುಕೊಂಡು ಏಕಾಏಕೀ ಇಷ್ಟ ಬಂದ ರೀತಿಯಲ್ಲಿ ಕರಗಿಸಿ ತೂಕ ಕಡಿಮೆ ತೋರಿಸಿ, ಬಳಿಕ 41,74,360 ಲಕ್ಷ ರೂಪಾಯಿ ಬರಬೇಕಿದ್ದ ಹಣದ ಬದಲಿಗೆ 29 ಲಕ್ಷ ಹಣವನ್ನ ಮಾತ್ರ ಕೊಟ್ಟಿರುವುದಾಗಿ ಪ್ರೇಮಲತಾ ಎಮಬುವವರು ಅರೋಪಿಸಿದ್ದಾರೆ. ಈ ಕುರಿತು ವಂಚನೆ ಮತ್ತು ಮೋಸ ಮಾಡಿರುವ ಸಂಬಂಧ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಚಮತ್ಕಾರಿ ಪಾತ್ರೆ ಎಂದು ನಂಬಿಸಿ ಕೋಟಿ ಕೋಟಿ ವಂಚನೆ; ಮೂವರು ಆರೋಪಿಗಳು ಅಂದರ್​

ಕುಡಿಯುವ ನೀರಿಗಾಗಿ ಹೆಚ್ಚಿದ ಅಭಾವ, ರೊಚ್ಚಿಗೆದ್ದ ಗ್ರಾಮಸ್ಥರು

ಉತ್ತರ ಕನ್ನಡ: ಕುಡಿಯುವ ನೀರಿಗಾಗಿ ಅಭಾವ ತಲೆದೂರಿದ್ದು, ರೊಚ್ಚಿಗೆದ್ದ ಗ್ರಾಮಸ್ಥರು ಜಿಲ್ಲೆಯ ಹಲಿಯಾಳ ತಾಲೂಕಿನ ಅರ್ಲವಾಡ ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬರೊಬ್ಬರಿ ಒಂದು ತಿಂಗಳಿನಿಂದ ನಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾದ ಹಿನ್ನಲೆ ಇಂದು ಗ್ರಾಮದ ಮಹಿಳೆಯರು ಸೇರಿಕೊಂಡು ಖಾಲಿ ಕೊಡ ಹಿಡಿದು ಗ್ರಾಮ ಪಂಚಾಯತಿ‌ ಮುತ್ತಿಗೆ ಹಾಕಿದ್ದಾರೆ.

ಇನ್ನು ಈ ವೇಳೆ ಪಿಡಿಓ ಚುನಾವಣೆ ಕರ್ತವ್ಯ ನಿಮಿತ್ತ ಪಂಚಾಯತಿಯಲ್ಲಿ ಇಲ್ಲದ ಹಿನ್ನೆಲೆ ಪಂಚಾಯಿತಿಗೆ ಬೀಗ ಜಡಿದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತೆ ಸ್ಥಳಕ್ಕೆ ಭೇಟಿ ನೀಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಗಲಾಟೆ ಹೆಚ್ಚಾದ ಪರಿಣಾಮ ಸ್ಥಳಕ್ಕೆ ದೌಡಾಯಿಸಿದ ಪಿಎಸ್ಐ ಮಹಾಂತೇಶ ಕುಂಬಾರ ಹಾಗೂ ಪಂಚಾಯತ ಎಇಓ ಗ್ರಾಮಸ್ಥರನ್ನು ಸಮಾಧಾನ ಪಡಿಸಲು ಪರದಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:18 pm, Wed, 8 May 24

Daily Devotional: ದೇವಸ್ಥಾನದಲ್ಲಿ ಮಹಿಳೆಯರು ಹೂವು ಧರಿಸುವುದು ಶುಭವೇ?
Daily Devotional: ದೇವಸ್ಥಾನದಲ್ಲಿ ಮಹಿಳೆಯರು ಹೂವು ಧರಿಸುವುದು ಶುಭವೇ?
Daily horoscope: ಹುಣ್ಣಿಮೆಯ ದಿನದ ರಾಶಿ ಫಲಗಳನ್ನು ತಿಳಿಯಿರಿ
Daily horoscope: ಹುಣ್ಣಿಮೆಯ ದಿನದ ರಾಶಿ ಫಲಗಳನ್ನು ತಿಳಿಯಿರಿ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ