AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಅಭಿನಯದ ವೇಳೆ ವೇದಿಕೆ ಮೇಲೆ‌ ಕುಸಿದು ಬಿದ್ದು ಕಲಾವಿದ ಸಾವು

ಆ ಕಲಾವಿದ ನೂರಾರು ನಾಟಕಗಳಲ್ಲಿ ಅಭಿನಯಿಸಿ ಒಳ್ಳೆಯ ಹೆಸರು ಮಾಡಿದ್ದ. ನೂರಾರು ಜನ ಕಲಾವಿದರಿಗೆ ಅಭಿನಯ ಪಾತ್ರದಲ್ಲಿ ತಮ್ಮನ್ನ ತಾವು ಹೇಗೆ ತೋಡಗಿಸಿಕೊಳ್ಳಬೇಕು ಎಂದು ಹೇಳಿಕೊಟ್ಟಿದ್ದ. ಇಂತಹ ಕಲಾವಿದನಿಗೆ ನಟನೆ ಮಾಡುತ್ತಿರುವಾಗಲೇ ಸಾವು ಬಂದಿದೆ. ಅಭಿನಯ ಮಾಡುತ್ತಿದ್ದ ವೇಳೆ ಕಲಾವಿದ ಸಾವನ್ನಪ್ಪಿದ್ದಾನೆ. ಯಾರಿ ಕಲಾವಿದ, ಆತ ಸಾವನ್ನಪ್ಪಿದ್ದಾದರೂ ಹೇಗೆ ಅಂತೀರಾ? ಈ ಸ್ಟೋರಿ ಓದಿ.

ಬೆಂಗಳೂರು: ಅಭಿನಯದ ವೇಳೆ ವೇದಿಕೆ ಮೇಲೆ‌ ಕುಸಿದು ಬಿದ್ದು ಕಲಾವಿದ ಸಾವು
ಎನ್ ಮುನಿಕೆಂಪಣ್ಣ
ನವೀನ್ ಕುಮಾರ್ ಟಿ
| Edited By: ಕಿರಣ್ ಹನುಮಂತ್​ ಮಾದಾರ್|

Updated on:May 05, 2024 | 2:39 PM

Share

ಬೆಂಗಳೂರು, ಮೇ.05: ಯಲಹಂಕ ತಾಲೂಕಿನ ಸಾತನೂರು ಗ್ರಾಮದಲ್ಲಿ ಅಭಿನಯದ ವೇಳೆ ವೇದಿಕೆ ಮೇಲೆ‌ಯೇ ಕುಸಿದು ಬಿದ್ದು ಕಲಾವಿದನೊಬ್ಬ ಸಾವನ್ನಪ್ಪಿದ ಘಟನೆ ನಿನ್ನೆ(ಮೇ.04) ನಡೆದಿದೆ. ಅಂದಹಾಗೆ ಯಲಹಂಕದ ಸುರಭಿ ಲೇಔಟ್​ನ ನಿವಾಸಿ ಒಳ್ಳೆಯ ಹೆಸರು ಮಾಡಿರುವ ಕಲಾವಿದ ಎನ್ ಮುನಿಕೆಂಪಣ್ಣ((N. Munikempanna). ಮುನಿಕೆಂಪಣ್ಣ ಸಾತನೂರು ಗ್ರಾಮದಲ್ಲಿ ಕುರುಕ್ಷೇತ್ರ ನಾಟಕದಲ್ಲಿ ಶಕುನಿ ಪಾತ್ರವನ್ನ ನಿರ್ವಹಿಸಿದ್ದು, ಅದ್ಬುತವಾಗಿ ಶಕುನಿಪಾತ್ರವನ್ನ ಮಾಡುತ್ತಾ ಎಲ್ಲರ ಗಮನ ಸೆಳೆದಿದ್ದರು. ಆದ್ರೆ, ವಿಧಿ ಹಿರಿಯ ಕಲಾವಿದ ಮುನಿಕೆಂಪಣ್ಣ ಜೊತೆ ಆಟವಾಡಿಬಿಟ್ಟಿದೆ.

ನೂರಾರು ನಾಟಕಗಳಲ್ಲಿ ಅಭಿನಯಿಸಿ ದೇವನಹಳ್ಳಿ ಸೇರಿದಂತೆ ಯಲಹಂಕ ಹಾಗೂ ರಾಜ್ಯದ ನಾನಾ ಭಾಗದಲ್ಲಿ ಮುನಿಕೆಂಪಣ್ಣ ತನ್ನದೆಯಾದ ಹೆಸರು ಮಾಡಿಕೊಂಡಿದ್ದರು. ಜೊತೆಗೆ ದೇವನಹಳ್ಳಿಯಲ್ಲಿ ಇತ್ತೀಚೆಗೆ 28 ನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು ಸಹ ಆಗಿದ್ದರು. ಇದೀಗ ಇದೇ ಕುರುಕ್ಷೇತ್ರ ನಾಟಕ ನನ್ನ ಕೊನೆಯದ್ದು, ಇದನ್ನ ವಿಡಿಯೋ ಮಾಡಿ ಯೂ ಟ್ಯೂಬ್​ನಲ್ಲಿ ಹಾಕಿ ಎಂದು ತನ್ನ ಶಿಷ್ಯಂದರಿಗೆ ಹೇಳಿಕೊಂಡು ಬಂದಿದ್ದರಂತೆ. ಈ ಮಧ್ಯೆ ನಾಟಕದಲ್ಲಿ ಅಭಿನಯ ಮಾಡುತ್ತಿದ್ದ ವೇಳೆಯೆ ಕುಸಿದು ಬಿದ್ದು ಕಲಾವಿದ ಮುನಿಕೆಂಪಣ್ಣ ಹೃದಾಯಘಾತದಿಂದ ಮೃತಪಟ್ಟಿದ್ದಾರೆ.

ಇದನ್ನೂ ಓದಿ:ಹಾವು ಕಚ್ಚಿ ಯುವಕ ಸಾವು,  ಬದುಕಬಹುದು ಎಂದು ಶವವನ್ನು ಗಂಗಾ ನದಿಗೆ ಮುಳುಗಿಸಿದ ಕುಟುಂಬ 

ಇನ್ನು ಈ ಹಿರಿಯ ಕಲಾವಿದ ಸಾವಿಗೆ ನೂರಾರು ಕಲಾವಿದರು ದುಖಃದಲ್ಲಿ ಮುಳುಗಿದ್ದಾರೆ. ಮೃತ ಮುನಿಕೆಂಪಣ್ಣ ಮರಣೋತ್ತರ ಪರೀಕ್ಷೆಯನ್ನ ಯಲಹಂಕದಲ್ಲಿ ಮಾಡಲಾಗಿದ್ದು, ತಮ್ಮ ಹುಟ್ಟೂರು ಅರದೇಶನಹಳ್ಳಿಯಲ್ಲಿ ಅಂತ್ಯಕ್ರಿಯೆ ನೇರವೇರಿಸಲಾಗಿದೆ. ಒಟ್ಟಾರೆ ಉಪನ್ಯಾಸಕರಾಗಿ ಹಿರಿಯ ಕಲಾವಿದರಾಗಿದ್ದ ಮೃತ ಮುನಿಕೆಂಪಣ್ಣ, ನೂರಾರು ಜನರಿಗೆ ತನ್ನದೆಯಾದ ಕಲೆಯನ್ನ ಧಾರೆ ಎರೆದು ಹೆಸರು ಮಾಡಿದ್ದಾರೆ. ಕಲೆಯ ತನ್ನ ಸ್ವತ್ತು, ಕಲೆಯಿಂದ ಎಲ್ಲರನ್ನ ಮೇಲೆತ್ತುವ ಸಮಾಜಮುಖಿ ಕೆಲಸ ಮಾಡಿಕೊಂಡು ಬಂದ ಮುನಿಕೆಂಪಣ್ಣ ಅಭಿನಯ ಮಾಡುವಾಗಲೇ ಜೀವವನ್ನ ತೊರೆದಿದ್ದು ನಿಜಕ್ಕೂ ದುರಂತ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:35 pm, Sun, 5 May 24

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ