ನೆಲಮಂಗಲ ಟೌನ್ ಪೊಲೀಸರ ಭರ್ಜರಿ ಕಾರ್ಯಾಚರಣೆ; ಬೈಕ್ ಕಳ್ಳತನ ಮಾಡುತ್ತಿದ್ದ ಐವರು ಅರೆಸ್ಟ್

| Updated By: ಆಯೇಷಾ ಬಾನು

Updated on: Sep 13, 2023 | 12:56 PM

ಅಲ್ತಮಷ್ ಶರೀಷ್ ಕೀ ಮೇಕರ್ ಆಗಿದ್ದ. ಇವನ ಬಳಿ ಕೀ ಮಾಡಿಸಿಕೊಂಡು ಸ್ಪಾಟ್​ನಲ್ಲೇ ಬೈಕ್ ಕದಿಯುತ್ತಿದ್ದರು. ಮನೆ ಮುಂದೆ ನಿಲ್ಲಿಸುತ್ತಿದ್ದ ಬೈಕ್​ಗಳನ್ನೇ ಟಾರ್ಗೆಟ್ ಮಾಡಿ ರಾತ್ರಿ ವೇಳೆ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು. ಸದ್ಯ ನೆಲಮಂಗಲ ಟೌನ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳತನ ಮಾಡುತ್ತಿದ್ದ 5 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ನೆಲಮಂಗಲ ಟೌನ್ ಪೊಲೀಸರ ಭರ್ಜರಿ ಕಾರ್ಯಾಚರಣೆ; ಬೈಕ್ ಕಳ್ಳತನ ಮಾಡುತ್ತಿದ್ದ ಐವರು ಅರೆಸ್ಟ್
ಆರೋಪಿಗಳಿಂದ ವಶಕ್ಕೆ ಪಡೆಯಲಾದ ವಸ್ತುಗಳು
Follow us on

ನೆಲಮಂಗಲ, ಸೆ.13: ಬೆಂಗಳೂರು ಸುತ್ತಮುತ್ತ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಬೈಕ್ ಕಳ್ಳತನ, ಮನೆಗಳ್ಳತನ, ಹತ್ಯೆಗೆ ಯತ್ನದಂತಹ ಘಟನೆಗಳು ನಡೆಯುತ್ತಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಪೊಲೀಸರು(Nelamangala Town Police) ಭರ್ಜರಿ ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳತನ(Bike Theft) ಮಾಡುತ್ತಿದ್ದ 5 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ರಿಜ್ವಾನ್(23), ನಂದನ್ (20), ಹರ್ಷಿತ್(24), ಸೋಪಿಯಾನ್(21), ಅಲ್ತಮಷ್ ಶರೀಷ್(24) ಬಂಧಿತ ಆರೋಪಿಗಳು. ಬಂಧಿತರಿಂದ 24 ಬೈಕ್​ಗಳನ್ನ ವಶಕ್ಕೆ ಪಡೆಯಲಾಗಿದೆ.

ಅಲ್ತಮಷ್ ಶರೀಷ್ ಕೀ ಮೇಕರ್ ಆಗಿದ್ದ. ಇವನ ಬಳಿ ಕೀ ಮಾಡಿಸಿಕೊಂಡು ಸ್ಪಾಟ್​ನಲ್ಲೇ ಬೈಕ್ ಕದಿಯುತ್ತಿದ್ದರು. ಮನೆ ಮುಂದೆ ನಿಲ್ಲಿಸುತ್ತಿದ್ದ ಬೈಕ್​ಗಳನ್ನೇ ಟಾರ್ಗೆಟ್ ಮಾಡಿ ರಾತ್ರಿ ವೇಳೆ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ ಸೇರಿದಂತೆ 11 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳವು ಪ್ರಕರಣಗಳು ದಾಖಲಾಗಿದ್ದು 20 ಲಕ್ಷ ಬೆಲೆ ಬಾಳುವ 24 ಬೈಕ್ 11 ಮೊಬೈಲ್​ಗಳನ್ನು ಜಪ್ತಿ ಮಾಡಲಾಗಿದೆ.

ಕಳ್ಳತನ ಮಾಡುತ್ತಿದ್ದ ಆರೋಪಿ ಅರೆಸ್ಟ್, 107 ಗ್ರಾಂ ಚಿನ್ನಾಭರಣ ಜಪ್ತಿ

ಬೆಂಗಳೂರು: ಮನೆ ಕಳ್ಳತನ ಮಾಡುತ್ತಿದ್ದ ಕೋಣನಕುಂಟೆಯ ಗೋಪಿನಾಥ್​ನನ್ನು(44) ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದನ್ನ ನೋಡಿ ಗೋಪಿನಾಥ್​ ಕಳ್ಳತನ ಮಾಡುತ್ತಿದ್ದ. ಆರೋಪಿಯಿಂದ 6.5 ಲಕ್ಷ ಮೌಲ್ಯದ 107 ಗ್ರಾಂ ಚಿನ್ನಾಭರಣ ಹಾಗೂ 1.14 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವಿಕ್ಟೋರಿಯಾ ಆಸ್ಪತ್ರೆ ನೆಫ್ರೋಯುರಾಲಜಿ ಅವ್ಯವಸ್ಥೆ: ಆಸ್ಪತ್ರೆಗೆ ದಾಖಲಾದವರು ಬದುಕಿಬರುವುದೇ ಅನುಮಾನ!

ಅವಾಜ್ ಹಾಕಿದ್ದ ಯುವಕನ ಅಟ್ಟಾಡಿಸಿ ಮಚ್ವಿನೇಟು

ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿಪುರದ ಅಂಬಾ ಮಹೇಶ್ವರಿ ದೇವಾಲಯದ ಸಮೀಪ ಸೆಪ್ಟಂಬರ್ 1 ರಂದು ರೋಹಿತ್ ಎಂಬ ಯುವಕನ ಮೇಲೆ ರಾಜು, ಧನುಶ್, ಗುರು ಪ್ರಸಾದ್ ಅಂಡ್ ಟೀಂ ಏಕಾಏಕಿ‌ ಹಲ್ಲೆ ನಡೆಸಿದ್ದರು. ಘಟನೆಗೂ ಒಂದು ವಾರದ ಹಿಂದೆ ಗಾಯಾಳು ರೋಹಿತ್ ಗೂ ಈ ರಾಜು ಮತ್ತು ಸಹಚರರ ನಡುವೆ ಕಿರಿಕ್ ಆಗಿತ್ತು. ಈ ವೇಳೆ ರೋಹಿತ್ ಅವಾಜ್ ಹಾಕಿದ್ದನಂತೆ. ಇವನ್ನನ್ನ ಹೀಗೆ ಬಿಟ್ಟರೇ ಏರಿಯಾದಲ್ಲಿ ಹವಾ ಮೇಂಟೆನ್ ಮಾಡ್ತಾನೆ ಅಂತಾ ರೋಹಿತ್ ಕೊಲ್ಲಲು ಸ್ಕೆಚ್ ರೂಪಿಸಿದ ಡೆಡ್ಲಿ ಅಟ್ಯಾಕರ್ಸ್ ಸೆಪ್ಟಂಬರ್ 1 ರಂದು ಸ್ಕೆಚ್ ಹಾಕಿ ಹಾಡಹಗಲೇ ಮಚ್ವು ಲಾಂಗ್ ಬೀಸಿ ಹತ್ಯೆ ಗೆ ಯತ್ನಿಸಿದ್ದರು. ಅದೃಷ್ಟವಶಾತ್ ಹಲ್ಲೆಕೋರರಿಂದ ಕೂದಲೆಳೆ ಅಂತರದಲ್ಲಿ ಯುವಕ ಬಚಾವಾಗಿದ್ದು, ಘಟನೆ ವೇಳೆ ಬೆನ್ನು ಮೂಳೆ ಮುರಿದು ಗಂಭೀರವಾಗಿ ಗಾಯಾಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ದೃಶ್ಯ ಏರಿಯಾದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಪೊಲೀಸರು ಆರು ಜನ ಆರೋಪಿಗಳ ಲಾಕ್ ಮಾಡಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ