ಟೋಲ್ ಆಪರೇಟರ್ ಮೇಲೆಯೇ ಹರಿದ ಕ್ಯಾಂಟರ್; ಶುಲ್ಕ ಕಟ್ಟದ ಲಾರಿ ತಡೆಯಲು ಹೋಗಿ ಸಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ(Nelamangala) ತಾಲೂಕಿನ ಅರಿಶಿನಕುಂಟೆಯಲ್ಲಿರುವ ನವಯುಗ ಟೋಲ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್(25) ಎಂಬಾತ, ಟೋಲ್‌ನಲ್ಲಿ ಶುಲ್ಕ ಕಟ್ಟದೆ ಹೋಗುತ್ತಿದ್ದ ಕ್ಯಾಂಟರ್‌ ತಡೆಯಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.

ಟೋಲ್ ಆಪರೇಟರ್ ಮೇಲೆಯೇ ಹರಿದ ಕ್ಯಾಂಟರ್; ಶುಲ್ಕ ಕಟ್ಟದ ಲಾರಿ ತಡೆಯಲು ಹೋಗಿ ಸಾವು
ಮೃತ ವ್ಯಕ್ತಿ
Edited By: ಕಿರಣ್ ಹನುಮಂತ್​ ಮಾದಾರ್

Updated on: Jun 01, 2024 | 4:10 PM

ಬೆಂಗಳೂರು ಗ್ರಾಮಾಂತರ, ಜೂ.01: ಆತ ಪಿಯುಸಿ ಮುಗಿಸಿ, ವಿದ್ಯಾಭ್ಯಾಸವನ್ನು ಅರ್ಧಕ್ಕೆ‌ ನಿಲ್ಲಿಸಿದ್ದ. ಆದರೆ, ಸಂಸಾರ ಜವಾಬ್ದಾರಿ ಹೆಗಲ ಮೇಲೆ ಹಾಕಿಕೊಂಡು ಟೋಲ್(Toll)​ನಲ್ಲಿ ಕೆಲಸ ಮಾಡುತ್ತಿದ್ದ. ಇದೀಗ ವಿಧಿ ಅವನ ಬಾಳಲ್ಲಿ ಆಟವಾಡಿದ್ದು, ತಾನು ಕೆಲಸ ಮಾಡುತ್ತಿದ್ದ ಜಾಗದಲ್ಲೇ ತನ್ನ ಪ್ರಾಣ ಕಳೆದುಕೊಂಡು ಇಹಲೋಕ ತ್ಯಜಿಸಿದ್ದಾನೆ.‌ ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ(Nelamangala) ತಾಲೂಕಿನ ಅರಿಶಿನಕುಂಟೆಯಲ್ಲಿರುವ ನವಯುಗ ಟೋಲ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್(25) ಎಂಬಾತ, ಟೋಲ್‌ನಲ್ಲಿ ಶುಲ್ಕ ಕಟ್ಟದೆ ಹೋಗುತ್ತಿದ್ದ ಕ್ಯಾಂಟರ್‌ ತಡೆಯಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.

ನಾಗರಾಜ್​​ ಮೇಲೆ ಲಾರಿ ಹತ್ತಿಸಿ ಪರಾರಿ

ಟೋಲ್‌‌ ಆಪರೇಟರ್ ಆಗಿದ್ದ ನಾಗರಾಜ್, ನಿನ್ನೆ(ಮೇ.31) ರಾತ್ರಿ ಎಂದಿನಂತೆ ರಾತ್ರಿ ಪಾಳಿ ಕೆಲಸ ಮಾಡುತ್ತಿದ್ದ. ಅದರಂತೆ  ಟೋಲ್‌ನಲ್ಲಿ ಶುಲ್ಕ ಕಟ್ಟದೆ ಹೋಗುತ್ತಿದ್ದ ಲಾರಿಯನ್ನ ತಡೆಯಲು ಮುಂದಾಗಿದ್ದ. ಈ ವೇಳೆ ಹಿಂಬದಿಯಿಂದ ಬಂದ ಕ್ಯಾಂಟರ್ ಚಾಲಕ, ಅಜಾಗರೂಕತೆಯಿಂದ ಲಾರಿಯನ್ನು ನಾಗರಾಜ್​ ಮೇಲೆ ಹತ್ತಿಸಿ ಪರಾರಿಯಾಗಿದ್ದಾನೆ. ನಾಗರಾಜು ರಸ್ತೆಯಲ್ಲಿಯೇ ಸಾವು- ಬದುಕಿನ ನಡುವೆ ಹೋರಾಟ ನಡೆಸಿ ಬಳಿಕ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ:ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಹೆಚ್ಚಿದ ಅಪಘಾತಗಳ ಸಂಖ್ಯೆ; ಮೂರೇ ವರ್ಷದಲ್ಲಿ 262 ಸಾವು

ಹುಬ್ಬಳಿಯಲ್ಲಿ ಸಿಕ್ಕಿಬಿದ್ದ ಚಾಲಕ

ಸದ್ಯ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ಕ್ಯಾಂಟರ್ ವಾಹನ ಚಾಲಕನನ್ನ ಹುಬ್ಬಳಿಯಲ್ಲಿ ವಶಕ್ಕೆ‌ ಪಡೆದು ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us