AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನೇಕಲ್: ತಾಯಿ ಸತ್ತಿದ್ದರೂ ತಾಯಿಯ ಹೆಣದ ಮೇಲೆ ಆಟ ಆಡುತ್ತಿದ್ದ ಮಗು

ತಾಯಿ ಸತ್ತಿದ್ದರೂ ತಾಯಿಯ ಹೆಣದ ಮೇಲೆ ಮಗು ಆಟ ಆಡುತ್ತಿರುವ ಹೃದಯ ವಿದ್ರಾವಕ‌ ಘಟನೆ ಅನೇಕಲ್​​ನ ಅತ್ತಿಬೆಲೆಯಲ್ಲಿ ನಡೆದಿದೆ.

ಆನೇಕಲ್: ತಾಯಿ ಸತ್ತಿದ್ದರೂ ತಾಯಿಯ ಹೆಣದ ಮೇಲೆ ಆಟ ಆಡುತ್ತಿದ್ದ ಮಗು
ಸಾಂಕೇತಿಕ ಚಿತ್ರ
TV9 Web
| Edited By: |

Updated on:Jun 20, 2022 | 8:46 PM

Share

ಬೆಂಗಳೂರು: ತಾಯಿ (Mother) ಸತ್ತಿದ್ದರೂ ತಾಯಿಯ ಹೆಣದ ಮೇಲೆ ಮಗು (Baby) ಆಟ ಆಡುತ್ತಿರುವ ಹೃದಯ ವಿದ್ರಾವಕ‌ ಘಟನೆ ಅನೇಕಲ್​​ನ (Anekal) ಅತ್ತಿಬೆಲೆಯಲ್ಲಿ ನಡೆದಿದೆ. ಕಸ ಆಯ್ದು ಜೀವನ‌ ಸಾಗಿಸುತ್ತಿದ್ದ ರತ್ನಮ್ಮ(30) ವಿಪರೀತ ಕುಡಿತ, ಗಾಂಜಾ ಸೇವನೆ‌ ಕಾರಣ ಅನಾರೋಗ್ಯದಿಂದ ಬೆಳಗಿನ ಜಾವ ಸಾವನ್ನಪ್ಪಿದ್ದಾರೆ. ಬೆಳಗಿನ ಜಾವ ಟೀ ಕುಡಿಯೋಕೆ ಅಂತ ಮಗುವಿನಿಂದಿಗೆ ತಾಯಿ ರತ್ನಮ್ಮ ಬಂದಿದ್ದರು. ಟೀ ಬ್ರೆಡ್ ಕೂಡ ತಿನ್ನೋಕೂ ಆಗದಷ್ಟು ನಿತ್ರಾಣಗೊಂಡಿದ್ದ ರತ್ನಮ್ಮ ಅಲ್ಲೇ ಮಲಗಿಕೊಂಡಿದ್ದಾರೆ. ನಂತರ ಮಲಗಿದಲ್ಲೇ‌ ಸಾವನ್ನಪ್ಪಿದ್ದಾರೆ.

ಆದರೆ 8 ತಿಂಗಳ ಹೆಣ್ಣು ಮಗು ತಾಯಿಯ ಹೆಣದ ಮೇಲೆ ಆಟ ಆಡುತ್ತಿತ್ತು. ಗಂಡ ಅಯ್ಯಪ್ಪನ್ ಬರೋ ವರೆಗೂ ಮೃತ ದೇಹದ ಪಕ್ಕದಲ್ಲಿದ್ದ ಮಗು ಆಟವಾಡುತ್ತಿತ್ತು. ಮಗು ಆಡೋದನ್ನು ನೋಡಿ ಸಾರ್ವಜನಿಕರು  ಮಹಿಳೆ ಮಲಗಿರಬಹುದೆಂದು ಊಹಿಸಿದ್ದರು. ಆದರೆ ತಾಯಿ ಸಾವನ್ನಪ್ಪಿದ್ದಾಳೆ ಎಂದು ತಿಳಿದಾಗ  ಮಗು ಸ್ಥಿತಿ ಕಂಡು ಜನರು ಮರುಗಿದ್ದಾರೆ.

ಇದನ್ನು ಓದಿ: ಕಾರಿಗೆ ಕೆಎಸ್​​ಆರ್​​ಟಿಸಿ ಬಸ್​ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು, ಬಸ್​​ನಲ್ಲಿದ್ದ 10 ಪ್ರಯಾಣಿಕರಿಗೆ ಗಾಯ

ರತ್ನಮ್ಮ ಆಂಧ್ರದ ಕಡಪ ಜಿಲ್ಲೆಯವರಾಗಿದ್ದು, ಗಂಡ ಅಯ್ಯಪ್ಪನ್ , ಬೇಲೂರು ಮೂಲದವನು. ಅಯ್ಯಪ್ಪನ್ ನಾಲ್ಕು ವರ್ಷಗಳ ಹಿಂದೆ ಎರಡನೇ ಮದುವೆ ಆಗಿದ್ದನು. ತಮಿಳುನಾಡಿನ‌ ಹೊಸೂರಿನಲ್ಲಿ ವಾಸವಿದ್ದ ಕುಟುಂಬ ಕಸ ಆಯ್ದು, ‌ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿತ್ತು. ಗಂಡ ಹೆಂಡತಿ ಇಬ್ಬರಿಂದ ಅತಿಯಾಗಿ‌ ಮದ್ಯ‌ ಸೇವನೆ ಯಿಂದ ಸಾವು ಸಂಭವಿಸಿರಬಹುದೆಂದು ಅನುಮಾನ ವ್ಯಕ್ತವಾಗಿದೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ ಮಾಡಿ.

Published On - 7:24 pm, Mon, 20 June 22

Follow Us
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಪೆನ್ ಕ್ಯಾಪ್ ನುಂಗಿದ ಬಾಲಕನ ಜೀವ ಉಳಿಸಿದ ವೈದ್ಯರು
ಪೆನ್ ಕ್ಯಾಪ್ ನುಂಗಿದ ಬಾಲಕನ ಜೀವ ಉಳಿಸಿದ ವೈದ್ಯರು