Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಏರ್ ಶೋ: ಕಾರ್ಯಕ್ರಮಗಳ ವಿವರ, ಆನ್​ಲೈನ್ ಪಾಸ್ ಬುಕಿಂಗ್ ಹೇಗೆ, ದರ ಎಷ್ಟು? ಮಾಹಿತಿ ಇಲ್ಲಿದೆ

ಏರೋ ಇಂಡಿಯಾ 2025 ಫೆಬ್ರವರಿ 10 ರಿಂದ 14 ರವರೆಗೆ ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿದೆ. ಕೊನೆಯ ಎರಡು ದಿನಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆ. ವಿವಿಧ ರೀತಿಯ ಪಾಸ್‌ಗಳು ಲಭ್ಯವಿದ್ದು, ಆನ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ? ಪಾರ್ಕಿಂಗ್ ಮತ್ತು ಸಾರಿಗೆ ವ್ಯವಸ್ಥೆಗಳು ಹೇಗೆ ಎಂಬಿತ್ಯಾದಿ ವಿವರಗಳು ಇಲ್ಲಿವೆ.

ಬೆಂಗಳೂರು ಏರ್ ಶೋ: ಕಾರ್ಯಕ್ರಮಗಳ ವಿವರ, ಆನ್​ಲೈನ್ ಪಾಸ್ ಬುಕಿಂಗ್ ಹೇಗೆ, ದರ ಎಷ್ಟು? ಮಾಹಿತಿ ಇಲ್ಲಿದೆ
ಬೆಂಗಳೂರು ಏರ್ ಶೋ
Follow us
Ganapathi Sharma
|

Updated on: Feb 10, 2025 | 1:49 PM

ಬೆಂಗಳೂರು, ಫೆಬ್ರವರಿ 10: ಬೆಂಗಳೂರಿನಲ್ಲಿ ಬಹು ನಿರೀಕ್ಷಿತ ಏರೋ ಇಂಡಿಯಾ 2025 ವೈಮಾನಿಕ ಪ್ರದರ್ಶನ ಸೋಮವಾರ ಆರಂಭವಾಗಿದೆ. ರಕ್ಷಣಾ ಸಚಿವಾಲಯವು ಆಯೋಜಿಸಿರುವ ಈ ದ್ವೈವಾರ್ಷಿಕ ಕಾರ್ಯಕ್ರಮವು ಜಗತ್ತಿನಾದ್ಯಂತದ ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರದ ಉದ್ಯಮಗಳು, ಉತ್ಸಾಹಿಗಳನ್ನು ಒಂದೆಡೆ ಸೇರುವಂತೆ ಮಾಡುತ್ತದೆ. ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುವ ಏರೋ ಇಂಡಿಯಾದಲ್ಲಿ ಏರ್ ಶೋ ಕೂಡ ಪ್ರಮುಖವಾದ ಆಕರ್ಷಣೆಯಾಗಿದೆ. ವಾಯುಪಡೆಯೂ ಸೇರಿದಂತೆ ಜಾಗತಿಕ ವಿಮಾನಯಾನ ಸಂಸ್ಥೆಗಳು, ರಕ್ಷಣಾ ಸಂಸ್ಥೆಗಳು ವೈಮಾನಿಕ ಪ್ರದರ್ಶನ ನಡೆಸುತ್ತವೆ.

ಏರೋ ಇಂಡಿಯಾ 2025 ಬಗ್ಗೆ ನೀವು ತಿಳಿದಿರಬೇಕಾದ ಮಾಹಿತಿ ಇಲ್ಲಿದೆ.

ಏರೋ ಇಂಡಿಯಾ 2025: ಪ್ರಮುಖ ದಿನಾಂಕಗಳು

ಏರೋ ಇಂಡಿಯಾ 2025 ಕಾರ್ಯಕ್ರಮ ಒಟ್ಟು ಐದು ದಿನ ನಡೆಯಲಿದ್ದು, ಮೊದಲ ಮೂರು ದಿನಗಳು (ಫೆಬ್ರವರಿ 10 ರಿಂದ 12) ಏರೋಸ್ಪೇಸ್ ಉದ್ಯಮಗಳು, ಉದ್ಯಮಿಗಳಿಗೆ ಮೀಸಲಾಗಿರುತ್ತವೆ. ಆದರೆ ಕೊನೆಯ ಎರಡು ದಿನಗಳು (ಫೆಬ್ರವರಿ 13 ಹಾಗೂ 14) ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆ.

ಏರೋ ಇಂಡಿಯಾ ಕಾರ್ಯಕ್ರಮದ ವೇಳಾಪಟ್ಟಿ

  • ಏರೋ ಇಂಡಿಯಾ 2025 ಎಕ್ಸಿಬಿಷನ್ ಬೆಳಗ್ಗೆ 9:00 ರಿಂದ ಸಂಜೆ 6:00 ರವರೆಗೆ ತೆರೆದಿರುತ್ತದೆ.

ಏರೋ ಇಂಡಿಯಾ 2025 ರ ಪಾಸ್ ಬೆಲೆ ಎಷ್ಟು?

  • ಬಿಸಿನೆಸ್ ಪಾಸ್ ಬೆಲೆ ಭಾರತೀಯ ನಾಗರಿಕರಿಗೆ 5,000 ರೂ. ಹಾಗೂ ವಿದೇಶಿ ಪ್ರಜೆಗಳಿಗೆ 150 ಯುಎಸ್ ಡಾಲರ್ ಆಗಿದೆ. ADVA ಪಾಸ್ (ಏರ್ ಡಿಸ್​​ಪ್ಲೇ ವ್ಯೂವಿಂಗ್ ಏರಿಯಾ ಪಾಸ್) ಬೆಲೆ ಭಾರತೀಯ ನಾಗರಿಕರಿಗೆ 1,000 ರೂ. ಮತ್ತು ವಿದೇಶಿ ಪ್ರಜೆಗಳಿಗೆ 50 ಯುಎಸ್ ಡಾಲರ್.
  • ಸಾಮಾನ್ಯ ಸಂದರ್ಶಕರ ಪಾಸ್ ಬೆಲೆ ಭಾರತೀಯ ನಾಗರಿಕರಿಗೆ 2,500 ರೂ. ಹಾಗೂ ವಿದೇಶಿ ಪ್ರಜೆಗಳಿಗೆ 50 ಯುಎಸ್ ಡಾಲರ್ ಆಗಿದೆ.

ಪಾಸ್ ಬುಕ್ ಮಾಡುವುದು ಹೇಗೆ?

  • ಏರೋ ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ (aeroindia.gov.in.) ಭೇಟಿ ನೀಡಿ.
  • ‘ಟಿಕೆಟ್ಸ್’ ಸೆಕ್ಷನ್​​ಗೆ ಹೋಗಿ ಮತ್ತು ವಿಸಿಟರ್ಸ್ ರಿಜಿಸ್ಟ್ರೇಷನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ನೀವು ಭಾರತೀಯ ಸಂದರ್ಶಕರೋ ಅಥವಾ ವಿದೇಶಿ ಸಂದರ್ಶಕರೋ ಎಂಬುದನ್ನು ಆಯ್ಕೆಮಾಡಿ.
  • ಎಲ್ಲಾ ವಿವರಗಳನ್ನು ಭರ್ತಿ ಮಾಡಿ, ಅವುಗಳನ್ನು ಅನುಮೋದಿಸಿ ಮತ್ತು ಸೈನ್ ಅಪ್ ಮಾಡಿ.
  • ನಂತರ ಮತ್ತೆ ಲಾಗಿನ್ ಮಾಡಿ ಮತ್ತು ಯಾವ ರೀತಿಯ ಪಾಸ್ ಬೇಕೆಂಬುದನ್ನು ಆರಿಸಿ (ಬಿಸಿನೆಸ್ ಪಾಸ್, ಜನರಲ್ ಪಬ್ಲಿಕ್ ಪಾಸ್, ಅಥವಾ ADVA (ಏರ್ ಡಿಸ್​​ಪ್ಲೇ ವ್ಯೂವಿಂಗ್ ಏರಿಯಾ ಪಾಸ್).
  • ಅನುಮೋದನೆಯ ನಂತರ ಪಾಸ್ ಡೌನ್‌ಲೋಡ್ ಮಾಡಿ.

ಏರೋ ಇಂಡಿಯಾ 2025 ಸ್ಥಳವನ್ನು ತಲುಪುವುದು ಹೇಗೆ?

  • ಈ ಕಾರ್ಯಕ್ರಮ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ. ಇದು ಬೆಂಗಳೂರು ನಗರದಿಂದ ಸುಮಾರು 25 ಕಿ.ಮೀ ದೂರದಲ್ಲಿದೆ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಸುಲಭವಾಗಿ ತಲುಪಬಹುದಾಗಿದೆ.
  • ವಿಮಾನ ನಿಲ್ದಾಣದಿಂದ ಏರ್ ಶೋ ಸ್ಥಳಕ್ಕೆ ಪ್ರಯಾಣದ ಸಮಯ ಸುಮಾರು 40-45 ನಿಮಿಷಗಳು. ಸೀಮಿತ ಪಾರ್ಕಿಂಗ್ ಸ್ಥಳವಿರುವುದರಿಂದ, ಸ್ಥಳವನ್ನು ತಲುಪಲು ಟ್ಯಾಕ್ಸಿ ಸೇವೆಗಳು ಅಥವಾ ಸಾರ್ವಜನಿಕ ಸಾರಿಗೆಯನ್ನು ಬಳಸುವುದು ಸೂಕ್ತ.
  • ನಿಗದಿತ ಪಾರ್ಕಿಂಗ್ ಪ್ರದೇಶಗಳಿಂದ ಪ್ರದರ್ಶನ ಸ್ಥಳಕ್ಕೆ ಸಂದರ್ಶಕರನ್ನು ಕರೆದೊಯ್ಯಲು ಉಚಿತ ಬಸ್ ಸೇವೆ ಇದೆ.

ಪಾರ್ಕಿಂಗ್, ಭದ್ರತಾ ತಪಾಸಣೆ ಹೇಗೆ?

ಜಿಕೆವಿಕೆ ಮತ್ತು ಜಕ್ಕೂರು ಕ್ಯಾಂಪಸ್‌ಗಳಲ್ಲಿ ಪಾರ್ಕಿಂಗ್​ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಏರ್ ಶೋ ಸ್ಥಳಕ್ಕೆ ತೆರಳಲು ಉಚಿತ ಬಸ್ ಸೇವೆ ಇದೆ. ವೀಕ್ಷಕರು ಭದ್ರತಾ ತಪಾಸಣೆಗಾಗಿ ಸರ್ಕಾರ ನೀಡಿದ ಮಾನ್ಯವಾದ ಗುರುತಿನ ಚೀಟಿಯನ್ನು ಹೊಂದಿರಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್
ಸಿಎಂ ನೀಡಿರುವ ಸ್ಪಷ್ಟನೆ ರಾಜ್ಯದ ಜನತೆಗೆ ನೆಮ್ಮದಿ ನೀಡಿದೆ: ಸ್ಪೀಕರ್
ಸಿಎಂ ನೀಡಿರುವ ಸ್ಪಷ್ಟನೆ ರಾಜ್ಯದ ಜನತೆಗೆ ನೆಮ್ಮದಿ ನೀಡಿದೆ: ಸ್ಪೀಕರ್
ಒತ್ತೆಯಾಳುಗಳನ್ನು ಗಲ್ಲಿಗೇರಿಸುತ್ತೇವೆ; ಬಲೂಚ್ ದಂಗೆಕೋರರ ಎಚ್ಚರಿಕೆ
ಒತ್ತೆಯಾಳುಗಳನ್ನು ಗಲ್ಲಿಗೇರಿಸುತ್ತೇವೆ; ಬಲೂಚ್ ದಂಗೆಕೋರರ ಎಚ್ಚರಿಕೆ