ಯುವ ಲೇಖಕಿಯ “ದಿ ಮಿಸ್ಟಿಕಲ್ ವೇವ್ಸ್” ಕೃತಿ ಬಿಡುಗಡೆ ಮಾಡಿದ ಸಿ.ಎನ್.ಆರ್.ರಾವ್

ಯುವ ಲೇಖಕಿ ಅಮನ ಜೆ ಕುಮಾರ್ ಅವರ 5ನೇ ಕೃತಿ “ದಿ ಮಿಸ್ಟಿಕಲ್ ವೇವ್ಸ್” ಬಿಡುಗಡೆಗೊಂಡಿದೆ. ‘ಭಾರತ ರತ್ನ’ ಪುರಸ್ಕೃತ, ಖ್ಯಾತ ವಿಜ್ಞಾನಿ ಪ್ರೊಫೆಸರ್ ಸಿ.ಎನ್.ಆರ್. ರಾವ್ ಅವರು ಈ ಕೃತಿಯನ್ನು ಬಿಡುಗಡೆ ಮಾಡಿದ್ದು, ಅಮನ ಜೆ ಕುಮಾರ್ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಈ “ದಿ ಮಿಸ್ಟಿಕಲ್ ವೇವ್ಸ್” ಪುಸ್ತಕದಲ್ಲಿ ಏನೆಲ್​ಲಾ ಇದೆ? ಲೇಖಕಿ ಅಮನ ಜೆ ಕುಮಾರ್ ಅವರ ಸಾಧನೆ ಇಲ್ಲಿದೆ.

ಯುವ ಲೇಖಕಿಯ “ದಿ ಮಿಸ್ಟಿಕಲ್ ವೇವ್ಸ್” ಕೃತಿ ಬಿಡುಗಡೆ ಮಾಡಿದ ಸಿ.ಎನ್.ಆರ್.ರಾವ್
The Mystical Waves Book

Updated on: May 27, 2026 | 9:16 PM

ಬೆಂಗಳೂರು, (ಮೇ 27): ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ಪುರಸ್ಕೃತ, ಖ್ಯಾತ ವಿಜ್ಞಾನಿ ಪ್ರೊಫೆಸರ್ ಸಿ.ಎನ್.ಆರ್. ರಾವ್ (CNR Rao) ಅವರು “ದಿ ಮಿಸ್ಟಿಕಲ್ ವೇವ್ಸ್” ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನ ಗೌರವಾಧ್ಯಕ್ಷರು ಹಾಗೂ ಲೈನಸ್ ಪಾಲಿಂಗ್ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರು ಹಾಗೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಗೌರವ ಪ್ರಾಧ್ಯಾಪಕರಾಗಿರುವ ಸಿ.ಎನ್.ಆರ್. ರಾವ್, ಕಿರಿಯ ಲೇಖಕಿ ಅಮನ ಜೆ. ಕುಮಾರ್ ಅವರ ಕಾವ್ಯ ಪ್ರತಿಭೆಯನ್ನು ಶ್ಲಾಘಿಸಿದರು.

ದಿ ಮಿಸ್ಟಿಕಲ್ ವೇವ್ಸ್”  ಬಗ್ಗೆ

ಅಂತರರಾಷ್ಟ್ರೀಯ ಬುಕ್ಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ಟಾಕ್ ಅವರು “ದಿ ಮಿಸ್ಟಿಕಲ್ ವೇವ್ಸ್” ಪುಸ್ತಕದ ಮುನ್ನುಡಿಯನ್ನು ಬರೆದಿದ್ದಾರೆ. ದಿ ಮಿಸ್ಟಿಕಲ್ ವೇವ್ಸ್ ಒಬ್ಬ ವ್ಯಕ್ತಿಯ ಜೀವನ ಪಯಣದ ಪ್ರತಿಬಿಂಬದಂತಿದೆ. ಅನುಭವಗಳು, ನಿರೀಕ್ಷೆಗಳು ಮತ್ತು ಅಪಾರ ಆನಂದದ ಸಂಯೋಜನೆಯಾಗಿರುವ ಈ ಕೃತಿ ಬ್ಲ್ಯಾಕ್‌ಔಟ್ ಕವನಗಳು ಮತ್ತು ಸೊನೆಟ್‌ಗಳ ಸಮನ್ವಯವಾಗಿದೆ.

ಕಾವ್ಯದ ಎರಡು ವಿಭಿನ್ನ ಶೈಲಿಗಳ ಅದ್ಭುತ ಸಂಯೋಜನೆಯಾದ ಈ ಕೃತಿ ಓದುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಪ್ರತಿಯೊಂದು ಪದವೂ ತನ್ನೊಳಗೆ ಆಳವಾದ ಅರ್ಥ ಮತ್ತು ಚಿಂತನೆಯ ಸಾಗರವನ್ನು ಹೊಂದಿದ್ದು, ಓದುಗರ ಕಲ್ಪನೆ ಹಾಗೂ ಬುದ್ಧಿವಂತಿಕೆಯಿಂದ ಅನಾವರಣಗೊಳ್ಳುವಂತಹ ವಿಶಿಷ್ಟತೆಯನ್ನು ಹೊಂದಿದೆ. ಕಡಿಮೆ ಪದಗಳಲ್ಲಿ ಹೆಚ್ಚು ಅರ್ಥವನ್ನು ವ್ಯಕ್ತಪಡಿಸುವ ಈ ಕೃತಿ ಅನೇಕ ಕಥೆಗಳ ನೇಯ್ಗೆಯಂತಿದೆ.

ಲೇಖಕಿ ಅಮನ ಜೆ ಕುಮಾರ್ ಬಗ್ಗೆ

ಲೇಖಕಿ ಅಮನ ಜೆ ಕುಮಾರ್ ಅವರು ಇತ್ತೀಚೆಗೆ ಆರ್.ವಿ. ಪಿಯು ಕಾಲೇಜು, ಜಯನಗರದಲ್ಲಿ 12ನೇ ತರಗತಿಯನ್ನು ಪೂರ್ಣಗೊಳಿಸಿದ್ದಾರೆ. ಇನ್ನು ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ಸ್ ಸ್ಕೂಲ್‌ನಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ, 11ನೇ ವಯಸ್ಸಿನಲ್ಲಿಯೇ ಅವರು ಕವನಗಳು ಹಾಗೂ ಪುಸ್ತಕಗಳನ್ನು ಬರೆಯಲು ಪ್ರಾರಂಭಿಸಿದ್ದು , ಇದುವರೆಗೆ ಅವರ ನಾಲ್ಕು ಪುಸ್ತಕಗಳು ಪ್ರಕಟವಾಗಿದ್ದು, ಮೂರು ಇಂಗ್ಲಿಷ್ ಮತ್ತು‌ ಒಂದು ಹಿಂದಿ ಭಾಷೆಯಲ್ಲಿ ಪ್ರಕಟಗೊಂಡಿವೆ.

ಅವರ ಮೊದಲ ಪುಸ್ತಕ “Echoes of Soulful Poems”ಎರಡನೇ ಪುಸ್ತಕ “World Amidst the Words” ಮೂರನೇ ಹಿಂದಿ ಸಾಹಿತ್ಯ ಕೃತಿ “Lafzon Ki Mehphil” ನಾಲ್ಕನೇ ಪುಸ್ತಕ “Galore of Mysteries” . ಅವರ ಅನೇಕ ಲೇಖನಗಳು ಮತ್ತು ಕಥೆಗಳು ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಹಾಗೂ ಆನ್‌ಲೈನ್ ಪೋರ್ಟಲ್‌ಗಳಲ್ಲಿ ಪ್ರಕಟವಾಗಿವೆ. ಸಾಹಿತ್ಯದ ಜೊತೆಗೆ ಅವರು ವಿದ್ಯಾಭ್ಯಾಸದಲ್ಲಿಯೂ ಉತ್ತಮ ಸಾಧನೆ ತೋರಿದ್ದಾರೆ.

ಅಮನ ಅವರ ಸಾಧನೆಗಳು

  •  India Book of Records ನಿಂದ “ಭಾರತದ ಅತಿ ಕಿರಿಯ ಕವಯಿತ್ರಿ” ಎಂಬ ಗೌರವ.
  •  Asia Book of Records ನಿಂದ “ಗ್ರ್ಯಾಂಡ್ ಮಾಸ್ಟರ್” ಪ್ರಶಸ್ತಿ.
  •  Kautilya Youngest Poetess of the Year Award — ಗೋವಾ ರಾಜ್ಯಪಾಲರಿಂದ ಪ್ರದಾನ.
  •  Noble Book of World Record ನಿಂದ “ಅತ್ಯಂತ ಹೆಚ್ಚು ಕವನಗಳನ್ನು ರಚಿಸಿದ ಕವಯಿತ್ರಿ” ಎಂಬ ಗೌರವ (ಏಪ್ರಿಲ್ 2020ರಿಂದ ನವೆಂಬರ್ 2021ರವರೆಗೆ 337 ಕವನಗಳು).
  •  World Record University ನಿಂದ “ಅತಿ ಕಿರಿಯ ಕವಯಿತ್ರಿ” ಪ್ರಶಸ್ತಿ.
  •  International Book of World Record ನಿಂದ “ಅತಿ ಕಿರಿಯ ಕವಯಿತ್ರಿ” ಎಂಬ ಮಾನ್ಯತೆ.
  •  Wonder Book of World Record ನಿಂದ “ಅತಿ ಕಿರಿಯ ಲೇಖಕಿ” ಗೌರವ.
  •  Golden Book of World Records ನಿಂದ ಸತತ ವರ್ಷಗಳಲ್ಲಿ ಕವನ ಸಂಕಲನಗಳನ್ನು ಪ್ರಕಟಿಸಿದ ಅತಿ ಕಿರಿಯ ಕವಯಿತ್ರಿ ಎಂಬ ಗೌರವ ಪಡೆದಿರುತ್ತಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us