AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಬಳ ಕೊಡಲು ಒಂದು ದಿನ ಗಡುವು ಕೊಟ್ಟ ಆಂಬುಲೆನ್ಸ್​ ಸಿಬ್ಬಂದಿ: ಸಾಮೂಹಿಕ ರಜೆ ಹಾಕಿ ಪ್ರತಿಭಟಿಸುವ ಎಚ್ಚರಿಕೆ

ಎರಡು ತಿಂಗಳಿಂದ ಸಂಬಳ ಕೈ ಸೇರದ ಹಿನ್ನೆಲೆ ಇಂದಿನಿಂದ ಮುಷ್ಕರ ಮಾಡಲು ಆ್ಯಂಬುಲೆನ್ಸ್​ ಚಾಲಕರು ತೀರ್ಮಾನಿಸಿದ್ದರು. ದಸರಾ ರಜೆ ಹಾಗೂ ಆರೋಗ್ಯ ಇಲಾಖೆ ಸಮಯ ಕೇಳಿದ ಹಿನ್ನಲೆ ಸಿಬ್ಬಂದಿ ಒಂದು ದಿನದ ಗಡುವು ನೀಡಿದ್ದಾರೆ.

ಸಂಬಳ ಕೊಡಲು ಒಂದು ದಿನ ಗಡುವು ಕೊಟ್ಟ ಆಂಬುಲೆನ್ಸ್​ ಸಿಬ್ಬಂದಿ: ಸಾಮೂಹಿಕ ರಜೆ ಹಾಕಿ ಪ್ರತಿಭಟಿಸುವ ಎಚ್ಚರಿಕೆ
108 ಆ್ಯಂಬುಲೆನ್ಸ್
Follow us
TV9 Web
| Updated By: ಆಯೇಷಾ ಬಾನು

Updated on:Oct 06, 2022 | 2:43 PM

ಬೆಂಗಳೂರು: ಕಳೆದ ಎರಡು ತಿಂಗಳಿನಿಂದ ಆ್ಯಂಬುಲೆನ್ಸ್ ಸಿಬ್ಬಂದಿಗೆ ಸಂಬಳ ಆಗಿಲ್ಲ. ಗೌರಿ ಗಣೇಶ, ದಸರಾ ಹಬ್ಬಕ್ಕೂ ಸಿಬ್ಬಂದಿಗೆ ಸಂಬಳ ಕೈ ಸೇರಿಲ್ಲ. ಹೀಗಾಗಿ ಆ್ಯಂಬುಲೆನ್ಸ್​ ಚಾಲಕರು ಸರ್ಕಾರಕ್ಕೆ 1 ದಿನದ ಗಡುವು ನೀಡಿದ್ದಾರೆ. ಇನ್ನೆರಡು ದಿನದಲ್ಲಿ ಸಂಬಳ ಬಿಡುಗಡೆ ಮಾಡಬೇಕು ಎಂದು 108 ನೌಕರರ ಸಂಘದ ಉಪಾಧ್ಯಕ್ಷ ಪರಮಶಿವ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರಡು ತಿಂಗಳಿಂದ ಸಂಬಳ ಕೈ ಸೇರದ ಹಿನ್ನೆಲೆ ಇಂದಿನಿಂದ ಮುಷ್ಕರ ಮಾಡಲು ಆ್ಯಂಬುಲೆನ್ಸ್​ ಚಾಲಕರು ತೀರ್ಮಾನಿಸಿದ್ದರು. ದಸರಾ ರಜೆ ಹಾಗೂ ಆರೋಗ್ಯ ಇಲಾಖೆ ಸಮಯ ಕೇಳಿದ ಹಿನ್ನಲೆ ಸಿಬ್ಬಂದಿ ಒಂದು ದಿನದ ಗಡುವು ನೀಡಿದ್ದಾರೆ. ಶುಕ್ರವಾರ 11 ಗಂಟೆಗೆ ಆರೋಗ್ಯ ಇಲಾಖೆಯಲ್ಲಿ ಈ ಬಗ್ಗೆ ಸಭೆ ನಡೆಸಿ ಸಭೆಯಲ್ಲಿ ಸಂಬಳ ಇತ್ಯರ್ಥವಾಗದಿದ್ರೆ ಎಲ್ಲಾ ಡ್ರೈವರ್​ಗಳು ರಜೆ ಮೇಲೆ ತೆರಳಲು ನಿರ್ಧರಿಸಲಾಗಿದೆ. ಈಗಾಗಲೇ ಜಿವಿಕೆ ತಾಂತ್ರಿಕ ಸಮಸ್ಯೆಯಿಂದ ಆಂಬುಲೆನ್ಸ್ ಸೇವೆ ವ್ಯತ್ಯಾಸವಾಗಿತ್ತು. ಈಗ ಮತ್ತೆ ಡ್ರೈವರ್ ಗಳಿಗೆ ಸಂಬಳ ನೀಡದಿರೋದ್ರಿಂದ ಸಮಸ್ಯೆ ಎದುರಾಗಲಿದೆ. ಶುಕ್ರವಾರದೊಳಗೆ ಸಂಬಳ ಇತ್ಯರ್ಥವಾಗದಿದ್ರೆ ಮತ್ತೆ ರಾಜ್ಯದಲ್ಲಿ ಹೆಲ್ತ್ ಎಮರ್ಜನ್ಸಿ ಆಗಲಿದೆ. ಇದನ್ನೂ ಓದಿ: ದೇವರು ವರ ಕೊಟ್ರು ಪೂಜಾರಿ ಕೊಡಲಿಲ್ಲ: 108 ಸಿಬ್ಬಂದಿಗಿಲ್ಲ ದಸರಾ ಸಂಭ್ರಮ 

ಇನ್ನು ಮತ್ತೊಂದೆಡೆ ಜಿವಿಕೆ ಕಂಪನಿಯಡಿ ಕೆಲಸ ಮಾಡುವ ‘108 ಆ್ಯಂಬುಲೆನ್ಸ್’ ಚಾಲಕರಿಗೆ 2 ತಿಂಗಳಿಂದ ಸಂಬಳ ಆಗಿಲ್ಲ ಎಂದು 108 ಆ್ಯಂಬುಲೆನ್ಸ್ ನೌಕರರ ಸಂಘದ ಉಪಾಧ್ಯಕ್ಷ ಪರಮಶಿವ ಆಕ್ರೋಶ ಹೊರ ಹಾಕಿದ್ದಾರೆ. ಸಂಜೆಯೊಳಗೆ ಸಂಬಳ ಆಗದಿದ್ದರೆ ಸಾಮೂಹಿಕ ರಜೆ ಹಾಕುತ್ತೇವೆ. ಸರ್ಕಾರ 25 ಕೋಟಿ ರೂ. ಬಿಡುಗಡೆ ಮಾಡಿದ್ರೂ ಸಂಬಳ ನೀಡಿಲ್ಲ. ಆರೋಗ್ಯ ಸಚಿವರು ಮಧ್ಯಪ್ರವೇಶಿಸಿ ಸಂಬಳ ಬಿಡುಗಡೆ ಮಾಡಿಸಬೇಕು. ನಾಳೆ ಬೆಳಗ್ಗೆ 11ಕ್ಕೆ ಆರೋಗ್ಯ ಸಚಿವರನ್ನ ಭೇಟಿಯಾಗಿ ಮನವಿ ಮಾಡ್ತೇವೆ ಎಂದರು.

65 ವರ್ಷಗಳ ಪದ್ಧತಿಗೆ ಗುಡ್​ ಬೈ! ತಿಂಗಳ ಮೊದಲ ದಿನವೇ ಸಂಬಳ ಪಡೆದ ಕೆಎಸ್​ಆರ್​ಟಿಸಿ ನೌಕರರು

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 65 ವರ್ಷಗಳ ಇತಿಹಾಸದಲ್ಲೇ ಈ ದಿನ ಬಹಳ ವಿಶೇಷವಾದದ್ದು ಅದರಲ್ಲೂ ಕೆಎಸ್​ಆರ್​ಟಿಸಿ ಸಿಬ್ಬಂದಿ ಬಹಳ ನೆನಪಿನಲ್ಲಿ ಇಟ್ಟುಕೊಳ್ಳುವ ದಿನ ಅಂದರೂ ಕೂಡ ತಪ್ಪಾಗೋದಿಲ್ಲ. ಯಾಕಂದ್ರೆ 65 ವರ್ಷದ ಇತಿಹಾಸದಲ್ಲೇ ತಿಂಗಳ ಮೊದಲ ದಿನವೇ ನೌಕರರಿಗೆ (KSRTC Employees) ಸಂಬಳವನ್ನ ನೀಡಿರಲಿಲ್ಲ, ಏನಿದ್ರೂ 7ನೇ ತಾರೀಕಿನಂದು ನೌಕರರ ಬ್ಯಾಂಕ್ ಖಾತೆಗೆ ಸಂಬಳ ಸೇರುತಿತ್ತು! ಆದ್ರೆ ಇದೆ ಮೊದಲ ಬಾರಿಗೆ 1ನೇ ತಾರೀಕಿ ನಂದೇ ನೌಕರರಿಗೆ ಸಂಬಳ ಕೈ ಸೇರಿದೆ. ಇದಕ್ಕೆ ಕಾರಣ KSRTC ವ್ಯವಸ್ಥಾಪಕ ನಿರ್ದೇಶಕರಾದ ವಿ. ಅನ್ಬುಕುಮಾರ್ (KSRTC MD V Anbukumar).

ಇವರು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ (ಎಂಡಿ) ಆಗಿ ಬಂದ ಮೇಲೆ ನಿಗಮದಲ್ಲಿ 65 ವರ್ಷದಿಂದ ಇದ್ದ ನಿಯಮವೊಂದನ್ನ ಕೈಬಿಟ್ಟು ವೇತನ ನೀಡುವ ವಿಚಾರದಲ್ಲಿ ಇದ್ದ ತಾರತಮ್ಯಕ್ಕೆ ಮಂಗಳ ಹಾಡಿದ್ದಾರೆ. ನಿಗಮ ಆರಂಭದಿಂದ ಇಲ್ಲಿಯವರೆಗೆ ತಿಂಗಳ 1 ರಂದು ಅಧಿಕಾರಿ ವರ್ಗಕ್ಕೆ, 4 ರಂದು ಮೆಕಾನಿಕ್ ಗಳಿಗೆ, 7 ರಂದು ಚಾಲಕ ನಿರ್ವಾಹಕರಿಗೆ ಸಂಬಳವಾಗುತ್ತಿತ್ತು. ಈ ತಾರತಮ್ಯವನ್ನು ಹೋಗಲಾಡಿಸಿ ಸೆಪ್ಟೆಂಬರ್ ತಿಂಗಳ ಸಂಬಳವನ್ನು (Salary) ಇಂದು ಅಂದ್ರೆ ಅಕ್ಟೋಬರ್ 1 ರಂದೆ ನೌಕರರ ಖಾತೆಗೆ ಸೇರುವಂತೆ ಮಾಡಿದ್ದಾರೆ. ಎಂಡಿ ಅನ್ಬುಕುಮಾರ್ ಅವರ ನಿರ್ಧಾರದಿಂದ ಚಾಲಕ ಹಾಗೂ ನಿರ್ವಾಹಕರು ಸಂತೋಷಗೊಂಡಿದ್ದಾರೆ. ಇದರಿಂದ 36 ಸಾವಿರ ನೌಕರರಿಗೆ ದಸರಾ ಹಬ್ಬದ ವೇಳೆಗೆ ಸಂಬಳವಾದಂತಾಗಿದೆ. ಇದನ್ನೂ ಓದಿ: ಆವರಿಸಿದ ಆರ್ಥಿಕ ಹಿಂಜರಿತ ಭೀತಿ: ಕಚ್ಚಾತೈಲ ಉತ್ಪಾದನೆ ಕಡಿತ ಘೋಷಿಸಿದ ಒಪೆಕ್, ಇಂಧನ ಬೆಲೆ ಏರಿಕೆ ಆಘಾತದ ನಿರೀಕ್ಷೆ

Published On - 11:40 am, Thu, 6 October 22