ಆಸ್ತಿ ತೆರಿಗೆ ಪಾವತಿಗೆ ಹೆಚ್ಚಿನ ಕಾಲಾವಕಾಶ, ಸರಳ ವಿಧಾನಕ್ಕೆ ಕಾನೂನು ತಿದ್ದುಪಡಿ: ಡಿಸಿಎಂ ಡಿಕೆ ಶಿವಕುಮಾರ್

| Updated By: ಗಂಗಾಧರ​ ಬ. ಸಾಬೋಜಿ

Updated on: Jan 06, 2024 | 9:17 PM

‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ನಿಮ್ಮ ಸಹಕಾರ’ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್​, ಆಸ್ತಿ ತೆರಿಗೆ ಮತ್ತು ದಂಡ ಪಾವತಿಗೆ ಹೆಚ್ಚಿನ ಕಾಲಾವಕಾಶ ನೀಡಲು ಸರ್ಕಾರ ಕಾನೂನು ತಿದ್ದುಪಡಿ ಮಾಡಲಿದೆ ಎಂದು ಹೇಳಿದ್ದಾರೆ. ಆಸ್ತಿ ತೆರಿಗೆ ಪಾವತಿ ಪ್ರಕ್ರಿಯೆಗಳನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ಅನೇಕ ದೂರುಗಳು ಬಂದಿವೆ. ಹಾಗಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ತಿದ್ದುಪಡಿ ತರಲಿದೆ ಎಂದು ಹೇಳಿದ್ದಾರೆ.

ಆಸ್ತಿ ತೆರಿಗೆ ಪಾವತಿಗೆ ಹೆಚ್ಚಿನ ಕಾಲಾವಕಾಶ, ಸರಳ ವಿಧಾನಕ್ಕೆ ಕಾನೂನು ತಿದ್ದುಪಡಿ: ಡಿಸಿಎಂ ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್​
Follow us on

ಬೆಂಗಳೂರು, ಜನವರಿ 06: ಆಸ್ತಿ ತೆರಿಗೆ (Property Tax) ಮತ್ತು ದಂಡ ಪಾವತಿಗೆ ಹೆಚ್ಚಿನ ಕಾಲಾವಕಾಶ ನೀಡಲು ಸರ್ಕಾರ ಕಾನೂನು ತಿದ್ದುಪಡಿ ಮಾಡಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ನಗರದ ಹಲಸೂರಿನ ಆರ್​ಬಿಎಂ ಮೈದಾನದಲ್ಲಿ ನಡೆದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ನಿಮ್ಮ ಸಹಕಾರ’ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಆಸ್ತಿ ತೆರಿಗೆ ಪಾವತಿ ಪ್ರಕ್ರಿಯೆಗಳನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ಅನೇಕ ದೂರುಗಳು ಬಂದಿವೆ. ಹಾಗಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ತಿದ್ದುಪಡಿ ತರಲಿದೆ ಎಂದು ಹೇಳಿದ್ದಾರೆ.

ರೆಸಿಡೆನ್ಸಿ ಬಿಲ್ಡಿಂಗ್​ನಲ್ಲಿ ಕೆಲವು ಕಮರ್ಷಿಯಲ್ ಹಾಕಿಕೊಂಡಿದ್ದಾರೆ. ಜಾಸ್ತಿ ಆಯ್ತು ಸಮಯವಾಕಾಶ ಕೊಡುತ್ತಿಲ್ಲ ಅಂತ ಹೇಳಿದ್ದಾರೆ. ಇದರ ಬಗ್ಗೆ ಹೆಚ್ಚು ಸಮಯವಾಕಾಶ ಕೊಟ್ಟು ಅಪೀಲ್​ಗೆ ಅವಕಾಶ ಕೊಡುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕಣ್ಣಿಲ್ಲದ ಮಹಿಳೆಗೆ ಕಂತೆ ಕಂತೆ ಹಣ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್

ನಾಗರಿಕರಿಗೆ ಜಾಸ್ತಿ ತೊಂದರೆ ಆಗಬಾರದು. ಕಾನೂನು ತಿದ್ದುಪಡಿ ಸಹ ಅವಶ್ಯಕತೆ ಇದೆ. ಅಧಿಕಾರಿಗಳು ಆಕ್ಟ್ ನಲ್ಲಿ ಏನಿದೆ ಅದರ ಪ್ರಕಾರ ಮಾಡಿದ್ದಾರೆ. ಸರಳತೆ ಮಾಡಲು ಕಾನೂನು ತಿದ್ದುಪಡಿ ಮಾಡುತ್ತೇವೆ. ನಾಗರಿಕರು ಕೂಡ ಸಹಕಾರ ಮಾಡಬೇಕು ಎಂದಿದ್ದಾರೆ.

ಇದನ್ನೂ ಓದಿ: ಜನಸ್ಪಂದನ: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದ ಆರೋಪಿಗಳ ಬಿಡುಗಡೆ ಮಾಡುವಂತೆ ಡಿಕೆ ಶಿವಕುಮಾರ್​ಗೆ ಕುಟುಂಬಸ್ಥರ ಮನವಿ

ರೆಸಿಡೆನ್ಸಿ ಮನೆಯಲ್ಲಿ ಇದ್ದುಕೊಂಡು ಕಮರ್ಷಿಯಲ್ ಮಾಡಿದರೆ, ಕರೆಂಟ್ ಬಿಲ್ ಕಮರ್ಷಿಯಲ್ ಕೂಡ ಕಟ್ಟಿರುತ್ತಾನೆ. ಕಮರ್ಷಿಯಲ್ ಅಂತ ಆಗಿರುತ್ತದೆ. ಅನೇಕ ವಿಚಾರಗಳು ಇದೆ. ಅವರಿಗೆ ನಮ್ಮ‌ ಸಹಾಯ ಇರುತ್ತೆ. ಈಗ ತೆರಿಗೆ ಬಗ್ಗೆ ಪ್ರತಿಯೊಂದು ಸರ್ವೇ ಆಗುತ್ತೆ ಎಂದು ತಿಳಿಸಿದ್ದಾರೆ.

ಮೊದಲು ಕನ್ನಡ ಇರಬೇಕು

ಕನ್ನಡ ನಾಮಫಲಕ ನಿನ್ನೆಯ ಕ್ಯಾಬಿನೆಟ್​ನಲ್ಲಿ ಚರ್ಚೆ ವಿಚಾರವಾಗಿ ಮಾತನಾಡಿದ ಅವರು, ಕನ್ನಡ ರಕ್ಷಣಾ ವೇದಿಕೆ ಹೋರಾಟ ಮಾಡಿದ್ದಾರೆ. ಅದಕ್ಕೆ ಅವಕಾಶ ಇದೆ ಶೇ.60% ಕನ್ನಡ ಇರಬೇಕು. ಮೊದಲು ಕನ್ನಡ ಇರಬೇಕು. ಬ್ಯುಸಿನೆಸ್​​ನವರು ಇದನ್ನ ಅನುಸರಿಸಬೇಕು. ಅವರ ಮನೆಯಲ್ಲಿ ಏನು ಬೇಕಾದರೂ ಹಾಕಿಕೊಳ್ಳಲಿ ಅಡಚಣೆ ಮಾಡುವುದಕ್ಕೆ ಹೋಗಲ್ಲ. ಆದರೆ ವ್ಯಾಪಾರ ಮಾಡುವವರು ಕನ್ನಡ ಭಾಷೆ, ಭೂಮಿಗೆ ಗೌರವ ಕೊಡಬೇಕು ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 9:11 pm, Sat, 6 January 24