ಬೆಂಗಳೂರು ಪೊಲೀಸರ ಕಾರ್ಯಾಚರಣೆ; ಅಂತರ್​ರಾಜ್ಯ ಮನೆಗಳ್ಳರ ಬಂಧನ, 70 ಲಕ್ಷ ಮೌಲ್ಯದ ಚಿನ್ನ ವಶಕ್ಕೆ

ಬೆಂಗಳೂರಿನ ಸಂಜಯ್ ನಗರ ಪೊಲೀಸರ ಬಲೆಗೆ ಕುಖ್ಯಾತ ಅಂತರರಾಜ್ಯ ಮನೆಗಳ್ಳರು ಬಿದ್ದಿದ್ದಾರೆ. ಮಿಂತುವಿಶ್ವಾಸ್, ಹರೀಶ್ ಚಂದ್ರ, ಚಂದ್ರಬಾನು, ಜಸ್ವೀರ್ ಬಂಧಿತ ಆರೋಪಿಗಳು.

ಬೆಂಗಳೂರು ಪೊಲೀಸರ ಕಾರ್ಯಾಚರಣೆ; ಅಂತರ್​ರಾಜ್ಯ ಮನೆಗಳ್ಳರ ಬಂಧನ, 70 ಲಕ್ಷ ಮೌಲ್ಯದ ಚಿನ್ನ ವಶಕ್ಕೆ
ಬಂಧಿತ ಆರೋಪಿಗಳು
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 05, 2023 | 2:43 PM

ಬೆಂಗಳೂರು, ಆ.5: ಬೆಂಗಳೂರಿನ ಸಂಜಯ್ ನಗರ ಪೊಲೀಸರ ಬಲೆಗೆ ಕುಖ್ಯಾತ ಅಂತರರಾಜ್ಯ ಮನೆಗಳ್ಳರು ಬಿದ್ದಿದ್ದಾರೆ. ಮಿಂತುವಿಶ್ವಾಸ್, ಹರೀಶ್ ಚಂದ್ರ, ಚಂದ್ರಬಾನು, ಜಸ್ವೀರ್ ಬಂಧಿತ ಆರೋಪಿಗಳು. ಇವರು ಮೂಲತಃ ಉತ್ತರ ಪ್ರದೇಶದವರಾಗಿದ್ದು, ಪ್ಲೈಟ್​ನಲ್ಲಿ ಬೆಂಗಳೂರಿಗೆ ಬಂದು ಯಶವಂತಪುರ(Yeswanthpur)ದ ಲಾಡ್ಜ್​ನಲ್ಲಿ ನಾಲ್ಕು ದಿನ ಉಳಿದುಕೊಳ್ಳುತಿದ್ದರು. ಬಳಿಕ ಹೈ ಫೈ ಮನೆಗಳಿರುವ ಐದು ಏರಿಯಾಗಳನ್ನು ಟಾರ್ಗೆಟ್ ಮಾಡಿ ಸುತ್ತಾಟ ಮಾಡುತ್ತಾ, ಯಾವ ಮನೆಗೆ ಬೀಗ ಹಾಕಿದೆಯೆಂದು ನೋಡುತ್ತಿದ್ದರು. ಬಳಿಕ ಅದೇ ಮನೆಯಿಂದ ನಿಂತು ಲೋಕೆಷನ್ ಶೇರ್​ ಮಾಡಿಕೊಂಡು, ಸಂಜೆ ವೇಳೆಗೆ ಅದೇ ಮನೆಗೆ ಬರುತ್ತಿದ್ದರು.

70 ಲಕ್ಷ ಮೌಲ್ಯದ 1 ಕೆಜಿ 430ಗ್ರಾಂ ಚಿನ್ನ ಕಳ್ಳತನ

ಇದೇ ಮಾದರಿಯಲ್ಲಿ ಡಾಲರ್ಸ್ ಕಾಲೋನಿ ಮನೆಯೊಂದನ್ನ ಟಾರ್ಗೆಟ್ ಮಾಡಿದ್ದ ಆರೋಪಿಗಳು. ಟೆಕ್ಕಿಯೋರ್ವನ ಕುಟುಂಬ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ವೇಳೆ ಕಳ್ಳತನ ಕೃತ್ಯ ಎಸಗಿ ಪರಾರಿಯಾಗಿದ್ದರು. ಈ ವೇಳೆ ಅವರ ಮನೆಯಲ್ಲಿದ್ದ 70 ಲಕ್ಷ ಮೌಲ್ಯದ 1 ಕೆಜಿ 430 ಗ್ರಾಂ ಚಿನ್ನವನ್ನ ಕಳ್ಳತನ ಮಾಡಿ, ಬಳಿಕ ರಸ್ತೆ ಮಾರ್ಗವಾಗಿ ಬಸ್​ನಲ್ಲಿ ಕದ್ದ ಮಾಲ್ ಸಮೇತ ಹೈದ್ರಾಬಾದ್​ಗೆ ಹೋಗಿ, ಅಲ್ಲಿಂದ ದೆಹಲಿಗೆ ತೆರಳುತ್ತಿದ್ದರು. ನಂತರ ಅಲ್ಲಿಂದ ಉತ್ತರಪ್ರದೇಶಕ್ಕೆ ಈ ಗ್ಯಾಂಗ್​ ಹೋಗುತ್ತಿದ್ದರು.

ಇದನ್ನೂ ಓದಿ:ಪೊಲೀಸರೆಂದು ಹೇಳಿ ಮನೆಗೆ ನುಗ್ಗಿದ ಖದೀಮರು; ಚಾಕು ತೋರಿಸಿ ಕೈಯಲ್ಲಿದ್ದ ಉಂಗುರ, ಇತರೆ ವಸ್ತುಗಳನ್ನು ದೋಚಿದ ಕಳ್ಳರು

ಘಟನೆ ಕುರಿತು ಸಂಜಯ್ ನಗರ ಠಾಣೆಗೆ ದೂರು; ಗಡ್ಡ ಕೊಟ್ಟ ಕ್ಲ್ಯೂನಿಂದ ಆರೋಪಿಗಳು ಲಾಕ್

ಇನ್ನು ಮರುದಿನ ಬೆಳಿಗ್ಗೆ ಬಂದ ಮನೆ ಮಾಲೀಕರಿಗೆ ಕೃತ್ಯದ ಸಂಗತಿ ಬಯಲಾಗಿದೆ. ಕೂಡಲೇ ಸಂಜಯ್ ನಗರ ಠಾಣೆಗೆ ಈ ಬಗ್ಗೆ ಮನೆಯವರು ದೂರು ನೀಡಿದ್ದಾರೆ. ದೂರು ಹಿನ್ನಲೆ ಎಲ್ಲಾ ಸಿಸಿಟಿವಿಗಳ ಆಧರಿಸಿ ಆರೋಪಿಗಳ ಮಾಹಿತಿ ಪಡೆದಿದ್ದ ಪೊಲೀಸರಿಗೆ, ಮನೆ ಹಾಗೂ ಅಕ್ಕಪಕ್ಕದ ಮನೆಗಳಲ್ಲಿ ಸಿಸಿಟಿವಿ ಇರಲಿಲ್ಲ. ಇದಾದ ಬಳಿಕ ನಿರ್ಮಾಣ ಹಂತದ ಕಟ್ಟಡದ ಅದೊಂದು ಸಿಸಿಟಿವಿಯಲ್ಲಿ ಎರಡನೇ ಆರೋಪಿ ಚಹರೆ ಸೆರೆಯಾಗಿತ್ತು.

ಗಡ್ಡ ಕೊಟ್ಟ ಕ್ಲ್ಯೂನಿಂದ ಆರೋಪಿಗಳು ಲಾಕ್

ಹೌದು, ಓರ್ವ ಆರೋಪಿ ಹರೀಶ್ ಚಂದ್ರನ ಗಡ್ಡದ ಮುಖಾಂತರ ಪೊಲೀಸರಿಗೆ ಲೀಡ್ ಸಿಕ್ಕಿತ್ತು. ಈ ವೇಳೆ ಹಳೆ ಮಾಹಿತಿಗಳ ಆಧರಿಸಿ ಶೋಧ ಆರಂಭ ಮಾಡಿದ ಪೊಲೀಸರಿಗೆ, ಈ ಹಿಂದೆ ಅನ್ನಪೂರ್ಣೇಶ್ವರಿ ನಗರದಲ್ಲಿ ಬಂಧಿಸಲ್ಪಟ್ಟಿದ್ದ ಆರೋಪಿಗಳ ಜಾಡು ಹಿಡಿದು ಹೊರಟ ಪೊಲೀಸರ ಕೈಗೆ ದೆಹಲಿಯಲ್ಲಿ ಈ ಕಳ್ಳರ ಗ್ಯಾಂಗ್​ ಸಿಕ್ಕಿಬಿದ್ದಿತ್ತು. ಬಂಧಿತರಿಂದ ಕಳುವಾಗಿದ್ದ ಸಂಪೂರ್ಣ ಚಿನ್ನ ವಶಕ್ಕೆ ಪಡೆಯಲಾಗಿದ್ದು, ಕಳ್ಳತನ ಕುರಿತಂತೆ ಈ ಆರೋಪಿಗಳ ಮೇಲೆ ದೆಹಲಿ, ಕೇರಳ, ಉತ್ತರ ಪ್ರದೇಶ, ಕರ್ನಾಟಕ ಸೇರಿದಂತೆ ಹಲವು ಕಡೆ ಪ್ರಕರಣಗಳು ದಾಖಲಾಗಿವೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ