Bengaluru Power Cut: ಬೆಂಗಳೂರಿನ ಈ ಬಡಾವಣೆಗಳಲ್ಲಿ ಜೂ.17 ರಂದು ಪವರ್​ ಕಟ್​​

ಬೆಂಗಳೂರಿನ ಜಯನಗರದ ಸುತ್ತಮುತ್ತಲಿನ ಹಲವು ಬಡಾವಣೆಗಳಲ್ಲಿ ಶನಿವಾರ ವಿದ್ಯುತ್ ​ವ್ಯತ್ಯಯವಾಗಲಿದೆ. ಹಾಗಿದ್ದರೇ ಯಾವ ಯಾವ ಬಡವಾಣೆಗಳಲ್ಲಿ ಕರೆಂಟ್​ ಇರುವುದಿಲ್ಲ ಇಲ್ಲಿದೆ ಮಾಹಿತಿ.

Bengaluru Power Cut: ಬೆಂಗಳೂರಿನ ಈ ಬಡಾವಣೆಗಳಲ್ಲಿ ಜೂ.17 ರಂದು ಪವರ್​ ಕಟ್​​
ಸಾಂದರ್ಭಿಕ ಚಿತ್ರ
Follow us
|

Updated on:Jun 16, 2023 | 3:55 PM

ಬೆಂಗಳೂರು: ರಾಜಧಾನಿಯ ದಕ್ಷಿಣ ಭಾಗವಾದ ಜಯನಗರ (Jayanagar) ಉಪವಿಭಾಗ ವ್ಯಾಪ್ತಿಯ (ಸುತ್ತಮುತ್ತಲಿನ) ಹಲುವು ಬಡಾವಣೆಗಳಲ್ಲಿ ನಾಳೆ (ಜೂ.17) ರಂದು ವಿದ್ಯುತ್​ ವ್ಯತ್ಯಯವಾಗಲಿದೆ (Power Cut). ಅಂದು ಜಯನಗರದ ಹಲವು ಬಡಾವಣೆಗಳಲ್ಲಿ ತುರ್ತು ​​ನಿರ್ವಹಣಾ ಕಾರ್ಯ ನಡೆಯುವುದರಿಂದ ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಐದು ಗಂಟೆಗಳ ಕಾಲ ವಿದ್ಯುತ್​​ ನಿಲುಗಡೆ ಮಾಡಲಾಗುತ್ತದೆ ಎಂದು ಬೆಸ್ಕಾಂ (BESCOM) ತಿಳಿಸಿದೆ.

ಪವರ್​ ಕಟ್​ ಆಗುವ ಏರಿಯಾಗಳು

ಜಯನಗರ 1,2,3ನೇ ಬ್ಲಾಕ್​​, ಜಯನಗರ 4ನೇ ಬ್ಲಾಕ್​​, ಜಯನಗರ 9ನೇ ಬ್ಲಾಕ್​, ಐಎಎಸ್​​ ಕಾಲೋನಿ, ಕೆಎಎಸ್​ ಕಾಲೋನಿ, ತಿಲಕ್​​ನಗರ, ಎನ್​​.ಎಸ್​.ಪಾಳ್ಯ ಕೈಗಾರಿಕಾ ಪ್ರದೇಶ. ಜೆಆರ್​ಬಿ ಮುಖ್ಯರಸ್ತೆ, ಅನಂತರ ಲೇಔಟ್​​, ಶಾಂತಿ ಪಾರ್ಕ್​​, ಬಳೇಕಹಳ್ಳಿ, ಎಸ್​ಆರ್​ಕೆ ಗಾರ್ಡನ್​​, ಬಿಎಚ್​​ಇಎಲ್​​ ಲೇಔಟ್​​, ನಿಮ್ಹಾನ್ಸ್​​, ಜಯದೇವ ಆಸ್ಪತ್ರೆ ಪ್ರದೇಶ, ಕಿದ್ವಾಯಿ ಆಸ್ಪತ್ರೆ ಪ್ರದೇಶದಲ್ಲಿ ವಿದ್ಯುತ್​​ ವ್ಯತ್ಯಯವಾಗಲಿದೆ.

ಇದನ್ನೂ ಓದಿ: KCET Results 2023: ಇಂಜಿನಿಯರಿಂಗ್ ಕೋರ್ಸ್‌ನಲ್ಲಿ ಟಾಪ್ 10ರಲ್ಲಿ, 8 ರ‍್ಯಾಂಕ್‌ ಪಡೆದುಕೊಂಡ ಬೆಂಗಳೂರು

ಹಾಗೇ ಬಿಟಿಎಂ 2ನೇ ಹಂತ, ಮೈಕೋ ಲೇಔಟ್​​, ಎಂಸಿಹೆಚ್​​ ಲೇಔಟ್​​, ದಿವ್ಯ ಟವರ್ಸ್​​​, ಬನ್ನೇರಘಟ್ಟ, ಮುಖ್ಯ ರಸ್ತೆ, ಮಂತ್ರಿ ಅಪಾರ್ಟ್​​ಮೆಂಟ್​, ಗುರಪ್ಪನಪಾಳ್ಯ, ಬಿಸ್ಮಿಲ್ಲಾ ನಗರ, ಶಾಂತಿನಿಕೇತನ ಶಾಲೆ, ಕೆಇಬಿ ಕಾಲೋನಿ, ವಿಲ್ಸನ್​ ಗಾರ್ಡನ್​​, ಇಟ್ಟುಮಡು, ಚಿಕ್ಕಲಸಂದ್ರ, ಎರಹಳ್ಳಿ, ಯಲಚೇನಹಳ್ಳಿ, ವೈಶ್ಯ ಬ್ಯಾಂಕ್​​ ಕಾಲೋನಿಯಲ್ಲೂ ವಿದ್ಯುತ್​ ನಿಲುಗಡೆಯಾಗಲಿದೆ.ಈ ಐದು ಗಂಟೆ ಕಾಲ ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.

ನೆಲಮಂಗಲ ಗ್ರಾಮಾಂತರ ತಾಲೂಕಿನಲ್ಲಿ ವಿದ್ಯುತ್​ ವ್ಯತ್ಯಯ

ಬೆಂಗಳೂರು ಗ್ರಾಮಾಂತರ: ನೆಲಮಂಗಲ ಗ್ರಾಮಾಂತರ ತಾಲೂಕಿನ ದಾಬಸ್​​ಪೇಟೆಯ ಭಾಗದಲ್ಲಿ ಹತ್ತು ದಿನಗಳ ಕಾಲ ವಿದ್ಯುತ್​ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. 220 ಕೆವಿ ದಾಬಸ್​ಪೇಟೆ ಉಪ ಕೇಂದ್ರದಲ್ಲಿ ಪರಿವರ್ತಕ ತೈಲ ಬದಲಾವಣೆ ಕಾಮಗಾರಿ ನಡೆಯುತ್ತಿದೆ.

ಈ ಹಿನ್ನೆಲೆ ಐಪಿ ಪೂರಕಗಳನ್ನು ಬದಲಾಯಿಸಲಾಗುತ್ತಿದೆ. ಜೂ.13 ರಿಂದ 23ರವರೆಗೆ ವಿದ್ಯುತ್​​ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಬೆಳಿಗ್ಗೆ 5ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಡಚಣೆಯಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್​ ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:13 pm, Fri, 16 June 23

‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’