AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

4 ವರ್ಷದ ಬಳಿಕ 4.32 ಕೋಟಿ ರೂ. ವೆಚ್ಚದಲ್ಲಿ ಮರಗಳ ಗಣತಿ ಮಾಡಲು ಮುಂದಾದ ಬಿಬಿಎಂಪಿ

ಕಳೆದ 2017ರಲ್ಲಿ ಐಐಎಸ್​ಸಿ ವಿಜ್ಞಾನಿಗಳು ಮರಗಳ ಗಣತಿ ಮಾಡಿದ್ರು.‌ ಈ ವೇಳೆ 100 % ಗೆ 3% ರಷ್ಟು ಹಸಿರು ಇರುವ ಬಗ್ಗೆ ಮರಗಣತಿಯಲ್ಲಿ ಮಾಹಿತಿ ಸಿಕ್ಕಿತ್ತು. ಆದಾದ ಬಳಿಕ ಹೈ ಕೋರ್ಟ್ ಮತ್ತೊಮ್ಮೆ ಮತಗಣತಿ ಮಾಡಲು ಸೂಚಿಸಿತ್ತು.‌ ಆದ್ರೆ ಬಿಬಿಎಂಪಿ ನಾಲ್ಕು ವರ್ಷದಿಂದ ಕಾಲಾಹರಣ ಮಾಡಿ ಈ ವರ್ಷ ಮರಗಣತಿ ಮಾಡಲು ಮುಂದಾಗಿದ್ದು, ಟೆಂಡರ್ ಕರೆಯಲು ಮುಂದಾಗಿದೆ.

4 ವರ್ಷದ ಬಳಿಕ 4.32 ಕೋಟಿ ರೂ. ವೆಚ್ಚದಲ್ಲಿ ಮರಗಳ ಗಣತಿ ಮಾಡಲು ಮುಂದಾದ ಬಿಬಿಎಂಪಿ
ಸಾಂದರ್ಭಿಕ ಚಿತ್ರ
Poornima Agali Nagaraj
| Edited By: |

Updated on: Oct 07, 2023 | 2:57 PM

Share

ಬೆಂಗಳೂರು, ಅ.07: ಸಿಲಿಕಾನ್ ಸಿಟಿ ದಿನದಿಂದ‌ ದಿನಕ್ಕೆ ಕಾಂಕ್ರೀಟ್ ಕಾಡಾಗಿ ಮಾರ್ಪಾಡಾಗುತ್ತಿದ್ದು, ಮರಗಿಡಗಳ ಸಂಖ್ಯೆನೇ ಕಡಿಮೆಯಾಗಿ ಹೋಗಿದೆ. ಹೀಗಾಗಿ ಹೈಕೋರ್ಟ್ ಮರಗಣತಿ ಮಾಡಲು ಹೇಳಿದ್ದು ನಾಲ್ಕು ವರ್ಷದ ಬಳಿಕ‌ ಬಿಬಿಎಂಪಿ (BBMP) ಮರಗಣತಿ ಮಾಡಲು ಸಜ್ಜಾಗಿದೆ (Tree Census).‌ ರಾಜಾಧಾನಿ ಬೆಂಗಳೂರು ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿದ್ದು, ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಆದರೆ ಕಾಮಾಗಾರಿಗಳನ್ನ ಮಾಡುವ ಸಲುವಾಗಿ ಮರಗಳ ಮಾರಾಣ ಹೋಮವೇ ನಡೆಯುತ್ತಿದ್ದು, ಇತ್ತೀಚೆಗಂತೋ ಸಿಲಿಕಾನ್ ಸಿಟಿ (Bengaluru) ಕಾಂಕ್ರೀಟ್ ಕಾಡಾಗಿ ಪರಿಣಮಿಸುತ್ತಿದೆ.

ಕಳೆದ 2017ರಲ್ಲಿ ಐಐಎಸ್​ಸಿ ವಿಜ್ಞಾನಿಗಳು ಮರಗಳ ಗಣತಿ ಮಾಡಿದ್ರು.‌ ಈ ವೇಳೆ 100 % ಗೆ 3% ರಷ್ಟು ಹಸಿರು ಇರುವ ಬಗ್ಗೆ ಮರಗಣತಿಯಲ್ಲಿ ಮಾಹಿತಿ ಸಿಕ್ಕಿತ್ತು. ಆದಾದ ಬಳಿಕ ಹೈ ಕೋರ್ಟ್ ಮತ್ತೊಮ್ಮೆ ಮತಗಣತಿ ಮಾಡಲು ಸೂಚಿಸಿತ್ತು.‌ ಆದ್ರೆ ಬಿಬಿಎಂಪಿ ನಾಲ್ಕು ವರ್ಷದಿಂದ ಕಾಲಾಹರಣ ಮಾಡಿ ಈ ವರ್ಷ ಮರಗಣತಿ ಮಾಡಲು ಮುಂದಾಗಿದ್ದು, ಟೆಂಡರ್ ಕರೆಯಲು ಮುಂದಾಗಿದೆ.

ಹೌದು, ಮರಗಳ ಗಣತಿಗಾಗಿ 4.32 ಕೋಟಿ ರೂ ಮೀಸಲಿಟ್ಟಿದ್ದು, ಗಣತಿ ಕಾರ್ಯಕ್ಕಾಗಿ ಚದರ ಕಿಮೀ ಆಧಾರದಲ್ಲಿ 8 ವಲಯಗಳನ್ನಾಗಿ ವಿಂಗಡಿಸಿರುವ ಬಿಬಿಎಂಪಿ ಅರಣ್ಯ ವಿಭಾಗವು ಪ್ರತಿ ವಲಯಕ್ಕೆ 48.80 ರೂ. ನಿಗದಿ ಪಡಿಸಿದೆ. ಆರು ತಿಂಗಳ ಅವಧಿಯಲ್ಲಿ ಗಣತಿ ಕಾರ್ಯ ಪೂರ್ಣಗೊಳಿಸುವ ಗುರಿ ಹೊಂದಿದ್ದು, ಸಧ್ಯದಲ್ಲೆ ಟೆಂಡರ್ ಆಹ್ವಾನಿಸಲಾಗುತ್ತದ್ಯಂತೆ. ಈ ಗಣತಿಯಲ್ಲಿ ಮರಗಳ ಗಾತ್ರ, ಬಣ್ಣ, ಜಾತಿ, ವಯಸ್ಸುಗಳ ಆಧಾರದ ಮೇಲೆ ನಡೆಯಲಿದ್ದು, ಜನರ ಆಧಾರದ ಮೇಲೆ ಒಟ್ಟು ಎಷ್ಟು ಮರಗಳಿವೆ ಎನ್ನುವುದರ ಆಧಾರದ ಮೇಲೆ ಈ ಮರಗಣತಿ ನಡೆಯಲಿದೆ ಅಂತ ಬಿಬಿಎಂಪಿ ಅರಣ್ಯ ಅಧಿಕಾತಿಗಳು ಟಿವಿ9ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Rosemary Oil: ರೋಸ್ಮರಿ ಎಣ್ಣೆ ಬಳಸಿ, ಕೂದಲ ಸಮಸ್ಯೆಗಳಿಗೆ ಗುಡ್​ಬೈ ಹೇಳಿ

ಅಂದಹಾಗೇ, ಬೆಂಗಳೂರಿನಲ್ಲಿ 2017 ರಲ್ಲಿ ಐಐಎಸ್​ಸಿ ತಜ್ಞ ಟಿವಿ ರಾಮಾಚಂದ್ರ ಅವರ ನೇತ್ವದಲ್ಲಿ ಮರಗಣತಿ ಮಾಡಲಾಗಿತ್ತು.‌ ಈ ವೇಳೆ ಒಂದು ಲಕ್ಷವೆಚ್ಚದಲ್ಲಿ ನಾಲ್ಕು ತಿಂಗಳುಗಳ ಕಾಲ ಮರಗಣತಿಯನ್ನ ಮಾಡಲಾಗಿತ್ತು. ಆಗ 14 ಲಕ್ಷದ 68 ಸಾವಿರದಷ್ಡು ಮರಗಳು ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಬೆಂಗಳೂರು ಜನರ ಪಾಪುಲೇಷನ್ 95 ಲಕ್ಷದಷ್ಟು ಇತ್ತು. ಪ್ರತಿ ಏಳು ಮನುಷ್ಯನಿಗೆ ಒಂದು ಮರ ಇರುವುದು ತಿಳಿದುಬಂದಿತ್ತು.‌ ಪ್ರತಿದಿನ 540 ಗ್ರಾಂ ನಿಂದ 900 ಗ್ರಾಂ ನಷ್ಟು ಕಾರ್ಬಾನ್ ಡೈ ಆಕ್ಸೈಡ್ ಹೊರಗೆ ಹಾಕ್ತಾರೆ. ಸಧ್ಯ ಒಂದು ಮರ 10 ಮರಗಳು ಒಂದು ಮಗುವಿಗೆ ಸಮವಾಗಿರುತ್ತೆ.‌ ಆದ್ರೆ ಇತ್ತೀಚಿಗೆ ಮರಗಳನ್ನ ಕಡಿಯುತ್ತಿರುವುದರಿಂದ ಆ್ಯಕ್ಸಿಜನ್ ಗೆ ಕೊರತೆ ಉಂಟಾಗುತ್ತಿದೆ.‌ ಅಲ್ಲದೇ 50 ವರ್ಷ ಮೇಲ್ಪಟ್ಟವರು ಆ್ಯಕ್ಸಿಜನ್ ಸಿಲಿಂಡರ್ ಬಳಕೆ ಮಾಡುತ್ತಿರುವುದು ಕಂಡುಬರುತ್ತಿದ್ದು, ನೀರಿನ ಸಮಸ್ಯೆಯು ಉಂಟಾಗುತ್ತಿದೆ.

ಇದು ವಾಸ ಮಾಡಲು ಯೋಗ್ಯವಲ್ಲದ ಜಾಗವಾಗಿ ಮಾರ್ಪಾಡುತ್ತಿದೆ.‌ ಕಾಮಾಗಾರಿಗಳನ್ನ ಮಾಡುವಾಗ ಮಿನಿ ಫಾರೆಸ್ಟ್ ಗಳನ್ನ ಮಾಡುವುದರ ಮೂಲಕ ಹಸಿರೀಕರಣ ಮಾಡಬಹುದು. ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟವು ಕುಸಿಯುತ್ತಿದ್ದು, ಮರಗಳು ಇಲ್ಲದಿದ್ದರೆ ಅವನತಿಗೆ ಕಾರಣವಾಗಬಹುದು. ಹೀಗಾಗಿ ಬಿಬಿಎಂಪಿ ಅಧಿಕಾರಿಗಳ ಮರಗಳನ್ನ ನೆಡುವಾಗ ವೈಜ್ಞಾನಿಕವಾಗಿ ಮಾಡಬೇಕು ಅಂತ ಐಐಎಸ್​ಸಿ ತಜ್ಞ ಟಿವಿ ರಾಮಚಂದ್ರ ಅವರು ಸಲಹೆ ನೀಡಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ