AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ದರೋಡೆ ಕೇಸ್​: 2 ಕೋಟಿ ಕದಿಯಲು ಹೋಗಿ 7 ಕೋಟಿ ರೂ ಕದ್ದಿದ್ದ ರಾಬರ್ಸ್

ಬೆಂಗಳೂರಿನಲ್ಲಿ ನಡೆದಿದ್ದ ಎಟಿಎಂ ವಾಹನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿಚಾರಣೆ ವೇಳೆ ಮತ್ತಷ್ಟು ವಿಚಾರಗಳು ಬಯಲಾಗಿತ್ತಿವೆ. ದರೋಡೆಕೋರರು ಕೇವಲ 2 ಕೋಟಿ ರೂ. ಕದಿಯಲು ಪ್ಲಾನ್​​ ಮಾಡಿದ್ದರು. ಆದರೆ 7.11 ಕೋಟಿ ರೂ. ದರೋಡೆ ಮಾಡಿದ್ದರು. ಅಷ್ಟೊಂದು ಹಣ ಕಂಡ ದರೋಡೆಕೋರರು ಕೂಡ ಅಕ್ಷರಶಃ ದಿಗ್ರಾಂತರಾಗಿದ್ದರು.

ಬೆಂಗಳೂರು ದರೋಡೆ ಕೇಸ್​: 2 ಕೋಟಿ ಕದಿಯಲು ಹೋಗಿ 7 ಕೋಟಿ ರೂ ಕದ್ದಿದ್ದ ರಾಬರ್ಸ್
bangaluru Robbery Case
ಗಂಗಾಧರ​ ಬ. ಸಾಬೋಜಿ
|

Updated on:Nov 30, 2025 | 7:32 AM

Share

ಬೆಂಗಳೂರು, ನವೆಂಬರ್ 30: ಎಟಿಎಂ ವಾಹನವನ್ನ ಹೊತ್ತೊಯ್ದು, 7 ಕೋಟಿ ರೂ ದೋಚಿದ್ದ ಕೇಸ್​​​ (Robbery Case) ಸಿಲಿಕಾನ್ ಸಿಟಿ ಪೊಲೀಸರ (bangaluru police) ನಿದ್ದೆ ಭಂಗ ಮಾಡಿತ್ತು. ಸತತ ಕಾರ್ಯಚರಣೆ ಬಳಿಕ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾದರು. 9 ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನಿರಂತರ ವಿಚಾರಣೆ ನಡೆಸಿದ್ದು, ಮತ್ತಷ್ಟು ಸಂಗತಿಗಳು ಬಯಲಾಗಿವೆ. ಅಂದು ರಾಬರ್ಸ್ 2 ಕೋಟಿ ರೂ. ಕದಿಯಲು ಹೋಗಿ 7 ಕೋಟಿ ರೂ. ಕದ್ದಿದ್ದರು. ಅಷ್ಟೊಂದು ಹಣ ಕಂಡ ದರೋಡೆಕೋರರು ಕೂಡ ಅಕ್ಷರಶಃ ದಿಗ್ರಾಂತರಾಗಿದ್ದರು.

2 ಕೋಟಿ ರೂ ಕದ್ದರೆ ಕೇಸ್‌ ಕೊಡಲ್ಲ: ಕ್ಸೇವಿಯರ್ ಮಾತು ಕೇಳಿ ದರೋಡೆಗೆ ರೆಡಿಯಾಗಿದ್ದ ಗ್ಯಾಂಗ್​

ನಗರದಲ್ಲಿ ನಡೆದಿದ್ದ 7.11 ಕೋಟಿ ರೂ. ರಾಬರಿ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿತ್ತು. ಈ ದರೋಡೆ ಮಾಡಲು 3 ತಿಂಗಳಿಂದ ಗ್ಯಾಂಗ್​ ಸ್ಕೆಚ್​ ಹಾಕಿತ್ತು. ಈ ಪೈಕಿ ಸಿಎಂಎಸ್ ವಾಹನದ ಮಾಜಿ ಉದ್ಯೋಗಿ ಕ್ಸೇವಿಯರ್​​​ ಮಾಡಿದ್ದ ಮಸಲತ್ತು ಬಟಾಬಯಲಾಗಿದೆ. ಎಟಿಎಂ ವಾಹನದಲ್ಲಿ 7 ಕೋಟಿ ರೂ ಸಾಗಿಸುವುದು ಕಾನೂನು ಬಾಹಿರ. 5 ಕೋಟಿಗಿಂತ ಹೆಚ್ಚು ಹಣ ಸಾಗಿಸಲು ಅನುಮತಿ‌ ಇಲ್ಲವಂತೆ. ಹೀಗಾಗಿ ಆ ಎಟಿಎಂ ವಾಹನದಲ್ಲಿ 2 ಕೋಟಿ ರೂ ಕದ್ದರೆ ಕೇಸ್‌ ಕೊಡಲ್ಲ ಎಂದು ಬಣ್ಣ ಬಣ್ಣದ ಮಾತನ್ನ ಹೇಳಿ ಕ್ಸೇವಿಯರ್​​ ದರೋಡೆ ಮಾಡಲು ಗ್ಯಾಂಗ್​​ ರೆಡಿ ಮಾಡಿದ್ದ.

ಇದನ್ನೂ ಓದಿ: ಬೆಂಗಳೂರು: 7 ಕೋಟಿ ರೂ ಹೊತ್ತೊಯ್ದರೂ CMS ಸಿಬ್ಬಂದಿಗೆ ಊಟದ ಚಿಂತೆ; ದರೋಡೆಯ ಮತ್ತಷ್ಟು ಸಂಗತಿ ಬೆಳಕಿಗೆ

ಆತನ ಮಾತಿನಂತೆ 2 ಕೋಟಿ ರೂ. ಮಾತ್ರ ರಾಬರಿ ಮಾಡಲು ಪ್ಲಾನ್ ಆಗಿತ್ತು. ಹಾಗೆ ಒಂದೊಂದು ಬಾಕ್ಸ್​ನಲ್ಲಿ 50 ಲಕ್ಷ ರೂ. ಮಾತ್ರ ಇರುತ್ತದೆ. ಒಟ್ಟು ನಾಲ್ಕು ಬಾಕ್ಸ್ ರಾಬರಿ ಮಾಡಿದರೆ ಅಲ್ಲಿಗೆ 2 ಕೋಟಿ ರೂ ಆಗುತ್ತದೆ ಎಂದು ಗ್ಯಾಂಗ್​​ ನಂಬಿತ್ತು. ಅದರಂತೆ ಅಂದು ಎಟಿಎಂ ವಾಹನದಲ್ಲಿ 2 ಕೋಟಿ ರೂ. ರಾಬರಿಗೆ ಸ್ಕೆಚ್ ಹಾಕಿ ಸಿಎಎಂಎಸ್​ ವ್ಯಾನ್​​ನಿಂದ 4 ಬಾಕ್ಸ್​ಗಳನ್ನ ಮಾತ್ರ ಶಿಫ್ಟ್ ಮಾಡಿಕೊಂಡಿದ್ದರು. ಆದರೆ ದರೋಡೆಕೋರರು ಅಂದುಕೊಂಡಿದ್ದೇ ಒಂದು, ಆಗಿದ್ದು ಮಾತ್ರ ಇನ್ನೊಂದು.

ದರೋಡೆ ಮಾಡಿರುವುದು 7 ಕೋಟಿ ರೂ ಅಂತಾ ತಿಳಿದು ಶಾಕ್!

ದರೋಡೆಕೋರರ ಗ್ಯಾಂಗ್​​ 2 ಕೋಟಿ ರೂ. ಅಂತಾ ತಿಳಿದು ಬರೋಬ್ಬರಿ 7 ಕೋಟಿ ರೂ ರಾಬರಿ ಮಾಡಿದ್ದರು. ಈ ಹಣವನ್ನ ದಾರಿಯಲ್ಲಿ ಚೀಲಗಳಿಗೆ ತುಂಬಿಕೊಂಡು ಬಾಕ್ಸ್​ಗಳನ್ನ ಎಸದಿದ್ದರು. ಬಳಿಕ ಚಿತ್ತೂರಿನಲ್ಲಿ ಆರೋಪಿಗಳೆಲ್ಲಾ ಸ್ವಲ್ಪ ಹಂಚಿಕೊಂಡಿದ್ದಾರೆ. ಆ ವೇಳೆಯೂ ತಮ್ಮ ಬಳಿ 7 ಕೋಟಿ ರೂ. ಇದೆ ಅಂತ ಗೊತ್ತಿರಲಿಲ್ಲ. ಕೊನೆಗೆ ಕುಪ್ಪಂ ತಲುಪಿದ ಮೇಲೆ ಪಾಳು ಮನೆಯಲ್ಲಿ ಹಣ ಸುರಿದು ಲೆಕ್ಕ ಹಾಕಿದ್ದು, ರಾಬರಿಗೆ ಪ್ಲಾನ್ ಮಾಡಿದ್ದು, 2 ಕೋಟಿ ರೂ.ಗೆ ಮಾತ್ರ, ಆದರೆ ಸಿಕ್ಕಿರುವುದು 7 ಕೋಟಿ ರೂ ಅಂತಾ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ 7.11 ಕೋಟಿ ದರೋಡೆ ಕೇಸ್​: ಮತ್ತೆ 42 ಲಕ್ಷ ರೂ. ಜಪ್ತಿ; ಈವರೆಗೆರಿ ಕವರಿಯಾದ ಹಣವೆಷ್ಟು?

7 ಕೋಟಿ ರೂ. ಬ್ಯಾಂಕ್ ಹಣ ಆಗಿರುವುದರಿಂದ ಪೊಲೀಸರ ಭಯ ಶುರುವಾಗಿದೆ. ಬಳಿಕ ಹಣವನ್ನು ನಿರ್ಜನ ಪ್ರದೇಶದಲ್ಲಿರುವ ಪಾಳು ಮನೆಯೊಂದರಲ್ಲಿ ಬಚ್ಚಿಟ್ಟು ಎಸ್ಕೇಪ್ ಆಗಿದ್ದಾರೆ. ಚೆನ್ನೈ, ಕುಪ್ಪಂ, ಹೈದರಾಬಾದ್ ಕಡೆಗೆ ದರೋಡೆ ಗ್ಯಾಂಗ್ ಎಸ್ಕೇಪ್ ಆಗಿತ್ತು. ಸದ್ಯ 9 ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟಿ, tv9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:28 am, Sun, 30 November 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ