AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ದರೋಡೆ ಕೇಸ್​: 2 ಕೋಟಿ ಕದಿಯಲು ಹೋಗಿ 7 ಕೋಟಿ ರೂ ಕದ್ದಿದ್ದ ರಾಬರ್ಸ್

ಬೆಂಗಳೂರಿನಲ್ಲಿ ನಡೆದಿದ್ದ ಎಟಿಎಂ ವಾಹನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿಚಾರಣೆ ವೇಳೆ ಮತ್ತಷ್ಟು ವಿಚಾರಗಳು ಬಯಲಾಗಿತ್ತಿವೆ. ದರೋಡೆಕೋರರು ಕೇವಲ 2 ಕೋಟಿ ರೂ. ಕದಿಯಲು ಪ್ಲಾನ್​​ ಮಾಡಿದ್ದರು. ಆದರೆ 7.11 ಕೋಟಿ ರೂ. ದರೋಡೆ ಮಾಡಿದ್ದರು. ಅಷ್ಟೊಂದು ಹಣ ಕಂಡ ದರೋಡೆಕೋರರು ಕೂಡ ಅಕ್ಷರಶಃ ದಿಗ್ರಾಂತರಾಗಿದ್ದರು.

ಬೆಂಗಳೂರು ದರೋಡೆ ಕೇಸ್​: 2 ಕೋಟಿ ಕದಿಯಲು ಹೋಗಿ 7 ಕೋಟಿ ರೂ ಕದ್ದಿದ್ದ ರಾಬರ್ಸ್
bangaluru Robbery Case
ಗಂಗಾಧರ​ ಬ. ಸಾಬೋಜಿ
|

Updated on:Nov 30, 2025 | 7:32 AM

Share

ಬೆಂಗಳೂರು, ನವೆಂಬರ್ 30: ಎಟಿಎಂ ವಾಹನವನ್ನ ಹೊತ್ತೊಯ್ದು, 7 ಕೋಟಿ ರೂ ದೋಚಿದ್ದ ಕೇಸ್​​​ (Robbery Case) ಸಿಲಿಕಾನ್ ಸಿಟಿ ಪೊಲೀಸರ (bangaluru police) ನಿದ್ದೆ ಭಂಗ ಮಾಡಿತ್ತು. ಸತತ ಕಾರ್ಯಚರಣೆ ಬಳಿಕ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾದರು. 9 ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನಿರಂತರ ವಿಚಾರಣೆ ನಡೆಸಿದ್ದು, ಮತ್ತಷ್ಟು ಸಂಗತಿಗಳು ಬಯಲಾಗಿವೆ. ಅಂದು ರಾಬರ್ಸ್ 2 ಕೋಟಿ ರೂ. ಕದಿಯಲು ಹೋಗಿ 7 ಕೋಟಿ ರೂ. ಕದ್ದಿದ್ದರು. ಅಷ್ಟೊಂದು ಹಣ ಕಂಡ ದರೋಡೆಕೋರರು ಕೂಡ ಅಕ್ಷರಶಃ ದಿಗ್ರಾಂತರಾಗಿದ್ದರು.

2 ಕೋಟಿ ರೂ ಕದ್ದರೆ ಕೇಸ್‌ ಕೊಡಲ್ಲ: ಕ್ಸೇವಿಯರ್ ಮಾತು ಕೇಳಿ ದರೋಡೆಗೆ ರೆಡಿಯಾಗಿದ್ದ ಗ್ಯಾಂಗ್​

ನಗರದಲ್ಲಿ ನಡೆದಿದ್ದ 7.11 ಕೋಟಿ ರೂ. ರಾಬರಿ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿತ್ತು. ಈ ದರೋಡೆ ಮಾಡಲು 3 ತಿಂಗಳಿಂದ ಗ್ಯಾಂಗ್​ ಸ್ಕೆಚ್​ ಹಾಕಿತ್ತು. ಈ ಪೈಕಿ ಸಿಎಂಎಸ್ ವಾಹನದ ಮಾಜಿ ಉದ್ಯೋಗಿ ಕ್ಸೇವಿಯರ್​​​ ಮಾಡಿದ್ದ ಮಸಲತ್ತು ಬಟಾಬಯಲಾಗಿದೆ. ಎಟಿಎಂ ವಾಹನದಲ್ಲಿ 7 ಕೋಟಿ ರೂ ಸಾಗಿಸುವುದು ಕಾನೂನು ಬಾಹಿರ. 5 ಕೋಟಿಗಿಂತ ಹೆಚ್ಚು ಹಣ ಸಾಗಿಸಲು ಅನುಮತಿ‌ ಇಲ್ಲವಂತೆ. ಹೀಗಾಗಿ ಆ ಎಟಿಎಂ ವಾಹನದಲ್ಲಿ 2 ಕೋಟಿ ರೂ ಕದ್ದರೆ ಕೇಸ್‌ ಕೊಡಲ್ಲ ಎಂದು ಬಣ್ಣ ಬಣ್ಣದ ಮಾತನ್ನ ಹೇಳಿ ಕ್ಸೇವಿಯರ್​​ ದರೋಡೆ ಮಾಡಲು ಗ್ಯಾಂಗ್​​ ರೆಡಿ ಮಾಡಿದ್ದ.

ಇದನ್ನೂ ಓದಿ: ಬೆಂಗಳೂರು: 7 ಕೋಟಿ ರೂ ಹೊತ್ತೊಯ್ದರೂ CMS ಸಿಬ್ಬಂದಿಗೆ ಊಟದ ಚಿಂತೆ; ದರೋಡೆಯ ಮತ್ತಷ್ಟು ಸಂಗತಿ ಬೆಳಕಿಗೆ

ಆತನ ಮಾತಿನಂತೆ 2 ಕೋಟಿ ರೂ. ಮಾತ್ರ ರಾಬರಿ ಮಾಡಲು ಪ್ಲಾನ್ ಆಗಿತ್ತು. ಹಾಗೆ ಒಂದೊಂದು ಬಾಕ್ಸ್​ನಲ್ಲಿ 50 ಲಕ್ಷ ರೂ. ಮಾತ್ರ ಇರುತ್ತದೆ. ಒಟ್ಟು ನಾಲ್ಕು ಬಾಕ್ಸ್ ರಾಬರಿ ಮಾಡಿದರೆ ಅಲ್ಲಿಗೆ 2 ಕೋಟಿ ರೂ ಆಗುತ್ತದೆ ಎಂದು ಗ್ಯಾಂಗ್​​ ನಂಬಿತ್ತು. ಅದರಂತೆ ಅಂದು ಎಟಿಎಂ ವಾಹನದಲ್ಲಿ 2 ಕೋಟಿ ರೂ. ರಾಬರಿಗೆ ಸ್ಕೆಚ್ ಹಾಕಿ ಸಿಎಎಂಎಸ್​ ವ್ಯಾನ್​​ನಿಂದ 4 ಬಾಕ್ಸ್​ಗಳನ್ನ ಮಾತ್ರ ಶಿಫ್ಟ್ ಮಾಡಿಕೊಂಡಿದ್ದರು. ಆದರೆ ದರೋಡೆಕೋರರು ಅಂದುಕೊಂಡಿದ್ದೇ ಒಂದು, ಆಗಿದ್ದು ಮಾತ್ರ ಇನ್ನೊಂದು.

ದರೋಡೆ ಮಾಡಿರುವುದು 7 ಕೋಟಿ ರೂ ಅಂತಾ ತಿಳಿದು ಶಾಕ್!

ದರೋಡೆಕೋರರ ಗ್ಯಾಂಗ್​​ 2 ಕೋಟಿ ರೂ. ಅಂತಾ ತಿಳಿದು ಬರೋಬ್ಬರಿ 7 ಕೋಟಿ ರೂ ರಾಬರಿ ಮಾಡಿದ್ದರು. ಈ ಹಣವನ್ನ ದಾರಿಯಲ್ಲಿ ಚೀಲಗಳಿಗೆ ತುಂಬಿಕೊಂಡು ಬಾಕ್ಸ್​ಗಳನ್ನ ಎಸದಿದ್ದರು. ಬಳಿಕ ಚಿತ್ತೂರಿನಲ್ಲಿ ಆರೋಪಿಗಳೆಲ್ಲಾ ಸ್ವಲ್ಪ ಹಂಚಿಕೊಂಡಿದ್ದಾರೆ. ಆ ವೇಳೆಯೂ ತಮ್ಮ ಬಳಿ 7 ಕೋಟಿ ರೂ. ಇದೆ ಅಂತ ಗೊತ್ತಿರಲಿಲ್ಲ. ಕೊನೆಗೆ ಕುಪ್ಪಂ ತಲುಪಿದ ಮೇಲೆ ಪಾಳು ಮನೆಯಲ್ಲಿ ಹಣ ಸುರಿದು ಲೆಕ್ಕ ಹಾಕಿದ್ದು, ರಾಬರಿಗೆ ಪ್ಲಾನ್ ಮಾಡಿದ್ದು, 2 ಕೋಟಿ ರೂ.ಗೆ ಮಾತ್ರ, ಆದರೆ ಸಿಕ್ಕಿರುವುದು 7 ಕೋಟಿ ರೂ ಅಂತಾ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ 7.11 ಕೋಟಿ ದರೋಡೆ ಕೇಸ್​: ಮತ್ತೆ 42 ಲಕ್ಷ ರೂ. ಜಪ್ತಿ; ಈವರೆಗೆರಿ ಕವರಿಯಾದ ಹಣವೆಷ್ಟು?

7 ಕೋಟಿ ರೂ. ಬ್ಯಾಂಕ್ ಹಣ ಆಗಿರುವುದರಿಂದ ಪೊಲೀಸರ ಭಯ ಶುರುವಾಗಿದೆ. ಬಳಿಕ ಹಣವನ್ನು ನಿರ್ಜನ ಪ್ರದೇಶದಲ್ಲಿರುವ ಪಾಳು ಮನೆಯೊಂದರಲ್ಲಿ ಬಚ್ಚಿಟ್ಟು ಎಸ್ಕೇಪ್ ಆಗಿದ್ದಾರೆ. ಚೆನ್ನೈ, ಕುಪ್ಪಂ, ಹೈದರಾಬಾದ್ ಕಡೆಗೆ ದರೋಡೆ ಗ್ಯಾಂಗ್ ಎಸ್ಕೇಪ್ ಆಗಿತ್ತು. ಸದ್ಯ 9 ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟಿ, tv9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:28 am, Sun, 30 November 25

Follow Us
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ