AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BMTC: ವೋಲ್ವೊ ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ; ಟಿಕೆಟ್ ದರದಲ್ಲಿ ಇಳಿಕೆ- ಪರಿಷ್ಕೃತ ದರದ ಪಟ್ಟಿ ಇಲ್ಲಿದೆ

ಈಗಾಗಲೇ 09 ಮಾರ್ಗಗಳಲ್ಲಿ 83 ಎಸಿ ಬಸ್​ ಕಾರ್ಯನಿರ್ವಹಿಸುತ್ತಿದೆ. 17/12/21 ರಿಂದ ಹೊಸದಾಗಿ 12 ಮಾರ್ಗಗಳಲ್ಲಿ 90 ಎಸಿ ಬಸ್​ಗಳನ್ನ ಹೆಚ್ಚುವರಿಯಾಗಿ ಬಿಡಲಾಗುವುದು. 120 ರೂ ಇದ್ದ ದಿನದ ಪಾಸು ಇನ್ನು ಮುಂದೆ 100ರೂ ಗೆ ಲಭ್ಯ ಆಗಲಿದೆ.

BMTC: ವೋಲ್ವೊ ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ; ಟಿಕೆಟ್ ದರದಲ್ಲಿ ಇಳಿಕೆ- ಪರಿಷ್ಕೃತ ದರದ ಪಟ್ಟಿ ಇಲ್ಲಿದೆ
ವೋಲ್ವೊ ಬಸ್
TV9 Web
| Edited By: |

Updated on: Dec 15, 2021 | 7:37 PM

Share

ಬೆಂಗಳೂರು: ವೋಲ್ವೊ ಬಸ್ ಪ್ರಯಾಣಿಕರಿಗೆ ಬಿಎಂಟಿಸಿ ಸಿಹಿ ಸುದ್ದಿ ನೀಡಿದೆ. ಇನ್ಮುಂದೆ ವೋಲ್ವೊ ಬಸ್ ಟಿಕೆಟ್ ದರ ಶೇ.34ರಷ್ಟು ಕಡಿತ ಆಗಲಿದೆ. ವಜ್ರ ಸಾರಿಗೆಗಳ ಪ್ರಯಾಣ ದರ ಶೇಕಡಾ 34ರಷ್ಟು ಕಡಿತಗೊಳಿಸಿ ಆದೇಶ ನೀಡಲಾಗಿದೆ. ದಿನದ ಪಾಸ್, ಮಾಸಿಕ ಪಾಸ್ ಸೇರಿ ಟಿಕೆಟ್ ದರ ಪರಿಷ್ಕರಣೆ ಮಾಡಲಾಗಿದೆ. ಡಿಸೆಂಬರ್ 17ರಿಂದ ಜಾರಿಗೆ ಬರುವಂತೆ ಬಿಎಂಟಿಸಿಯಿಂದ ಆದೇಶ ನೀಡಲಾಗಿದೆ. ₹120 ಇದ್ದ ದಿನದ ಪಾಸ್ ಇನ್ಮುಂದೆ 100 ರೂ. ಗೆ ಲಭ್ಯ ಆಗಲಿದೆ. ₹2,000 ಇದ್ದ ಮಾಸಿಕ ಪಾಸ್ ದರ ಡಿಸೆಂಬರ್ 17ರಿಂದ ₹1,500 ಆಗಲಿದೆ. 50 ಕಿ.ಮೀ.​ಗೆ ₹90 ಇದ್ದ ಟಿಕೆಟ್​ ದರ 50 ರೂ.ಗೆ ಇಳಿಕೆ ಮಾಡಲಾಗಿದೆ.

ಈಗಾಗಲೇ 09 ಮಾರ್ಗಗಳಲ್ಲಿ 83 ಎಸಿ ಬಸ್​ ಕಾರ್ಯನಿರ್ವಹಿಸುತ್ತಿದೆ. 17/12/21 ರಿಂದ ಹೊಸದಾಗಿ 12 ಮಾರ್ಗಗಳಲ್ಲಿ 90 ಎಸಿ ಬಸ್​ಗಳನ್ನ ಹೆಚ್ಚುವರಿಯಾಗಿ ಬಿಡಲಾಗುವುದು. 120 ರೂ ಇದ್ದ ದಿನದ ಪಾಸು ಇನ್ನು ಮುಂದೆ 100ರೂ ಗೆ ಲಭ್ಯ ಆಗಲಿದೆ. 2000ರೂ ಇದ್ದ ಮಾಸಿಕ ಪಾಸಿನ ದರ ಶುಕ್ರವಾರದಿಂದ 1500ರೂ ಗೆ ಸಿಗಲಿದೆ. ಈ ಹಿಂದೆ 50 ಕಿಲೋಮೀಟರ್​ಗೆ 90ರೂ ಇದ್ದ ಟಿಕೆಟ್​ ದರ ಶುಕ್ರವಾರದಿಂದ 50 ರೂಗೆ ಇಳಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ದೂರದ ಅಂತರ: ಪ್ರಸ್ತುತ ದರ: ಪರಿಷ್ಕೃತ ದರ ಪಟ್ಟಿ ಇಲ್ಲಿದೆ 2.0ಕಿ.ಮಿ: 10.00 – 10.00 4.0ಕಿ.ಮಿ: 15.00 – 15.00 6.0ಕಿ.ಮಿ: 20.00 -20.00 8.0ಕಿ.ಮಿ: 30.00 – 25.00 10.0ಕಿ.ಮಿ: 35.00 – 25.00 12.0ಕಿ.ಮಿ: 35.00 – 30.00 14.0ಕಿ.ಮಿ: 45.00 – 30.00 16.0ಕಿ.ಮಿ: 45.00 – 35.00 18.0ಕಿ.ಮಿ: 50.00 – 35.00 20.0ಕಿ.ಮಿ: 55.00 – 35.00 22.0ಕಿ.ಮಿ: 55.00 – 35.00 24.0ಕಿ.ಮಿ: 60.00 – 40.00 26.0ಕಿ.ಮಿ: 60.00 – 40.00 28.0ಕಿ.ಮಿ: 65.00 – 40.00 30.0ಕಿ.ಮಿ: 65.00 – 40.00 32.0ಕಿ.ಮಿ: 65.00 – 45.00 34.0ಕಿ.ಮಿ: 70.00 – 45.00 36.0ಕಿ.ಮಿ: 70.00 – 45.00 38.0ಕಿ.ಮಿ: 70.00 – 45.00 40.0ಕಿ.ಮಿ: 75.00 – 45.00 42.0ಕಿ.ಮಿ: 75.00 – 50.00 44.0ಕಿ.ಮಿ: 80.00 – 50.00 46.0ಕಿ.ಮಿ: 80.00 – 50.00 48.0ಕಿ.ಮಿ: 90.00 – 50.00 50.0ಕಿ.ಮಿ: 90.00 – 50.00

ಸರ್ಕಾರದಿಂದ ನಗದು ಅನುದಾನದ ಮೊತ್ತ ಪರಿಷ್ಕರಣೆ ಸರ್ಕಾರದಿಂದ ನಗದು ಅನುದಾನದ ಮೊತ್ತ ಪರಿಷ್ಕರಣೆ ಮಾಡಲಾಗಿದೆ. ಶೌರ್ಯ ಪ್ರಶಸ್ತಿ ವಿಜೇತರಿಗೆ ನೀಡುವ ನಗದು ಅನುದಾನ ಹೆಚ್ಚು ಮಾಡಲಾಗಿದೆ.

  • ಪರಮವೀರ ಚಕ್ರ-25 ಲಕ್ಷದಿಂದ 1.5 ಕೋಟಿ ರೂ.
  • ಮಹಾವೀರ ಚಕ್ರ-12 ಲಕ್ಷದಿಂದ 1 ಕೋಟಿ‌ ರೂಪಾಯಿ
  • ಅಶೋಕ ಚಕ್ರ-25 ಲಕ್ಷದಿಂದ 1.5 ಕೋಟಿ ರೂಪಾಯಿ
  • ಕೀರ್ತಿ ಚಕ್ರ-12 ಲಕ್ಷದಿಂದ 1 ಕೋಟಿ ರೂಪಾಯಿ
  • ವೀರ ಚಕ್ರ-8 ಲಕ್ಷದಿಂದ 50 ಲಕ್ಷ ರೂಪಾಯಿ
  • ಶೌರ್ಯ ಚಕ್ರ-8 ಲಕ್ಷದಿಂದ 50 ಲಕ್ಷ ರೂಪಾಯಿ
  • ಸೇನಾ ಮೆಡಲ್‌-2 ಲಕ್ಷದಿಂದ 15 ಲಕ್ಷ ರೂಪಾಯಿ

ಇದನ್ನೂ ಓದಿ: BMTC ಸಿಬ್ಬಂದಿಗೆ ಬಾಕಿ ಇದ್ದ ಶೇ. 50ರಷ್ಟು ವೇತನ ಪಾವತಿಗೆ ಹಣ ಬಿಡುಗಡೆ

ಇದನ್ನೂ ಓದಿ: ಆಂಧ್ರಪ್ರದೇಶದಲ್ಲಿ ಕಾಲುವೆಗೆ ಬಿದ್ದ ಸರ್ಕಾರಿ ಬಸ್​; 9 ಮಂದಿ ಸಾವು, ಹಲವರಿಗೆ ಗಾಯ

Follow Us
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ