AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಡ ಜಂಗಮ ಸಮುದಾಯದಿಂದ ಬೆಂಗಳೂರು ಚಲೋ: ಪೊಲೀಸರಿಗೆ ಎಚ್ಚರಿಕೆ ನೀಡಿದ ಸಾಮಾಜಿಕ ಹೋರಾಟಗಾರ ಬಿ.ಡಿ.ಹಿರೇಮಠ್​

ಬೇಡ ಜಂಗಮರ ಬೆಂಗಳೂರು ಚಲೋಗೆ ತಡೆ ಹಿನ್ನೆಲೆ ಶಿರಾದ ಕಳ್ಳಂಬೆಳ್ಳದಿಂದ ಬೇಡ ಜಂಗಮರು ಪಾದಯಾತ್ರೆ ಹೊರಟಿದ್ದಾರೆ. ಕಳ್ಳಂಬೆಳ್ಳದ ಕಂಟ್ರಿ ಕ್ಲಬ್​ನಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ಕೂಡಿ ಹಾಕಿದ್ದಾರೆ.

ಬೇಡ ಜಂಗಮ ಸಮುದಾಯದಿಂದ ಬೆಂಗಳೂರು ಚಲೋ: ಪೊಲೀಸರಿಗೆ ಎಚ್ಚರಿಕೆ ನೀಡಿದ ಸಾಮಾಜಿಕ ಹೋರಾಟಗಾರ ಬಿ.ಡಿ.ಹಿರೇಮಠ್​
ಸಾಮಾಜಿಕ ಹೋರಾಟಗಾರ ಬಿ.ಡಿ.ಹಿರೇಮಠ್
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Jun 30, 2022 | 12:22 PM

Share

ಬೆಂಗಳೂರು: ಬೇಡ ಜಂಗಮ ಸಮುದಾಯದಿಂದ ಬೆಂಗಳೂರು ಚಲೋ (Bengaluru Chalo) ಹಿನ್ನೆಲೆ ಸಮಾವೇಶಕ್ಕೆ ಬರುತ್ತಿದ್ದ ವಾಹನಗಳನ್ನ  ಪೊಲೀಸರು ತಡೆಯುತ್ತಿದ್ದಾರೆ. ಬೇರೆ ಬೇರೆ ಜಿಲ್ಲೆಗಳಲ್ಲಿ ನಮ್ಮ ಸಮುದಾಯದವರನ್ನು ತಡೆದಿದ್ದಾರೆ. ಅವರನ್ನು ಬಿಡಬೇಕು ಇಲ್ಲದಿದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪೊಲೀಸರಿಗೆ ಸಾಮಾಜಿಕ ಹೋರಾಟಗಾರ ಬಿ.ಡಿ.ಹಿರೇಮಠ್ ಎಚ್ಚರಿಕೆ ನೀಡಿದರು. ರಾಜ್ಯ ಮಟ್ಟದ ಬೇಡ ಜಂಗಮ ಜನಾಂಗದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಸತ್ಯ ಪ್ರತಿಪಾದನ ಸತ್ಯಾಗ್ರಹ ನಡೆಯುತ್ತಿದ್ದು, ಈಗಾಗ್ಲೇ ಪರಿಶಿಷ್ಟ ಪಂಗಡದಲ್ಲಿರು ಜಂಗಮರೆ ಬೇರೆ, ಬೇಡ ಜಂಗಮರೆ ಬೇರೆ ಎನ್ನುವ ವಾದವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಸದ್ಯ ಪರಿಶಿಷ್ಟ ಜಾತಿಯಲ್ಲಿ ಸವಲತ್ತುಗಳನ್ನು ಬೇಡ ಜಂಗಮರು ಪಡೆಯುತ್ತಿದ್ದು, ಕೆಲ ರಾಜಕಾರಣಿಗಳ ಒತ್ತಡದಿಂದ ಬೇಡ ಜಂಗಮರ ದಾಖಲಾತಿಗಳನ್ನು ಪರಿಶಿಷ್ಟ ಜಾತಿಯ ಸವಲತ್ತುಗಳಿಗೆ ಅಧಿಕಾರಿಗಳು ತಿರಸ್ಕರಿಸುತ್ತಿದ್ದರು.

ಇದನ್ನೂ ಓದಿ: Gang Rape: ಕಬ್ಬಿನ ಗದ್ದೆಯಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ; ಅಕ್ಕನಿಂದಲೇ ಮಾಸ್ಟರ್​ ಪ್ಲಾನ್!

ಪರಿಶಿಷ್ಟ ಪಂಗಡದಲ್ಲಿರುವ ವೀರಶೈವ ಲಿಂಗಾಯತ ಉಪ ಜಾತಿಯಾಗಿ ಬೇಡ ಜಂಗಮರು ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಆದರೆ ನಮ್ಮ ಜನಾಂಗವನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಡುವ ಹುನ್ನಾರ ನಡೆದಿದೆ. ಇದನ್ನು ವಿರೋಧಿಸಿ ನಾವು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇವೆ. ಶಾಂತಿಯುತ್ತ ಸತ್ಯಾಗ್ರಹಕ್ಕಾಗಿ ಆಗಮಿಸುತ್ತಿದ್ದ ನಮ್ಮವರನ್ನು ತಡೆಯಲಾಗಿದೆ. ತಕ್ಷಣ ಅವರನ್ನು ಬಿಡುಗಡೆಗೊಳಿಸ ಬೇಕು ಎಂದು ಬಿ.ಡಿ ಹಿರೇಮಠ್ ಸಾಮಾಜಿಕ ಹೋರಾಟಗಾರ ಆಗ್ರಹಿಸಿದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಯಿಂದ ಬಿ.ಡಿ ಹೀರೆಮಠ್​ಗೆ ಕರೆ ಮಾಡಿದ್ದು, ಕಮೀಷನರ್ ಜೊತೆಗೆ ಪೋನ್​ನಲ್ಲಿ ಮಾತಾಡಲ್ಲ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ಕಮೀಷನರ್ ಕಾಲ್ ಮಾಡಿದ್ದಾರೆ ಎಂದು ಪೋನ್ ಕೊಟ್ಟ ಉಪ್ಪಾರ್ ಪೇಟೆ ಇನ್ಸ್ಪೆಕ್ಟರ್ ಎಸ್​.ಹೆಚ್ ವಸಂತ್, ತಡೆದಿರೋ ನಿಮ್ಮ ಎಲ್ಲಾ ವಾಹನಗಳನ್ನು ಬಿಡುತ್ತೇವೆ. ನೀವು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಬೆಂಗಳೂರು ಕಮೀಷನರ್ ಮನವಿ ಮಾಡಿದರು.

ಶಿರಾದ ಕಳ್ಳಂಬೆಳ್ಳದಿಂದ ಬೇಡ ಜಂಗಮರು ಪಾದಯಾತ್ರೆ

ಬೇಡ ಜಂಗಮರ ಬೆಂಗಳೂರು ಚಲೋಗೆ ತಡೆ ಹಿನ್ನೆಲೆ ಶಿರಾದ ಕಳ್ಳಂಬೆಳ್ಳದಿಂದ ಬೇಡ ಜಂಗಮರು ಪಾದಯಾತ್ರೆ ಹೊರಟಿದ್ದಾರೆ. ಕಳ್ಳಂಬೆಳ್ಳದ ಕಂಟ್ರಿ ಕ್ಲಬ್​ನಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ಕೂಡಿ ಹಾಕಿದ್ದು, ಪೊಲೀಸರನ್ನು ಧಿಕ್ಕರಿಸಿ ಪ್ರತಿಭಟನಾಕಾರರು ಪಾದಯಾತ್ರೆ ಹೊರಟಿದ್ದಾರೆ. ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬೇಡ ಜಂಗಮ ಸಮುದಾಯದವರಿಂದ ಪಾದಯಾತ್ರೆ ನಡೆಯುತ್ತಿದೆ.

ಇದನ್ನೂ ಓದಿ: ಬೆಂಗಳೂರು ರಸ್ತೆ ಗುಂಡಿ ಮುಚ್ಚುವಲ್ಲಿ ಬಿಬಿಎಂಪಿ ವಿಫಲ: ಹೈಕೋರ್ಟ್​ಗೆ ಹಾಜರಾದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

Published On - 12:21 pm, Thu, 30 June 22