ಬೆಂಗಳೂರು ಮಡ್​ಪೈಪ್ ರೆಸ್ಟೋರೆಂಟ್ ಅಗ್ನಿ ಅವಘಡಕ್ಕೆ ಕಾರಣವೇನು? ಬೆಂಕಿ ಹೊತ್ತಿಕೊಂಡ 15 ನಿಮಿಷದಲ್ಲಿ ಆಗಿದ್ದೇನು? ಇಲ್ಲಿದೆ ವಿವರ

| Updated By: ವಿವೇಕ ಬಿರಾದಾರ

Updated on: Oct 19, 2023 | 9:20 AM

ಬೆಂಗಳೂರಿನ ಕೊರಮಂಗಲದ ಫೋರಂ ಮಾಲ್ ಮುಂಭಾಗದಲ್ಲಿರುವ ಮಡ್​ಪೈಪ್​ನ ಆರನೇ ಮಹಡಿಯಲ್ಲಿ ಬುಧವಾರ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರನೇ ಮಹಡಿಯಿಂದ ಪ್ರೇಮ್ ಸಿಂಗ್ ಜಿಗಿಯಲು ಕಾರಣವೇನು? ಬೆಂಕಿ ಬಿದ್ದ ತಕ್ಷಣ ಅಲ್ಲಿಂದ ಪರಾರಿಯಾಗಲು ಜಾಗ ಇರಲಿಲ್ಲವೇ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ

ಬೆಂಗಳೂರು ಮಡ್​ಪೈಪ್ ರೆಸ್ಟೋರೆಂಟ್ ಅಗ್ನಿ ಅವಘಡಕ್ಕೆ ಕಾರಣವೇನು? ಬೆಂಕಿ ಹೊತ್ತಿಕೊಂಡ 15 ನಿಮಿಷದಲ್ಲಿ ಆಗಿದ್ದೇನು? ಇಲ್ಲಿದೆ ವಿವರ
ಬೆಂಗಳೂರು ಅಗ್ನಿ ಅವಘಡ
Follow us on

ಬೆಂಗಳೂರು ಅ.​​​19: ಬುಧವಾರ ಕೊರಮಂಗಲದ (Kormangala) ಫೋರಂ ಮಾಲ್ ಮುಂಭಾಗದಲ್ಲಿರುವ ಮಡ್​ಪೈಪ್ ಆರನೇ ಮಹಡಿಯಲ್ಲಿ 8 ರಿಂದ10 ಸಿಲಿಂಡರ್​ಗಳು ಸ್ಫೋಟಗೊಂಡು ಅಗ್ನಿ ಅವಘಡ (Fire Accident) ಸಂಭವಿಸಿತ್ತು. ಈ ವೇಳೆ ಪ್ರಾಣ ಉಳಿಸಿಕೊಳ್ಳಲು ಪ್ರೇಮ್​ ಸಿಂಗ್​ ಎಂಬುವರು ಆರನೇ ಮಹಡಿಯಿಂದ ಕೆಳಗೆ ಜಿಗಿದಿದ್ದು, ಬಲಗೈ ಮೂಳೆ ಮುರಿದಿದೆ. ಅಷ್ಟಕ್ಕೂ ಆರನೇ ಮಹಡಿಯಿಂದ ಪ್ರೇಮ್ ಸಿಂಗ್ ಜಿಗಿಯಲು ಕಾರಣ ಏನು? ಬೆಂಕಿ ಬಿದ್ದ ತಕ್ಷಣ ಅಲ್ಲಿಂದ ಪರಾರಿಯಾಗಲು ಜಾಗ ಇರಲಿಲ್ಲವೇ ? ಆರನೇ ಮಹಡಿಯ ರೆಸ್ಟೋರೆಂಟ್​ನಲ್ಲಿ ಸುರಕ್ಷಿತ ಕ್ರಮಗಳು ಇರಲಿಲ್ಲವೇ ? ಬೆಂಕಿ ಬಿದ್ದ ಬಳಿಕ ನಡೆದ ಆ 15 ನಿಮಿಷದಲ್ಲಿ ಆಗಿದ್ದೇನು? ಎಂಬ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಆರನೇ ಮಹಡಿಯ ಮಡ್​ಪೈಪ್ ರೆಸ್ಟೋರೆಂಟ್​ನ ರೂಫ್ ಟಾಪ್​ನಲ್ಲಿ ರಾತ್ರಿಯ ವೀವ್​ ಅನುಭವಿಸುತ್ತಾ ಊಟ ಮಾಡುವ ರೀತಿ 12 ಟೇಬಲ್​ಗಳನ್ನು ಬುಧವಾರ ಮಧ್ಯಾಹ್ನ ತಯಾರಿಸಲಾಗುತ್ತಿತ್ತು. ಕಳೆದ ಒಂದು ವಾರದಿಂದ ರೂಫ್ ಟಾಪ್​​ನಲ್ಲೇ ಅಡುಗೆ ಮಾಡುತ್ತಾ ಇದ್ದರು. ಹೀಗಾಗಿ ಆರು ಸಿಲಿಂಡರ್​ಗಳನ್ನು ರೂಫ್​ ಟಾಪ್​ನಲ್ಲಿ ಇಡಲಾಗಿತ್ತು. ಇದೇ ರೂಫ್​ಟಾಪ್​ನ ಅಡುಗೆ ಮನೆ ಬಳಿ ಪ್ರೇಮ್ ಸಿಂಗ್ ಇದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾದ ಅಗ್ನಿ ದುರಂತ: ಅಪಾರ್ಟ್ಮೆಂಟ್, ಅಂಗಡಿ, ಹೋಟೆಲ್, ರೆಸ್ಟೋರೆಂಟ್​ಗಳನ್ನು ಪರಿಶೀಲಿಸುವಂತೆ ಸೂಚನೆ

ಮಧ್ಯಾಹ್ನ 12 ಗಂಟೆ ಮಡ್​ಪೈಪ್ ರೆಸ್ಟೋರೆಂಟ್​​ನ ಅಡುಗೆ ಮನೆಯಲ್ಲಿ ನಾಲ್ಕು ಜನ ಸಿಬ್ಬಂದಿಗಳು ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸಿಲಿಂಡರ್ ಸೋರಿಕೆಯಾಗಿದೆ. ಇದನ್ನು ತಿಳಿಯದ ಸಿಬ್ಬಂದಿ ಲೈಟ್ ಹಾಕಿದಾಗ ಬೆಂಕಿ ಹತ್ತಿಕೊಂಡಿದೆ. ಕೂಡಲೆ ಸಿಬ್ಬಂದಿ ಅಲ್ಲಿಂದ ಓಡುತ್ತಾ ಕೆಳಗಡೆ ಬಂದಿದ್ದಾರೆ. ಆದರೆ ರೂಫ್​ ಟಾಪ್​ನ ಕಿಚನ್ ಬಳಿ ಇದ್ದ ಪ್ರೇಮ್ ಸಿಂಗ್​ಗೆ ಕೆಳಗೆ ಬರಲು ಆಗಲಿಲ್ಲ. ಈ ವೇಳೆ ಬೆಂಕಿಯ ಜ್ವಾಲೆ ಇಡೀ ಮಹಡಿಯನ್ನು ಆವರಿಸಿಕೊಂಡಿದೆ.

ಬೆಂಕಿ ರೂಫ್​ ಟಾಪ್​​ಗೂ ಆವರಿಸಿಕೊಂಡು ಸಿಲಿಂಡರ್ ಸ್ಪೋಟಗೊಳ್ಳುತ್ತದೆ ಎಂದು ತಪ್ಪಿಸಿಕೊಳ್ಳಲು ಸುಮಾರು 15 ನಿಮಿಷಗಳ ಕಾಲ ರೂಪ್ ಟಾಪ್​ನ ಎಲ್ಲ ಕಡೆ ಓಡಾಡಿದ್ದಾನೆ. ಆದರೆ ತಪ್ಪಿಸಿಕೊಳ್ಳಲು ಜಾಗ ಸಿಗಲಿಲ್ಲ. ಕೊನೆಗೆ ಭಯದಿಂದ ಪ್ರೇಮ್ ಸಿಂಗ್ ಮೇಲಿಂದ ಜಿಗಿದಿದ್ದಾನೆ. ಸದ್ಯ ಪ್ರೇಮ್​ ಸಿಂಗ್ ನಿಮ್ಹಾನ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸುದ್ದುಗುಂಟೆಪಾಳ್ಯ ಪೊಲೀಸ್‌ ಠಾಣೆಯಲ್ಲಿ ರೆಸ್ಟೋರೆಂಟ್ ಮಾಲೀಕ ಕರಣ್ ಜೈನ್ ವಿರುದ್ಧ ದೂರು ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ