ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋದ ‘ಬ್ಲೂ ಲೈನ್’ ಕಾಮಗಾರಿ ವಿಳಂಬಕ್ಕೆ ಕಾರಣ ಬಿಚ್ಚಿಟ್ಟ ಎಂಜಿನಿಯರ್
ಬೆಂಗಳೂರು ನಮ್ಮ ಮೆಟ್ರೋದ ಬ್ಲೂ ಲೈನ್ (ORR-ಏರ್ಪೋರ್ಟ್) ಕಾಮಗಾರಿ ತೀವ್ರ ವಿಳಂಬವಾಗಿದೆ. ಯುಟಿಲಿಟಿ ಶಿಫ್ಟಿಂಗ್, ಟ್ರಾಫಿಕ್ ನಿರ್ವಹಣೆ, ವಿನ್ಯಾಸ ಬದಲಾವಣೆ, ಹಾಗೂ ಕಾರ್ಮಿಕರ ಕೊರತೆ ಪ್ರಮುಖ ಕಾರಣಗಳು. ವಿಶೇಷವಾಗಿ ನಾಗವಾರ-ಹೆಬ್ಬಾಳ ಭಾಗದಲ್ಲಿ ಪ್ರಗತಿ ನಿಧಾನವಾಗಿದೆ. ನಿಗದಿತ ಸಮಯದಲ್ಲಿ ಯೋಜನೆ ಪೂರ್ಣಗೊಳ್ಳುವುದೇ ಎಂಬ ಪ್ರಶ್ನೆ ಮೂಡಿದ್ದು, BMRCL ಈ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.

ಬೆಂಗಳೂರು, ಜೂ.18: ಬೆಂಗಳೂರಿನ ಬಹುನಿರೀಕ್ಷಿತ ಯೋಜನೆ ನಮ್ಮ ಮೆಟ್ರೋದ ‘ಬ್ಲೂ ಲೈನ್’ (ఔಟರ್ ರಿಂಗ್ ರೋಡ್ – ಏರ್ಪೋರ್ಟ್ ಸಂಪರ್ಕ) ಕಾಮಗಾರಿ ಭಾರೀ ಸಂಕಷ್ಟದಲ್ಲಿ ಸಾಗುತ್ತಿದೆ. ಇದೀಗ ನಿಗದಿತ ಕಾಲಮಿತಿಯೊಳಗೆ ಈ ಪ್ರಾಜೆಕ್ಟ್ ಪೂರ್ಣಗೊಳ್ಳಲಿದೆಯೇ? ಎಂಬ ದೊಡ್ಡ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಈ ಬಗ್ಗೆ ಬೆಂಗಳೂರು ಪೋಸ್ಟ್ (Bengaluru Post) ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಶೇಷವಾಗಿ, ನಾಗವಾರ-ಹೆಬ್ಬಾಳ ನಡುವಿನ ರಸ್ತೆ ಮಾರ್ಗದಲ್ಲಿ ಮೆಟ್ರೋ ಕಾಮಗಾರಿ ಪ್ರಗತಿಯು ನಿಧಾನಗತಿಯಲ್ಲಿ ಸಾಗುತ್ತಿದೆ.
ಇನ್ನು ಈ ಕಾಮಗಾರಿಯ ಬಗ್ಗೆ ಎಂಜಿನಿಯರ್ರೊಬ್ಬರು ಹಲವು ಸವಾಲುಗಳನ್ನು ಚಿಚ್ಚಿಟ್ಟಿದ್ದಾರೆ. ಸ್ಥಳೀಯವಾಗಿ ನಡೆಸಿದ ರಿಯಾಲಿಟಿ ಚೆಕ್ ಹಾಗೂ ಗ್ರೌಂಡ್ ವಿಸಿಟ್ ವೇಳೆ, ಹೆಸರು ಹೇಳಲು ಇಚ್ಛಿಸದ ಸೈಟ್ ಎಂಜಿನಿಯರ್ ಕಾಮಗಾರಿ ವಿಳಂಬಕ್ಕೆ ಕಾರಣವಾಗಿರುವ ಪ್ರಮುಖ ತಾಂತ್ರಿಕ ಮತ್ತು ಆಡಳಿತಾತ್ಮಕ ಸವಾಲುಗಳನ್ನು ಬಿಚ್ಚಿಟ್ಟಿದ್ದಾರೆ.
ಯುಟಿಲಿಟಿ ಶಿಫ್ಟಿಂಗ್ ಸಮಸ್ಯೆ: ಭೂಗತ ನೀರಿನ ಪೈಪ್ಲೈನ್, ವಿದ್ಯುತ್ ಕೇಬಲ್ ಹಾಗೂ ಗ್ಯಾಸ್ ಲೈನ್ಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದೆ.
ಟ್ರಾಫಿಕ್ ಮ್ಯಾನೇಜ್ಮೆಂಟ್: ಕರಾವಳಿ ಹಾಗೂ ಉತ್ತರ ಬೆಂಗಳೂರನ್ನು ಸಂಪರ್ಕಿಸುವ ಹೆಬ್ಬಾಳ ಭಾಗದಲ್ಲಿ ಭಾರಿ ವಾಹನ ದಟ್ಟಣೆ ಇರುವುದರಿಂದ, ಸಂಚಾರ ನಿಯಂತ್ರಣದೊಂದಿಗೆ ಕಾಮಗಾರಿ ನಡೆಸುವುದು ದೊಡ್ಡ ಸವಾಲಾಗಿದೆ.
ವಿನ್ಯಾಸ ಪರಿಷ್ಕರಣೆ ಮತ್ತು ಕಾರ್ಮಿಕರ ಕೊರತೆ: ಮೆಟ್ರೋ ನಿಲ್ದಾಣಗಳ ವಿನ್ಯಾಸದಲ್ಲಿನ ಪದೇ ಪದೇ ಬದಲಾವಣೆಗಳು ಮತ್ತು ಕುಶಲ ಕಾರ್ಮಿಕರ ತೀವ್ರ ಕೊರತೆಯು ಯೋಜನೆಗೆ ಮುಳ್ಳಾಗಿದೆ.
ವಿಶೇಷವಾಗಿ ಕೆಂಪುಪುರ ಭಾಗದಲ್ಲಿ ಮೆಟ್ರೋ ಪ್ರಗತಿ ಸಂಪೂರ್ಣ ಕುಂಠಿತಗೊಂಡಿರುವುದು ಕಣ್ಣಿಗೆ ಕಟ್ಟಿದಂತೆ ಕಾಣಿಸುತ್ತಿದೆ. ಇದರೊಂದಿಗೆ ವೀರಣ್ಣಪಾಳ್ಯ ಮತ್ತು ನಾಗವಾರ ನಡುವಿನ ಕೆಲವು ಆಯ್ದ ಸ್ಥಳಗಳಲ್ಲಿ ಕಾಮಗಾರಿ ಚಟುವಟಿಕೆಗಳು ಭಾರೀ ನಿಧಾನವಾಗಿ ಸಾಗುತ್ತಿದೆ.
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್:
With expectations building around the Blue Line Metro, the big question remains: can the project meet its revised timelines?
The Nagawara–Hebbal stretch continues to raise concerns again.
During our ground visit, engineers at site who did not wish to be quoted pointed to… pic.twitter.com/lC8IvAllKi
— Bengaluru Post (@bengalurupost1) June 17, 2026
ಇನ್ನು ಈ ಕಾರಿಡಾರ್ನಿಂದ ನಗರದ ಬಹುದೊಡ್ಡ ಬದಲಾವಣೆಗಳು ಹಾಗೂ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ. ಹೀಗಿರುವಾಗ, ಬಿಎಂಆರ್ಸಿಎಲ್ ಈ ಸಮಸ್ಯೆಗಳಿಗೆ ಹಾಗೂ ಕಾಮಗಾರಿ ವೇಗಕ್ಕೆ ಹೆಚ್ಚಿನ ಗಮನ ನೀಡುವುದು ಅಗತ್ಯವಾಗಿದೆ. ಅದಕ್ಕಾಗಿ ‘ಪ್ಯಾಕೇಜ್ 1’ ಕಾಮಗಾರಿಯನ್ನು ಸ್ಥಗಿತವಾಗಿರುವುದಕ್ಕೆ ಹಾಗೂ ನಿಧಾನವಾಗುತ್ತಿರುವುದಕ್ಕೆ ಅಸಲಿ ಕಾರಣಗಳೇನು ಎಂಬುದನ್ನು ನೋಡಬೇಕಿದೆ. ಅಲ್ಲದೆ ದಿನಂಪ್ರತಿ ಸಂಚರಿಸುವ ಪ್ರಯಾಣಿಕರಿಗೆ ಕಾಮಗಾರಿ ಮುಕ್ತಾಯದ ಸಮಯದ ಬಗ್ಗೆ ತಿಳಿಸುವ ಅಗತ್ಯ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಐಐಎಂ ಕ್ಯಾಂಪಸ್ನಲ್ಲಿ ಹೊಸ ಕಾಲೇಜು; ಎರಡು ಪದವಿ ಕೋರ್ಸ್ಗಳು ಆಫರ್; ಟಾಟಾ ಟ್ರಸ್ಟ್ಸ್ನಿಂದ ಅನುದಾನ
ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಬ್ಲೂ ಲೈನ್ನ ಎಲ್ಲಾ ಸೆಕ್ಷನ್ಗಳ ಪೈಕಿ ಪ್ಯಾಕೇಜ್ 1 ಅತ್ಯಂತ ಹೆಚ್ಚು ವಿಳಂಬವಾಗಿರುವ ಭಾಗವಾಗಿ ಗೋಚರಿಸುತ್ತಿದೆ. ಆರಂಭದಲ್ಲೇ ಈ ಬೃಹತ್ ಪ್ಯಾಕೇಜ್ ಅನ್ನು ಸಣ್ಣ ಸಣ್ಣ ಗುತ್ತಿಗೆ ಒಪ್ಪಂದಗಳಾಗಿ ವಿಭಜಿಸಿದ್ದರೆ, ಇಂತಹ ದೊಡ್ಡ ತೊಂದರೆಗಳನ್ನು ತಪ್ಪಿಸಬಹುದಿತ್ತಲ್ಲವೇ? ಎಂಬ ಚರ್ಚೆ ಈಗ ತಜ್ಞರ ವಲಯದಲ್ಲಿ ನಡೆಯುತ್ತಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




