AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ 35 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ! ಮೂವರು ಆರೋಪಿಗಳ ಅರೆಸ್ಟ್

1950ರಿಂದ ಮಲೇರಿಯಾಗೆ ಔಷಧವಾಗಿ ಮೆಥಕ್ವಾಲೋನ್ ಡ್ರಗ್ನ ಬಳಸಲಾಗುತ್ತಿತ್ತು. ಮಾದಕ ಲೋಕದ ‘ಐಸ್’ ಎಂದೇ ಖ್ಯಾತಿ ಹೊಂದಿದೆ. ಮೆಥಕ್ವಾಲೋನ್ ಡ್ರಗ್ ಸೇವಿಸಿ 30 ನಿಮಿಷ ಬಳಿಕ ನಶೆ ಏತ್ತದೆ ಎಂಟು ಗಂಟೆಗಳ ಕಾಲ ಮಾದಕ ಲೋಕದಲ್ಲಿ ತೇಲಿಸುತ್ತದೆ.

ಬೆಂಗಳೂರಿನಲ್ಲಿ 35 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ! ಮೂವರು ಆರೋಪಿಗಳ ಅರೆಸ್ಟ್
ವಶಕ್ಕೆ ಪಡೆದ ಡ್ರಗ್ಸ್
TV9 Web
| Edited By: sandhya thejappa|

Updated on:Apr 08, 2022 | 2:47 PM

Share

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಗೋವಿಂದಪುರ ಪೊಲೀಸರು ಸುಮಾರು 35 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ (Drugs) ಜಪ್ತಿ ಮಾಡಿ, ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ರಂಜಿತ್ ಬಾನ್ ಗುಪ್ತಾ, ಅಂಡ್ರೆಸ್ ಪಿಲಿಪೋ, ರಾಜೇಶ್ ಬಂಧನಕ್ಕೊಳಗಾಗಿದ್ದು, ಬಂಧಿತರಿಂದ 70 ಕೆಜಿ ಮೆಥಕ್ವಾಲೋನ್ ಡ್ರಗ್, 6.5 ಕೆಜಿ ಎಮ್ಡಿಎಮ್ 75 ಗ್ರಾಂ ಕೊಕೇನ್, 300 ಗ್ರಾಂ ಟ್ರೊಮೊಡೊಲ್ ಡ್ರಗ್ಸ್ನ ವಶಕ್ಕೆ ಪಡೆದಿದ್ದಾರೆ. ಮೆಥಕ್ವಾಲೋನ್ ಡ್ರಗ್ ಒಂದು ಗ್ರಾಂಗೆ 5 ಸಾವಿರ ರೂಪಾಯಿ. 2016ರ ನಂತರ ಇದೇ ಮೊದಲ ಬಾರಿಗೆ ಈ ಡ್ರಗ್ ಪತ್ತೆಯಾಗಿದೆ.

1950ರಿಂದ ಮಲೇರಿಯಾಗೆ ಔಷಧವಾಗಿ ಮೆಥಕ್ವಾಲೋನ್ ಡ್ರಗ್ನ ಬಳಸಲಾಗುತ್ತಿತ್ತು. ಮಾದಕ ಲೋಕದ ‘ಐಸ್’ ಎಂದೇ ಖ್ಯಾತಿ ಹೊಂದಿದೆ. ಮೆಥಕ್ವಾಲೋನ್ ಡ್ರಗ್ ಸೇವಿಸಿ 30 ನಿಮಿಷ ಬಳಿಕ ನಶೆ ಏತ್ತದೆ ಎಂಟು ಗಂಟೆಗಳ ಕಾಲ ಮಾದಕ ಲೋಕದಲ್ಲಿ ತೇಲಿಸುತ್ತದೆ.

ಗಾಂಜಾ ಜಪ್ತಿ: ಮತ್ತೊಂದು ಪ್ರಕರಣದಲ್ಲಿ ಕಾರ್ಯಾಚರಣೆ ನಡೆಸಿದ ಗೋವಿಂದಪುರ ಪೊಲೀಸರು, ಒಡಿಸ್ಸಾ ಮೂಲದ ಮೂವರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ. ಆರೋಪಿಗಳು ಬೆಂಗಳೂರಿಗೆ ಗಾಂಜಾ ಸರಬರಾಜು ಮಾಡುತ್ತಿದ್ದರು. ಬಳಿಕ ತನ್ನದೇ ಗಿರಾಕಿ ಹುಡುಕಿಕೊಂಡು ಮಾರಾಟ ಮಾಡುತಿದ್ದರು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ 1.45 ಕೋಟಿ ಮೌಲ್ಯದ 290 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಕೊಡಗಿನಲ್ಲಿ ಬಾಲಕ ಅನುಮಾನಾಸ್ಪದ ಸಾವು: ಕೊಡಗು: ಕುಶಾಲನಗರ ತಾಲೂಕಿನ ಕೂಡು ಮಂಗಳೂರು ಗ್ರಾಮದಲ್ಲಿ ಬಾಲಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ನೇಣು‌ಬಿಗಿದ ಸ್ಥಿತಿಯಲ್ಲಿ ಬಾಲಕ ‌ಪತ್ತೆಯಾಗಿದ್ದಾನೆ.  ಮೂಕಾಂಬಿಕ‌ ಪ್ರೌಢಶಾಲಾ ವಿದಾರ್ಥಿ ಮಂಜುನಾಥ್ (15) ಮೃತ ಬಾಲಕ. ಬಾಲಕನ ಅಜ್ಜ, ಅಜ್ಜಿ‌ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಕನನ್ನು ಹೊಡೆದು ಹತ್ಯೆಗೈದಿರುವ ಆರೋಪ ಕೇಳಿಬಂದಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಲಾಗಿದೆ.

ಇದನ್ನೂ ಓದಿ

ಲವ್ ಜಿಹಾದ್ ವಿರುದ್ಧ ಸಮರ; ಌಂಟಿ ಲವ್ ಜಿಹಾದ್ ಟಾಸ್ಕ್ಫೋರ್ಸ್ ಌಕ್ಟಿವ್, ಅನ್ಯಧರ್ಮೀಯರ ಜತೆ ಹಿಂದೂ ಯುವತಿಯರು ಕಂಡರೆ ಮಾಹಿತಿ

ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆ ಖಂಡಿಸಿ ಬೆಂಗಳೂರಿನಲ್ಲಿ ಜೆಡಿಎಸ್​ನಿಂದ ಪ್ರತಿಭಟನೆ! ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಕಿಡಿ

Published On - 2:37 pm, Fri, 8 April 22

Follow Us
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​