AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗೆ ಜಲ ಕಂಟಕ: ಆರ್​​ಆರ್​ ನಗರ ಬಿಡಿಎ ಅಪಾರ್ಟ್ ಮೆಂಟ್​ನಲ್ಲೂ ನೀರಿಲ್ಲ, ಟ್ಯಾಂಕರ್ ಮೊರೆಹೋದ ನಿವಾಸಿಗಳು

ಬೇಸಿಗೆಯ ಬಿಸಿಲತಾಪದ ಜೊತೆಗೆ ಸಿಲಿಕಾನ್ ಸಿಟಿ ಜನರಿಗೆ ಜಲ ಕಂಟಕ ಎದುರಾಗಿದೆ. ಬೆಂಗಳೂರು ನಗರದಲ್ಲಿ ನೀರಿಗೆ ಹಾಹಾಕಾರ ಎದ್ದಿದೆ. ಬೋರ್​ವೆಲ್​ಗಳಲ್ಲಿ ನೀರಿಲ್ಲದೆ ಟ್ಯಾಂಕರ್ ನೀರು ಖರೀದಿಸುತ್ತಿದ್ದಾರೆ. ಟ್ಯಾಂಕರ್ ನೀರಿನ ಬೆಲೆಯಲ್ಲೂ ದುಪ್ಪಟ್ಟಾಗಿದೆ. ಈ ನಡುವೆ, ಆರ್.ಆರ್.ನಗರ ಬಿಡಿಎ ಅಪಾರ್ಟ್​​ಮೆಂಟ್​ನಲ್ಲೂ ಜಲ ದಾಹ ಎದುರಾಗಿದೆ.

ಬೆಂಗಳೂರಿಗೆ ಜಲ ಕಂಟಕ: ಆರ್​​ಆರ್​ ನಗರ ಬಿಡಿಎ ಅಪಾರ್ಟ್ ಮೆಂಟ್​ನಲ್ಲೂ ನೀರಿಲ್ಲ, ಟ್ಯಾಂಕರ್ ಮೊರೆಹೋದ ನಿವಾಸಿಗಳು
ಬೆಂಗಳೂರಿಗೆ ಜಲ ಕಂಟಕ: ಆರ್​​ಆರ್​ ನಗರ ಬಿಡಿಎ ಅಪಾರ್ಟ್ ಮೆಂಟ್​ನಲ್ಲೂ ನೀರಿಲ್ಲ, ಟ್ಯಾಂಕರ್ ಮೊರೆಹೋದ ನಿವಾಸಿಗಳು
TV9 Web
| Edited By: Rakesh Nayak Manchi|

Updated on: Feb 25, 2024 | 10:37 AM

Share

ಬೆಂಗಳೂರು, ಫೆ.25: ಬೇಸಿಗೆಯ ಬಿಸಿಲತಾಪದ ಜೊತೆಗೆ ಸಿಲಿಕಾನ್ ಸಿಟಿ ಜನರಿಗೆ ಜಲ ಕಂಟಕ ಎದುರಾಗಿದೆ. ಬೆಂಗಳೂರು (Bengaluru) ನಗರದಲ್ಲಿ ನೀರಿಗೆ ಹಾಹಾಕಾರ (Water Problem) ಎದ್ದಿದೆ. ಬೋರ್​ವೆಲ್​ಗಳಲ್ಲಿ ನೀರಿಲ್ಲದೆ ಟ್ಯಾಂಕರ್ ನೀರು ಖರೀದಿಸುತ್ತಿದ್ದಾರೆ. ಟ್ಯಾಂಕರ್ ನೀರಿನ ಬೆಲೆಯಲ್ಲೂ ದುಪ್ಪಟ್ಟಾಗಿದೆ. ಈ ನಡುವೆ, ಆರ್.ಆರ್.ನಗರ (RR Nagar) ಬಿಡಿಎ ಅಪಾರ್ಟ್​​ಮೆಂಟ್​ನಲ್ಲೂ ಜಲ ದಾಹ ಎದುರಾಗಿದೆ.

ಆರ್.ಆರ್.ನಗರ ಬಿಡಿಎ ಅಪಾರ್ಟ್ ಮೆಂಟ್​ನಲ್ಲಿ ಜಲ ದಾಹ ಶುರುವಾಗಿದ್ದು, 192 ಮನೆಗಳ ನಿವಾಸಿಗಳು ನೀರಿಲ್ಲದೇ ಹೈರಾಣಾಗಿದ್ದಾರೆ. 10 ವರ್ಷಗಳಿಂದ ಅಪಾರ್ಟ್​ಮೆಂಟ್ ದಾಹ ತಣಿಸುತ್ತಿದ್ದ ಏಕೈಕ ಬೋರ್​ವೆಲ್​ನಲ್ಲಿ ನೀರು ಬತ್ತಿದೆ. ವಿಧಿ ಇಲ್ಲದೆ ನಿವಾಸಿಗಳು ಟ್ಯಾಂಕರ್ ನೀರು ಮೊರೆಹೋಗಿದ್ದಾರೆ.

ಇದನ್ನೂ ಓದಿ: ನೀರಿನ ಹಾಹಾಕಾರ, ಖಾಸಗಿ ಟ್ಯಾಂಕರ್​ಗಳ ದಂಧೆಗೆ ಕಡಿವಾಣ ಹಾಕಬೇಕು- ಸಂಸದ ತೇಜಸ್ವಿ ಸೂರ್ಯ

ಮನೆ ಬಾಡಿಗೆ ಜೊತೆ ನೀರಿನ ಹಣ ಹೆಚ್ಚುವರಿ ಹೊರೆ

ಬೇಸಿಗೆಗೂ ಮೊದಲೇ ಕಳೆದ 3 ತಿಂಗಳಿನಿಂದ ನಗರದ ಕೆಲವೆಡೆ ನೀರಿನ ಬರ ಎದುರಾಗಿದ್ದು, ಅಂತಹ ಪ್ರದೇಶದಲ್ಲಿನ ನಿವಾಸಿಗಳು ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಟ್ಯಾಂಕರ್ ಮಾಲೀಕರು ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಇದರಿಂದಾಗಿ ಬಾಡಿಗೆ ಜೊತೆಗೆ ನೀರಿಗೂ ಹಣ ಕಟ್ಟಿ ಜನರು ಹೈರಾಣಾಗಿದ್ದಾರೆ.

ಅಪಾರ್ಟ್​ಮೆಂಟ್ ತೊರೆದ ಜನರು

ಪ್ರತಿ ತಿಂಗಳು 3 ರಿಂದ 4 ಲಕ್ಷ ಹಣ ನೀರಿಗಾಗಿ ಕಟ್ಟಬೇಕು ಎಂದು ನೀರು ಕೊಡದ ಬಿಡಿಎ, ಜಲಮಂಡಳಿ ವಿರುದ್ಧ ನಿವಾಸಿಗಳು ಕಿಡಿಕಾರಿದ್ದಾರೆ. ಅಲ್ಲದೆ, ನೀರಿಲ್ಲ ಎಂದು ಒಂದಷ್ಟು ಬಾಡಿಗೆದಾರರು ಫ್ಲಾಟ್ ಖಾಲಿ ಮಾಡಿದ್ದಾರೆ. ನಮಗೆ ಏನು ಬೇಡ ನೀರು ಕೊಡಿ ಅಂತ ಜನರು ಒತ್ತಾಯಿಸುತ್ತಿದ್ದಾರೆ.

ವರದಿ; ಶಾಂತಮೂರ್ತಿ, ಟಿವಿ9 ಬೆಂಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!