ಶಾಸಕ ಬಿಪಿ ಹರೀಶ್ ಮೇಲೆ ಮೊಟ್ಟೆ ಎಸೆತ: ಕಾಂಗ್ರೆಸ್ಸಿಗರೇ ಮೊಟ್ಟೆ ಎಸೆದಿದ್ದಾರೆ ಎಂದ ಬಿಜೆಪಿ; ಕಮಿಷನರ್​​ಗೆ ದೂರು

ಕೆಪಿಸಿಸಿ ಕಚೇರಿ ಬಳಿ ಬಿಜೆಪಿ ಶಾಸಕ ಹರೀಶ್​ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಕಮಿಷನರ್ ಸೀಮಂತ್ ​ಕುಮಾರ್​ ಸಿಂಗ್​ಗೆ ಬಿಜೆಪಿ ದೂರು ನೀಡಿದೆ. ಶಾಸಕ ಬಿ.ಪಿ. ಹರೀಶ್, ಅಶ್ವತ್ಥ್ ನಾರಾಯಣ್ ಸೇರಿ ಹಲವರ ಮೇಲೆ ಮೊಟ್ಟೆ, ಕಬ್ಬಿಣದ ರಾಡ್‌ನಿಂದ ದಾಳಿ ಮಾಡಲಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಶಾಸಕ ಬಿಪಿ ಹರೀಶ್ ಮೇಲೆ ಮೊಟ್ಟೆ ಎಸೆತ: ಕಾಂಗ್ರೆಸ್ಸಿಗರೇ ಮೊಟ್ಟೆ ಎಸೆದಿದ್ದಾರೆ ಎಂದ ಬಿಜೆಪಿ; ಕಮಿಷನರ್​​ಗೆ ದೂರು
ಶಾಸಕ ಹರೀಶ್​ ಮೇಲೆ ಮೊಟ್ಟೆ ಎಸೆತ
Image Credit source: tv9 kannada
Edited By:

Updated on: Jul 22, 2026 | 5:00 PM

ಮುಖ್ಯಾಂಶಗಳು

  • ಕೆಪಿಸಿಸಿ ಕಚೇರಿ ಬಳಿ ಬಿಜೆಪಿ ಶಾಸಕ ಹರೀಶ್​ ಮೇಲೆ ಮೊಟ್ಟೆ ಎಸೆತ
  • ಬೆಂಗಳೂರು ಕಮಿಷನರ್ ಸೀಮಂತ್ ​ಕುಮಾರ್​ ಸಿಂಗ್​ಗೆ BJP ದೂರು
  • ದೂರಿನಲ್ಲಿ ಗಂಭೀರ ಆರೋಪ ಮಾಡಿರುವ ಬಿಜೆಪಿ

ಬೆಂಗಳೂರು, ಜುಲೈ 22: ಬೆಂಗಳೂರಿನ ಕಂಟೋನ್ಮೆಂಟ್ ಹಾಗೂ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ರಾಜ್ಯ ಕಚೇರಿಗೆ ಮುತ್ತಿಗೆ ಯತ್ನ ವೇಳೆ ಬಿಜೆಪಿ ಶಾಸಕ ಹರೀಶ್​ (BJP MLA BP Harish) ಮೇಲೆ ಮೊಟ್ಟೆ ಎಸೆದಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಕಮಿಷನರ್ ಸೀಮಂತ್ ​ಕುಮಾರ್​ ಸಿಂಗ್​ಗೆ ಬಿಜೆಪಿ ದೂರು ನೀಡಿದೆ. ಅಷ್ಟೇ ಅಲ್ಲದೆ ಶಾಸಕ ಬಿ.ಪಿ.ಹರೀಶ್ ಮೇಲೆ ಕಾಂಗ್ರೆಸ್ಸಿಗರು (Congress) ಮೊಟ್ಟೆ ಎಸೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬಿಜೆಪಿ ದೂರಿನಲ್ಲೇನಿದೆ?

‘ಇಂದು ಬಿಜೆಪಿ ಕರ್ನಾಟಕ ಬೆಂಗಳೂರಿನ ಕಾಂಗ್ರೆಸ್​​ ಪಕ್ಷದ ಕಚೇರಿ ಮುತ್ತಿಗೆ ಕರೆನೀಡಿತ್ತು. ಈ ಸಂದರ್ಭದಲ್ಲಿ
ಶಾಸಕ ಬಿ.ಪಿ.ಹರೀಶ್​​ ಮೇಲೆ ಕಾಂಗ್ರೆಸ್ಸಿಗರು ಮೊಟ್ಟೆ ಎಸೆದಿದ್ದಾರೆ. ಮಲ್ಲೇಶ್ವರಂ ಶಾಸಕ ಅಶ್ವತ್ಥ್ ನಾರಾಯಣ ಮೇಲೂ ಮೊಟ್ಟೆ ಎಸೆದಿದ್ದಾರೆ. ಬಿಜೆಪಿ ಕಾರ್ಯಕರ್ತ ಪ್ರಶಾಂತ್​ ಮತ್ತು ಜಯನಗರ ಶಾಸಕ ಸಿ.ಕೆ.ರಾಮಮೂರ್ತಿಗೆ ಕಬ್ಬಿಣದ ರಾಡ್​ನಿಂದ ಹೊಡೆದಿದ್ದಾರೆ. ಅಷ್ಟೇ ಅಲ್ಲದೆ ನಮ್ಮನ್ನು ವಶಕ್ಕೆ ಪಡೆದು ಕರೆದೊಯ್ತಿದ್ದ ಬಸ್ ಮೇಲೂ ದಾಳಿ ಮಾಡಿದ್ದಾರೆ’ ಎಂದು ಗಂಭೀರ ಆರೋಪ ಮಾಡಲಾಗಿದೆ.

ಇದನ್ನೂ ಓದಿ: ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಮೊಟ್ಟೆ ಎಸೆದು ಕಾಂಗ್ರೆಸ್​​​ ಕಾರ್ಯಕರ್ತರ ಆಕ್ರೋಶ

‘ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಹರೀಶ್​ ಸೇರಿದಂತೆ ಮೆರವಣಿಗೆಯಲ್ಲಿ ತೆರಳುತ್ತಿದ್ದ ಬಿಜೆಪಿ ಮುಖಂಡರ ಮೇಲೆ ಹಲ್ಲೆ ಆಗಿದೆ. ಹಲ್ಲೆ ಮಾಡಿದವರನ್ನು ತಕ್ಷಣ ಬಂಧಿಸಬೇಕೆಂದು ಬೆಂಗಳೂರು ಕಮಿಷನರ್ ಸೀಮಂತ್ ​ಕುಮಾರ್​ ಸಿಂಗ್​ಗೆ’ ಬಿಜೆಪಿ ದೂರಿನಲ್ಲಿ ಉಲ್ಲೇಖಿಸಿದೆ.

ಶಾಸಕ ಬಿಪಿ ಹರೀಶ್​​ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಶಾಸಕ ಬಿಪಿ ಹರೀಶ್​​ ಮಾತನಾಡಿದ್ದು, ‘ಇಂದು ಆರ್ ಆಶೋಕ್ ಅವರ ಜೊತೆಗೆ ಹೋಗುತ್ತಿದ್ದ ಸಮಯದಲ್ಲಿ ನಮ್ಮ ಮೇಲೆ ನಾಲ್ಕರಿಂದ ಐದು ಮೊಟ್ಟೆ ಹೊಡೆದಿದ್ದಾರೆ. ಅಲ್ಲಿ ಪಾರ್ಟಿ ಕಚೇರಿ ಮುಂದೆ ಕಾರು ನಿಲ್ಲಿಸಿ ನನ್ನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು. ನಂತರ ನನ್ನನ್ನು ಹೈಗ್ರೌಂಡ್ಸ್ ಠಾಣೆಗೆ ಕರೆದುಕೊಂಡು ಬರುತ್ತಿದ್ದರು. ಈ ವೇಳೆ ನನ್ನನ್ನು ರಕ್ಷಣೆ ಮಾಡಿ ಕರೆದುಕೊಂಡು ಬಂದರು’ ಎಂದು ಹೇಳಿದ್ದಾರೆ.

ಕೆಪಿಸಿಸಿ ಕಚೇರಿ ಮುಂದೆ ಬಸ್ ನಿಲ್ಲಿಸಿದ ಪೊಲೀಸರಿಗೆ ಪ್ರಶಸ್ತಿ ಕೊಡಬೇಕು: ಆರ್​. ಅಶೋಕ್

ಈ ಬಗ್ಗೆ ವಿಧಾನಸಭೆ ವಿಪಕ್ಷ ನಾಯಕ ಆರ್​. ಅಶೋಕ್ ಪ್ರತಿಕ್ರಿಯಿಸಿದ್ದು, ‘ಕರ್ನಾಟಕ ರಾಜ್ಯದಲ್ಲಿ ಇಂದು ಕರಾಳ ದಿನ. ಇಂದು ಕೊತ್ವಾಲ್ ಆಡಳಿತವನ್ನು ನಾವು ನೋಡಿದ್ದೇವೆ. ದೇಶ ವಿರೋಧಗಳಿಗೆ ಬೆಂಬಲ ತಪ್ಪು ಎಂಬುದು ನಮ್ಮ ಹೋರಾಟ. ನಾವು ಶಾಂತಿಯುವಾಗಿ ಪ್ರತಿಭಟನೆ ಮಾಡಿದ್ದೇವೆ. ಅರೆಸ್ಟ್ ಮಾಡಿದ ಮೇಲೆ ನಾವು ಪೊಲೀಸ್ ಕಸ್ಟಡಿಯಲ್ಲಿರುತ್ತೇವೆ. ಚಾಲಕನಿಗೆ ಕೆಪಿಸಿಸಿ ಕಚೇರಿ ದಾರಿಯಲ್ಲಿ ಹೋಗಬೇಡ ಎಂದಿದ್ದೆ. ಕಾಂಗ್ರೆಸ್ ಕಚೇರಿ ಮುಂದೆ ಹೋಗಲು ಬುದ್ಧಿ ಇರುವವರು ಬಿಡ್ತಾರಾ? ಸಿಎಂ ಡಿಕೆ ಶಿವಕುಮಾರ್​ ಆದೇಶದ ಮೇಲೆ ಕಾಂಗ್ರೆಸ್ ಕಚೇರಿ ಮುಂದೆ ಹೋಗಿದ್ದಾರೆ. ಇದ್ದಕ್ಕಿದ್ದಂತೆ ಬಸ್ ಕೆಪಿಸಿಸಿ ಕಚೇರಿ ಮುಂದೆ ಬಸ್​ ನಿಂತು ಹೋಗಿತ್ತು. ಇದ್ದಕ್ಕಿದ್ದಂತೆ ಮೊಟ್ಟೆ, ಲಾಂಗ್, ದೊಣ್ಣೆ ಕಚೇರಿಯಿಂದ ಹೇಗೆ ಬಂತು. ಪೊಲೀಸರಿಗೆ ದೆಹಲಿಯಿಂದಲೇ ಸಿಎಂ ಫೋನ್ ಮಾಡಿ ಹೇಳಿದ್ದಾರೆ. ಕೆಪಿಸಿಸಿ ಕಚೇರಿ ಮುಂದೆ ಬಸ್ ನಿಲ್ಲಿಸಿದ ಪೊಲೀಸರಿಗೆ ಪ್ರಶಸ್ತಿ ಕೊಡಬೇಕು’ ಎಂದು ವಾಗ್ದಾಳಿ ಮಾಡಿದ್ದಾರೆ.

BP Harish on Egg Throwing Incident: ಮೊಟ್ಟೆ ಎಸತ ಘಟನೆ ಬಗ್ಗೆ ಇಂಚಿಂಚೂ ಬಿಚ್ಚಿಟ್ಟ BJP ಶಾಸಕ BP ಹರೀಶ್|#TV9D

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:56 pm, Wed, 22 July 26

Loading...
Unable to load recommendations.
Follow Us