AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BL Santhosh: ಮಳೆ ಆಕ್ರೋಶ ತಣಿಸಲು ಯತ್ನ; ಬೆಂಗಳೂರಿನ ನಾಗರಿಕ ಸಮಿತಿಗಳೊಂದಿಗೆ ಬಿಜೆಪಿ ನಾಯಕ ಬಿಎಲ್ ಸಂತೋಷ್ ಸಭೆ

ಬೆಂಗಳೂರು ನಗರದ ಮೂಲಸೌಕರ್ಯ ಹಾಗೂ ಇತರ ಸಮಸ್ಯೆಗಳ ಬಗ್ಗೆ ಚರ್ಚೆ ಸಂತೋಷ್ ಚರ್ಚೆ ನಡೆಸಲಿದ್ದಾರೆ.

BL Santhosh: ಮಳೆ ಆಕ್ರೋಶ ತಣಿಸಲು ಯತ್ನ; ಬೆಂಗಳೂರಿನ ನಾಗರಿಕ ಸಮಿತಿಗಳೊಂದಿಗೆ ಬಿಜೆಪಿ ನಾಯಕ ಬಿಎಲ್ ಸಂತೋಷ್ ಸಭೆ
ಬಿಜೆಪಿ ನಾಯಕ ಬಿ.ಎಲ್.ಸಂತೋಷ್
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Sep 25, 2022 | 11:18 AM

Share

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ (Bengaluru Rains) ರಸ್ತೆಗಳ ಮೇಲೆ ನೀರು ಹರಿದಿದ್ದು ದೇಶದಲ್ಲಿ ದೊಡ್ಡ ಸುದ್ದಿಯಾಗಿತ್ತು. ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ತೀವ್ರ ಸಂಕಷ್ಟ ಅನುಭವಿಸುವಂತೆ ಆಗಿತ್ತು. ಉದ್ಯಮಿ ಮತ್ತು ಪ್ರಭಾವಿ ಹೂಡಿಕೆದಾರ ಟಿ.ಎ.ಮೋಹನ್​ದಾಸ್ ಪೈ ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. ಬಿಜೆಪಿಯನ್ನು ಮೊದಲಿನಿಂದಲೂ ಬೆಂಬಲಿಸುತ್ತಾ ಬಂದಿದ್ದ ಹಲವರು ಸರ್ಕಾರದ ಆಡಳಿತ ವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರದ ದಿನಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಯಿತಾದರೂ, ಕೇವಲ ಬಡವರ ಶೆಡ್​, ಮನೆಗಳನ್ನು ಒಡೆಯಲಾಯಿತು. ಶ್ರೀಮಂತರ, ಪ್ರಭಾವಿಗಳ ವಿಲ್ಲಾ-ಅಪಾರ್ಟ್​ಮೆಂಟ್​ಗಳಿಗೆ ಕೈ ಹಾಕಲು ಬಿಬಿಎಂಪಿ ಜೆಸಿಬಿಗಳಿಗೆ ಧೈರ್ಯವೇ ಬರಲಿಲ್ಲ ಎಂದು ಮತ್ತೊಂದು ಜನರು ಮತ್ತೊಮ್ಮೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಚುನಾವಣೆ ಹತ್ತಿರದಲ್ಲಿರುವಾಗ ಆದ ಈ ಬೆಳವಣಿಗೆಯ ತೀವ್ರತೆ ಪಕ್ಷದ ಗಮನಕ್ಕೂ ಬಂದಿದೆ. ಜನರ ನೋವು ಅರಿಯಲು, ಸಮಾಲೋಚನೆ ನಡೆಸಲು ಬಿಜೆಪಿ ರಾಷ್ಟ್ರೀಯ ಘಟಕದ ಪ್ರಭಾವಿ ನಾಯಕರಾದ ಬಿ.ಎಲ್.ಸಂತೋಷ್ ಇಂದು ನಗರಕ್ಕೆ ಬಂದಿದ್ದಾರೆ. ನಗರದ ಹಲವು ‘ನಾಗರಿಕ ಕಲ್ಯಾಣ ಸಮಿತಿ’ಗಳ (Residential Welfare Association) ಪ್ರತಿನಿಧಿಗಳೊಂದಿಗೆ ಸಂತೋಷ್ ಸಭೆ ನಡೆಸಿ ಚರ್ಚೆ ನಡೆಸಲಿದ್ದಾರೆ.

ಬೆಂಗಳೂರು ನಗರದ ಮೂಲಸೌಕರ್ಯ ಹಾಗೂ ಇತರ ಸಮಸ್ಯೆಗಳ ಬಗ್ಗೆ ಚರ್ಚೆ ಸಂತೋಷ್ ಚರ್ಚೆ ನಡೆಸಲಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸಭೆ ನಡೆಯಲಿದ್ದು, ಬೆಂಗಳೂರಿನ ಬಹುತೇಕ ಎಲ್ಲ ಪ್ರದೇಶಗಳ ನೂರಕ್ಕೂ ಹೆಚ್ಚು ಬಡಾವಣೆಗಳ ನಾಗರಿಕ ಕಲ್ಯಾಣ ಸಮಿತಿಗಳಿಗೆ ಆಹ್ವಾನ ನೀಡಲಾಗಿದೆ. 2019ರ ಬಳಿಕ ಇದೇ ಮೊದಲ ಬಾರಿಗೆ ನಾಗರಿಕ ಕಲ್ಯಾಣ ಸಮಿತಿಗಳ ಸಭೆ ಕರೆಯಲಾಗಿದೆ.

ಮಾಧ್ಯಮಗಳನ್ನು ಸಭೆಗೆ ಆಹ್ವಾನಿಸಿಲ್ಲ. ಇತ್ತೀಚೆಗಷ್ಟೇ ನಗರದ ಬೈಕರ್ಸ್​ ಸಭೆಯನ್ನು ಸಂತೋಷ್ ನಡೆಸಿದ್ದರು. ಸಮಾಜ ವಿವಿಧ ಸ್ತರದ ಜನಸಮೂಹದ ಜೊತೆಗೆ ಸಂತೋಷ್ ನಿಯಮಿತವಾಗಿ ಚರ್ಚೆ ನಡೆಸಲು ಮುಂದಾಗಿದ್ದಾರೆ.

Published On - 11:18 am, Sun, 25 September 22