AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು; ಧೂಳಿನಿಂದಾಗಿ‌‌‌ ಮಕ್ಕಳಲ್ಲಿ‌ ಹೆಚ್ಚಾಗುತ್ತಿವೆ ಶ್ವಾಸಕೋಶದ ಸಮಸ್ಯೆ

ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು ವಾಯು ಮಾಲಿನ್ಯ ಕೂಡ ಹೆಚ್ಚಾಗಿದೆ. ಇದರಿಂದ ಮಕ್ಕಳಲ್ಲಿ ಶ್ವಾಸಕೋಶದ ಸಮಸ್ಯೆ ಹೆಚ್ಚಾಗುತ್ತಿದೆ. ಮಕ್ಕಳು ಮನೆಯಿಂದ ಹೋಗುವಾಗ ಮಾಸ್ಕ್ ಹಾಕಿ ಕಳಿಸಿ. ಮಕ್ಕಳ ಆರೋಗ್ಯ ಹದಗೆಟ್ಟಾಗಾ ಅದನ್ನ ಉಡಾಫೆ ಮಾಡ್ಬೇಡಿ ಅಂತ ಡಾಕ್ಟರ್​ಗಳು ಸಲಹೆ ನೀಡ್ತಿದ್ದಾರೆ.

ಬೆಂಗಳೂರು; ಧೂಳಿನಿಂದಾಗಿ‌‌‌ ಮಕ್ಕಳಲ್ಲಿ‌ ಹೆಚ್ಚಾಗುತ್ತಿವೆ ಶ್ವಾಸಕೋಶದ ಸಮಸ್ಯೆ
ಡಾಕ್ಟರ್ ರಮೇಶ್. ಮಹವೀರ್ ಜೈನ್ ಆಸ್ಪತ್ರೆ
Poornima Agali Nagaraj
| Updated By: ಆಯೇಷಾ ಬಾನು|

Updated on: Mar 02, 2024 | 1:53 PM

Share

ಬೆಂಗಳೂರು, ಮಾರ್ಚ್​.02: ರಾಜಧಾನಿಯಲ್ಲಿ ದಿನೇ ದಿನೇ ಧೂಳು, ಹೊಗೆ ಪ್ರಮಾಣ ಜಾಸ್ತಿಯಾಗುತ್ತಿದೆ. ಬೆಂಗಳೂರು, ಉದ್ಯಾನ ನಗರಿ ಎಂಬ ಪಟ್ಟವನ್ನು ನಿಧಾನಕ್ಕೆ ಕಳೆದುಕೊಳ್ಳುತ್ತಿದೆ. ಇದೀಗ ಗಾರ್ಡನ್ ಸಿಟಿ (Garden City), ಗ್ರೀನ್ ಸಿಟಿ ಬದಲು ಬೆಂಗಳೂರಿಗೆ ಪಲ್ಯೂಷನ್ ಸಿಟಿ (Pollution City) ಎಂಬ ಕಳಂಕ ಅಂಟಿಕೊಂಡಿದ್ದು, ಈ ವಾಯು ಮಾಲಿನ್ಯದಿಂದಾಗಿ ಮಕ್ಕಳಲ್ಲಿ ಲಂಗ್ಸ್ ಸಮಸ್ಯೆ (Lung Infection) ಹೆಚ್ಚಳವಾಗಿದೆ.

ಮಾಲಿನ್ಯ,‌ ಮಾಲಿನ್ಯ, ಎಲ್ಲಿ ನೋಡಿದರೂ ವಾಯು ಮಾಲಿನ್ಯ. ಅದ್ಯಾಕೋ ಏನೋ ಬೆಂಗಳೂರಿಗೆ ಗಾರ್ಡನ್ ಸಿಟಿ ಅಂತ ಕರೀತಾ ಇದ್ರು. ಆದರೆ ಈಗ ವಾಯು ಮಾಲಿನ್ಯದ ಸಿಟಿ, ಆರೋಗ್ಯಕ್ಕೆ ಹಾನಿಕಾರಕವಾದ ಸಿಟಿ ಅನ್ನುವ ಪರಿಸ್ಥಿತಿಗೆ ಬಂದಿದೆ. ಸಿಲಿಕಾನ್ ಸಿಟಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿರುವುದರಿಂದಾಗಿ ಇದೀಗ ರಾಜ್ಯ ರಾಜಧಾನಿ ಬೆಂಗಳೂರು ಮತ್ತೊಂದು ದೆಹಲಿ ಆಗುವತ್ತ ಹೊರಟಿದೆ. ಬೆಂಗಳೂರಿಗರು ಬೆಂಗಳೂರಿನಲ್ಲಿ ಎಷ್ಟು ಸೇಫ್ ಆಗಿದ್ದಾರೆ ಅನ್ನೋದೇ ಪ್ರಶ್ನೆಯಾಗಿದೆ.

ಇದನ್ನೂ ಓದಿ: ಲಾಲ್ ಬಾಗ್​ನಲ್ಲಿ ಪಶ್ಚಿಮ ಘಟ್ಟದ ಕಾಡು ನಿರ್ಮಾಣ; ಆರು ಎಕರೆ ಜಾಗದಲ್ಲಿ 300ಕ್ಕೂ ಹೆಚ್ಚು ಬಗೆಯ ಗಿಡಗಳು

ಹೊಗೆಯಿಂದಾಗಿ ವಾಯು ಮಾಲಿನ್ಯ ಹೆಚ್ಚಾಗುತ್ತಿರುವುದರಿಂದ ಅತಿ ಹೆಚ್ಚು ಅನಾರೋಗ್ಯಕ್ಕೆ ಜನ ತುತ್ತಾಗುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಶ್ವಾಸಕೋಶದ ಕಾಯಿಲೆಗೆ ಬೆಂಗಳೂರು ಮಂದಿ ಅತಿ ಹೆಚ್ಚಾಗಿ ತುತ್ತಾಗುತ್ತಿದ್ದಾರೆ. ಸಾರಜನಕ, ಸಲ್ಫರ್ ಡೈ ಆಕ್ಸೈಡ್ ಮತ್ತು ಕಾರ್ಬನ್ ಮೋನಾಕ್ಸೈಡ್‌ನಂತಹ ಅಪಾಯಕಾರಿ ಅನಿಲಗಳಿಂದ ಶ್ವಾಸಕೋಶಗಳ ಸಂಬಂಧಿ ಕಾಯಿಲೆ ಹರಡುತ್ತಿವೆ. ಗಾಳಿಯ ಮಾನದಂಡಕ್ಕಿಂತ 5 ಪಟ್ಟು ಕೆಟ್ಟ ಗಾಳಿ ಸೇವನೆಯಾಗ್ತಿದೆ. ಹೃದಯ ಸಂಬಂಧಿ‌ ಕಾಯಿಲೆಯವರಿಗೆ ಮತ್ತಷ್ಟು ತೊಂದರೆಯಾಗುತ್ತಿದೆ. ಮಕ್ಕಳಿಗೆ ಉಸಿರಾಟದ ಸಮಸ್ಯೆ, ಚರ್ಮ ಖಾಯಿಲೆ‌, ಮುಖದ ಕಾಂತಿ ಕಳೆದುಕೊಳ್ಳುವುದು ಹೀಗೆ ಬೆಂಗಳೂರು ‌ಮಂದಿ‌ಗೆ ಹಲವು ಬಗೆಯ ಸಮಸ್ಯೆಗಳು ಕಾಡ್ತಿದ್ದು,‌‌ ಇತ್ತೀಚಿಗೆ ಮಕ್ಕಳಲ್ಲಿ ಶ್ವಾಸಕೋಶದ ಸಮಸ್ಯೆಗಳು ಹೆಚ್ಚಾಗಿವೆ. ಮಕ್ಕಳು ಮನೆಯಿಂದ ಹೋಗುವಾಗ ಮಾಸ್ಕ್ ಹಾಕಿ ಕಳಿಸಿ. ಮಕ್ಕಳ ಆರೋಗ್ಯ ಹದಗೆಟ್ಟಾಗಾ ಅದನ್ನ ಉಡಾಫೆ ಮಾಡ್ಬೇಡಿ ಅಂತ ಡಾಕ್ಟರ್​ಗಳು ಸಲಹೆ ನೀಡ್ತಿದ್ದಾರೆ.

ಒಟ್ಟಾರೆ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಗಾಳಿಯಲ್ಲಿ ಕಾರ್ಬನ್ ಡೈಆಕ್ಸೈಡ್ ಹೆಚ್ಚಾಗುತ್ತಿದೆ. ಈ ಹೊಗೆಯಿಂದ ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದು, ಸರಿಯಾಗಿ ವಾಹನಗಳ ನಿರ್ವಹಣೆ ಇಲ್ಲದೆ ಇರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಇದಕ್ಕೆ ಆದಷ್ಟು ಬೇಗ ಪರಿಹಾರವಾದ್ರೆ ಮಾತ್ರ ನಮ್ಮ ಸಿಟಿ ಉದ್ಯಾನ ನಗರಿಯಾಗಿಯೇ ಮುಂದುವರೆಯುತ್ತೆ.‌ ಇಲ್ಲದಿದ್ರೆ ಪಲ್ಯೂಷನ್ ಸಿಟಿಯಂತ ಕುಖ್ಯಾತಿ ಪಡೆಯುವುದರಲ್ಲಿ ಡೌಟೇ ಇಲ್ಲ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!