AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಬಿಎಂಪಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು; ಒಂದೇ ಕಾಮಗಾರಿಗೆ ಎರಡೆರಡು ಬಾರಿ ಹಣ ಪಾವತಿ

ಬಿಬಿಎಂಪಿ ಅಂದ್ರೆ ಭ್ರಷ್ಟರ ಕೂಪ.. ಭ್ರಷ್ಟಾಚಾರಿಗಳ ಅಡ್ಡಾ.. ಹಳೇ ಕಲ್ಲು, ಹೊಸ ಬಿಲ್ಲು ಅಂತೆಲ್ಲಾ ಆರೋಪಗಳನ್ನ ಹೊತ್ತಿಕೊಂಡಿದೆ. ಬಿಬಿಎಂಪಿಯನ್ನ ಇಲ್ಲಿರೋ ಭ್ರಷ್ಟ ಅಧಿಕಾರಿಗಳೇ ಗುಡಿಸಿ ಗುಂಡಾಂತರ ಮಾಡ್ತಿದ್ದಾರೆ.

ಬಿಬಿಎಂಪಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು; ಒಂದೇ ಕಾಮಗಾರಿಗೆ ಎರಡೆರಡು ಬಾರಿ ಹಣ ಪಾವತಿ
ಬಿಬಿಎಂಪಿ
TV9 Web
| Updated By: ಆಯೇಷಾ ಬಾನು|

Updated on: Apr 06, 2022 | 6:57 AM

Share

ಬೆಂಗಳೂರು: ಬಿಬಿಎಂಪಿಯಲ್ಲಿ(BBMP) ಒಂದು ಕೆಲ್ಸಕ್ಕೆ ಎರಡ್ ಎರಡು ಬಾರಿ ಹಣ ಕೊಡ್ತಾರೆ. ಒಮ್ಮೆ ಆಫ್ ಲೈನ್ನಲ್ಲಿ ಕೊಟ್ರೆ ಮತ್ತೊಮ್ಮೆ ಆನ್ಲೈನ್ನಲ್ಲಿ ಪೇಮೆಂಟ್ ಕೊಡ್ತಾರೆ. ಗುತ್ತಿಗೆದಾರರ ಜೊತೆಗೂಡಿ ಬಿಬಿಎಂಪಿಯ ಹಣಕಾಸು ವಿಭಾಗದ ಅಧಿಕಾರಿಗಳೇ ಬಿಬಿಎಂಪಿಯನ್ನ ಗುಡಿಸಿಗುಂಡಾಂತರ ಮಾಡ್ತಿದ್ದಾರೆ.

ಬಿಬಿಎಂಪಿ ಅಂದ್ರೆ ಭ್ರಷ್ಟರ ಕೂಪ.. ಭ್ರಷ್ಟಾಚಾರಿಗಳ ಅಡ್ಡಾ.. ಹಳೇ ಕಲ್ಲು, ಹೊಸ ಬಿಲ್ಲು ಅಂತೆಲ್ಲಾ ಆರೋಪಗಳನ್ನ ಹೊತ್ತಿಕೊಂಡಿದೆ. ಬಿಬಿಎಂಪಿಯನ್ನ ಇಲ್ಲಿರೋ ಭ್ರಷ್ಟ ಅಧಿಕಾರಿಗಳೇ ಗುಡಿಸಿ ಗುಂಡಾಂತರ ಮಾಡ್ತಿದ್ದಾರೆ. ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಎಷ್ಟರ ಮಟ್ಟಿಗೆ ಬೇರು ಬಿಟ್ಟಿದೆ ಅನ್ನೋದಕ್ಕೆ ಇದೇ ಸಾಕ್ಷಿ. ಬಿಬಿಎಂಪಿಯ ಹಣಕಾಸು ವಿಭಾಗದ ಅಧಿಕಾರಿಗಳು ಒಂದೇ ಕಾಮಗಾರಿಗೆ ಎರಡೆರಡು ಬಾರಿ ಹಣ ಪಾವತಿ ಮಾಡಿದ್ದಾರೆ. ಗುತ್ತಿಗೆದಾರರ ಅಕೌಂಟ್ಗೆ ಒಮ್ಮೆ ಆಫ್ ಲೈನ್ ಅಂತಾ ಒಮ್ಮೆ ಆನ್ಲೈನ್ನಲ್ಲಿ ಅಂತಾ ನೂರಾರು ಕೋಟಿ ಹಣ ಪಾವತಿ ಮಾಡಿ ಬೃಹತ್ ಭ್ರಷ್ಟಾಚಾರವೆಸಗಿದ್ದಾರೆ.

ಬಿಬಿಎಂಪಿ ಹಣಕಾಸು ವಿಭಾಗದಿಂದಲೇ ಬೃಹತ್ ಭ್ರಷ್ಟಾಚಾರ? 2019 ರಲ್ಲಿ ಕಾಮಾಕ್ಷಿಪಾಳ್ಯದಲ್ಲಿ ರಾಜಕಾಲುವೆ ಕಾಮಗಾರಿ ಮಾಡಿದ್ದ ಗುತ್ತಿಗೆದಾರನೊಬ್ಬ ಬಿಲ್ ಪಾವತಿಗೆ ಬಿಬಿಎಂಪಿಗೆ 2020 ರಲ್ಲಿ ಅರ್ಜಿ ಸಲ್ಲಿಸಿದ್ದ. ಹಿರಿತನ ಇಲ್ಲದ ಕಾರಣ ಬಿಲ್ ಪಾವತಿ ಆಗಿರಲಿಲ್ಲ. ನಂತರ ಹಣಕಾಸು ವಿಭಾಗದ ಅಧಿಕಾರಿಗಳ ನೇರವಿನೊಂದಿಗೆ ಆಫ್ ಲೈನ್ನಲ್ಲಿ ಒಂದು ಕೋಟಿ 62 ಲಕ್ಷದ 70 ಸಾವಿರದ 500 ರೂಪಾಯಿಯನ್ನ 2020 ಮಾರ್ಚ್ ನಲ್ಲಿ ಪಡೆದುಕೊಂಡಿದ್ದ. ಹಣಕಾಸು ವಿಭಾಗದಿಂದ ಗುತ್ತಿಗೆದಾರ ಮಾಡಿದ ಕೆಲ್ಸಕ್ಕೆ ಪೇಮೆಂಟ್ ಮಾಡಲಾಗಿತ್ತು. ಆದ್ರೆ, ಇದೆಲ್ಲಾ ಆಗಿ ಎರಡು ವರ್ಷದ ನಂತರ ಅಂದ್ರೆ, ಕಳೆದ ತಿಂಗಳು ಇದೇ ಗುತ್ತಿಗೆದಾರನಿಗೆ ಮತ್ತೆ ಒಂದು ಕೋಟಿ 62 ಲಕ್ಷದ 70 ಸಾವಿರದ 500 ರೂಪಾಯಿಯನ್ನ ಪೇಮೆಂಟ್ ಮಾಡಿದ್ದಾರಂತೆ.

ಒಂದು ಕಾಮಗಾರಿಗೆ ಒಂದೇ ಬಾರಿ ಹಣ ಪಾವತಿ ಮಾಡಬೇಕು. ಆದ್ರೆ ಬಿಬಿಎಂಪಿ ಹಣಕಾಸು ವಿಭಾಗದ ಅಧಿಕಾರಿಗಳು ಒಂದೇ ಕಾಮಗಾರಿಗೆ ಎರಡು ಎರಡು ಬಾರಿ ಪೇಮೆಂಟ್ ಮಾಡ್ತಿದ್ದಾರೆ. ಈ ಬಗ್ಗೆ ಬಿಬಿಎಂಪಿ ಮುಖ್ಯಲೆಕ್ಕಾಧಿಕಾರಿ ರಾಜುರನ್ನ ಪ್ರಶ್ನಿಸಿದ್ರೆ, ಇದು ಬ್ಯಾಂಕ್ ಪ್ರಾಬ್ಲಂ ಅಂತಾ ಕುಂಟು ನೆಪ ಹೇಳ್ತಿದ್ದಾರೆ.

ಅಧಿಕಾರಿಗಳೇ ಇಂಥಾ ಬೇಜವಾಬ್ದಾರಿ ಉತ್ತರಗಳಿಂದ ಬಿಬಿಎಂಪಿಯ ದುಡ್ಡು ಪೋಲ್ ಆಗ್ತಿದೆ. ಗುತ್ತಿಗೆದಾರರಿಗೆ ಒಂದೇ ಕಾಮಗಾರಿಗೆ ಎರಡು ಬಾರಿ ಹಣ ಪಾವತಿ ಮಾಡ್ತಿರೋದು ದೊಡ್ಡ ಭ್ರಷ್ಟಾಚಾರವನ್ನ ಖುದ್ದು ಹಣಕಾಸು ವಿಭಾಗದ ಅಧಿಕಾರಿಗಳೇ ಲೂಟಿಕೋರರಾಗಿದ್ದು ದುರಂತವೇ ಸರಿ.

ವರದಿ: ಮುತ್ತಪ್ಪ ಲಮಾಣಿ, ಟಿವಿ9 ಬೆಂಗಳೂರು

ಇದನ್ನೂ ಓದಿ; ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ವಲಯವಾರು ಕ್ರಿಯಾ ಯೋಜನೆ ರೂಪಿಸಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ

ಡೆಲಿವರಿ ಬಾಯ್​ಗಳೆಂಬ ಹರಕೆಯ ಕುರಿಗಳು: ರವಿ ಅರೇಹಳ್ಳಿ ಬರಹ

ಹಾಲು ಹಾಕುವ ಮುನ್ನ ಹಾಲಿನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ
ಹಾಲು ಹಾಕುವ ಮುನ್ನ ಹಾಲಿನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ