AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಮೇಶ್​ ಜಾರಕಿಹೊಳಿ ಸಿಡಿ ಕೇಸ್: ಕಬ್ಬನ್​ ಪಾರ್ಕ್ ಪೊಲೀಸರಿಗೆ ದಿನೇಶ್​ ಕಲ್ಲಹಳ್ಳಿ ಕೊಟ್ಟ ಹೇಳಿಕೆಯಲ್ಲಿ ಜೊಳ್ಳೇ ಜಾಸ್ತಿ

ರಮೇಶ್​ ಜಾರಕಿಹೊಳಿ ಅವರ ಸೀಡಿ ಕೇಸಿನಲ್ಲಿ ಫಿರ್ಯಾದುದಾರರಾದ ದಿನೇಶ್​ ಕಲ್ಲಹಳ್ಳಿ ಅವರು ನಿನ್ನೆ ಕಬ್ಬನ್​ ಪಾರ್ಕ್ ಪೊಲೀಸರ ಮುಂದೆ ಸಾಮ್ಯತೆ ಇಲ್ಲದ ಹೇಳಿಕೆ ಕೊಟ್ಟದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಕೇಸು ಹೊಸ ತಿರುವು ಪಡೆಯಬಹುದಾಗಿದೆ.

ರಮೇಶ್​ ಜಾರಕಿಹೊಳಿ ಸಿಡಿ ಕೇಸ್: ಕಬ್ಬನ್​ ಪಾರ್ಕ್ ಪೊಲೀಸರಿಗೆ ದಿನೇಶ್​ ಕಲ್ಲಹಳ್ಳಿ ಕೊಟ್ಟ ಹೇಳಿಕೆಯಲ್ಲಿ ಜೊಳ್ಳೇ ಜಾಸ್ತಿ
ದಿನೇಶ್ ಕಲ್ಲಹಳ್ಳಿ
ಡಾ. ಭಾಸ್ಕರ ಹೆಗಡೆ
| Edited By: |

Updated on: Mar 06, 2021 | 2:03 PM

Share

ರಮೇಶ್ ಜಾರಕಿಹೊಳಿ ಹಗರಣದಲ್ಲಿ, ಆ ಸಿಡಿಯನ್ನು ಪೊಲೀಸ್​ರಿಗೆ ಕೊಟ್ಟು ಓರ್ವ ಮಹಿಳೆಗೆ ಅನ್ಯಾಯವಾಗಿದೆ, ಹಾಗಾಗಿ ಅವಳಿಗೆ ನ್ಯಾಯ ಕೊಡಿಸಿ ಎಂದು ಹೇಳುತ್ತ ರಾಜ್ಯ ರಾಜಕೀಯದಲ್ಲಿ ಚಂಡಮಾರುತ ಹುಟ್ಟು ಹಾಕಿರುವ ಆರ್​ಟಿಐ ಕಾರ್ಯಕರ್ತ ದಿನೇಶ್​ ಕಲ್ಲಹಳ್ಳಿ ಈಗ ಸ್ವಲ್ಪ ವಿಚಲಿತರಾಗಿದ್ದಾರೆ, ಹಾಗಾಗಿ ಗಂಟೆಗೊಂದು ಗಳಿಗೆಗೊಂದು ಹೇಳಿಕೆ ಕೊಡುತ್ತಿದ್ದ ಹಾಗಿದೆ ಎಂದು ಗೃಹ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕೊಟ್ಟ ಫಿರ್ಯಾದಿಗೆ ಸಂಬಂಧಿಸಿದಂತೆ ಕಬ್ಬನ್​ ಪಾರ್ಕ ಪೊಲೀಸ್​ ಸ್ಟೇಶನ್​ಗೆ ಬಂದು ಹೇಳಿಕೆ ನೀಡಬೇಕು ಎಂಬ ನೊಟೀಸ್​ಗೆ ಮೊದಲ ದಿನ ಕವಡೆ ಕಿಮ್ಮತ್ತು ಕೊಡದಿದ್ದ ದಿನೇಶ್​ ಕಲ್ಲಹಳ್ಳಿ ನಿನ್ನೆ ಶುಕ್ರವಾರ ಹಾಜರಾಗಿ ಬರೋಬ್ಬರಿ ನಾಲ್ಕು ತಾಸು ಪೊಲೀಸರ ಪ್ರಶ್ನೆ ಎದುರಿಸಿದ್ದಾರೆ. ಅವರ ಹೇಳಿಕೆ ಏನಿತ್ತು ಎಂಬುದರ ಕುರಿತು ಈಗ ಸ್ವಲ್ಪ ಸ್ವಲ್ಪ ಮಾಹಿತಿ ಹೊರಬರುತ್ತಿದೆ. ಆ ಪ್ರಕಾರ ದಿನೇಶ್ ಉತ್ತರದಲ್ಲಿ ತುಂಬಾ ಮಾಹಿತಿ ಕೊರತೆ ಅಥವಾ ಈ ಕುರಿತಾಗಿ ಸಾಮ್ಯತೆ ಇಲ್ಲದ (inconsistency) ಹೇಳಿಕೆಗಳನ್ನು ಕೊಟ್ಟಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ದಿನೇಶ್ ಕಲ್ಲಹಳ್ಳಿ ಏನು ಹೇಳಿದರು? ದಿನೇಶ್ ಕಲ್ಲಹಳ್ಳಿ ಮೊದಲು ಪೊಲೀಸರಿಗೆ ಹೇಳಿದ್ದು ರಾಮಕೃಷ್ಣ ಲಾಡ್ಜಿನಲ್ಲಿ ಈ ಸಿಡಿಯನ್ನಯ ತನಗೆ ಕೊಟ್ಟರು ಎಂದು ಹೇಳಿದ್ದರು. ಅದೇ ಜಾಡನ್ನು ಹಿಡಿದು ಹೊರಟ ಪೊಲೀಸರು ಆ ಲಾಡ್ಜಿನಲ್ಲಿ ತಡಕಾಡಿ, ಸಿಸಿಟಿವಿ ನೋಡಿದರು. ಕೊನೆಗೆ ಅವರಿಗೆ ಕಲ್ಲಹಳ್ಳಿ ಹೇಳಿಕೆ ಸುಳ್ಳಿರಬಹುದು ಎಂಬ ಅನುಮಾನ ಬರುತ್ತಿದೆ. ನಿನ್ನೆ ಈ ಕುರಿತು ದಿನೇಶ್​ ಅವರನ್ನು ಪೊಲೀಸರು ಕೇಳಿದಾಗ ಅವರಲ್ಲಿ ಸರಿಯಾದ ಉತ್ತರ ಇರಲಿಲ್ಲ. ಆಥವಾ ಆ ಲಾಡ್ಜಿನಲ್ಲಿ ಯಾವ ದಿನ, ಯಾವ ವೇಳೆಗೆ ಭೇಟಿ ಆದಿರಿ ಎಂಬ ಪ್ರಶ್ನೆಗೆ ಕೂಡ ಸರಿಯಾದ ಉತ್ತರ ಬರಲಿಲ್ಲ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಯಾವಾಗ ಸಿಡಿ ಕೊಟ್ಟಿದ್ದು? ಪೊಲೀಸರ ಈ ಪ್ರಶ್ನೆ ಕೂಡ ಸರಿಯಾದ ಉತ್ತರವನ್ನು ಕಲ್ಲಹಳ್ಳಿ ಅವರಿಂದ ಹೊರ ಬರುವಂತೆ ಮಾಡಲಿಲ್ಲ. ಸಾಂದರ್ಭಿಕ ಸಾಕ್ಷ್ಯಾಧಾರಿತ ಹೇಳಿಕೆ (circumstantial evidence) ಕೊಟ್ಟು ತಮ್ಮ ಹೇಳಿಕೆಯನ್ನು ಪುಷ್ಠಿಕರಿಸುತ್ತಾರೆ ಎಂದು ಪೊಲೀಸರು ನಂಬಿದ್ದರು. ಆದರೆ ದಿನೇಶ್ ಕಲ್ಲಹಳ್ಳಿ ಈ ಕುರಿತು ಮತ್ತೆ ಹಾರಿಕೆ ಉತ್ತರ ಕೊಟ್ಟ ಹಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಕಲ್ಲಹಳ್ಳಿ ಮೊದಮೊದಲು ಮೂರ್ನಾಲ್ಕು ದಿನಗಳ ಹಿಂದೆ ತನಗೆ ಈ ಸೀಡಿ ಸಿಕ್ಕಿತ್ತು ಎಂದು ಹೇಳುತ್ತಿದ್ದರು. ಈಗ ಇರುವ ಅಂದಾಜಿನ ಪ್ರಕಾರ, ಈ ಸೀಡಿಯನ್ನು ಸುಮಾರು ಒಂದು ತಿಂಗಳ ಹಿಂದೆಯೇ ದಿನೇಶ್​ ಕಲ್ಲಹಳ್ಳಿ ಅವರಿಗೆ ನೀಡಲಾಗಿದೆ. ಹಾಗಾದರೆ, ಈ ಒಂದು ತಿಂಗಳು ಕಲ್ಲಹಳ್ಳಿ ಈ ಸೀಡಿಯನ್ನು ಇಟ್ಟುಕೊಂಡು ಏನು ಮಾಡಿದರು? ಒಂದು ಅಂದಾಜಿನ ಪ್ರಕಾರ, ಕಲ್ಲಹಳ್ಳಿ ತಮ್ಮ ವಕೀಲರ ಜೊತೆ ಪರಾಮರ್ಶೆ ಮಾಡಿ ಆ ನಂತರ ಪೊಲೀಸರಿಗೆ ಕೊಡಲು ನಿರ್ಧರಿಸಿದ್ದಾರೆ. ಪೊಲೀಸರು ಕೇಳುವ ಪ್ರಶ್ನೆಗಳು ಅಥವಾ ಈ ಸೀಡಿ ಕೊಟ್ಟ ನಂತರ ಯಾವ ಬೆಳವಣಿಗೆಗಳು ಆಗಬಹುದು? ಅದಕ್ಕೆ ತಾನು ಹೇಗೆ ತಯಾರಾಗಿರಬೇಕು ಎಂಬುದನ್ನು ಪರಾಮರ್ಶಿಸಿದ ನಂತರ ಪೊಲೀಸರ ಬಳಿ ಬರಲು ನಿರ್ಧರಿಸಿರಬಹುದು ಎಂಬ ನಿರ್ಣಯಕ್ಕೆ ಪೊಲೀಸರು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಾರು ಕೊಟ್ಟರು? ದಿನೇಶ್​ ಕಲ್ಲಹಳ್ಳಿ ಮಾಧ್ಯಮದ ಮುಂದೆ ಹೇಳಿದ್ದು: ಆ ಹೆಣ್ಣುಮಗಳಿಗೆ ಜೀವಕ್ಕೆ ತುಂಬಾ ಭಯ ಇದೆ. ಹಾಗಾಗಿ ಅವಳು ಈಗ ಹೊರಗೆ ಬರಲು ಸಾಧ್ಯವಿಲ್ಲ ಪೊಲೀಸ್​ ಸ್ಟೇಶನ್ನಗೆ ಕೂಡ ಬರಲು ಸಾಧ್ಯವಿಲ್ಲ. ಆದರೆ ಅಸಲಿನಲ್ಲಿ ನಡೆದಿದ್ದೇ ಬೇರೆ ಅಂತ ಕಾಣುತ್ತಿದೆ. ನಿನ್ನೆ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಕಲ್ಲಹಳ್ಳಿ ಕೊಟ್ಟ ಉತ್ತರಕ್ಕೂ, ಮೊದಲ ದಿನ ಫಿರ್ಯಾದು ಕೊಡಲು ಬಂದಾಗ ಕೊಟ್ಟ ಹೇಳಿಕೆಯಲ್ಲಿ ತುಂಬಾ ವ್ಯತ್ಯಾಸ ಇತ್ತು ಎಂಬುದನ್ನು ಪೊಲೀಸರು ಗಮನಿಸಿದ್ದಾರೆ. ಮೊದ ಮೊದಲು ಕುಟುಂಬದ ಸದಸ್ಯರು ಆ ಸೀಡಿ ಕೊಟ್ಟದ್ದಾರೆ ಎಂದು ಹೇಳತೊಡಗಿದ್ದ ಕಲ್ಲಹಳ್ಳಿ ಕೊನೆಗೆ ಮೂರನೇ ವ್ಯಕ್ತಿಯೊಬ್ಬರು ಅಂದರೆ ತನಗೆ ಬೇಕಾದ ಒಬ್ಬ ಗೆಳೆಯರು ಆ ಸೀಡಿ ಕೊಟ್ಟದ್ದಾರೆ ಎಂದು ಪೊಲೀಸರಿಗೆ ಹೇಳಿದ್ದಾರೆ. ಈ ಹೇಳಿಕೆಯನ್ನು ನೋಡಿದರೆ ಅವರದ್ದು, ಸಾಂದರ್ಭಿಕ ಸಾಕ್ಷ್ಯಾಧಾರಿತ ಹೇಳಿಕೆ ಆಗಿರಲಿಲ್ಲ ಎಂಬುದು ಸದ್ಯಕ್ಕೆ ಗೊತ್ತಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:

‘ಇನ್ನೂ ವಿಡಿಯೋಗಳು ಇವೆ..ಸೂಕ್ತ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತೇನೆ’

ವಿಚಾರ ಪ್ರಸ್ತಾಪಿಸಿದವರೇ ಅದನ್ನ ಕ್ಲೋಸ್ ಮಾಡಬೇಕು: ಶಾಸಕ ಬಸನಗೌಡ ಯತ್ನಾಳ್

Follow Us
bhaskar hegde
bhaskar hegde

ಟಿವಿ9 ಡಿಜಿಟಲ್​ ಸಂಪಾದಕ. 28 ವರ್ಷಗಳಿಂದ ಇಂಗ್ಲಿಷ್ ಮುದ್ರಣ ಮಾಧ್ಯಮ​ ಮತ್ತು ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಸುದ್ದಿ, ದೀರ್ಘ ಲೇಖನ, ನುಡಿಚಿತ್ರ, ವಿಶ್ಲೇಷಣೆ, ಅಂಕಣ ಸ್ಕೂಪ್​ ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಎರಡು ಕಥಾ ಸಂಕಲನಗಳ ಪ್ರಕಟಣೆ. ಸಾರ್ವಜನಿಕ ನೀತಿ ಮತ್ತು ಆಡಳಿತಕ್ಕೆ ಸಂಬಂಧಿಸಿದ ವಿಷಯದಲ್ಲಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್​ಡಿ ಪದವಿ. ಹಿಂದೂಸ್ತಾನಿ ಸಂಗೀತ, ಕ್ರಿಕೆಟ್​, ತತ್ವಶಾಸ್ತ್ರ ಮತ್ತು ಕಾನೂನಿನ ವಿಷಯದ ತೀವ್ರ ಆಸಕ್ತಿ.

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ