AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣ ಕೊಡಬೇಕಾಗುತ್ತೆಂದು ಎಲ್ಲೆಂದರಲ್ಲಿ ತ್ಯಾಜ್ಯ ಡಂಪ್ ಮಾಡುತ್ತಿರುವ ಕಾರ್ಖಾನೆಗಳು, ಸ್ಥಳೀಯರಿಗೆ ಸಂಕಷ್ಟ

ಮನೆ ಕಸವನ್ನು ಸಂಗ್ರಹಿಸಿ ಡಂಪ್ ಯಾಡ್​ಗಳಿಗೆ ಕಳಿಸುವಂತೆ ಕಾರ್ಖಾನೆಗಳ ಕಸವನ್ನು ಸಂಗ್ರಹಿಸಿ ಕಳಿಸಲಾಗುವುದಿಲ್ಲ. ಫ್ಯಾಕ್ಟರಿಗಳು ಹಣ ನೀಡಿ ಕಸವನ್ನು ವಿಲೇವಾರಿ ಮಾಡಬೇಕು. ಹೀಗಾಗಿ ಬಿಬಿಎಂಪಿಗೆ ಹಣವೇನು ನೀಡಬೇಕೆಂದು ಕೆಲ ಕಾರ್ಖಾನೆಗಳು ರಾತ್ರಿ ವೇಳೆ ಜನರಿಲ್ಲದನ್ನು ನೋಡಿ ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದಾರೆ. ಇದು ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ.

ಹಣ ಕೊಡಬೇಕಾಗುತ್ತೆಂದು ಎಲ್ಲೆಂದರಲ್ಲಿ ತ್ಯಾಜ್ಯ ಡಂಪ್ ಮಾಡುತ್ತಿರುವ ಕಾರ್ಖಾನೆಗಳು, ಸ್ಥಳೀಯರಿಗೆ ಸಂಕಷ್ಟ
ಹಣ ಕೊಡಬೇಕಾಗುತ್ತೆಂದು ಕಾರ್ಖಾನೆಗಳಿಂದ ಎಲ್ಲೆಂದರಲ್ಲಿ ತ್ಯಾಜ್ಯ ಡಂಪ್
Vinayak Hanamant Gurav
| Edited By: |

Updated on: May 22, 2024 | 7:30 AM

Share

ಬೆಂಗಳೂರು, ಮೇ.22: ಮನೆಗಳಿಂದ ಸಂಗ್ರಹವಾಗುವ ಕಸವನ್ನು ಬಿಬಿಎಂಪಿ (BBMP) ಗಾರ್ಬೆಜ್ ವಾಹನದಲ್ಲಿ ತೆಗೆದುಕೊಂಡು ಹೋಗಲಾಗುತ್ತೆ. ಆದರೆ ವಾಣಿಜ್ಯ ಬಳಕೆಯ ಗಾರ್ಬೆಜನ್ನು (Garbage) ಆ ವಾಹನಗಳಲ್ಲಿ ತೆಗೆದುಕೊಂಡು ಹೋಗುವಂತಿಲ್ಲ. ಹೀಗಾಗಿ ದುಡ್ಡು ಕೊಟ್ಟು ನೇರ ಡಂಪ್ ಯಾರ್ಡ್ಗೆ (Dumping Yard) ಸಾಗಿಸಬೇಕು. ಆದರೆ ಹಣ ಉಳಿಸುವುದಕ್ಕಾಗಿ ಕೆಲವರು ಕಾರ್ಖಾನೆ, ಮೆಕಾನಿಕ್​ ಶಾಪ್​ನ  ಅಪಾಯಕಾರಿ ತ್ಯಾಜ್ಯ ಕಸವನ್ನ ಲೈಟ್​ ಕಂಬದ ಹತ್ತಿರ ಹಾಕಿ ಹೋಗುತ್ತಿದ್ದಾರೆ. ಇದರಿಂದ ಜನ ಸಾಮಾನ್ಯರಿಗೆ ಸಮಸ್ಯೆಗಳಾಗುತ್ತಿವೆ.

ಗೂಡ್ಸ್ ವಾಹನಗಳಲ್ಲಿ ತ್ಯಾಜ್ಯ ತುಂಬಿಕೊಂಡು ಬಂದು ಯಾರೂ ಇಲ್ಲದ ಸಮಯ ನೋಡಿ ರಾತ್ರೋ ರಾತ್ರಿ ರಸ್ತೆ ಬದಿಗೆ ಕಸ ಸುರಿದು ಹೋಗಲಾಗುತ್ತಿದೆ. ಮೂವರು ಖದೀಮರು ಗೂಡ್ಸ್ ವಾಹನದಲ್ಲಿ ಕಸ ತುಂಬಿಕೊಂಡು ಬಂದು ರಿವರ್ಸ್ ಹಾಕಿ ಕಾರ್ಖಾನೆ, ಮೆಕಾನಿಕ್​ ಶಾಪ್​ನ ಅಪಾಯಕಾರಿ ತ್ಯಾಜ್ಯಕಸವನ್ನ ಲೈಟ್​ ಕಂಬದ ಹತ್ತಿರ ರಾಶಿ ಹಾಕಿ ಎಸ್ಕೇಪ್ ಆಗಿದ್ದಾರೆ. ಬೆಂಗಳೂರು ಮೈಸೂರು ರಸ್ತೆಯಲ್ಲಿ ಹಾಗೂ ಬಾಪುಜಿ ನಗರದಲ್ಲಿ ರಾತ್ರೋ ರಾತ್ರಿ ಕಸ ತಂದು ಹಾಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನೂ ಮನೆ ಕಸ ಬಿಬಿಎಂಪಿ ಗಾರ್ಬೆಜ್ ವಾಹನದಲ್ಲಿ ತೆಗೆದುಕೊಂಡು ಹೋಗ್ತಾರೆ. ಆದರೆ ವಾಣಿಜ್ಯ ಬಳಕೆಯ ಗಾರ್ಬೆಜ್ ನ್ನು ಇದರಲ್ಲಿ ತೆಗೆದುಕೊಂಡು ಹೋಗುವಂತಿಲ್ಲ. ದುಡ್ಡು ಕೊಟ್ಟು ನೇರ ಡಂಪ್ ಯಾರ್ಡ್ಗೆ ಸಾಗಿಸಬೇಕು. ಇದರ ದುಡ್ಡು ಉಳಿಸಲು ಕಾರ್ಖಾನೆಯವರು ಹೀಗೆ ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ಡೇಂಜರ್ ಗಾರ್ಬಜ್ ರಸ್ತೆ ಬದಿಗೆ ಬಿಸಾಡುತ್ತಿದ್ದಾರೆ. ಅಲ್ಲದೇ ಕೆಲವೊಬ್ಬರು ರಾಜಕಾಲುವೆಗಳಿಗೆ ಸುರಿತಾರೆ.‌ ಇನ್ನೂ ಸುಮಾರು ದಿನಗಳಿಂದ ಮಳೆಯಾಗದ ಪರಿಣಾಮ ವಾಣಿಜ್ಯ ಉದ್ಯಮ ಹಾಗೂ ಕಾರ್ಖಾನೆಯರು ಸಂಗ್ರಹಿಸಿ ಇಡುವ ತ್ಯಾಜ್ಯ ಮಳೆ ನೀರಿನ ಮೂಲಕ ಚರಂಡಿಗಳಿಗೆ ಸೇರುವುದಲ್ಲದೇ ಅಧಿಕ ಮಳೆಯಾದಾಗ ನೀರು ಸರಾಗವಾಗಿ ಹೋಗದೆ ತೊಂದರೆ ಆಗುತ್ತೆ ಎಂದು ಬೆಂಗಳೂರು ನಿವಾಸಿಗಳು ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಕೆಲವೇ ದಿನಗಳ ಮಳೆಗೆ ಬೆಂಗಳೂರಿನಲ್ಲಿ 800 ವಿದ್ಯುತ್ ಕಂಬ ಧರೆಗೆ! ವಾಲಿವೆ ಹಲವಾರು ಕಂಬ

ತ್ಯಾಜ್ಯ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದರು ಕಾರ್ಖಾನೆಯವರು ರಬ್ಬರ್, ಪ್ಲಾಸ್ಟಿಕ್, ರಾಸಾಯನಿಕ ತ್ಯಾಜ್ಯ ಕಸದ ರಾಶಿಯನ್ನು 15 ದಿನಗಳ ವರೆಗೆ ಸಂಗ್ರಹಿಸಿ ಇಟ್ಟು ಅದನ್ನ ರಾತ್ರೋ ರಾತ್ರಿ ಚರಂಡಿಗಳಿಗೆ ಇಲ್ಲ ಪ್ರಮುಖ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಹಾಕುವುದಲ್ಲದೇ ಬೆಂಕಿ ಇಡುತ್ತಾರೆ. ಇನ್ನೂ ನಿನ್ನೆ ಹಳೆ ಗುಡ್ಡದಹಳ್ಳಿಯಲ್ಲಿ ಈ ರೀತಿ ಗಾರ್ಬೆಜ್ ಡಂಪ್ ಮಾಡುವಾಗ ಬಿಬಿಎಂಪಿ ಮಾರ್ಷಲ್ ಕಣ್ಣಿಗೆ ಬಿದ್ದಿದ್ದು, ಸಿಸಿಟಿವಿ ಆಧರಿಸಿ 20 ಸಾವಿರ ದಂಡವನ್ನು ಹಾಕಿದ್ದಾರೆ.

ಒಟ್ಟಿನಲ್ಲಿ ರಾಸಾಯನಿಕ ತ್ಯಾಜ್ಯ ವಿಲೇವಾರಿ ಮಾಡದೇ ರಸ್ತೆಬದಿಗೆ ರಾತ್ರೋ ರಾತ್ರಿ ಡಂಪ್ ಮಾಡ್ತಿರೋದು ಅಪಾಯಕಾರಿ ಅಷ್ಟೇ ಅಲ್ಲದೇ ಜನರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತೆ.‌ ಪಾಲಿಕೆ 8 ವಲಯಗಳಲ್ಲಿ ಗಾರ್ಬೇಜ್‌ಗೆ ಸಂಬಂಧಪಟ್ಟಂತೆ ಕಠಿಣ ಕಾನೂನು ಅವಶ್ಯಕತೆ ಇದೆ. ಇಲ್ಲದಿದ್ದರೆ ಮುಂದೊಂದು ದಿನ ಸಿಲಿಕಾನ್ ಸಿಟಿ ಜನರಿಗೆ ಅಪಾಯ ಕಾದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ