AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣ ಕೊಡಬೇಕಾಗುತ್ತೆಂದು ಎಲ್ಲೆಂದರಲ್ಲಿ ತ್ಯಾಜ್ಯ ಡಂಪ್ ಮಾಡುತ್ತಿರುವ ಕಾರ್ಖಾನೆಗಳು, ಸ್ಥಳೀಯರಿಗೆ ಸಂಕಷ್ಟ

ಮನೆ ಕಸವನ್ನು ಸಂಗ್ರಹಿಸಿ ಡಂಪ್ ಯಾಡ್​ಗಳಿಗೆ ಕಳಿಸುವಂತೆ ಕಾರ್ಖಾನೆಗಳ ಕಸವನ್ನು ಸಂಗ್ರಹಿಸಿ ಕಳಿಸಲಾಗುವುದಿಲ್ಲ. ಫ್ಯಾಕ್ಟರಿಗಳು ಹಣ ನೀಡಿ ಕಸವನ್ನು ವಿಲೇವಾರಿ ಮಾಡಬೇಕು. ಹೀಗಾಗಿ ಬಿಬಿಎಂಪಿಗೆ ಹಣವೇನು ನೀಡಬೇಕೆಂದು ಕೆಲ ಕಾರ್ಖಾನೆಗಳು ರಾತ್ರಿ ವೇಳೆ ಜನರಿಲ್ಲದನ್ನು ನೋಡಿ ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದಾರೆ. ಇದು ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ.

ಹಣ ಕೊಡಬೇಕಾಗುತ್ತೆಂದು ಎಲ್ಲೆಂದರಲ್ಲಿ ತ್ಯಾಜ್ಯ ಡಂಪ್ ಮಾಡುತ್ತಿರುವ ಕಾರ್ಖಾನೆಗಳು, ಸ್ಥಳೀಯರಿಗೆ ಸಂಕಷ್ಟ
ಹಣ ಕೊಡಬೇಕಾಗುತ್ತೆಂದು ಕಾರ್ಖಾನೆಗಳಿಂದ ಎಲ್ಲೆಂದರಲ್ಲಿ ತ್ಯಾಜ್ಯ ಡಂಪ್
Follow us
Vinayak Hanamant Gurav
| Updated By: ಆಯೇಷಾ ಬಾನು

Updated on: May 22, 2024 | 7:30 AM

ಬೆಂಗಳೂರು, ಮೇ.22: ಮನೆಗಳಿಂದ ಸಂಗ್ರಹವಾಗುವ ಕಸವನ್ನು ಬಿಬಿಎಂಪಿ (BBMP) ಗಾರ್ಬೆಜ್ ವಾಹನದಲ್ಲಿ ತೆಗೆದುಕೊಂಡು ಹೋಗಲಾಗುತ್ತೆ. ಆದರೆ ವಾಣಿಜ್ಯ ಬಳಕೆಯ ಗಾರ್ಬೆಜನ್ನು (Garbage) ಆ ವಾಹನಗಳಲ್ಲಿ ತೆಗೆದುಕೊಂಡು ಹೋಗುವಂತಿಲ್ಲ. ಹೀಗಾಗಿ ದುಡ್ಡು ಕೊಟ್ಟು ನೇರ ಡಂಪ್ ಯಾರ್ಡ್ಗೆ (Dumping Yard) ಸಾಗಿಸಬೇಕು. ಆದರೆ ಹಣ ಉಳಿಸುವುದಕ್ಕಾಗಿ ಕೆಲವರು ಕಾರ್ಖಾನೆ, ಮೆಕಾನಿಕ್​ ಶಾಪ್​ನ  ಅಪಾಯಕಾರಿ ತ್ಯಾಜ್ಯ ಕಸವನ್ನ ಲೈಟ್​ ಕಂಬದ ಹತ್ತಿರ ಹಾಕಿ ಹೋಗುತ್ತಿದ್ದಾರೆ. ಇದರಿಂದ ಜನ ಸಾಮಾನ್ಯರಿಗೆ ಸಮಸ್ಯೆಗಳಾಗುತ್ತಿವೆ.

ಗೂಡ್ಸ್ ವಾಹನಗಳಲ್ಲಿ ತ್ಯಾಜ್ಯ ತುಂಬಿಕೊಂಡು ಬಂದು ಯಾರೂ ಇಲ್ಲದ ಸಮಯ ನೋಡಿ ರಾತ್ರೋ ರಾತ್ರಿ ರಸ್ತೆ ಬದಿಗೆ ಕಸ ಸುರಿದು ಹೋಗಲಾಗುತ್ತಿದೆ. ಮೂವರು ಖದೀಮರು ಗೂಡ್ಸ್ ವಾಹನದಲ್ಲಿ ಕಸ ತುಂಬಿಕೊಂಡು ಬಂದು ರಿವರ್ಸ್ ಹಾಕಿ ಕಾರ್ಖಾನೆ, ಮೆಕಾನಿಕ್​ ಶಾಪ್​ನ ಅಪಾಯಕಾರಿ ತ್ಯಾಜ್ಯಕಸವನ್ನ ಲೈಟ್​ ಕಂಬದ ಹತ್ತಿರ ರಾಶಿ ಹಾಕಿ ಎಸ್ಕೇಪ್ ಆಗಿದ್ದಾರೆ. ಬೆಂಗಳೂರು ಮೈಸೂರು ರಸ್ತೆಯಲ್ಲಿ ಹಾಗೂ ಬಾಪುಜಿ ನಗರದಲ್ಲಿ ರಾತ್ರೋ ರಾತ್ರಿ ಕಸ ತಂದು ಹಾಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನೂ ಮನೆ ಕಸ ಬಿಬಿಎಂಪಿ ಗಾರ್ಬೆಜ್ ವಾಹನದಲ್ಲಿ ತೆಗೆದುಕೊಂಡು ಹೋಗ್ತಾರೆ. ಆದರೆ ವಾಣಿಜ್ಯ ಬಳಕೆಯ ಗಾರ್ಬೆಜ್ ನ್ನು ಇದರಲ್ಲಿ ತೆಗೆದುಕೊಂಡು ಹೋಗುವಂತಿಲ್ಲ. ದುಡ್ಡು ಕೊಟ್ಟು ನೇರ ಡಂಪ್ ಯಾರ್ಡ್ಗೆ ಸಾಗಿಸಬೇಕು. ಇದರ ದುಡ್ಡು ಉಳಿಸಲು ಕಾರ್ಖಾನೆಯವರು ಹೀಗೆ ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ಡೇಂಜರ್ ಗಾರ್ಬಜ್ ರಸ್ತೆ ಬದಿಗೆ ಬಿಸಾಡುತ್ತಿದ್ದಾರೆ. ಅಲ್ಲದೇ ಕೆಲವೊಬ್ಬರು ರಾಜಕಾಲುವೆಗಳಿಗೆ ಸುರಿತಾರೆ.‌ ಇನ್ನೂ ಸುಮಾರು ದಿನಗಳಿಂದ ಮಳೆಯಾಗದ ಪರಿಣಾಮ ವಾಣಿಜ್ಯ ಉದ್ಯಮ ಹಾಗೂ ಕಾರ್ಖಾನೆಯರು ಸಂಗ್ರಹಿಸಿ ಇಡುವ ತ್ಯಾಜ್ಯ ಮಳೆ ನೀರಿನ ಮೂಲಕ ಚರಂಡಿಗಳಿಗೆ ಸೇರುವುದಲ್ಲದೇ ಅಧಿಕ ಮಳೆಯಾದಾಗ ನೀರು ಸರಾಗವಾಗಿ ಹೋಗದೆ ತೊಂದರೆ ಆಗುತ್ತೆ ಎಂದು ಬೆಂಗಳೂರು ನಿವಾಸಿಗಳು ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಕೆಲವೇ ದಿನಗಳ ಮಳೆಗೆ ಬೆಂಗಳೂರಿನಲ್ಲಿ 800 ವಿದ್ಯುತ್ ಕಂಬ ಧರೆಗೆ! ವಾಲಿವೆ ಹಲವಾರು ಕಂಬ

ತ್ಯಾಜ್ಯ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದರು ಕಾರ್ಖಾನೆಯವರು ರಬ್ಬರ್, ಪ್ಲಾಸ್ಟಿಕ್, ರಾಸಾಯನಿಕ ತ್ಯಾಜ್ಯ ಕಸದ ರಾಶಿಯನ್ನು 15 ದಿನಗಳ ವರೆಗೆ ಸಂಗ್ರಹಿಸಿ ಇಟ್ಟು ಅದನ್ನ ರಾತ್ರೋ ರಾತ್ರಿ ಚರಂಡಿಗಳಿಗೆ ಇಲ್ಲ ಪ್ರಮುಖ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಹಾಕುವುದಲ್ಲದೇ ಬೆಂಕಿ ಇಡುತ್ತಾರೆ. ಇನ್ನೂ ನಿನ್ನೆ ಹಳೆ ಗುಡ್ಡದಹಳ್ಳಿಯಲ್ಲಿ ಈ ರೀತಿ ಗಾರ್ಬೆಜ್ ಡಂಪ್ ಮಾಡುವಾಗ ಬಿಬಿಎಂಪಿ ಮಾರ್ಷಲ್ ಕಣ್ಣಿಗೆ ಬಿದ್ದಿದ್ದು, ಸಿಸಿಟಿವಿ ಆಧರಿಸಿ 20 ಸಾವಿರ ದಂಡವನ್ನು ಹಾಕಿದ್ದಾರೆ.

ಒಟ್ಟಿನಲ್ಲಿ ರಾಸಾಯನಿಕ ತ್ಯಾಜ್ಯ ವಿಲೇವಾರಿ ಮಾಡದೇ ರಸ್ತೆಬದಿಗೆ ರಾತ್ರೋ ರಾತ್ರಿ ಡಂಪ್ ಮಾಡ್ತಿರೋದು ಅಪಾಯಕಾರಿ ಅಷ್ಟೇ ಅಲ್ಲದೇ ಜನರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತೆ.‌ ಪಾಲಿಕೆ 8 ವಲಯಗಳಲ್ಲಿ ಗಾರ್ಬೇಜ್‌ಗೆ ಸಂಬಂಧಪಟ್ಟಂತೆ ಕಠಿಣ ಕಾನೂನು ಅವಶ್ಯಕತೆ ಇದೆ. ಇಲ್ಲದಿದ್ದರೆ ಮುಂದೊಂದು ದಿನ ಸಿಲಿಕಾನ್ ಸಿಟಿ ಜನರಿಗೆ ಅಪಾಯ ಕಾದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಶಾಸಕ ಅಶ್ವಥ್ ನಾರಾಯಣ್ ಮನೇಲಿ ಬಿಜೆಪಿ ನಾಯಕರ ಸಭೆ ನಡೆದಿದ್ದು ಯಾಕೆ?
ಶಾಸಕ ಅಶ್ವಥ್ ನಾರಾಯಣ್ ಮನೇಲಿ ಬಿಜೆಪಿ ನಾಯಕರ ಸಭೆ ನಡೆದಿದ್ದು ಯಾಕೆ?
ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ...?
ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ...?
ನಂದಿನಿ ಸ್ಕೂಟರ್​ಗೆ ಗುದ್ದಿದ ಕಾರು ಓಡಿಸುತ್ತಿದ್ದ ಮಹಿಳೆ ಕುಡಿದಿದ್ದಳೇ?
ನಂದಿನಿ ಸ್ಕೂಟರ್​ಗೆ ಗುದ್ದಿದ ಕಾರು ಓಡಿಸುತ್ತಿದ್ದ ಮಹಿಳೆ ಕುಡಿದಿದ್ದಳೇ?
ಕಾಂಗ್ರೆಸ್​ಗೆ ಸ್ವಾತಂತ್ರ್ಯಕ್ಕಾಗಿ ನಡೆದ ಕ್ರಾಂತಿ ಮಾತ್ರ ಗೊತ್ತು: ಪಾಟೀಲ್
ಕಾಂಗ್ರೆಸ್​ಗೆ ಸ್ವಾತಂತ್ರ್ಯಕ್ಕಾಗಿ ನಡೆದ ಕ್ರಾಂತಿ ಮಾತ್ರ ಗೊತ್ತು: ಪಾಟೀಲ್