AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತ ವೈದ್ಯ, ಅಂಬೇಡ್ಕರ್ ಮೆಡಿಕಲ್ ಕಾಲೇಜು ಸಂಸ್ಥಾಪಕ ಟ್ರಸ್ಟಿ ಡಾ ಶಿವಲಿಂಗಯ್ಯ ಕೊಲೆ ಯತ್ನ; ಮಣಿಪಾಲ್ ಅಸ್ಪತ್ರೆಯಲ್ಲಿ ಚಿಕಿತ್ಸೆ

ಅಲ್ಯೂಮಿನಿಯಂ ಅಂಶದ ಮಾತ್ರೆಗಳನ್ನು ನೀಡಿ ವಿಷ ಪ್ರಾಷನ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಮೆಡಿಕಲ್ ಟೆಸ್ಟ್ ಮಾಡಿಸಿದಾಗ ದೇಹದಲ್ಲಿ ಜೀವಕ್ಕೆ ಅಪಾಯ ಆಗುವಷ್ಟು ಅಲ್ಯೂಮಿನಿಯಂ ಅಂಶ ಪತ್ತೆಯಾಗಿದೆ.

ಖ್ಯಾತ ವೈದ್ಯ, ಅಂಬೇಡ್ಕರ್ ಮೆಡಿಕಲ್ ಕಾಲೇಜು ಸಂಸ್ಥಾಪಕ ಟ್ರಸ್ಟಿ ಡಾ ಶಿವಲಿಂಗಯ್ಯ ಕೊಲೆ ಯತ್ನ; ಮಣಿಪಾಲ್ ಅಸ್ಪತ್ರೆಯಲ್ಲಿ ಚಿಕಿತ್ಸೆ
ಖ್ಯಾತ ವೈದ್ಯ, ಅಂಬೇಡ್ಕರ್ ಮೆಡಿಕಲ್ ಕಾಲೇಜು ಸಂಸ್ಥಾಪಕ ಟ್ರಸ್ಟಿ ಡಾ ಶಿವಲಿಂಗಯ್ಯ
TV9 Web
| Edited By: |

Updated on:Apr 11, 2022 | 11:33 AM

Share

ಬೆಂಗಳೂರು: ಖ್ಯಾತ ವೈದ್ಯರು ಹಾಗು ಅಂಬೇಡ್ಕರ್ ಮೆಡಿಕಲ್ ಕಾಲೇಜು ಸಂಸ್ಥಾಪಕ ಟ್ರಸ್ಟಿ ಡಾ ಶಿವಲಿಂಗಯ್ಯರ ಕೊಲೆಗೆ ಯತ್ನ ನಡೆದಿದೆ. ಅಂಬೇಡ್ಕರ್ ಮೆಡಿಕಲ್ ಕಾಲೇಜು, ಅಂಬೇಡ್ಕರ್ ದಂತ ವೈದ್ಯ ಕಾಲೇಜು, ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಸ್ಥಾಪಕರಾದ ತೊಂಬತ್ತೆರಡು ವರ್ಷ ವಯಸ್ಸಿನ ಡಾ ಶಿವಲಿಂಗಯ್ಯರವರ ಕೊಲೆಗೆ ಯತ್ನ ನಡೆದಿದ್ದು ಸದ್ಯ ಮಣಿಪಾಲ್ ಅಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಲ್ಯೂಮಿನಿಯಂ ಅಂಶದ ಮಾತ್ರೆಗಳನ್ನು ನೀಡಿ ವಿಷ ಪ್ರಾಷನ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಮೆಡಿಕಲ್ ಟೆಸ್ಟ್ ಮಾಡಿಸಿದಾಗ ದೇಹದಲ್ಲಿ ಜೀವಕ್ಕೆ ಅಪಾಯ ಆಗುವಷ್ಟು ಅಲ್ಯೂಮಿನಿಯಂ ಅಂಶ ಪತ್ತೆಯಾಗಿದೆ. ಸಾಮಾನ್ಯವಾಗಿ 10 MICG/L ಕಿಂತ ಕಡಿಮೆ ಅಲ್ಯೂಮಿನಿಯಂ ಅಂಶ ದೇಹದಲ್ಲಿ ಇರುತ್ತೆ. ಆದ್ರೆ ಡಾ ಶಿವಲಿಂಗಯ್ಯ ರವರ ದೇಹದಲ್ಲಿ ಮಾರ್ಚ್ 4ರಂದು ಪರೀಕ್ಷೆ ಮಾಡಿಸಿದಾಗ 26.4 MICG/L ನಷ್ಟು ಅಂಶ ಪತ್ತೆಯಾಗಿದೆ. ಬಳಿಕ 22 ಮಾರ್ಚ್ನಲ್ಲಿ ಪರೀಕ್ಷೆ ಮಾಡಿದಾಗ 33.7 MICG/L ನಷ್ಟು ಅಂಶ ಪತ್ತೆಯಾಗಿದೆ. ಇದೇ ರೀತಿ ಅಲ್ಯೂಮಿನಿಯಂ ಅಂಶ ಹೆಚ್ಚಾದಲ್ಲಿ ದೇಹ ಬಹು ಅಂಗಾಂಗಗಳ ವೈಫಲ್ಯದಿಂದ ಸಾವನಪ್ಪುವ ಸಾಧ್ಯತೆ ಇದೆ.

ಕಳೆದ ಹದಿನೈದು ವರ್ಷಗಳಿಂದ ಜೊತೆಗೆ ಇದ್ದು ಡಾ ಶಿವಲಿಂಗಯ್ಯ ರನ್ನು ನೋಡಿಕೊಳ್ಳುತಿದ್ದ ಧಾನಮಣಿ ಹಾಗು ಕಳೆದ 26 ವರ್ಷಗಳಿಂದ ಜೊತೆಗೆ ಇದ್ದ ವೆಂಕಟೇಶ ಮೂರ್ತಿರಿಂದ ಕೃತ್ಯ ಎಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಡಾ ಶಿವಲಿಂಗಯ್ಯರವರ ಹೆಸರಲ್ಲಿ ಸಾವಿರಾರು ಕೋಟಿ ಬೆಲೆ ಬಾಳುವ ಆಸ್ತಿ ಇದೆ. ಹಾಗೂ ಮನೆಯಲ್ಲಿ ಕೋಟಿ ಕೋಟಿ ಬಾಳುವ ಚಿನ್ನ ಸಹ ಇದೆ. ಹೀಗಾಗಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಸದ್ಯ ಡಾ ಶಿವಲಿಂಗಯ್ಯ ರವರ ಕಡೆಯಿಂದ ಖಾಲಿ ಛಾಪ ಕಾಗದಗಳಿಗೆ ಸಹಿ ಪಡೆದಿರೋದು ಪತ್ತೆಯಾಗಿದೆ.

ಕೃತ್ಯದ ಬಗ್ಗೆ ಡಾ ಶಿವಲಿಂಗಯ್ಯ ಪುತ್ರ ಖ್ಯಾತ ವೈದ್ಯ ಡಾ ರವಿ ಪ್ರಕಾಶ್ ದೂರು ಸಲ್ಲಿಸಿದ್ದಾರೆ. ದೂರಿನ ಅನ್ವಯ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. IPC ಸೆಕ್ಷನ್ 307 ಮತ್ತು 328 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

ನಮ್ಮ ತಂದೆಗೆ ಕಾಫಿ ಅಭ್ಯಾಸ ಮಾಡಿಸಿದ್ದಾರೆ ಇನ್ನು ಈ ಸಂಬಂಧ ಮಾತನಾಡಿರುವ ಡಾ ರವಿ ಪ್ರಕಾಶ್, ನಮ್ಮ ತಂದೆಯವರಿಗೆ ಕಾಫಿ ಕುಡಿಯುವ ಅಭ್ಯಾಸ ಇರಲಿಲ್ಲ. ಅವರಿಗೆ ಕಾಫಿ ಅಭ್ಯಾಸ ಮಾಡಿಸಿದ್ದಾರೆ. ಅಲ್ಯೂಮಿನಿಯಂ ಕಹಿ ಇರತ್ತೆ. ಕಾಫಿಯಲ್ಲಿ ಹಾಕಿ ಕೊಟ್ರೆ ಗೊತ್ತಾಗಲ್ಲಾ ಅಂತ. ಹಂತ ಹಂತವಾಗಿ ಅಲ್ಯೂಮಿನಿಯಂ ನೀಡಲಾಗಿದೆ. ನೂರಾರು ಕೋಟಿ ಆಸ್ತಿ ಇದೆ. ಆಕೆ ಕೇರ್ ಟೇಕರ್ ಎಂದು ಬಂದದ್ದು ಈಗ ತನ್ನನ್ನು ಮದುವೆ ಆಗಿದ್ದಾರೆ ಎಂದು ದಾಖಲಾತಿ ಮಾಡಿಕೊಂಡಿದ್ದಾರೆ. ಪೊಲೀಸರು ಕೇಸ್ ದಾಖಲು ಮಾಡಿ ತನಿಖೆ ನಡೆಸುತಿದ್ದಾರೆ. ಆಶ್ರಯ ಕೊಟ್ಟವರನ್ನೆ ಹಣಕ್ಕೆ ಬಳಸಿಕೊಂಡು ಕೊಲ್ಲಲು ಮುಂದಾಗಿದ್ದು ಎಷ್ಟು ಸರಿ? ಎಂದು ಡಾ ಶಿವಲಿಂಗಯ್ಯ ನವರ ಮಗ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಗುಜರಾತ್​ನ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಭೀಕರ ಸ್ಫೋಟ, ಬೆಂಕಿ; ಆರು ಮಂದಿ ಕಾರ್ಮಿಕರ ದುರ್ಮರಣ

Sanju Samson: ಪಂದ್ಯ ಮುಗಿದ ಬಳಿಕ ಸಂಜು ಸ್ಯಾಮ್ಸನ್ ರಿವೀಲ್ ಮಾಡಿದ್ರು ರಣ ರೋಚಕ ಪ್ಲಾನ್

Published On - 11:17 am, Mon, 11 April 22

ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
2026 ಮಿಥುನ ರಾಶಿಯವರಿಗೆ ನಿರ್ಣಾಯಕ ವರ್ಷ; ವಾರ್ಷಿಕ ಭವಿಷ್ಯ ಇಲ್ಲಿದೆ
2026 ಮಿಥುನ ರಾಶಿಯವರಿಗೆ ನಿರ್ಣಾಯಕ ವರ್ಷ; ವಾರ್ಷಿಕ ಭವಿಷ್ಯ ಇಲ್ಲಿದೆ
ಸಿದ್ದರಾಮಯ್ಯ ಪರ ಯತ್ನಾಳ್ ಬ್ಯಾಟಿಂಗ್, ಬಿಜೆಪಿ ನಾಯಕರ ಬಗ್ಗೆ ವ್ಯಂಗ್ಯ
ಸಿದ್ದರಾಮಯ್ಯ ಪರ ಯತ್ನಾಳ್ ಬ್ಯಾಟಿಂಗ್, ಬಿಜೆಪಿ ನಾಯಕರ ಬಗ್ಗೆ ವ್ಯಂಗ್ಯ