AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Highway Heroes: ಬೆಂಗಳೂರಿನ ಟ್ರಕ್ ಚಾಲಕರ ಮನಗೆದ್ದ ಹೈವೇ ಹೀರೋಸ್ 2.0 ಅಭಿಯಾನ; ಡಿಸಿಪಿ ಸಿರಿಗೌರಿ ಶ್ಲಾಘನೆ

TV9 Network Shriram Finance Ltd organized Highway Heroes campaign season 2: ಎರಡನೇ ಸೀಸನ್​​ನ ಹೈವೇ ಹೀರೋಸ್ ಅಭಿಯಾನ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಟ್ರಕ್ ಚಾಲಕರಿಗೆ ವಿವಿಧ ರೀತಿಯಲ್ಲಿ ಬೆಂಬಲ ನೀಡುವ ಉದ್ದೇಶದಿಂದ ಈ ಕೆಂಪೇನ್ ನಡೆಸಲಾಗುತ್ತಿದೆ. ಶ್ರೀರಾಮ್ ಫೈನಾನ್ಸ್ ಲಿ ಮತ್ತು ಟಿವಿ9 ನೆಟ್ವರ್ಕ್ ಸಂಸ್ಥೆಗಳು ಜಂಟಿಯಾಗಿ ಹೈವೇಸ್ ಹೀರೋಸ್ ಅಭಿಯಾನ ನಡೆಸುತ್ತಿವೆ.

Highway Heroes: ಬೆಂಗಳೂರಿನ ಟ್ರಕ್ ಚಾಲಕರ ಮನಗೆದ್ದ ಹೈವೇ ಹೀರೋಸ್ 2.0 ಅಭಿಯಾನ; ಡಿಸಿಪಿ ಸಿರಿಗೌರಿ ಶ್ಲಾಘನೆ
ಹೈವೇ ಹೀರೋಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 04, 2025 | 5:20 PM

Share

ಶ್ರೀರಾಮ್ ಫೈನಾನ್ಸ್ ಮತ್ತು ಟಿವಿ9 ನೆಟ್‌ವರ್ಕ್ ಜಂಟಿಯಾಗಿ ಆಯೋಜಿಸಿದ್ದ ‘ಹೈವೇ ಹೀರೋಸ್’ ಅಭಿಯಾನದ 2ನೇ ಸೀಸನ್ (Highway Heroes season 2 campaign) ಬೆಂಗಳೂರಿನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಎರಡು ದಿನಗಳ ಈ ಕಾರ್ಯಕ್ರಮವು ಮೇ 2 ಮತ್ತು 3 ರಂದು ಬೆಂಗಳೂರಿನ ಯಶವಂತಪುರದ ಎರಡನೇ ಹಂತದ ಕೈಗಾರಿಕಾ ಉಪನಗರದ ದೇವರಾಜ್ ಅರಸ್ ಟ್ರಕ್ ಟರ್ಮಿನಲ್​​ನಲ್ಲಿ ನಡೆಯಿತು.

ಈ ಅಭಿಯಾನದ ಉದ್ದೇಶ ಟ್ರಕ್ ಚಾಲಕರನ್ನು ಮಾನಸಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ಸಬಲೀಕರಣಗೊಳಿಸುವುದು. ನೂರಾರು ಟ್ರಕ್ ಚಾಲಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ಸೆಷನ್​​ಗಳ ಮೂಲಕ ಪ್ರಮುಖ ಮಾಹಿತಿಯನ್ನು ಪಡೆದರು.

ಹೈವೇ ಹೀರೋಸ್ ಕಾರ್ಯಕ್ರಮದ ಮುಖ್ಯ ಫೀಚರ್​​ಗಳು:

ಮಾನಸಿಕ ಸ್ವಾಸ್ಥ್ಯದ ಸೆಷನ್ಸ್: ‘ದಿ ಯೋಗ ಇನ್ಸ್ಟಿಟ್ಯೂಟ್’ ನ ತಜ್ಞರು ಕಲಿಸುವ ಒತ್ತಡ ನಿರ್ವಹಣೆ ಮತ್ತು ಮಾನಸಿಕ ಯೋಗಕ್ಷೇಮಕ್ಕಾಗಿ ಯೋಗ ಮತ್ತು ಧ್ಯಾನ ಅಭ್ಯಾಸಗಳು.

ದೈಹಿಕ ಆರೋಗ್ಯದ ಸೆಷನ್: ‘ಪಿರಮಲ್ ಹೆಲ್ತ್’ ನ ತಜ್ಞರು ಕ್ಷಯರೋಗ ಜಾಗೃತಿ ಮತ್ತು ತಡೆಗಟ್ಟುವ ಕ್ರಮಗಳನ್ನು ವಿವರಿಸಿದರು.

ಹಣಕಾಸು ಸಾಕ್ಷರತಾ ಸೆಷನ್: ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (NSE) ತಜ್ಞರು ಬಜೆಟ್, ಉಳಿತಾಯ ಮತ್ತು ಸೈಬರ್ ವಂಚನೆಯಿಂದ ರಕ್ಷಣೆ ಪಡೆಯುವ ವಿಧಾನಗಳನ್ನು ಕಲಿಸಿದರು.

ಸ್ಕಿಲ್ ಇಂಡಿಯಾ ತರಬೇತಿ: ಸರ್ಕಾರದಿಂದ ಮಾನ್ಯತೆ ಪಡೆದ ತರಬೇತಿ ಪಡೆದ ಬಳಿಕ ಚಾಲಕರಿಗೆ ‘12ನೇ ಪ್ಲಸ್ ವ್ಯಾಲ್ಯೂ’ ಸರ್ಟಿಫಿಕೇಟ್ ನೀಡಲಾಗುತ್ತದೆ. ಚಾಲನಾ ಪರವಾನಿಗೆ ನವೀಕರಣಕ್ಕೆ ಇದು ಸಹಾಯವಾಗುತ್ತದೆ. ಇದು 90ಕ್ಕೂ ಹೆಚ್ಚು ದೇಶಗಳಲ್ಲಿ ಮಾನ್ಯವೂ ಆಗಿದೆ.

ಇದನ್ನೂ ಓದಿ: ಇಳಿಕೆಯಲ್ಲಿ ಟಿವಿ ಮಾರುಕಟ್ಟೆ, ಭರ್ಜರಿ ಓಟದಲ್ಲಿ ಆನ್​​ಲೈನ್ ವಿಡಿಯೋ; ಹೀಗಿದೆ ನೋಡಿ ಸ್ಕ್ರೀನ್ ಎಂಟರ್​​ಟೈನ್ಮೆಂಟ್ ಮಾರ್ಕೆಟ್​​ನ ಭವಿಷ್ಯ

ಹೈವೇ ಹೀರೋಸ್ ಅಭಿಯಾನ ಶ್ಲಾಘಿಸಿದ ಡಿಸಿಪಿ ಸಿರಿಗೌರಿ

ಶ್ರೀರಾಮ್ ಫೈನಾನ್ಸ್ ಮತ್ತು ಟಿವಿ9 ನೆಟ್ವರ್ಕ್ ಆಯೋಜಿಸಿರುವ ಹೈವೇ ಹೀರೋಸ್ ಅಭಿಯಾನದ ಕಾರ್ಯಗಳನ್ನು ಬೆಂಗಳೂರು ಉತ್ತರ ಟ್ರಾಫಿಕ್ ವಿಭಾಗದ ಡಿಸಿಪಿ ಸಿರಿಗೌರಿ ಡಿಆರ್ ಅವರು ಶ್ಲಾಘಿಸಿದರು. ಟ್ರಕ್ ಚಾಲಕರಿಗೆ ಈ ಅಭಿಯಾನ ಬಹಳ ಅಗತ್ಯವಾಗಿದೆ ಎಂದು ಹೇಳಿದ ಅವರು, ಇದನ್ನು ಆಯೋಜಿಸಿದ ಸಂಸ್ಥೆಗಳಿಗೆ ಧನ್ಯವಾದ ಹೇಳಿದರು.

ಶ್ರೀರಾಮ್ ಫೈನಾನ್ಸ್ ಲಿಮಿಟೆಡ್​​ನ ಜಂಟಿ ಎಂಡಿಯಾದ ಸುದರ್ಶನ್ ಹೊಳ್ಳ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಟ್ರಕ್ ಚಾಲಕ ಬಂಧುಗಳಿಗೆ ಈ ಅಭಿಯಾನ ಎಷ್ಟು ಮಹತ್ವದ್ದು ಎಂದು ವಿವರಿಸಿದ ಅವರು, ತಮ್ಮ ಸಂಸ್ಥೆಯಿಂದ ಟ್ರಕ್ ಚಾಲಕರಿಗೆ ಬೆಂಬಲವಾಗಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡರು.

ಇದಲ್ಲದೆ, ಹೈವೇ ಹೀರೋಸ್ ಕೆಂಪೇನ್ ಅನ್ನು ಹುರಿದುಂಬಿಸಲು ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ಸಿಎಸ್​​​ಆರ್ ವಿಭಾಗದ ಮುಖ್ಯಸ್ಥ ಎಸ್ ಬಾಲಮುರುಗನ್, ಟಿವಿ9 ಸೇಲ್ಸ್ ವಿಭಾಗದ ಸೀನಿಯರ್ ವೈಸ್ ಪ್ರೆಸಿಡೆಂಡ್ ಪ್ರಸನ್ನ ರಾಘವ್ ಅವರು ಕಾರ್ಯಕ್ರಮದ ವೇದಿಕೆ ಹಂಚಿಕೊಂಡರು. ಈ ವೇಳೆ, ದೇವರಾಜ್ ಟ್ರಕ್ ಟರ್ಮಿನಲ್​​ನ ಎಂಡಿ ಸಿ.ಎನ್. ಶಿವಪ್ರಕಾಶ್ ಕೂಡ ಇದ್ದರು.

ಹೈವೇ ಹೀರೋಸ್ ಅಭಿಯಾನದ ಮುಂಬರುವ ಕಾರ್ಯಕ್ರಮಗಳು:

  • ಮೇ 6-7: ಚೆನ್ನೈ, ತಮಿಳುನಾಡು
  • ಮೇ 10-11: ವಿಜಯವಾಡ, ಆಂಧ್ರಪ್ರದೇಶ

ಟ್ರಕ್ ಚಾಲಕರು ಈ ಅಭಿಯಾನದಲ್ಲಿ ಭಾಗವಹಿಸಿ ತಮ್ಮ ಆರೋಗ್ಯ, ಮಾನಸಿಕ ಸ್ಥಿತಿ ಮತ್ತು ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳುವಂತೆ ವಿನಂತಿಸಲಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ