AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಲ್ ಬಾಗ್ ಫ್ಲವರ್​ ಶೋಗೆ ಭರ್ಜರಿ ರೆಸ್ಪಾನ್ಸ್​​; ನಿನ್ನೆಯವರೆಗೂ ಪ್ರವೇಶ ಶುಲ್ಕ 2 ಕೋಟಿ 42 ಲಕ್ಷ ಕಲೆಕ್ಟ್ : ಲಾಲ್ ಬಾಗ್ ಉಪ ನಿರ್ದೇಶಕಿ

10 ದಿನಗಳ ಫ್ಲವರ್ ಶೋ ಯಶಸ್ವಿಯಾಗಿ ಮೂಡಿಬಂದಿದೆ. ಇಂದು ಸಂಜೆ 7 ಗಂಟೆಯವರೆಗೂ ಫ್ಲವರ್ ಶೋ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದೀವಿ ಎಂದು ಲಾಲ್ ಬಾಗ್ ಉಪ ನಿರ್ದೇಶಕಿ ಕುಸುಮ ಹೇಳಿದ್ದಾರೆ.

ಲಾಲ್ ಬಾಗ್ ಫ್ಲವರ್​ ಶೋಗೆ ಭರ್ಜರಿ ರೆಸ್ಪಾನ್ಸ್​​; ನಿನ್ನೆಯವರೆಗೂ ಪ್ರವೇಶ ಶುಲ್ಕ 2 ಕೋಟಿ 42 ಲಕ್ಷ ಕಲೆಕ್ಟ್ : ಲಾಲ್ ಬಾಗ್ ಉಪ ನಿರ್ದೇಶಕಿ
ಲಾಲ್​ ಬಾಗ್​ ಫ್ಲವರ್​ ಶೋ
TV9 Web
| Edited By: |

Updated on:Aug 15, 2022 | 6:12 PM

Share

ಬೆಂಗಳೂರು: 10 ದಿನಗಳ ಫ್ಲವರ್ ಶೋ (Flower Show) ಯಶಸ್ವಿಯಾಗಿ ಮೂಡಿಬಂದಿದೆ. ಇಂದು ಸಂಜೆ 7 ಗಂಟೆಯವರೆಗೂ ಫ್ಲವರ್ ಶೋ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದೀವಿ ಎಂದು ಲಾಲ್ ಬಾಗ್ (Lal Bagh) ಉಪ ನಿರ್ದೇಶಕಿ ಕುಸುಮ ಹೇಳಿದ್ದಾರೆ. ಫ್ಲವರ್​ ಶೋಗೆ ಇಂದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಇಂದು 8 ಗಂಡೆಯವರೆಗೂ ಅವಕಾಶ ಮಾಡಿ ಕೊಡುತ್ತೇವೆ. ಇಂದು ಕೊನೆಯ ದಿನವಾದ್ದರಿಂದ ವಿನೋಧ್ ರಾಜ್ ಕುಮಾರ್ ಅವರು ಸಹ ಬಂದಿದ್ದರು. ಫ್ಲವರ್ ಶೋ ಬಗ್ಗೆ ತುಂಬ ಮೆಚ್ಚಿಕೊಂಡ್ರು ಎಂದು ಹೇಳಿದರು.

ನಿನ್ನೆ ೧ ಲಕ್ಷದ 60 ಸಾವಿರ ಜನರು ಬಂದಿದ್ದಾರೆ. ಇಂದು ಎರೆಡು ಲಕ್ಷದಷ್ಟು ಜನರು ಬಂದಿರುವ ಸಾಧ್ಯಾತೆ ಇದೆ. ಇಂದು ಸ್ಕೂಲ್ ಹಾಗೂ ಕಾಲೇಜು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ನಿನ್ನೆಯವರೆಗೂ ಪ್ರವೇಶ ಶುಲ್ಕ 2 ಕೋಟಿ 42 ಲಕ್ಷ ಕಲೆಕ್ಟ್ ಆಗಿದೆ. ಇಂದು ಒಂದು ಕೋಟಿಯಷ್ಟು ಪ್ರವೇಶ ಶುಲ್ಕ ಕಲೆಕ್ಟ್ ಆಗುವ ಸಾಧ್ಯಾತೆ ಇದೆ ಎಂದು ಹೇಳಿದ್ದಾರೆ.

ಈ 10 ದಿನಗಳ ಕಾಲ ಯಾವುದೇ ಜಗಳ, ಗಲಾಟೆಗಳು ಆಗಿಲ್ಲ. ಸಮಾಧಾನವಾಗಿ ಬಂದು ಜನರು ಫ್ಲವರ್ ಶೋ ವೀಕ್ಷಣೆ ಮಾಡುತ್ತಿದ್ದಾರೆ. ಅಪ್ಪು ಹಾಗೂ ಡಾ ರಾಜ್ ಕುಮಾರ್ ಅವರ ಅಭಿಮಾನಿಗಳು ತುಂಬ ಚೆನ್ನಾಗಿ ಸಹಕಾರ ನೀಡಿದ್ದಾರೆ. ಇನ್ನು ಒಂದೆರೆಡು ದಿನಗಳ ಕಾಲ ಮುಂದುವರಿಸುವಂತೆ‌ ಬೇಡಿಕೆಗಳು ಕೇಳಿ ಬರ್ತಿದೆ. ಆದ್ರೆ ಫ್ಲವರ್ ಶೋ ಮುಂದುವರಿಸಲು ಸೆಕ್ಯುರಿಟಿ ಪರ್ಪಸ್ ಸಮಸ್ಯೆಗಳಿವೆ ಎಂದು ತಿಳಿಸಿದರು.

ಈಗಾಗಲೇ 500 ಕ್ಕು ಸಿಬ್ಬಂದಿ ಹಾಗೂ ಪೋಲಿಸರು ಪ್ರತಿದಿನ ಜನರನ್ನ ನಿಭಾಯಿಸುತ್ತಿದ್ದಾರೆ. ಹೀಗಾಗಿ ಇಂದೇ ಫ್ಲವರ್ ಶೋವನ್ನ ಕೊನೆಗೊಳಿಸುತ್ತಿದ್ದೇವೆ. ಜನರು ಸಂಜೆಯವರೆಗೂ ಬಂದು‌ ಫ್ಲವರ್ ಶೋ ವೀಕ್ಷಣೆ ಮಾಡಬಹುದು ಎಂದು ಮಾತನಾಡಿದರು.

Published On - 6:12 pm, Mon, 15 August 22

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?