AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಧರು ಬಟನ್ ಪ್ರೆಸ್ ಮಾಡಿದ್ರೆ ಸಾಕು, ಅವರಿದ್ದಲ್ಲಿಗೆ ಬರುತ್ತೆ ಬಿಎಂಟಿಸಿ ಬಸ್! ಬಂದಿದೆ ಹೊಸ ಡಿವೈಸ್

ಬಿಎಂಟಿಸಿ ಬಸ್​ನಲ್ಲಿ ಪ್ರತಿದಿನ ನೂರಾರು ಅಂಧರು ಪ್ರಯಾಣ ಮಾಡುತ್ತಾರೆ. ಆದರೆ, ಪ್ರಯಾಣ ಮಾಡಬೇಕಾದ ಬಸ್ ಎಲ್ಲಿದೆ? ಆ ಬಸ್ ತಾವಿರುವ ಜಾಗಕ್ಕೆ ಯಾವಾಗ ಬರುತ್ತದೆ ಎಂದು ತಿಳಿದುಕೊಳ್ಳಲು ಕಷ್ಟವಾಗುತ್ತಿತ್ತು. ಹಾಗಾಗಿ ಅವರಿಗಾಗಿಯೇ ಹೊಸದೊಂದು ಡಿವೈಸ್ ಅಭಿವೃದ್ಧಿಪಡಿಸಲಾಗಿದೆ. ದೆಹಲಿ ಐಐಟಿ ಅಭಿವೃದ್ಧಿಪಡಿಸಿದ ಆ ಸಾಧನದ ವಿಶೇಷವೇನು? ಹೇಗೆ ಕೆಲಸ ಮಾಡುತ್ತದೆ? ವಿವರ ಇಲ್ಲಿದೆ.

ಅಂಧರು ಬಟನ್ ಪ್ರೆಸ್ ಮಾಡಿದ್ರೆ ಸಾಕು, ಅವರಿದ್ದಲ್ಲಿಗೆ ಬರುತ್ತೆ ಬಿಎಂಟಿಸಿ ಬಸ್! ಬಂದಿದೆ ಹೊಸ ಡಿವೈಸ್
ಬಿಎಂಟಿಸಿ ಬಸ್ (ಸಾಂದರ್ಭಿಕ ಚಿತ್ರ)
Follow us
Kiran Surya
| Updated By: Ganapathi Sharma

Updated on: Jun 01, 2025 | 10:28 AM

ಬೆಂಗಳೂರು, ಜೂನ್ 1: ಬಿಎಂಟಿಸಿ (BMTC) ನಿಗಮದಲ್ಲಿ 6800 ಬಸ್ಸುಗಳಿವೆ. ಪ್ರತಿದಿನ 40 ಲಕ್ಷ ಮಂದಿ ಪ್ರಯಾಣ ಮಾಡುತ್ತಾರೆ. ಅದರಲ್ಲಿ ನೂರಾರು ಅಂಧರು ಕೂಡ ಸೇರಿದ್ದಾರೆ. ಬೆಂಗಳೂರಿನಲ್ಲಿ ದೃಷ್ಟಿಮಾಂದ್ಯರು ಓಡಾಡುವ ಸ್ಥಳದಲ್ಲಿ, ಅವರು ಪ್ರಯಾಣ ಮಾಡುವ ಬಸ್ ಯಾವ ನಿಲ್ದಾಣಕ್ಕೆ ಬರುತ್ತದೆ ಎಂಬುದನ್ನು ಅವರು ಸುಲಭವಾಗಿ ತಿಳಿಯಲು ಹೊಸದೊಂದು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಅಂಧರು, ನಗರದ ಯಾವುದೇ ಬಸ್ ಸ್ಟ್ಯಾಂಡ್​​ನಲ್ಲಿ ನಿಂತು ಈ ರಿಮೋಟ್ ಡಿವೈಸ್ ಪ್ರೆಸ್ ಮಾಡಿದರೂ ಸಾಕು, ಬಿಎಂಟಿಸಿ ಬಸ್​​ಗಳು (BMTC Buses) ಅವರು ಇರುವ ಜಾಗದಲ್ಲಿ ನಿಲ್ಲಲಿವೆ. ದೃಷ್ಟಿ ಚೇತನರಿಗಾಗಿ ವಿಶೇಷವಾಗಿ ರಿಮೋಟ್ ಡಿವೈಸ್ ಸಿದ್ದಪಡಿಸಿದ್ದು, ಬ್ರೈಲ್ ಮಾದರಿಯಲ್ಲಿ ಅಂಧರಿಗಾಗಿ ವ್ಯವಸ್ಥೆ ಮಾಡಲಾಗಿದೆ. ಅವರು ಆ ರಿಮೋಟ್​ನಲ್ಲಿ ಬಟನ್ ಪ್ರೆಸ್ ಮಾಡಿದರೆ, ಆ ಮಾರ್ಗದ ಬಸ್​ಗಳಿಗೆ ಮಾಹಿತಿ ಗೊತ್ತಾಗಲಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.

ಮೊದಲ ಹಂತದಲ್ಲಿ 25 ಬಸ್​ಗಳಲ್ಲಿ ಸಾದನ ಅಳವಡಿಕೆ

ಮೊದಲ ಹಂತದಲ್ಲಿ ಬಿಎಂಟಿಸಿಯ 25 ಬಸ್​​ಗಳಲ್ಲಿ ಕಮ್ಯುನಿಕೇಷನ್ ಡಿವೈಸ್​ಗಳನ್ನು ಅಳವಡಿಸಲಾಗಿದೆ. ಈಗಾಗಲೇ 401K ಯಲಹಂಕ ಟು ಕೆಂಗೇರಿ, 401KB ಯಶವಂತಪುರ ಟು ಕೆಂಗೇರಿ ಮಾರ್ಗದಲ್ಲಿ ಸಂಚಾರ ಮಾಡುವ ಬಿಎಂಟಿಸಿ ಬಸ್​​ಗಳಲ್ಲಿ ಈ ವ್ಯವಸ್ಥೆ ಅಳವಡಿಸಲಾಗಿದೆ. ಯಶವಂತಪುರ ಟು ಕೆಂಗೇರಿ ಮಾರ್ಗದಲ್ಲಿ ಅತಿ ಹೆಚ್ಚಿನ ದೃಷ್ಟಿಮಾಂದ್ಯರು ಸಂಚಾರ ಮಾಡುವುದು ಬಿಎಂಟಿಸಿಗೆ ಗೊತ್ತಾಗಿದೆ. ಈ ನವೆಂಬರ್ ಒಳಗೆ ಬಿಎಂಟಿಸಿಯ 500 ಬಸ್​​ಗಳಿಗೆ ಈ ಆನ್ ಬೋರ್ಡ್ ಟೆಕ್ನಾಲಜಿ ಅಳವಡಿಸಲಾಗುತ್ತದೆ.ಮುಂದಿನ ದಿನಗಳಲ್ಲಿ ಎಲ್ಲಾ ಬಸ್​​ಗಳಲ್ಲಿ ಅಳವಡಿಸಲು ಚಿಂತನೆ ನಡೆಸಲಾಗಿದೆ.

ಬಿಎಂಟಿಸಿಯ ಈ ಕ್ರಮಕ್ಕೆ ದೃಷ್ಟಿಮಾಂದ್ಯರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಇದರಿಂದ ನಮಗೆ ತಿಂಬಾ ಸಹಾಯವಾಗಿದೆ ಎಂದು ವಿಶೇಷಚೇತನ ನಿತಿನ್ ಎಂಬವರು ‘ಟಿವಿ9’ಗೆ ತಿಳಿಸಿದ್ದಾರೆ.

ಇದನ್ನೂ ಓದಿ
Image
ಮಲ್ಲಸಂದ್ರ ಬಳಿ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ, ಕ್ಯಾಮರಾ ಅಳವಡಿಕೆ
Image
ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಕೆಲವೆಡೆ ಮುಂದಿನ ಐದು ದಿನ ಮಳೆ
Image
ವಿದ್ಯಾರ್ಥಿಗಳು KSRTC ಬಸ್ ಪಾಸ್ ವಿತರಣೆ ಆರಂಭ: ಅರ್ಜಿ ಸಲ್ಲಿಕೆ ಹೇಗೆ?
Image
ಆನ್​ಲೈನ್ ಗೇಮಿಂಗ್ ವಂಚನೆ; ಬೆಂಗಳೂರು, ಮುಂಬೈ ಸೇರಿ 7 ಕಡೆ ಇಡಿ ದಾಳಿ

ಇದನ್ನೂ ಓದಿ: ವಿದ್ಯಾರ್ಥಿಗಳು KSRTC ಬಸ್ ಪಾಸ್ ವಿತರಣೆ ಆರಂಭ: ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ವಿವರ

ಒಟ್ಟಿನಲ್ಲಿ ದೃಷ್ಟಿ ವಿಶೇಷ ಚೇತನರಿಗಾಗಿ ಬಿಎಂಟಿಸಿ ಖಾಸಗಿ ಎನ್​​ಜಿಒ ಜೊತೆಗೂಡಿ ಇಂತಹದ್ದೊಂದು ಹೊಸ ಪ್ರಯತ್ನಕ್ಕೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ. ನಗರದ ಎಲ್ಲಾ ಬಿಎಂಟಿಸಿ ಬಸ್​ಗಳಲ್ಲೂ ಈ ಡಿವೈಸ್​​ಗಳನ್ನು ಅಳವಡಿಸಿದರೆ, ಮತ್ತಷ್ಟು ಅಂಧರಿಗೆ ತುಂಬಾ ಸಹಾಯ ಆಗುವುದಂತೂ ಖಂಡಿತ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ
ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ