AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಡೋ-ಪಾಕ್​ ಹೈವೋಲ್ಟೆಜ್​ ಮ್ಯಾಚ್​: ಬೆಂಗಳೂರಿನಲ್ಲಿ ಪಬ್​ಗಳಿಂದ ಭರ್ಜರಿ 1+1 ಆಫರ್​

ರವಿವಾರ ವೀಕೆಂಡ್​ ಆದ ಹಿನ್ನೆಲೆಯಲ್ಲಿ ಇಂಡಿಯಾ-ಪಾಕಿಸ್ತಾನ ಪಂದ್ಯದ ಜೊತೆ ವೀಕೆಂಡ್​​ ಎಂಜಾಯ್​ ಮಾಡಲು ಕ್ರಿಕೆಟ್​ ಪ್ರೇಮಿಗಳು ಪ್ಲಾನ್​ ಮಾಡುತ್ತಿದ್ದಾರೆ. ಕ್ರಿಕೆಟ್​ ಜೊತೆಗೆ ಮದ್ಯ ಪ್ರಿಯರು ಆಗಿದ್ದರೇ ಬೆಂಗಳೂರಿನ ಪಬ್​ಗಳು ಹಂತವರಿಗೆ ಸಖತ್​ ಆಫರ್​ ನೀಡಿವೆ.

ಇಂಡೋ-ಪಾಕ್​ ಹೈವೋಲ್ಟೆಜ್​ ಮ್ಯಾಚ್​: ಬೆಂಗಳೂರಿನಲ್ಲಿ ಪಬ್​ಗಳಿಂದ ಭರ್ಜರಿ 1+1 ಆಫರ್​
ಸಾಂದರ್ಭಿಕ ಚಿತ್ರ
Vinay Kashappanavar
| Edited By: |

Updated on:Sep 10, 2023 | 1:44 PM

Share

ಬೆಂಗಳೂರು ಸೆ.10: ಏಷ್ಯಾಕಪ್​ ಚಾಂಪಿಯನ್‌ಶಿಪ್​ ರಂಭವಾಗಿದ್ದು, ಇಂದು (ಸೆ.10) ಇಂಡಿಯಾ-ಪಾಕಿಸ್ತಾನ (India-Pakistan Match) ಹೈವೋಲ್ಟೆಜ್​ ಮ್ಯಾಜ್​​ ಇದೆ. ಭಾರತದ ಗೆಲುವಿಗೆ ದೇಶಾದ್ಯಂತ ಪೂಜೆ-ಪುನಸ್ಕಾರ ನಡೆಯುತ್ತಿವೆ. ಇನ್ನು ರವಿವಾರ ವೀಕೆಂಡ್​ ಆದ ಹಿನ್ನೆಲೆಯಲ್ಲಿ ಪಂದ್ಯದ ಜೊತೆ ವೀಕೆಂಡ್​​ ಎಂಜಾಯ್​ ಮಾಡಲು ಕ್ರಿಕೆಟ್ (Cricket)​ ಪ್ರೇಮಿಗಳು ಪ್ಲಾನ್​ ಮಾಡುತ್ತಿದ್ದಾರೆ. ಕ್ರಿಕೆಟ್​ ಜೊತೆಗೆ ಮದ್ಯ ಪ್ರಿಯರು ಆಗಿದ್ದರೇ ಬೆಂಗಳೂರಿನ ಪಬ್​ಗಳು (Pub) ಹಂತವರಿಗೆ ಸಖತ್​ ಆಫರ್​ ನೀಡಿವೆ. ​

ಹೌದು ನಗರದಲ್ಲಿನ ಪಬ್​ಗಳು ಇಂಡಯಾ ಪಾಕ್ ಮ್ಯಾಚ್ ಎಂಜಾಯ್ ಮಾಡಲು ವಿಶೇಷ ಆಫರ್ ಫರ್ ನೀಡಿವೆ. ಮ್ಯಾಚ್ ಜೊತೆ ವೀಕೆಂಡ್ ಎಂಜಾಯ್ ಮಾಡಲು 1+1 ಎಣ್ಣೆ ಆಫರ್ ಕೊಟ್ಟಿವೆ. ಒಂದು ಬೀಯರ್ ತಗೆದಕೊಂಡರೇ ಮತ್ತೊಂದು ಬೀಯರ್ ಫ್ರೀ ಕೊಡಲಾಗಿದೆ. ಈ ಆಫರ್ ಮ್ಯಾಚ್ ಆರಂಭದಿಂದ ಕೊನೆಯವರೆಗೂ ಇರಲಿದೆ.

ಹೈ ವೋಲ್ಟೇಜ್ ಮ್ಯಾಚ್ ನಲ್ಲಿ ಭಾರತ ಗೆಲ್ಲುವಂತೆ  ಹಲಸೂರಿನ ಕ್ರಿಕೆಟ್ ಟ್ರೆನಿಂಗ್ ಸೆಂಟರ್‌ನ ಮಕ್ಕಳು ಹಾಗೂ ಕೋಚ್​​ಗಳು ಘೋಷಣೆ ಹಾಕಿದ್ದಾರೆ. ಕಳೆದ ಬಾರಿ ಮಳೆಯಿಂದಾಗಿ ಶ್ರೀಲಂಕಾದಲ್ಲಿ ಮ್ಯಾಚ್ ರದ್ದಾಗಿತ್ತು. ಇವತ್ತು ರವಿವಾರ ಇದೆ ಮ್ಯಾಚ್ ನೋಡಲು ತುಂಬಾ ಕಾತುರರಾಗಿದ್ದೇವೆ. ಇವತ್ತು ನಡೆಯುವ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಭಾರತ ಗೆದ್ದೆ ಗೆಲ್ಲುತ್ತೆ ಎಂದು ಮಕ್ಕಳು ಹಾಗೂ ಕೋಚ್​​ ವಿಶ್ವಾಸ ವ್ಯಕ್ತಡಿಸಿದರು.

ಇದನ್ನೂ ಓದಿ: ಏಷ್ಯನ್ ಕ್ರೀಡಾಕೂಟಕ್ಕೆ ಟೀಮ್ ಇಂಡಿಯಾ ಅಭ್ಯಾಸ: ಬೆಂಗಳೂರಿಗೆ ಬರುತ್ತಿದೆ ರುತುರಾಜ್ ಪಡೆ

ಇನ್ನು ಮಂಗಳೂರಿನಲ್ಲಿ ಇಂದು ಭಾರತ-ಪಾಕಿಸ್ತಾನ ಹೈಓಲ್ಟೇಜ್ ಮ್ಯಾಚ್ ಭಾರಿ ನಿರೀಕ್ಷೆ ಮೂಡಿಸಿದೆ. ಗೆದ್ದು ಬಾ ಭಾರತ ಎಂದು ಮಂಗಳೂರಿನ ಯುವಕ-ಯುವತಿಯರು ಮತ್ತು ಆಟಗಾರರು ಹಾರೈಸಿದ್ದಾರೆ. ಹಾಗೇ ಧಾರವಾಡದಲ್ಲಿ ಭಾರತ ತಂಡಕ್ಕೆ ಶುಭವಾಗಲಿ ಎಂದು  ನಗರದ ಅಶ್ವಿನಿ ಪಿಜಿ ವಿದ್ಯಾರ್ಥಿಗಳು, ಸಪ್ತಾಪುರ ಬಡಾವಣೆಯಲ್ಲಿರೋ ಪೇಯಿಂಗ್ ಗೆಸ್ಟ್ ತ್ರಿವರ್ಣ ಧ್ವಜ ಹಿಡಿದು ಘೋಷಣೆ ಕೂಗಿದರು.

ಹಾಗೇ ಬಾಗಲಕೋಟೆಯಲ್ಲಿ ಗೋವಾ ಮಹಿಳಾ‌ ಸೀನಿಯರ್ ಕ್ರಿಕೆಟ್ ತಂಡದ ಆಟಗಾರ್ತಿಯರು ಶುಭ ಹಾರೈಸಿದರು. ಕರ್ನಾಟಕ ಮೂಲದ, ಗೋವಾ ರಾಜ್ಯ ಮಹಿಳಾ ಕ್ರಿಕೆಟ್ ತಂಡದ ಆಲ್‌ರೌಂಡರ್ ತೇಜಸ್ವಿನಿ‌ ದುರ್ಗದ ಭಾರತ ತಂಡಕ್ಕೆ ಶುಭಕೋರಿದರು. ಇನ್ನು ತೇಜಶ್ವಿನಿ‌ ದುರ್ಗದ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಾನಾಪುರ ಗ್ರಾಮದ ನಿವಾಸಿಯಾಗಿದ್ದು, ಸುಮಾರು ವರ್ಷಗಳಿಂದ ಗೋವಾದಲ್ಲಿ ವಾಸವಾಗಿದ್ದಾರೆ. ಸದ್ಯ ತೇಜಸ್ವಿನಿ ಗೋವಾ ರಾಜ್ಯದ ಪರ ಆಟವಾಡುತ್ತಿದ್ದಾರೆ.

Published On - 1:34 pm, Sun, 10 September 23

Follow Us
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!