AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲವರ್​ನ ಕೊಂದು ಆತ್ಮಹತ್ಯೆಗೆ ಆನ್​ಲೈನ್​ನಲ್ಲಿ ಹಗ್ಗ ಆರ್ಡರ್​: ಪ್ರೀತಿ ಕೊಂದ ಕೊಲೆಗಾರನ ಸ್ಫೋಟಕ ಅಂಶ ಬೆಳಕಿಗೆ

ಇಂದಿರಾನಗರದಲ್ಲಿ ನಡೆದ ಯುವತಿ ಕೊಲೆ ಪ್ರಕರಣದ ಆರೋಪಿ ಆರವ್​​ ತಮ್ಮ ಬಳಿ ಹಣ ಖಾಲಿಯಾದ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಕೊಲೆಯ ನಂತರ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ನಂತರ ವಾರಣಾಸಿಗೆ ಪಾರಾರಿಯಾಗಿದ್ದ. ಆದರೆ ಈ ವೇಳೆ ಹಣದ ಕೊರತೆಯಿಂದಾಗಿ ವಾಪಸ್ ಬಂದಿದ್ದಾನೆ.

ಲವರ್​ನ ಕೊಂದು ಆತ್ಮಹತ್ಯೆಗೆ ಆನ್​ಲೈನ್​ನಲ್ಲಿ ಹಗ್ಗ ಆರ್ಡರ್​: ಪ್ರೀತಿ ಕೊಂದ ಕೊಲೆಗಾರನ ಸ್ಫೋಟಕ ಅಂಶ ಬೆಳಕಿಗೆ
ಲವರ್​ನ ಕೊಂದು ಆತ್ಮಹತ್ಯೆಗೆ ಆನ್​ಲೈನ್​ನಲ್ಲಿ ಹಗ್ಗ ಆರ್ಡರ್​: ಪ್ರೀತಿ ಕೊಂದ ಕೊಲೆಗಾರನ ಸ್ಫೋಟಕ ಅಂಶ ಬೆಳಕಿಗೆ
ರಾಚಪ್ಪಾಜಿ ನಾಯ್ಕ್
| Edited By: |

Updated on: Dec 01, 2024 | 6:45 PM

Share

ಬೆಂಗಳೂರು, ಡಿಸೆಂಬರ್​ 01: ಇಂದಿರಾನಗರದಲ್ಲಿ ನಡೆದ ಯುವತಿ (girl) ಕೊಲೆ‌ ಕೇಸ್​​ನಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಆರೋಪಿ‌ ಆರವ್ ಕೊಲೆ‌ ಮಾಡಿದ ಬಳಿಕ ಒಂದು ದಿನವಲ್ಲಾ, ಎರಡೂ ದಿನವೂ ಆತ್ಮಹತ್ಯೆಗೆ ಯತ್ನಿಸಿದ್ದು ಬೆಳಕಿಗೆ ಬಂದಿದೆ. ಇದಲ್ಲದೆ ಆರೋಪಿ ಬಳಿಯಿದ್ದ ಹಣ ಸಾಲದೇ ಪೊಲೀಸರಿಗೆ ಸಿಕ್ಕಿಬಿದ್ದ ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ. ಮುಂದೆ ಓದಿ.

ದುಡ್ಡಿಲ್ದೆ ಪೊಲೀಸರಿಗೆ ಲಾಕ್​ ಆದ ಆರೋಪಿ

ಹೌದು.. ಇಂದಿರಾನಗರದ ಸರ್ವಿಸ್ ಅಪಾರ್ಟ್ಮೆಂಟ್​ನಲ್ಲಿ ನಡೆದ ಯುವತಿ ಮಾಯ ಕೊಲೆ ಪ್ರಕರಣದ ತನಿಖೆ ಎಲ್ಲಾ ಆಯಾಮದಲ್ಲಿ ನಡೆಸಲಾಗುತ್ತಿದೆ. ಕೊಲೆಗೆ ಯುವತಿ ಮೇಲೆ ಅನುಮಾನವೇ ಕಾರಣ ಅನ್ನೋದು ಗೊತ್ತಾಗಿದೆ. ಹೀಗಿರುವಾಗ ಪೊಲೀಸರು ತನಿಖೆಯಲ್ಲಿ ಆರೋಪಿಗೆ ತಿಂಗಳಿಗೆ ಕೇವಲ 14 ಸಾವಿರ ರೂ. ಸಂಬಳ ಬರುತ್ತಿತ್ತು. ಅದನ್ನೂ ಮಾಯಾಗೆ ಖರ್ಚು ಮಾಡ್ತಿದ್ದ ಆರೋಪಿಗೆ ದುಡ್ಡು ಸಾಕಾಗುತ್ತಿರಲಿಲ್ಲ. ಹೀಗೆ ರೂಂ ಗೆ ಹೋದ‌ ಬಳಿಕವೂ ತಾನೇ ಹಣ ಖರ್ಚು ಮಾಡಿದ್ದ. ಆದರೆ ಕೊಲೆ ಮಾಡಿದ ಬಳಿಕ ಆರವ್ ಬಳಿ ಕೇವಲ 1500 ರೂ. ಮಾತ್ರ ಇತ್ತು.ಇದ್ರಿಂದ ರೂಂ ಬಾಡಿಗೆ ಕೂಡ ಕಟ್ಟದೆ ಎಸ್ಕೇಪ್ ಆಗಿದ್ದ ಅಂತೇಳಲಾಗಿದೆ.

ಇದನ್ನೂ ಓದಿ: ಪ್ರೇಯಸಿಯನ್ನು ಕೊಂದು ಬೇರೆ ಬೇರೆ ರಾಜ್ಯಗಳಲ್ಲಿ ಸುತ್ತಾಡಿ ಕೊನೆಗೆ ಬೆಂಗಳೂರಿನಲ್ಲೇ ಹಂತಕ ಲಾಕ್

ಒಂದು ದಿನಕ್ಕೆ ಸರ್ವಿಸ್ ಪ್ಲಾಟ್ ಬಾಡಿಗೆ 1800 ರೂ ಇತ್ತು. ಮೊದಲ ದಿನ ಹಣ ಪೇ ಮಾಡಿದ್ದು, ಉಳಿದದ್ದು ಹೋಗುವ ದಿನ ಕೊಡುವುದಾಗಿ ತಿಳಿಸಿದ್ದ. ಇದ್ದ ಎರಡೂವರೆ ಸಾವಿರ ರೂ. ಆನ್ ಲೈನ್​ನಲ್ಲಿ ಫುಡ್ ತರಿಸಿಕೊಂಡಿದ್ದ. ಹಾಗೇ ನೈಲಾನ್ ಹಗ್ಗ ತರಿಸಿಕೊಂಡಿದ್ದನಂತೆ. ಕೊಲೆ ಮಾಡಿದ ಬಳಿಕ ಒಂದು ದಿನವಲ್ಲ ಎರಡೂ ದಿನವೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ನೈಲಾನ್ ಹಗ್ಗವಾಗಿದ್ರಿಂದ ಸರಿಯಾಗಿ ಬಿಗಿಯಾಗದೆ ಉಸಿರುಗಟ್ಟಿ ಭಯಗೊಂಡು ಸುಮ್ಮನಾಗಿದ್ದ. ಎರಡು ಬಾರಿಯ ಪ್ರಯತ್ನದಲ್ಲಿ ಸಾಧ್ಯವಾಗದೆ ಮೃತದೇಹದ ಪಕ್ಕದಲ್ಲೇ ಮಲಗಿದ್ದನಂತೆ. ಮರು ದಿನವೇ ಸಿಬ್ಬಂದಿಗೂ ಹೇಳದೆ, ಹಣವೂ ಕಟ್ಟದೆ 1500 ರೂ ತೆಗೆದುಕೊಂಡು ಎಸ್ಕೇಪ್ ಆಗಿದ್ದನಂತೆ. ಕ್ಯಾಬ್ ಬುಕ್ ಮಾಡಿ ಮೆಜೆಸ್ಟಿಕ್​ಗೆ ಹೋಗಿದ್ದ ಆರೋಪಿಗೆ ಯಾವ ಕಡೆ ಹೋಗ್ಬೇಕು ಅಂತನೇ ಪ್ಲಾನ್ ಇರಲಿಲ್ಲ. ಇದೇ ವೇಳೆ ತನ್ನ ಮುಂದೆ ಹೋಗ್ತಿದ್ದ ಪ್ರಯಾಣಿಕನೊಬ್ಬ ವಾರಣಾಸಿ ಕಡೆ ಹೋಗಲು ಟಿಕೆಟ್ ವಿಚಾರಿಸುತ್ತಿದ್ದ. ಹೀಗೆ ಟಿಕೆಟ್ ಪಡೆದು ರನ್ ಆಗುತ್ತಿದ್ದ ಟ್ರೈನ್ ಹತ್ತಿ ವಾರಣಾಸಿ ತಲುಪಿದ್ದ.

ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೊಂದು ಭಯಾನಕ ಕೃತ್ಯ; ಪ್ರೇಯಸಿಯನ್ನು ಕೊಂದ 1 ದಿನ ಕಳೆದು ಪರಾರಿಯಾದ ಪ್ರಿಯಕರ!

ಇನ್ನು ವಾರಣಾಸಿಗೆ ಹೋದ ಬಳಿ ಸ್ವಿಚ್ ಮಾಡಿದ್ದ ಮೊಬೈಲ್ ಆನ್ ಮಾಡಿದ ಆರವ್ ತನ್ನ ಅಜ್ಜನಿಗೆ ಕರೆ ಮಾಡಿದ್ದ. ಅಷ್ಟರಲ್ಲಾಗಲೇ ಪೊಲೀಸರು ಆರೋಪಿಯ ಮನೆಯಲ್ಲಿದ್ದರು. ಆಗ ವಿಚಾರ ಹೇಳಿದ್ದ ಆರವ್​ಗೆ, ವಾಪಸ್ ಬರುವಂತೆ ಅಜ್ಜ ಹೇಳಿದ್ದರು. ಹಣ ಕಡಿಮೆ‌ ಇದ್ದ ಕಾರಣಕ್ಕಾಗಿಯೇ ವಾಪಸ್ ಬಂದಿದ್ದ. ಒಂದ್ವೇಳೆ ಹೆಚ್ಚು ಹಣ ಆರವ್ ಬಳಿಯಿದ್ದಿದ್ರೆ ಯಾರಿಗೂ ಸಿಗದೆ ಎಸ್ಕೇಪ್ ಆಗುತ್ತಿದ್ದ. ಯಾಕಂದ್ರೆ ಪೊಲೀಸ್ ತನಿಖೆ, ಆನ್ ಲೈನ್, ಟ್ರಾವೆಲ್ ಬಗ್ಗೆ ಮೊದಲೇ ತಿಳಿದುಕೊಂಡಿದ್ದ ಎನ್ನಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ