ಲುಲು ಮಾಲ್​​​ನಲ್ಲಿ ಪಾಕ್ ಧ್ವಜ ವಿವಾದ; ತಪ್ಪು ಮಾಹಿತಿ ಹಂಚಿದ ಬಿಜೆಪಿ ನಾಯಕಿ ವಿರುದ್ಧ ಎಫ್ಐಐರ್

ಧ್ವಜದ ಫೋಟೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಲುಲು ಮಾಲ್‌ನ ಮಾರ್ಕೆಟಿಂಗ್ ಮ್ಯಾನೇಜರ್ ರಾಜೀನಾಮೆ ನೀಡಿದ್ದರು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಚಿತ್ರ ತಪ್ಪಾದ ಹೇಳಿಕೆಯೊಂದಿಗೆ ಶೇರ್ ಮಾಡಲಾಗಿದೆ. ವಾಸ್ತವವಾಗಿ ಎಲ್ಲ ಧ್ವಜಗಳು ಒಂದೇ ಗಾತ್ರದಲ್ಲಿದ್ದು, ಫೋಟೊ ತೆಗೆದ ಆ್ಯಂಗಲ್​​​ನಲ್ಲಿ ಪಾಕ್ ಧ್ವಜ ಇತರ ಧ್ವಜಗಳಿಗಿಂತ ದೊಡ್ಡದಾಗಿ ಕಾಣುತ್ತದೆ ಎಂದು ಫ್ಯಾಕ್ಟ್ ಚೆಕ್ ಮಾಡಿ ಮಾಧ್ಯಮಗಳು ವರದಿ ಮಾಡಿದ್ದವು.

ಲುಲು ಮಾಲ್​​​ನಲ್ಲಿ ಪಾಕ್ ಧ್ವಜ ವಿವಾದ; ತಪ್ಪು ಮಾಹಿತಿ ಹಂಚಿದ ಬಿಜೆಪಿ ನಾಯಕಿ ವಿರುದ್ಧ ಎಫ್ಐಐರ್
ಕೊಚ್ಚಿ ಲುಲು ಮಾಲ್Image Credit source: Twitter
Follow us
|

Updated on: Oct 14, 2023 | 8:20 PM

ಬೆಂಗಳೂರು ಅಕ್ಟೋಬರ್ 14: ಕೊಚ್ಚಿಯ ಲುಲು ಮಾಲ್‌ನಲ್ಲಿ (Lulu Mall) ಮಾಲ್ ಅಧಿಕಾರಿಗಳು ಪಾಕಿಸ್ತಾನದ (Pakistan) ದೊಡ್ಡ ಧ್ವಜವನ್ನು ಪ್ರದರ್ಶಿಸಿದ್ದಾರೆ. ಭಾರತ ಸೇರಿದಂತೆ ಇತರ ಎಲ್ಲಾ ಧ್ವಜಗಳು ಚಿಕ್ಕದಾಗಿದೆ ಎಂದು ಆರೋಪಿಸಿ ಫೋಟೋವೊಂದನ್ನು ಹಂಚಿಕೊಂಡಿದ್ದಕ್ಕಾಗಿ ಕರ್ನಾಟಕ ಪೊಲೀಸರು ಬಿಜೆಪಿ (BJP) ಕಾರ್ಯಕರ್ತೆ ಶಕುಂತಲ ನಟರಾಜ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಬಿಜೆಪಿ ನಾಯಕಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ ಇದು ಬೆಂಗಳೂರು ಲುಲು ಮಾಲ್‌ನಲ್ಲಿ ನಡೆದಿದೆ ಎಂದಿದ್ದರು. ಆದರೆ ಈ ಫೋಟೋ ಕೇರಳದ ಲುಲು ಮಾಲ್‌ನದ್ದಾಗಿದೆ.

ಆದಾಗ್ಯೂ, ಧ್ವಜದ ಫೋಟೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಲುಲು ಮಾಲ್‌ನ ಮಾರ್ಕೆಟಿಂಗ್ ಮ್ಯಾನೇಜರ್ ರಾಜೀನಾಮೆ ನೀಡಿದ್ದರು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಚಿತ್ರ ತಪ್ಪಾದ ಹೇಳಿಕೆಯೊಂದಿಗೆ ಶೇರ್ ಮಾಡಲಾಗಿದೆ. ವಾಸ್ತವವಾಗಿ ಎಲ್ಲ ಧ್ವಜಗಳು ಒಂದೇ ಗಾತ್ರದಲ್ಲಿದ್ದು, ಫೋಟೊ ತೆಗೆದ ಆ್ಯಂಗಲ್​​​ನಲ್ಲಿ ಪಾಕ್ ಧ್ವಜ ಇತರ ಧ್ವಜಗಳಿಗಿಂತ ದೊಡ್ಡದಾಗಿ ಕಾಣುತ್ತದೆ ಎಂದು ಫ್ಯಾಕ್ಟ್ ಚೆಕ್ ಮಾಡಿ ಮಾಧ್ಯಮಗಳು ವರದಿ ಮಾಡಿದ್ದವು.

‘ನನ್ನ ದೇಶದ ಮೇಲೆ ನನಗೆ ಗಾಢವಾದ ಪ್ರೀತಿ ಇದೆ’

ಲುಲು ಮಾಲ್‌ನ ಮಾರ್ಕೆಟಿಂಗ್ ಮ್ಯಾನೇಜರ್ ಆದಿರಾ ನಂಬಿಯತಿರಿ ಅವರು ಲಿಂಕ್ಡ್‌ಇನ್‌ನಲ್ಲಿ ಮಾಡಿದ ಪೋಸ್ಟ್ ಚರ್ಚೆಯನ್ನು ತೀವ್ರಗೊಳಿಸಿತು. ಆಧಾರವಿಲ್ಲದ ಸುಳ್ಳು ಮತ್ತು ಸಾಮಾಜಿಕ ಮಾಧ್ಯಮದ ರೋಚಕತೆಯಿಂದಾಗಿ ನಾನು ಕೆಲಸ ಕಳೆದುಕೊಳ್ಳಬೇಕಾಗಿ ಬಂತು ಎಂದು ಹೇಳಿದ್ದರು. “ಕ್ರೀಡೆಗೆ ಬೆಂಬಲದ ಸರಳ ಸೂಚಕವಾಗಿ, ಧ್ವಜಗಳನ್ನು ಅಲಂಕಾರವಾಗಿ ಬಳಸಿದ್ದು ನಮ್ಮಲ್ಲಿ ಯಾರಿಗೂ ತಿಳಿಯದ ದುಃಸ್ವಪ್ನದ ವಿರೂಪವಾಗಿ ರೂಪುಗೊಂಡಿದೆ. ನಾವು ದೃಢ, ಹೆಮ್ಮೆಯ ಭಾರತೀಯರು, ನಮ್ಮ ಕಂಪನಿಗಳಿಗೆ ಬದ್ಧರಾಗಿದ್ದೇವೆ. ಆದರೆ, ನಿರಾಧಾರವಾದ ಆರೋಪಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ದೃಢೀಕರಿಸದ ವರದಿಗಳು ಒಬ್ಬರ ಸಮಗ್ರತೆ ಮತ್ತು ಜೀವನೋಪಾಯವನ್ನು ಧ್ವಂಸಗೊಳಿಸುವ ಸಾಮರ್ಥ್ಯವನ್ನು ಹೊಂದಿವೆ” ಎಂದು ಆದಿರಾ ಬರೆದಿದ್ದಾರೆ.

ನನ್ನ ನಷ್ಟವು ನಷ್ಟವಾಗಿದೆ ಆದರೆ ಈ ದ್ವೇಷದಿಂದಾಗಿ ಯಾರೂ ಪ್ರಭಾವಿತರಾಗಬಾರದು ಎಂದು ಆದಿರಾ ಬರೆದಿದ್ದಾರೆ.

ಮಂಗಳವಾರದಿಂದಲೇ ವಿವಾದ ಆರಂಭವಾಗಿದ್ದು, ಬುಧವಾರದಂದು ಆದಿರಾ ಅಧಿಕಾರದಿಂದ ಕೆಳಗಿಳಿದಿದ್ದಾರೆ. ಶುಕ್ರವಾರ, ಅವರು ವೈರಲ್ ಫೋಟೋ ನಕಲಿ ಎಂದು ಸ್ಥಾಪಿಸಿದ ನಂತರ ಲುಲು ಗ್ರೂಪ್‌ಗೆ ಮರುಸೇರ್ಪಡೆಗೊಳ್ಳಲು ಆಹ್ವಾನಿಸಲಾಗಿದೆ ಎಂದು ಹೇಳಿರುವ  ಮತ್ತೊಂದು ಪೋಸ್ಟ್  ಪ್ರಕಟಿಸಿದ್ದಾರೆ.

ಇದನ್ನೂ ಓದಿLulu in Hyderabad: ಹೈದರಾಬಾದ್​​​ನಲ್ಲಿಯೂ 3,500 ಕೋಟಿ ರೂ ಹೂಡಿಕೆಗೆ ಲುಲು ಗ್ರೂಪ್ ಒಪ್ಪಂದ, ಸೆಪ್ಟೆಂಬರ್ ತಿಂಗಳಲ್ಲಿ ಆರಂಭ

“ಎಲ್ಲರಿಗೂ, ನಿಮ್ಮ ಅಚಲ ಬೆಂಬಲಕ್ಕಾಗಿ ಧನ್ಯವಾದಗಳು. ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಮಾಹಿತಿಯ ಹರಡುವಿಕೆಯನ್ನು ಎದುರಿಸುವಲ್ಲಿ ನಾವು ಪ್ರದರ್ಶಿಸಿದ ಏಕತೆಯಿಂದ ಖುಷಿಯಾಗಿದ್ದೇನೆ.ನಮ್ಮ ಸಾಮೂಹಿಕ ಪ್ರಯತ್ನಗಳ ನೇರ ಪರಿಣಾಮವಾಗಿ, ಲುಲು ಗ್ರೂಪ್ ಮರುಸೇರ್ಪಡೆಗೊಳ್ಳಲು ನನ್ನನ್ನು ಆಹ್ವಾನಿಸಿದೆ ಎಂದು ಆದಿರಾ ಪೋಸ್ಟ್ ಮಾಡಿದ್ದಾರೆ.

ಎಂಎ ಯೂಸುಫ್ ಅಲಿ ಅವರು ಲುಲು ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಕೊಚ್ಚಿ, ಬೆಂಗಳೂರು, ತಿರುವನಂತಪುರಂ, ಲಕ್ನೋ ಮತ್ತು ಹೈದರಾಬಾದ್‌ನಲ್ಲಿ ಲುಲು ಮಾಲ್‌ ಇದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದು ಪ್ರಾರಂಭ ಅಷ್ಟೆ, ಪಿಕ್ಚರ್ ಇನ್ನೂ ಬಾಕಿ ಇದೆ ಎಂದ ಜಗದೀಶ್
ಇದು ಪ್ರಾರಂಭ ಅಷ್ಟೆ, ಪಿಕ್ಚರ್ ಇನ್ನೂ ಬಾಕಿ ಇದೆ ಎಂದ ಜಗದೀಶ್
ಗಾಂಧಿ ಜಯಂತಿ: ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಮೋದಿ
ಗಾಂಧಿ ಜಯಂತಿ: ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಮೋದಿ
ಬೆಂಗಳೂರು ಹನುಮಂತನಗರದಲ್ಲಿ ಲಾಂಗ್, ಬ್ಯಾಟ್ ಹಿಡಿದು ಪುಡಿ ರೌಡಿಗಳ ಅಟ್ಟಹಾಸ
ಬೆಂಗಳೂರು ಹನುಮಂತನಗರದಲ್ಲಿ ಲಾಂಗ್, ಬ್ಯಾಟ್ ಹಿಡಿದು ಪುಡಿ ರೌಡಿಗಳ ಅಟ್ಟಹಾಸ
ರಾಜ್​ಘಾಟ್​ನಲ್ಲಿ ರಾಷ್ಟ್ರಪಿತನಿಗೆ ಪುಷ್ಟನಮನ ಸಲ್ಲಿಸಿದ ಪ್ರಧಾನಿ ಮೋದಿ
ರಾಜ್​ಘಾಟ್​ನಲ್ಲಿ ರಾಷ್ಟ್ರಪಿತನಿಗೆ ಪುಷ್ಟನಮನ ಸಲ್ಲಿಸಿದ ಪ್ರಧಾನಿ ಮೋದಿ
ಪ್ರಯಾಣಿಕರ ಗಮನಕ್ಕೆ: ಬೆಳಗಾವಿ-ಮೀರಜ್ ನಡುವೆ ವಿಶೇಷ ರೈಲು ಸೇವೆ
ಪ್ರಯಾಣಿಕರ ಗಮನಕ್ಕೆ: ಬೆಳಗಾವಿ-ಮೀರಜ್ ನಡುವೆ ವಿಶೇಷ ರೈಲು ಸೇವೆ
ಕೇತುಗ್ರಸ್ತ ಸೂರ್ಯಗ್ರಹಣ ಪ್ರಭಾವ ಹೇಗಿರುತ್ತೆ ತಿಳಿಯಿರಿ
ಕೇತುಗ್ರಸ್ತ ಸೂರ್ಯಗ್ರಹಣ ಪ್ರಭಾವ ಹೇಗಿರುತ್ತೆ ತಿಳಿಯಿರಿ
Nithya Bhavishya: ಮಹಾಲಯ ಅಮವಾಸ್ಯೆ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಮಹಾಲಯ ಅಮವಾಸ್ಯೆ ದಿನದ ರಾಶಿ ಭವಿಷ್ಯ ತಿಳಿಯಿರಿ
ಪರೀಕ್ಷೆಯ ಹಿಂದಿನ ರಾತ್ರಿ ಬೆಂಗಳೂರು ಹಾಸ್ಟೆಲ್ ಹುಡುಗೀರ ಡ್ಯಾನ್ಸ್
ಪರೀಕ್ಷೆಯ ಹಿಂದಿನ ರಾತ್ರಿ ಬೆಂಗಳೂರು ಹಾಸ್ಟೆಲ್ ಹುಡುಗೀರ ಡ್ಯಾನ್ಸ್
ಮರೆಯಲಾಗದ ಉಡುಗೊರೆ; ಎದೆ ಮೇಲೆ ತಾಯಿಯ ಫೋಟೋ ಹಚ್ಚೆ ಹಾಕಿಸಿದ ಮಗ
ಮರೆಯಲಾಗದ ಉಡುಗೊರೆ; ಎದೆ ಮೇಲೆ ತಾಯಿಯ ಫೋಟೋ ಹಚ್ಚೆ ಹಾಕಿಸಿದ ಮಗ
ಸಿಂಗಲ್ ಆಗಿರೋನೇ ಸಿಂಹ: ಅಸಲಿ ಆಟ ತೋರಿಸಲು ರೆಡಿಯಾದ ಲಾಯರ್ ಜಗದೀಶ್
ಸಿಂಗಲ್ ಆಗಿರೋನೇ ಸಿಂಹ: ಅಸಲಿ ಆಟ ತೋರಿಸಲು ರೆಡಿಯಾದ ಲಾಯರ್ ಜಗದೀಶ್