ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: ಸಿಐಡಿ-ಇಡಿ ಜಂಟಿ ತನಿಖೆ ಚುರುಕು, ಬಯಲಾಯ್ತು ಸ್ಫೋಟಕ ಸತ್ಯಗಳು

ಕರ್ನಾಟಕ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ ತೀವ್ರಗೊಂಡಿದ್ದು, ಸಿಐಡಿ ತನಿಖೆ ಬೆನ್ನಲ್ಲೇ ಇಡಿ ಪ್ರವೇಶಿಸಿದೆ. ದೇವನಹಳ್ಳಿ ರೆಸಾರ್ಟ್‌ನಲ್ಲಿ ಪರೀಕ್ಷೆಗೂ ಮುನ್ನ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ನೀಡಿ ಉತ್ತರ ಬರೆಸಿದ ಜಾಲ ಬಯಲಾಗಿದೆ. ಕೋಟ್ಯಂತರ ರೂ. ಅಕ್ರಮ ಹಣಕಾಸು ವ್ಯವಹಾರ ಪತ್ತೆಯಾದ ಹಿನ್ನೆಲೆಯಲ್ಲಿ ಇಡಿ ಆಸ್ತಿ ಮುಟ್ಟುಗೋಲಿಗೆ ಸಿದ್ಧತೆ ನಡೆಸಿದ್ದು, ಕಾವೇರಿ ನದಿಯಲ್ಲಿ ಸಾಕ್ಷ್ಯಗಳಿಗಾಗಿ ಸಿಐಡಿ ಶೋಧ ಮುಂದುವರಿಸಿದೆ.

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: ಸಿಐಡಿ-ಇಡಿ ಜಂಟಿ ತನಿಖೆ ಚುರುಕು, ಬಯಲಾಯ್ತು ಸ್ಫೋಟಕ ಸತ್ಯಗಳು
ಕೆಪಿಎಸ್‌ಸಿ ನೇಮಕಾತಿ ಹಗರಣ
Edited By:

Updated on: Sep 15, 2026 | 12:10 PM

ಬೆಂಗಳೂರು, ಸೆ.15: ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯ ಬೃಹತ್ ಹಗರಣದ ತನಿಖೆ ತೀವ್ರ ಸ್ವರೂಪ ಪಡೆದುಕೊಂಡಿದೆ. ತನಿಖೆಯ ವೇಳೆ ದಿನಕ್ಕೊಂದು ಸ್ಫೋಟಕ ಮಾಹಿತಿಗಳು ಬಯಲಾಗುತ್ತಿದೆ. ಸಿಐಡಿ (CID) ತನಿಖೆಯ ಬೆನ್ನಲ್ಲೇ ಇದೀಗ ಜಾರಿ ನಿರ್ದೇಶನಾಲಯ (ED) ಈ ಪ್ರಕರಣದಲ್ಲಿ ಎಂಟ್ರಿ ನೀಡಿದೆ. ಕಳಂಕಿತ ಪ್ರಮುಖ ಆರೋಪಿಗಳಾದ ಬಸವರಾಜ್ ಕನ್ನಾಳೆ ಮತ್ತು ಜ್ಞಾನೇಂದ್ರ ಕುಮಾರ್ ಅವರನ್ನು ಸತತವಾಗಿ ವಿಚಾರಣೆಗೆ ಒಳಪಡಿಸುತ್ತಿದೆ. ಇನ್ನೊಂದೆಡೆ, ಪರೀಕ್ಷೆಗೂ ಮುನ್ನವೇ ದೇವನಹಳ್ಳಿ ರೆಸಾರ್ಟ್‌ನಲ್ಲಿ ಅಭ್ಯರ್ಥಿಗಳಿಗೆ ಉತ್ತರ ಬರೆಸಿದ ಜಾಲ ಹಾಗೂ ಕೋಟ್ಯಂತರ ರೂಪಾಯಿ ಅಕ್ರಮ ಹಣಕಾಸು ವ್ಯವಹಾರದ ಅಸಲಿ ಮುಖವಾಡ ಕಳಚಿಬಿದ್ದಿದೆ.

ತನಿಖೆಯಲ್ಲಿ ಸ್ಫೋಟಕ ಮಾಹಿತಿ ಲಭ್ಯ

  • ದೇವನಹಳ್ಳಿ ರೆಸಾರ್ಟ್‌ನಲ್ಲಿ ಪೇಪರ್ ಲೀಕ್
  • ಜ್ಞಾನೇಂದ್ರನಿಂದ ಪ್ರಶ್ನೆಪತ್ರಿಕೆ ಪಡೆದ ಕನ್ನಾಳೆ
  • ರಾಜಾಜಿನಗರ ಮತ್ತು ಮೆಜೆಸ್ಟಿಕ್‌ನಿಂದ ಅಭ್ಯರ್ಥಿಗಳನ್ನು ವಿಶೇಷ ಕ್ಯಾಬ್‌ಗಳಲ್ಲಿ ದೇವನಹಳ್ಳಿಯ ರೆಸಾರ್ಟ್‌ಗೆ ಕರೆದೊಯ್ದು ಉತ್ತರ ಸಿದ್ಧಪಡಿಸಿ ಪರೀಕ್ಷೆಯ ದಿನವೇ ಸೆಂಟರ್‌ಗೆ ಕನ್ನಾಳೆ ಕಳುಹಿಸಿದ್ದ
  • ಕನ್ನಾಳೆಯ ಬಳಿ ತರಬೇತಿ ಪಡೆದ ಕೆಲ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳ ಬಳಿಯೇ ಇತರ ಅಭ್ಯರ್ಥಿಗಳಿಗೆ ₹3 ರಿಂದ ₹5 ಲಕ್ಷ ರೂಪಾಯಿಗೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.
  • ಸಿಐಡಿಯಿಂದ ರೆಸಾರ್ಟ್ ಸಿಸಿಟಿವಿ, ಕ್ಯಾಬ್ ಹಾಗೂ ಕನ್ನಾಳೆಯ ಕಾರು ವಶಪಡಿಸಿಕೊಳ್ಳಲಾಗಿದೆ.
  • ರೆಸಾರ್ಟ್ ಸೆಕ್ಯುರಿಟಿ ಗಾರ್ಡ್ ಪ್ರಮುಖ ಸಾಕ್ಷಿಯಾಗಿದ್ದು, ಕೆಪಿಎಸ್‌ಸಿ ಸಿಬ್ಬಂದಿ, ಆರೋಪಿಗಳು ಹಾಗೂ ಲಂಚ ನೀಡಿದ ಅಭ್ಯರ್ಥಿಗಳು ಸೇರಿದಂತೆ 400ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.
  • ಪ್ರಕರಣದ ಅತಿ ಪ್ರಮುಖ ಸಾಕ್ಷ್ಯಗಳಾದ ಮೊಬೈಲ್ ಮತ್ತು ಪೆನ್‌ಡ್ರೈವ್‌ಗಳನ್ನು ಶ್ರೀರಂಗಪಟ್ಟಣದ ಕಾವೇರಿ ನದಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದ್ದು
  • ಸಿಐಡಿ ತಂಡ ನದಿ ಬಳಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
  • ಇಡಿ ತನಿಖೆಯಲ್ಲಿ ಕನ್ನಾಳೆ ಉಲ್ಟಾಪಲ್ಟ ಉತ್ತರ
  • ದಿನಕ್ಕೆ 400 ಲೀಟರ್ ಹಾಲು ಮಾರ್ತೀವಿ, ಹಸು-ಎಮ್ಮೆ ಸಾಕಣೆ ಹಾಗೂ ಟ್ರಾವೆಲ್ಸ್ ಉದ್ಯಮವಿದೆ” ಎಂದು ಕನ್ನಾಳೆ ಹಾರಿಕೆ ಉತ್ತರ ನೀಡಿದ್ದಾನೆ.
  • ಕೋಟ್ಯಂತರ ಹಣದ ವಹಿವಾಟು ಹಾಗೂ ಆದಾಯ ತೆರಿಗೆ ಸಲ್ಲಿಕೆ ಬಗ್ಗೆ ಜಾರಿ ನಿರ್ದೇಶನಾಲಯ (ED) ತನಿಖೆ
  • ಕೋಟ್ಯಂತರ ಹಣದ ವಹಿವಾಟಿಗೆ ಸೂಕ್ತ ಆಧಾರವಿಲ್ಲದ ಕಾರಣ ಇಡಿ ಸಂಪೂರ್ಣ ಆಸ್ತಿಯ ಮುಟ್ಟುಗೋಲಿಗೆ ಸಿದ್ಧತೆ ನಡೆಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:36 am, Tue, 15 September 26

Loading...
Unable to load recommendations.
Follow Us