ದರ ಬದಲಾವಣೆ ಮಾಡದೇ ಹಾಲಿನ ಕೊರತೆ ನೀಗಿಸಲು ಕೆಎಂಎಫ್​ ಮಾಸ್ಟರ್ ಪ್ಲಾನ್

ಹಾಲಿನ ಕೊರತೆ ನೀಗಿಸಲು ಕೆಎಂಎಫ್​ ಪರಿಹಾರ ಹುಡುಕಿಕೊಂಡಿದ್ದು ಹಾಲಿನ ಬೆಲೆಯನ್ನು ಬದಲಾಯಿಸದೆ ಹಾಲಿನ ಪ್ರಮಾಣ ಕಡಿಮೆ ಮಾಡುತ್ತಿದೆ.

ದರ ಬದಲಾವಣೆ ಮಾಡದೇ ಹಾಲಿನ ಕೊರತೆ ನೀಗಿಸಲು ಕೆಎಂಎಫ್​ ಮಾಸ್ಟರ್ ಪ್ಲಾನ್
kmf
Follow us
|

Updated on:Mar 15, 2023 | 1:03 PM

ಬೆಂಗಳೂರು: ರಾಜ್ಯದಲ್ಲಿ ಏಕಾಏಕಿ ನಂದಿನಿ ಹಾಲಿನ ಕೊರತೆ ಎದುರಾಗಿದೆ. ಬೇಡಿಕೆಯಷ್ಟು ಹಾಲು ಪೂರೈಕೆಯಾಗುತ್ತಿಲ್ಲ. ಕೆಲ ದಿನಗಳ ಇಂದಷ್ಟೇ ಈ ಬಗ್ಗೆ ಬಮೂಲ್ ಪ್ರತಿಕ್ರಿಯೆ ನೀಡಿತ್ತು. ಶೇ.10ರಷ್ಟು ರೈತರು ಡೈರಿಗೆ ಹಾಲು ಹಾಕುತ್ತಿಲ್ಲ. ಬೆಂಗಳೂರಿಗೆ ನಿತ್ಯ 15 ಲಕ್ಷ ಲೀಟರ್‌ ಹಾಲಿನ ಬೇಡಿಕೆ ಇದೆ. ಆದರೆ ಕೇವಲ 13 ಲಕ್ಷ ಲೀಟರ್‌ ಹಾಲು ಮಾತ್ರ ಪೂರೈಕೆಯಾಗುತ್ತಿದೆ. ಇನ್ನೂ 2 ಲಕ್ಷ ಲೀಟರ್ ಹಾಲಿನ ಕೊರತೆ ಇದೆ. ಮುಂದಿನ ದಿನಗಳಲ್ಲಿ ಬೇಸಿಗೆ ಹೆಚ್ಚಲಿದ್ದು, ಮೇವಿನ ಕೊರತೆ ಸೇರಿದಂತೆ ಮತ್ತಿತರ ಕಾರಣದಿಂದ ಇನ್ನೂ ಹೆಚ್ಚಿನ ರೀತಿಯಲ್ಲಿ ಹಾಲಿನ ಕೊರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದಿತ್ತು. ಸದ್ಯ ಈಗ ಈ ಹಾಲಿನ ಕೊರತೆ ನೀಗಿಸಲು ಕೆಎಂಎಫ್ ಹೊಸ ಪ್ಲಾನ್ ಮಾಡಿದೆ.

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಇತ್ತೀಚೆಗೆ ನಂದಿನಿ ಬ್ರಾಂಡ್‌ನಲ್ಲಿ ಮಾರಾಟವಾಗುವ ಪೂರ್ಣ ಕೆನೆ ಹಾಲಿನ ಬೆಲೆಯನ್ನು ಹೆಚ್ಚಿಸಿತ್ತು. 6% ಕೊಬ್ಬು ಮತ್ತು 9% ಘನವಸ್ತುಗಳು-ಕೊಬ್ಬು ಅಲ್ಲದ ಅಥವಾ SNF ಹೊಂದಿರುವ ಈ ಹಾಲು ಹಿಂದೆ ಗ್ರಾಹಕರಿಗೆ ಒಂದು ಲೀಟರ್ (1,000 ಮಿಲಿ) 50 ರೂಪಾಯಿಗೆ ಮತ್ತು ಅರ್ಧ ಲೀಟರ್ (500 ಮಿಲಿ) 24ರೂಗೆ ಮಾರಾಟವಾಗುತ್ತಿತ್ತು. ಆದ್ರೆ ಈಗ ಹಾಲಿನ ಬೆಲೆಯನ್ನು ಬದಲಾಯಿಸದೆ ಹಾಲಿನ ಪ್ರಮಾಣವನ್ನು ಕಡಿಮೆ ಮಾಡಲಾಗುತ್ತಿದೆ. 50 ರೂಪಾಯಿ ಬೆಲೆಯ ಒಂದು ಲೀಟರ್ ಹಾಲು ಮತ್ತು 24 ರೂ ಬೆಲೆಯ ಅರ್ಧ ಲೀಟರ್ ಹಾಲನ್ನು ಕ್ರಮವಾಗಿ 900 ಮಿಲಿ ಮತ್ತು 450 ಮಿಲಿ ಪ್ಯಾಕ್‌ಗಳಿಗೆ ಇಳಿಸಲಾಗುತ್ತಿದೆ. ಈ ಮೂಲಕ ಹಾಲಿನ ಕೊರತೆ ನೀಗಿಸಲು ಹೊಸ ಪ್ಲಾನ್ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿಗೆ ಎದುರಾಗಲಿದೆ ಹಾಲಿನ ಕೊರತೆ; ಹಾಲಿನ ಉತ್ಪಾದನೆ ಕಡಿಮೆಯಾಗಿದೆ ಎಂದು ಎಚ್ಚರಿಕೆ ನೀಡಿದ ಬಮುಲ್

ಕಳೆದ ಕೆಲ ವರ್ಷಗಳಿಂದ ಅನೇಕ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ಕಂಪನಿಗಳು ಇದೇ ರೀತಿ ಕಡಿಮೆ ಪ್ರಮಾಣದಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಸಾಬೂನು, ಶಾಂಪೂಗಳು, ಬಿಸ್ಕೆಟ್‌ಗಳು ಅಥವಾ ತಂಪು ಪಾನೀಯಗಳನ್ನು ಕಡಿಮೆ ಪ್ರಮಾಣದಲ್ಲಿ ಒಂದೇ ದರವನ್ನು ವಿಧಿಸಿ ಮಾರಾಟ ಮಾಡುತ್ತಿವೆ. ಆದ್ರೆ ಈಗ ಹಾಲಿಗೂ ಈ ಯೋಜನೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ.

ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಕರ್ನಾಟಕದಲ್ಲಿ ಹಾಲಿನ ಕೊರತೆ ಹಿನ್ನೆಲೆ KMF ನವೆಂಬರ್ 24 ರಂದು ತನ್ನ ಎಲ್ಲಾ ರೀತಿಯ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂಪಾಯಿಗಳಷ್ಟು ಹೆಚ್ಚಿಸಿತ್ತು. KMF ಭಾರತದ ಎರಡನೇ ಅತಿದೊಡ್ಡ ಹಾಲಿನ ಡೈರಿಯಾಗಿದೆ. ಅದರ ಜಿಲ್ಲಾ ಒಕ್ಕೂಟಗಳು 2021-22 ರಲ್ಲಿ ದಿನಕ್ಕೆ ಸರಾಸರಿ 81.64 ಲಕ್ಷ ಕೆಜಿ (LKPD) ಹಾಲನ್ನು ಸಂಗ್ರಹಿಸುತ್ತವೆ. ನಂತರದ ಸ್ಥಾನದಲ್ಲಿ 271.34 LKPD ಹಾಲು ಸಂಗ್ರಹಿಸುವ ಅಮುಲ್ ಎಂದು ಕರೆಯಲ್ಪಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕೆಎಂಎಫ್‌ನ ಸಂಗ್ರಹಣೆಯು 9-10 ಎಲ್‌ಕೆಪಿಡಿ ಕಡಿಮೆಯಾಗಿದೆ. ಹೀಗಾಗಿ ಹೋಟೆಲ್‌ಗಳು ಮತ್ತು ಇತರ ಬೃಹತ್ ಗ್ರಾಹಕರಿಗೆ ಹಾಲು ಸರಬರಾಜು ಮಾಡುವುದನ್ನು ನಿಲ್ಲಿಸಿಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:03 pm, Wed, 15 March 23

ಪುನೀತ್ ರಾಜ್​ಕುಮಾರ್​ಗಾಗಿ ದೇವಸ್ಥಾನ ಕಟ್ಟಿದ್ದೇಕೆ? ವಿವರಿಸಿದ ಅಭಿಮಾನಿ
ಪುನೀತ್ ರಾಜ್​ಕುಮಾರ್​ಗಾಗಿ ದೇವಸ್ಥಾನ ಕಟ್ಟಿದ್ದೇಕೆ? ವಿವರಿಸಿದ ಅಭಿಮಾನಿ
ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ
ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ
Nithya Bhavishya: ಶುಕ್ರವಾರದ ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶುಕ್ರವಾರದ ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಅಪ್ಪು ಅಭಿಮಾನಕ್ಕೆ ಫ್ಯಾನ್ಸ್ ಕಟ್ಟಿದ ದೇವಸ್ಥಾನ ಉದ್ಘಾಟಿಸಿದ ಅಶ್ವಿನಿ
ಅಪ್ಪು ಅಭಿಮಾನಕ್ಕೆ ಫ್ಯಾನ್ಸ್ ಕಟ್ಟಿದ ದೇವಸ್ಥಾನ ಉದ್ಘಾಟಿಸಿದ ಅಶ್ವಿನಿ
ಶ್ರೀಗಳ ಉಪಟಳ ಹೆಚ್ಚಳ: ತಿರುಪತಿ ಲಡ್ಡು ಬಗ್ಗೆ ಕೋಡಿಶ್ರೀ ಮಾತು
ಶ್ರೀಗಳ ಉಪಟಳ ಹೆಚ್ಚಳ: ತಿರುಪತಿ ಲಡ್ಡು ಬಗ್ಗೆ ಕೋಡಿಶ್ರೀ ಮಾತು
ಕ್ಲಾಸ್​ರೂಂನಲ್ಲೇ ಶಿಕ್ಷಕಿಗೆ ಬೆದರಿಕೆ ಹಾಕಿ, ಉಗುಳಿದ ಎಂಬಿಎ ವಿದ್ಯಾರ್ಥಿ
ಕ್ಲಾಸ್​ರೂಂನಲ್ಲೇ ಶಿಕ್ಷಕಿಗೆ ಬೆದರಿಕೆ ಹಾಕಿ, ಉಗುಳಿದ ಎಂಬಿಎ ವಿದ್ಯಾರ್ಥಿ
ಸಿದ್ದರಾಮಯ್ಯಗೆ ಮುಡಾ ಸಂಕಷ್ಟ: ಈ ಹಿಂದೆ ಕೋಡಿಶ್ರೀ ನುಡಿದಿದ್ದ ಭವಿಷ್ಯ ನಿಜ
ಸಿದ್ದರಾಮಯ್ಯಗೆ ಮುಡಾ ಸಂಕಷ್ಟ: ಈ ಹಿಂದೆ ಕೋಡಿಶ್ರೀ ನುಡಿದಿದ್ದ ಭವಿಷ್ಯ ನಿಜ
ಕಂಠಪೂರ್ತಿ ಕುಡಿದು ಅಪ್ಪನ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಂದ ಮಗ
ಕಂಠಪೂರ್ತಿ ಕುಡಿದು ಅಪ್ಪನ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಂದ ಮಗ
ಬೆಂಗಳೂರಿನ ‘ಏರಿಯಾನ್ ಟೆಕ್ನಾಲಜಿ ಕಂಪನಿ’ಯಲ್ಲಿ ಅಗ್ನಿ ಅವಘಡ;ತಪ್ಪಿದ ಅನಾಹುತ
ಬೆಂಗಳೂರಿನ ‘ಏರಿಯಾನ್ ಟೆಕ್ನಾಲಜಿ ಕಂಪನಿ’ಯಲ್ಲಿ ಅಗ್ನಿ ಅವಘಡ;ತಪ್ಪಿದ ಅನಾಹುತ
ಅಮ್ಮ-ಮಗು ಮೇಲೆ ಬೀದಿ ನಾಯಿಗಳ ದಾಳಿ; ಶಾಕಿಂಗ್ ವಿಡಿಯೋ ವೈರಲ್
ಅಮ್ಮ-ಮಗು ಮೇಲೆ ಬೀದಿ ನಾಯಿಗಳ ದಾಳಿ; ಶಾಕಿಂಗ್ ವಿಡಿಯೋ ವೈರಲ್