AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಿ ಸೇರಬೇಕಾದ 3,768 ಕೆಎಸ್ಆರ್​ಟಿಸಿ ಬಸ್​ಗಳನ್ನು ರಸ್ತೆಗಿಳಿಸಿ ಕೇರ್ಲೆಸ್; ಆರ್ಥಿಕ ಕಾರಣ ಎಂದು ನಿಗಮದ ದುಸ್ಥಿತಿ ಒಪ್ಪಿಕೊಂಡ ಅಧ್ಯಕ್ಷ

ಕೆಎಸ್ಆರ್ಟಿಸಿ ನಿಗಮದಲ್ಲಿ 8,199 ಬಸ್ಗಳಿದ್ದು, ಇವುಗಳ ಪೈಕಿ 3,768 ಬಸ್ಗಳು 9 ಲಕ್ಷ ಕಿಲೋಮೀಟರ್ ಮೀರಿದ ಬಸ್ಗಳಾಗಿವೆ. ನಿಗಮದ ದುಸ್ಥಿತಿಯನ್ನ ಆಡಳಿತ ವರ್ಗವೂ ಒಪ್ಪಿಕೊಂಡಿದೆ. ಕೊವಿಡ್ ಕಾರಣದಿಂದ ನಿಗಮ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಹೀಗಾಗಿ ಹೊಸ ಬಸ್ ಖರೀದಿ ಸಾಧ್ಯವಾಗಿಲ್ಲ.

ಗುಜರಿ ಸೇರಬೇಕಾದ 3,768 ಕೆಎಸ್ಆರ್​ಟಿಸಿ ಬಸ್​ಗಳನ್ನು ರಸ್ತೆಗಿಳಿಸಿ ಕೇರ್ಲೆಸ್; ಆರ್ಥಿಕ ಕಾರಣ ಎಂದು ನಿಗಮದ ದುಸ್ಥಿತಿ ಒಪ್ಪಿಕೊಂಡ ಅಧ್ಯಕ್ಷ
ಕೆಎಸ್ಆರ್​ಟಿಸಿ
TV9 Web
| Edited By: |

Updated on:Jul 04, 2022 | 6:41 AM

Share

ಬೆಂಗಳೂರು: ಕೆಎಸ್ಆರ್ಟಿಸಿ(KSRTC). ರಾಜ್ಯದ ಹೆಮ್ಮೆಯ ಸಾರಿಗೆ. ವರ್ಷಕ್ಕೆರಡು ರಾಷ್ಟ್ರಮಟ್ಟದ ಪ್ರಶಸ್ತಿ, ಬೆಸ್ಟ್ ಸಾರ್ವಜನಿಕ ಸಾರಿಗೆ ಅನ್ನೋ ಗರಿ. ಹೀಗಿದ್ದ ಕೆಎಸ್ಆರ್ಟಿಸಿ ಈಗ ದಾರಿ ತಪ್ಪುತ್ತಿದೆ. ಅಂದ್ರೆ ಸದ್ಯ ರಸ್ತೆಗಿಳಿಯುತ್ತಿರೋ ಅರ್ಧಕ್ಕರ್ಧ ಬಸ್ಗಳು ಗುಜರಿ ಸೇರ್ಬೇಕಾದ ಬಸ್ಗಳು ಅನ್ನೋದನ್ನ ಟಿವಿ9 ದಾಖಲೆ ಸಹಿತ ಬಯಲಿಗೆಳೆದಿದೆ. ನಿಯಮದಂತೆ 9 ಲಕ್ಷ ಕಿಲೋಮೀಟರ್ ಓಡ್ತಿದ್ದಂತೆ ಬಸ್ಗಳನ್ನ ಗುಜರಿಗೆ ಹಾಕ್ಬೇಕು ಅನ್ನೋ ನಿಯಮವಿದೆ‌. ಯಾಕಂದ್ರೆ ಬಸ್ಗಳು ಫಿಟ್ ಇರೋದಿಲ್ಲ. ಅಪಘಾತವಾಗೋ ಸಾಧ್ಯತೆ ಹೆಚ್ಚಾಗಿರುತ್ತೆ. ಇಂಧನ ಕ್ಷಮತೆಯೂ ಇರೋದಿಲ್ಲ. ಮೆಂಟೇನೆನ್ಸ್ ಜಾಸ್ತಿ ಅಂತಾ ಇಂಥಾ ಬಸ್ಗಳನ್ನ ಸ್ಕ್ರ್ಯಾಪ್ ಮಾಡೋ ಪಾಲಿಸಿ ನಿಗಮದಲ್ಲಿದೆ. ಸದ್ಯ ಕೆಎಸ್ಆರ್ಟಿಸಿಯಲ್ಲಿ 45.95 ರಷ್ಟು ಬಸ್ಗಳು 9 ಲಕ್ಷ ಕಿಲೋಮೀಟರ್ ದಾಟಿವೆ. ಆದ್ರೂ ಆರ್ಥಿಕ ಕಾರಣ ನೀಡಿ ಹಳೆಯ ಬಸ್ಗಳನ್ನ ರಸ್ತೆಗೆ ಇಳಿಸ್ತಿದ್ದು, ಅಪಾಯದ ಸಾಧ್ಯತೆಗಳು ಹೆಚ್ಚಿವೆ.

ಸದ್ಯ ಕೆಎಸ್ಆರ್ಟಿಸಿ ನಿಗಮದಲ್ಲಿ 8,199 ಬಸ್ಗಳಿದ್ದು, ಇವುಗಳ ಪೈಕಿ 3,768 ಬಸ್ಗಳು 9 ಲಕ್ಷ ಕಿಲೋಮೀಟರ್ ಮೀರಿದ ಬಸ್ಗಳಾಗಿವೆ. ನಿಗಮದ ದುಸ್ಥಿತಿಯನ್ನ ಆಡಳಿತ ವರ್ಗವೂ ಒಪ್ಪಿಕೊಂಡಿದೆ. ಕೊವಿಡ್ ಕಾರಣದಿಂದ ನಿಗಮ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಹೀಗಾಗಿ ಹೊಸ ಬಸ್ ಖರೀದಿ ಸಾಧ್ಯವಾಗಿಲ್ಲ. ಸದ್ಯ 1,500 ಹೊಸ ಬಸ್ ಖರೀದಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಅಂತಿದ್ದಾರೆ. ಇದನ್ನೂ ಓದಿ: ಅಭಿವೃದ್ಧಿ ಮಾಡಿದ ಸ್ಥಳದಲ್ಲೇ ಮತ್ತೊಮ್ಮೆ ಕಾಮಗಾರಿ; ಅಮೃತ್ ನಗರೋತ್ಥಾನ ಯೋಜನೆಯಡಿ 10 ಕೋಟಿ ಅನುದಾನಕ್ಕೆ ಕನ್ನ

ಕೆಎಸ್ಆರ್ಟಿಸಿ ಅಂದ್ರೆ ದೇಶದಲ್ಲೇ ಬೆಸ್ಟ್ ಸಾರಿಗೆ ಅನ್ನೋ ಹೆಮ್ಮೆ ಇದೆ. ಆದ್ರೆ ಈಗ ಬಸ್ಗಳ ಕಂಡೀಷನ್ ಕೆಟ್ಟಿದ್ದು, ನಿಗಮ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ಇಲ್ದಿದ್ರೆ ಸಾಲು ಸಾಲು ಅನಾಹುತಗಳು ಸಂಭವಿಸೋದ್ರ ಜೊತೆಗೆ ಕರುನಾಡ ಸಾರಿಗೆಗಿರೋ ಹೆಸರೂ ಕೂಡ ಹಾಳಾಗುತ್ತೆ.

ವರದಿ: ಕಿರಣ್ ಸೂರ್ಯ, ಟಿವಿ9, ಬೆಂಗಳೂರು

Published On - 6:41 am, Mon, 4 July 22

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ