AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

NIA Raids: ದಾಳಿಗಾಗಿ ಮೂರು ತಿಂಗಳಿನಿಂದ ತನಿಖೆ ನಡೆಸಿದ್ದ ಎನ್​ಐಎ, ಹೀಗಿದೆ ಬಂಧಿತರ ವೃತ್ತಾಂತ

PFI Activists: ಕರ್ನಾಟಕದಲ್ಲಿ ದಾಳಿ ನಡೆಸಿದ ವೇಳೆ ಬಂಧಿತರಾದ ಪಿಎಫ್​ಐನ ಆರು ಮಂದಿಯ ವಿವರ ಹೀಗಿದೆ.

NIA Raids: ದಾಳಿಗಾಗಿ ಮೂರು ತಿಂಗಳಿನಿಂದ ತನಿಖೆ ನಡೆಸಿದ್ದ ಎನ್​ಐಎ, ಹೀಗಿದೆ ಬಂಧಿತರ ವೃತ್ತಾಂತ
ಎನ್​ಐಎ ಅಧಿಕಾರಿಗಳು (ಸಂಗ್ರಹ ಚಿತ್ರ)
TV9 Web
| Edited By: |

Updated on:Sep 23, 2022 | 10:26 AM

Share

ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ಮತ್ತು ಎಸ್​ಡಿಪಿಐ ಕಚೇರಿಗಳು ಹಾಗೂ ಮುಖಂಡರ ಮನೆಗಳ ದಾಳಿ ನಡೆಸುವ ಮೊದಲು ರಾಷ್ಟ್ರೀಯ ತನಿಖಾ ದಳದ (National Investigation Agency – NIA) ಅಧಿಕಾರಿಗಳು ಸುಮಾರು 3 ತಿಂಗಳು ಆಂತರಿಕೆ ತನಿಖೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ. ಪಿಎಫ್​ಐನ ಎಲ್ಲ ಪ್ರಮುಖರ ಮಾಹಿತಿ ಕಲೆ ಹಾಕಿದ್ದರು. ಯಾವ ಸಮಯದಲ್ಲಿ ಯಾರು ಮನೆಯಲ್ಲಿರುತ್ತಾರೆ? ಎಷ್ಟೊತ್ತಿಗೆ ಎಲ್ಲಿಗೆ ಹೋಗುತ್ತಾರೆ ಎಂಬ ಮಾಹಿತಿಯನ್ನು ವಿಶ್ಲೇಷಿಸಿದ್ದರು. ಪ್ರಮುಖ ಪದಾಧಿಕಾರಿಗಳ ಚಲನವಲನದ ಮೇಲೆ ಕಣ್ಣಿಟ್ಟ ನಂತರವೇ ಈ ದಾಳಿ ನಡೆದಿದೆ.

ಎನ್​ಐಎ ದಾಳಿಯು ಬಹಳ ಮೊದಲೇ ನಡೆಯಬೇಕಿತ್ತು. ಆದರೆ ಕೇರಳದ ಮಲಪ್ಪುರಂನಲ್ಲಿ ಪಿಎಫ್​ಐ ಸಭೆ ಇದ್ದ ಕಾರಣ ದಾಳಿಯ ದಿನಾಂಕವನ್ನು ಮುಂದೂಡಬೇಕಾಯಿತು. ಬಹುತೇಕ ನಾಯಕರು ಮೀಟಿಂಗ್​ಗೆ ತೆರಳಿದ್ದರು. ಆದರೆ ನಿನ್ನೆ ಬಹುತೇಕ ಎಲ್ಲ ಪ್ರಮುಖ ನಾಯಕರು ಬೆಂಗಳೂರಿನಲ್ಲಿಯೇ ಇದ್ದ ಕಾರಣ ಅದೇ ದಿನವನ್ನು ದಾಳಿಗೆ ಆರಿಸಿಕೊಳ್ಳಲಾಯಿತು.

ಕರ್ನಾಟಕದಲ್ಲಿ ದಾಳಿ ನಡೆಸಿದ ವೇಳೆ ಬಂಧಿತರಾದ ಪಿಎಫ್​ಐನ ಆರು ಮಂದಿಯ ವಿವರ ಹೀಗಿದೆ.

  1. ಅನೀಸ್ ಅಹಮದ್: ಪಿಎಫ್​ಐನ ರಾಜ್ಯಮಟ್ಟದ ನಾಯಕ ಅನೀಸ್ ಅಹಮದ್ ಬೆಂಗಳೂರಿನವರು. ಕಳೆದ 10 ದಿನಗಳಿಂದ ‘ಮಲಬಾರ್ ಕಾನ್ಫರೆನ್ಸ್’ ಹೆಸರಿನ ಸಭೆಯಲ್ಲಿ ಪಾಲ್ಗೊಂಡಿದ್ದರು. ಖಾಸಗಿ ಕಂಪನಿಯಲ್ಲಿ ಸಾಫ್ಟ್​ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.
  2. ಅಫ್ಸರ್ ಪಾಷಾ: ರಾಜ್ಯಮಟ್ಟದ ನಾಯಕರಾದ ಅಫ್ಸರ್ ಪಾಷಾ ಅವರ ಮನೆಯ ಮೇಲೆ ಒಂದೂವರೆ ವರ್ಷದ ಹಿಂದೆ ಇಡಿ ರೇಡ್ ಆಗಿತ್ತು. ಆಗ ಮನೆಯಲ್ಲಿ ಜಗಳ ಮಾಡಿಕೊಂಡಿದ್ದ ಪಾಷಾ ನಂತರ ಪಾದರಾಯನಪುರದ ಟೆಲಿಕಾಂ ಲೇಔಟ್​ನ ಬಾಡಿಗೆ ಮನೆಗೆ ಶಿಫ್ಟ್​ ಆಗಿದ್ದರು. ವಿಜಯನಗರದಲ್ಲಿ ಲಸ್ಸಿ ಶಾಪ್ ನಡೆಸುತ್ತಿದ್ದರು.
  3. ಅಬ್ದುಲ್ ವಹೀದ್​: ಜಯಮಹಲ್ ಪ್ಯಾಲೇಸ್ ಹತ್ತಿರ ವಾಸವಿರುವ ಅಬ್ದುಲ್ ವಹೀದ್ ತಮಿಳುನಾಡು ಮೂಲದವರು. ಪಿಎಫ್​ಐನ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು.
  4. ಯಾಸಿರ್ ಹಸನ್​​: ಮೂಲತಃ ಮಂಗಳೂರಿನವರಾದ ಯಾಸಿರ್​ ಹಸನ್ ಬೆಂಗಳೂರಲ್ಲಿ ಪಿಎಫ್​ಐ ಕಾರ್ಯಚಟುವಟಿಕೆ ನೋಡಿಕೊಳ್ಳುತ್ತಿದ್ದರು. ಕಾವವ್​ಬೈರಸಂದ್ರದ ಇವರ ಮನೆಯಿಂದಲೇ ಪಿಎಫ್​ಐನ ಕಚೇರಿ ಕೆಲಸಗಳನ್ನು ನಿರ್ವಹಿಸಲಾಗುತ್ತಿತ್ತು.
  5. ಮಹಮ್ಮದ್ ಶಕೀಬ್ (ಸಾಕಿಬ್): ತಮಿಳುನಾಡು ಮೂಲದ ಇವರು ರಿಚ್​ಮಂಡ್ ಟೌನ್ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದರು. ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು.
  6. ಶಾಹಿದ್ ನಸೀರ್​: ಬೆಂಗಳೂರು ಮೂಲದ ಶಾಹಿದ್​ ನಸೀರ್ ಪಿಎಫ್​ಐ ರಾಜ್ಯ ಘಟಕದ ಸೋಷಿಯಲ್ ಮೀಡಿಯಾ ಘಟಕದ ಉಸ್ತುವಾರಿಯಾಗಿದ್ದರು.

Published On - 10:25 am, Fri, 23 September 22

Follow Us
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ