ಸಿದ್ದರಾಮಯ್ಯ ಪದತ್ಯಾಗದ ಬೆನ್ನಲ್ಲೇ ಒಬಿಸಿಗೆ ಕಾಂಗ್ರೆಸ್​​ ಬಂಪರ್​​: ಕಾರಣ ಇಲ್ಲಿದೆ

ಸಿದ್ದರಾಮಯ್ಯ ಅವರ ರಾಜೀನಾಮೆ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಒಬಿಸಿ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಪರಿಷತ್ ಚುನಾವಣೆಗೆ ನಾಲ್ವರು ಒಬಿಸಿ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ತಂತ್ರ ರೂಪಿಸಿದೆ. ಅಧಿಕಾರ ಹಸ್ತಾಂತರ ಕಾರಣಕ್ಕೆ ಪಕ್ಷಕ್ಕೆ ಯಾವುದೇ ಡ್ಯಾಮೇಜ್​​ ಆಗದಂತೆ ಮತ್ತು ವೋಟ್​​ ಬ್ಯಾಂಕ್​​ ಕೈ ತಪ್ಪದಂತೆ ಆರಂಭದಿಂದಲೂ ಹೈಕಮಾಂಡ್​​ ನಾಯಕರು ತಂತ್ರ ರೂಪಿಸಿದ್ದರು. ಹೀಗಾಗಿ ಇವುಗಳೆಲ್ಲವೂ ಅದರದೇ ಭಾಗ ಎನ್ನಲಾಗಿದೆ.

ಸಿದ್ದರಾಮಯ್ಯ ಪದತ್ಯಾಗದ ಬೆನ್ನಲ್ಲೇ ಒಬಿಸಿಗೆ ಕಾಂಗ್ರೆಸ್​​ ಬಂಪರ್​​: ಕಾರಣ ಇಲ್ಲಿದೆ
ಸಾಂದರ್ಭಿಕ ಚಿತ್ರ
Image Credit source: dinamalar.com
Edited By:

Updated on: Jun 04, 2026 | 10:22 AM

ಬೆಂಗಳೂರು, ಜೂನ್​​ 04: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ರಾಜೀನಾಮೆ ನೀಡಿದ ಬಳಿಕ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್​​ ನಿನ್ನೆಯಷ್ಟೇ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರ ಜೊತೆಗೆ 13 ಜನ ಸಚಿವರಾಗಿಯೂ ಪ್ರತಿಜ್ಞಾವಿಧಿ ಪಡೆದಿದ್ದಾರೆ. ಹೀಗಿದ್ದರೂ ಸಿಎಂ ಕುಚಿರ್ಯಿಂದ ಸಿದ್ದರಾಮಯ್ಯರನ್ನು ಇಳಿಸಿರುವುದು ಪಕ್ಷಕ್ಕೆ ಯಾವುದಾದರೂ ರೀತಿಯಲ್ಲಿ ಹೊಡೆತ ನೀಡಬಹುದೆಂಬ ಆತಂಕ ಕಾಂಗ್ರೆಸ್​​ ಹೈಕಮಾಂಡ್​​ಗಿದೆ. ಹೀಗಾಗಿಯೇ ಭಾರಿ ಲೆಕ್ಕಾಚಾರ ಹಾಕಿರುವ ವರಿಷ್ಠರು ಒಬಿಸಿಗಳಿಗೆ ಬಂಪರ್​​ ನೀಡಿದ್ದಾರೆ.

ಹೌದು, ಒಬಿಸಿಗೆ ಸೇರಿರುವ ಸಿದ್ದರಾಮಯ್ಯ ಅವರ ಪದತ್ಯಾಗದ ಬೆನ್ನಲ್ಲೇ ಕಾಂಗ್ರೆಸ್​​ ಹೈಕಮಾಂಡ್​​ ಮಹತ್ವದ ನಿರ್ಣಯ ಕೈಗೊಂಡಿದೆ. ರಾಜ್ಯದಲ್ಲಿ ನಡೆಯಲಿರುವ ಪರಿಷತ್​​ ಚುನಾವಣೆ ನಾಲ್ವರು ಅಭ್ಯರ್ಥಿಗಳನ್ನು ಘೋಷಿಸಿದ್ದು, ಅವರೆಲ್ಲರೂ ಒಬಿಸಿಗೆ ಸೇರಿದವರೆ ಎನ್ನುವುದು ವಿಶೇಷ.

ಇದನ್ನೂ ಓದಿ: ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಯತೀಂದ್ರ

ಅಭ್ಯರ್ಥಿಗಳು ಮತ್ತು ಸಮುದಾಯ

  • ಹರಿಪ್ರಸಾದ್- ಈಡಿಗ ಬಿಲ್ಲವ
  • ಪಿವಿ ಮೋಹನ್ – ಬಿಲ್ಲವ
  • ಶಿವಣ್ಣ ಮಳವಳ್ಳಿ – ಕುರುಬ
  • ತಿಪ್ಪಣ್ಣಪ್ಪ ಕಮಕನೂರು – ಕೋಲಿ (ಕಬ್ಬಲಿಗ/ಗಂಗಾಮತ)

ಇಷ್ಟೇ ಅಲ್ಲದೆ ನಿನ್ನೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 13 ಮಂದಿಯ ಪೈಕಿ ಯತೀಂದ್ರ ಸಿದ್ದರಾಮಯ್ಯ ಮತ್ತು ಬೈರತಿ ಸುರೇಶ್ ಕೂಡ ಇದೇ ಒಬಿಸಿಗೆ ಸೇರಿದವರಾಗಿದ್ದಾರೆ. ವಿಧಾನ ಪರಿಷತ್​​ ಚುನಾವಣೆ ಅಭ್ಯರ್ಥಿಯ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ಬಿ.ಕೆ. ಹರಿಪ್ರಸಾದ್​​ಗೆ ನೀಡಿರುವುದು ಸಿದ್ದರಾಮಯ್ಯ ಪದತ್ಯಾಗದ ಬಳಿಕ ಪರ್ಯಾಯ ನಾಯಕತ್ವಕ್ಕೆ ಕಾಂಗ್ರೆಸ್​​ ಹೈಕಮಾಂಡ್​ ಹೆಚ್ಚಿನ ಒತ್ತು ನೀಡುತ್ತಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಎಂಬಂತಿದೆ. ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಇಳಿಸಿದ ಬಳಿಕ ಅದರಿಂದ ಪಕ್ಷಕ್ಕೆ ಯಾವುದೇ ಡ್ಯಾಮೇಜ್​​ ಆಗದಂತೆ ಮತ್ತು ವೋಟ್​​ ಬ್ಯಾಂಕ್​​ ಕೈ ತಪ್ಪದಂತೆ ಆರಂಭದಿಂದಲೂ ಹೈಕಮಾಂಡ್​​ ನಾಯಕರು ತಂತ್ರ ರೂಪಿಸಿದ್ದರು. ಹೀಗಾಗಿ ಇವುಗಳೆಲ್ಲವೂ ಅದರದೇ ಭಾಗ ಎಂಬ ಮಾತುಗಳೀಗ ಕೇಳಿಬಂದಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us