AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ 203 ಮಾದರಿಗಳಲ್ಲಿ ಒಮಿಕ್ರಾನ್ ರೂಪಾಂತರದ XBB ಪತ್ತೆ, ರಾಜ್ಯದಲ್ಲಿ ಇಂದಿನ ಕೋವಿಡ್ ಸ್ಥಿತಿಗತಿ ಹೀಗಿದೆ

ಕರ್ನಾಟಕ ಆರೋಗ್ಯ ಇಲಾಖೆಯು ಕಳುಹಿಸಿದ ಆರ್​ಟಿ-ಪಿಸಿಆರ್ ಮಾದರಿಗಳ ವರದಿ ಇಲಾಖೆಯ ಕೈ ಸೇರಿದೆ. ಅದರಂತೆ 203 ಮಾದರಿಗಳಲ್ಲಿ ಕೋವಿಡ್​ನ ಒಮಿಕ್ರಾನ್ ರೂಪಾಂತರದ ಹೊಸ ಎಕ್ಸ್​​ಬಿಬಿ ಉಪವರ್ಗ ಪತ್ತೆಯಾಗಿದೆ.

ಕರ್ನಾಟಕದಲ್ಲಿ 203 ಮಾದರಿಗಳಲ್ಲಿ ಒಮಿಕ್ರಾನ್ ರೂಪಾಂತರದ XBB ಪತ್ತೆ, ರಾಜ್ಯದಲ್ಲಿ ಇಂದಿನ ಕೋವಿಡ್ ಸ್ಥಿತಿಗತಿ ಹೀಗಿದೆ
ಸಾಂದರ್ಭಿಕ ಚಿತ್ರImage Credit source: AFP Photo
Follow us
TV9 Web
| Updated By: Rakesh Nayak Manchi

Updated on:Jan 14, 2023 | 8:57 PM

ಬೆಂಗಳೂರು: ಕರ್ನಾಟಕ ಆರೋಗ್ಯ ಇಲಾಖೆಯು ಡಿಸೆಂಬರ್​ ತಿಂಗಳಲ್ಲಿ ಕಳುಹಿಸಿದ್ದ 232 ಆರ್​ಟಿ-ಪಿಸಿಆರ್ ಮಾದರಿಗಳ ಜೀನೋಮ್ ಸೀಕ್ವೆನ್ಸಿಂಗ್ ವರದಿ ಇಲಾಖೆಯ ಕೈ ಸೇರಿದೆ. ಈ ವರದಿಯಲ್ಲಿ 232 ಮಾದರಿಗಳ ಪೈಕಿ 203 ಮಾದರಿಗಳಲ್ಲಿ ಕೋವಿಡ್​​ನ ಒಮಿಕ್ರಾನ್ ರೂಪಾಂತರದ ಹೊಸ ಎಕ್ಸ್​​ಬಿಬಿ (Omicron variant XBB) ಉಪವರ್ಗ ಪತ್ತೆಯಾಗಿದೆ. INSACOG (Indian SARS-CoV-2 Consortium on Genomics) ಇದನ್ನು ದೃಢಪಡಿಸಿದೆ. 26 ಮಾದರಿಗಳಲ್ಲಿ ಒಮಿಕ್ರಾನ್ ರೂಪಾಂತರ ಬಿಎ 2ನ ಉಪ-ಶ್ರೇಣಿಗಳನ್ನು ದೃಢಪಡಿಸಲಾಗಿದೆ ಎಂದು ವರದಿಗಳು ಬಹಿರಂಗಪಡಿಸಿವೆ. 2 ಮಾದರಿಗಳಲ್ಲಿ ಬಿಎ5 ದೃಢಪಟ್ಟಿದ್ದು, ಒಂದು ಮಾದರಿಯಲ್ಲಿ BA1.1.529 ಕಂಡುಬಂದಿದೆ.

BF.7 ವೈರಸ್ ಭೀತಿ ನಡುವೆಯೂ ಗುಜರಾತ್ ಬಳಿಕ ಕರ್ನಾಟಕದಲ್ಲೂ ಮೊದಲ ಒಮಿಕ್ರಾನ್ ಉಪತಳಿ XBB.1.5 ವೈರಸ್ ಜನವರಿ 4ರಂದು​ ಪತ್ತೆಯಾಗಿತ್ತು. ಚೀನಾ ಅಮೇರಿಕಾದಲ್ಲಿ ಆರ್ಭಟಿಸುತ್ತಿರುವ ಹೊಸ ರೂಪಾಂತರಿ ಕೊವಿಡ್ XBB 1.5 ದೇಶದಲ್ಲಿ ಮೊದಲ ಬಾರಿಗೆ ಗುಜರಾತ್​ನಲ್ಲಿ ಕಾಣಿಸಿಕೊಂಡಿತ್ತು. ಇದಾದ ಬಳಿಕ ಕರ್ನಾಟಕದಲ್ಲೂ ಪತ್ತೆಯಾಗಿದೆ. ಒಮಿಕ್ರಾನ್ ರೂಪಾಂತರಿ BF.7ಕ್ಕಿಂತ XBB.1.5 ರೂಪಾಂತರಿ ವೈರಸ್ ಅತಿವೇಗವಾಗಿ ಜನರಿಗೆ ಹರಡುವ ವೈರಸ್ ಆಗಿದೆ.

ಇದನ್ನೂ ಓದಿ: Omicron subvariant XBB.1.5: ವಿಶ್ವದಲ್ಲಿ ಹೆಚ್ಚುತ್ತಿದೆ XBB.1.5, WHO ಕಳವಳ; ಭಾರತದಲ್ಲಿ 0.01% ಕೋವಿಡ್ ಪಾಸಿಟಿವಿಟಿ

ಕರ್ನಾಕಟದಲ್ಲಿ ಇಂದು ಪತ್ತೆಯಾದ ಕೋವಿಡ್ ಪ್ರಕರಣಗಳು

ರಾಜ್ಯದಲ್ಲಿ ಇಂದು ಒಟ್ಟು 23 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ 9 ಕೋವಿಡ್ ಪ್ರಕರಣಗಳು ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆ 5 ಪ್ರಕರಣಗಳು ಪತ್ತೆಯಾದರೆ, ಗದಗ, ಹಾವೇರಿ, ಕೊಪ್ಪಳದಲ್ಲಿ ತಲಾ 2 ಪ್ರಕರಣಗಳು, ಬೆಳಗಾವಿ, ಕೊಡಗು, ಕೋಲಾರ ಜಿಲ್ಲೆಯಲ್ಲಿ ತಲಾ 1 ಪ್ರಕರಣಗಳು ಪತ್ತೆಯಾಗಿವೆ. ಸದ್ಯ ರಾಜ್ಯದಲ್ಲಿ 146 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ನಿನ್ನೆ ರಾಜ್ಯದಲ್ಲಿ 34 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:57 pm, Sat, 14 January 23

Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?
Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?
Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ
Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ